Pages

Tuesday, August 25, 2009

ರಾಮ ರಾಮ ಸೀತಾರಾಮ

ರಾಮ ರಾಮ ಸೀತಾರಾಮ
ಮೇಘಶ್ಯಾಮ ಮಂಗಳಧಾಮ
ಮೇಘಶ್ಯಾಮ ಮಂಗಳಧಾಮ
ರಘುರಾಮ ರಾಜಲಲಾಮ
ರಾಮ ರಾಮ ಸೀತಾರಾಮ
ಮೇಘಶ್ಯಾಮ ಮಂಗಳಧಾಮ
ಪಾವನನಾಮ ಪಾಪವಿರಾಮ
ಜಾನಕಿರಾಮ ಜಯರಾಮ
ರವಿಕುಲಸೋಮ ರಣತಲ ಭೀಮ
ಶಿವನುತನಾಮ ಶ್ರೀರಾಮ
ರಾಮ ರಾಮ ಸೀತಾರಾಮ
ಮೇಘಶ್ಯಾಮ ಮಂಗಳಧಾಮ
ಮೇಘಶ್ಯಾಮ ಮಂಗಳಧಾಮ
ರಘುರಾಮ ರಾಜಲಲಾಮ
ರಾಮ ರಾಮ ಸೀತಾರಾಮ
ಮೇಘಶ್ಯಾಮ ಮಂಗಳಧಾಮ

ಹಳೆಯ ತೆಲುಗು ಚಿತ್ರವೊಂದರ ವೀಡಿಯೋ ಕ್ಲಿಪ್ ನಲ್ಲಿ ಕಂಡು ಇಲ್ಲಿ ಬರೆದದ್ದು.

Thursday, August 20, 2009

ಅಮೃತಬಳ್ಳಿ ಕಷಾಯ

ಒಬ್ಬ ವ್ಯಕ್ತಿಗೆ ಅಮೃತಬಳ್ಳಿ (ಎಂಟು ಇಂಚು), ಎರಡು ತುಳಸಿ ಕುಡಿ, ೯ ಇಂಚು ಎತ್ತರದ ಬೇರು ಸಹಿತ ನೆಲನೆಲ್ಲಿ ಗಿಡ, ಒಂದು ಚಮಚ ಕಿರಾತಕಡ್ಡಿ, ಒಂದು ಇಂಚು ಗಾತ್ರದ ಶುಂಠಿಯನ್ನು ಕಶಾಯ ಮಾಡಬೇಕು. ಇವುಗಳನ್ನು ಎರಡು ಗಂಟೆ ನೀರಿನಲ್ಲಿ ನೆನೆಸಿ ಬಳಿಕ ಅದೇ ನೀರಿನಲ್ಲಿ ಕುದಿಸಿ ಕಷಾಯ ಮಾಡಬೇಕು. ಆಯುರ್ವೇದ ಶಾಸ್ತ್ರದಂತೆ ಅಹೋರಾತ್ರಿ ಮಣ್ಣಿನ ಮಡಕೆಯಲ್ಲಿ ನೆನೆಸಿ ಮಣ್ಣಿನ ಮಡಕೆಯಲ್ಲಿಯೇ ಕುದಿಸಿ ಕಷಾಯ ಮಾಡಿದರೆ ಅತ್ಯುತ್ತಮ. ಈ ಕಷಾಯವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ, ರಾತ್ರಿ ಊಟಕ್ಕೆ ಮೊದಲು ೫೦ ಮಿ.ಲೀ. ಸೇವಿಸಬೇಕು ಎಂದು ಆಯುರ್ವೇದ ತಜ್ಞ ಡಾ|ವೈ.ಎನ್. ಶೆಟ್ಟಿ ಸಲಹೆ ನೀಡಿದ್ದಾರೆ.

http://www.gulfkannadiga.com/news-10180.html ಪತ್ರಿಕೆಯಿಂದ

Tuesday, August 11, 2009

ಹೆಚ್೧ಎನ್೧ swineflu

ಹೆಚ್೧ಎನ್೧ (ಹಂದಿಜ್ವರ ಎಂದೂ ಕರೆಯುತ್ತಾರೆ) swineflu
ಗುರುತುಗಳು
ಮಾಮೂಲಿ ಫ್ಲೂ ರೀತಿಯಲ್ಲಿ ಇರುತ್ತದೆ. ೧೦೦.೪ ಡಿಗ್ರೀ ಫ್ಯಾರನ್ ಹೀಟ್ ಗಿಂತಲೂ ಮೀರಿದ ಜ್ವರ
ಹಸಿವಿಲ್ಲದಿರುವಿಕೆ, ಶೀತ ಇದರ ಗುರುತುಗಳು. ಕೆಲವರಲ್ಲಿ ನೆಗಡಿ, ವಾಂತಿ ಮತ್ತು ಭೇದಿಯ ಲಕ್ಷಣಗಳೂ ಕಾಣಿಸಿಕೊಂಡಿವೆ. ಇದರಲ್ಲಿ ಯಾವುದಾದರೂ ಎರಡು ಲಕ್ಷಣಗಳಂತೂ ಇದ್ದೇ ಇರುತ್ತದೆ.

ಹಾಗಿದ್ದರೆ ನಿಮಗಿರುವುದು ಫ್ಲೂ ಅಥವಾ ಶೀತ ಹೇಗೆ ಪರೀಕ್ಷಿಸುವುದು?
ಒಂದು ಉಪಾಯ : ಫ್ಲೂ ಗುರುತುಗಳು ಶೀತದ ಗುರುತಿಗಿಂತ ಮುಂಚೆಯೇ ಕಾಣಿಸಿಕೊಳ್ಳುತ್ತವೆ. ಜೊತೆಗೆ ಮಾಂಸಖಂಡಗಳ ನೋವು ಮತ್ತು ಚಳಿ ಬೆವರುಗಳು ಜ್ವರ ಬಂದು ಹೋದಂತೆ ಕಾಡುತ್ತವೆ. ತಲೆನೋವು, ನೆಗಡಿ ಮತ್ತು ಗಂಟಲು ಕಟ್ಟುವಿಕೆ ಫ್ಲೂ ನಲ್ಲಿ ಇರುತ್ತದೆ.

ಎರಡನ್ನೂ ಹೋಲಿಸುವುದು ಹೇಗೆ?

ಆದರೆ ಈ ಗುರುತುಗಳಿಂದ ಇದನ್ನು ಪತ್ತೆ ಹಚ್ಚುವುದರ ಜೊತೆಗೆ ಪ್ರಯೋಗಾಲಯದ ಪರೀಕ್ಷೆ ಯೊಂದರಿಂದ ಮಾತ್ರ ಹಂದಿ ಜ್ವರ ಇದೆಯೋ ಇಲ್ಲವೋ ಪತ್ತೆಯಾಗುತ್ತದೆ.

ತಿಳಿದ ತಕ್ಷಣ ಏನು ಮಾಡಬೇಕು?
ಸಾಂಕ್ರಾಮಿಕ ರೋಗವಿರುವ ಪ್ರದೇಶಗಳಿಂದ ಕಳೆದ ಹತ್ತು ದಿನಗಳಲ್ಲಿ ಬಂದವರು ಈ ಲಕ್ಷಣಗಳನ್ನು ಅನುಭವಿಸಿದರೆ ಥಕ್ಷಣಾ ಸಹಾಯವಾಣಿಗೆ ಕರೆ ಮಾಡಿ ಅಥವಾ ಹತ್ತಿರದ ಆಸ್ಪತ್ರೆಗೆ ಹೋಗಿ.
ಬೆಂಗಳೂರಿನಲ್ಲಿ : ರಾಜೀವಗಾಂಧಿ ಆಸ್ಪತ್ರೆ : ಸಹಾಯವಾಣಿ ಸಂಖ್ಯೆ : ೨೬೬೩೧೯೨೩

ಚಿಕಿತ್ಸೆ :
ಲಕ್ಷಣಗಳು ಕಂಡುಬಂದ ತಕ್ಷಣವೇ ಆಂಟಿವೈರಲ್ ಔಷಧಿಗಳನ್ನು ತೆಗೆದುಕೊಳ್ಳಬೇಕು. ಟಾಮಿ ಫ್ಲು ,ರೆಲೆಂಜಾ , ಮಾತ್ರೆಗಳು ಆಂಟಿವೈರಲ್ ಔಷಧಗಳು. ಇವನ್ನು ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಬೇಕು. ಈ ಮಾತ್ರೆಗಳಿಂದ ಸುಸ್ತು, ವಾಂತಿ, ತಲೆಸುತ್ತು ಇತ್ಯಾದಿ ಲಕ್ಷಣಗಳು ಕಂಡುಬರಬಹುದು.
ಸ್ವ-ಚಿಕಿತ್ಸೆ : ಆಂಟಿಬಯಾಟಿಕ್ಸ್ ಕಂಡಿತ ಬೇಡ. ಏಕೆಂದರೆ ಈ ಕಾಯಿಲೆ ವೈರಸ್ಸುಗಳಿಂದ ಬರುತ್ತದೆ ಬ್ಯಾಕ್ಟೀರಿಯಾಗಳಿಂದಲ್ಲ.
ಲಸಿಕೆ : ಇದುವರೆಗೂ ಲಭ್ಯವಿಲ್ಲ .

ಯಾರಿಗೆ ಹೆಚ್ಚಿನ ತೊಂದರೆಯಾಗಬಹುದು ?
ಶ್ವಾಸಕೋಶದ ತೊಂದರೆಯಿರುವವರಿಗೆ, ಅಸ್ತಮಾ ದಿಂದ ಬಳಲುತ್ತಿರುವವರಿಗೆ.
ಹೃದಯದ ತೊಂದರೆಯಿರುವವರಿಗೆ
ಮೂತ್ರಪಿಂಡದ ತೊಂದರೆಯಿರುವವರಿಗೆ
ಪಿತ್ತಕೋಶದ ತೊಂದರೆಯಿರುವವರಿಗೆ
ನರಗಳ ತೊಂದರೆಯಿರುವವರಿಗೆ
ಗರ್ಭಿಣಿಯರಿಗೆ
ರೋಗನಿರೋಧಕ ಶಕ್ತಿ ಕಡಿಮೆಯಿರುವವರಿಗೆ
ಐದು ವರುಶಗಳಿಗಿಂತ ಕಿರಿಯರಿಗೆ ಮತ್ತು ೬೫ ವರುಶಗಳಿಗಿಂತ ಹಿರಿಯರಿಗೆ.

ಹರಡುವುದು ಹೇಗೆ?
ಇದು ಶೀಘ್ರ ಸಾಂಕ್ರಾಮಿಕ. ಕಾಯಿಲೆಯಿರುವ ಮನುಷ್ಯನ ಸೀನು ಅಥವಾ ಕೆಮ್ಮಿನಿಂದ ವೈರಾಣುಗಳು ಗಾಳಿಯಲ್ಲಿ ೧ ಮೀಟರ್ ದೂರದವರೆಗೂ ಹರಡುತ್ತವೆ. ಅದನ್ನು ಇತರರು ಉಸಿರಾಡುವುದರಿಂದ ಅಥವಾ ಬೇರಾವುದೇ ರೀತಿಯ ಸಂಪರ್ಕದಿಂದ ಈ ಕಾಯಿಲೆ ಹರಡುತ್ತದೆ. ಕೈ ಅಡ್ಡ ಇಟ್ಟು ಸೀನಿದರೆ/ಕೆಮ್ಮಿದರೆ ವೈರಾಣುಗಳು ಕೈ ಮೇಲೆ ಕುಳಿತಿದ್ದು ನಂತರ ಆವ್ಯಕ್ತಿ ಮುಟ್ಟುವ ವಸ್ತುಗಳಿಗೆ ತಗಲುತ್ತದೆ. ಅದನ್ನು ಇತರರು ಮುಟ್ಟಿದಾಗ ಅವರಿಗೆ ಕಾಯಿಲೆ ಹರಡುತ್ತದೆ.

ತಡೆಗಟ್ಟುವಿಕೆ ಹೇಗೆ?
ರೋಗ ಹರಡುವಿಕೆ ಯನ್ನು ತಡೆಗಟ್ಟಲು
೧. ನಿಮ್ಮ ಬಾಯಿ ಮತ್ತು ಮೂಗನ್ನು ಟಿಶ್ಶ್ಯೂನಿಂದ ಮುಚ್ಚಿಕೊಳ್ಳಿ. ಮತ್ತು ಕೂಡಲೇ ಅದನ್ನು ಹುಷಾರಾಗಿ ವಿಲೇವಾರಿ ಮಾಡಿ.
೨. ನಿಮ್ಮ ಕೈಗಳನ್ನು ಆಗಾಗ ಸೋಪು ಮತ್ತು ನೀರಿನಿಂದ ತೊಳೆದುಕೊಳ್ಳಿ
೩. ಬಾಗಿಲ ಹಿಡಿಕೆ, ರಿಮೋಟ್ ಕಂಟ್ರೋಲ್ ಇತ್ಯಾದಿಗಳನ್ನು ಅಗಾಗ ಸ್ವಚ್ಚ ಮಾಡುತ್ತಿರಿ.
೪. ಬೇರೆಯವರಿಂದ ಸಾಧ್ಯವಾದಷ್ಟು ದೂರವಿರಿ, ಶಾಲೆ ಅಥವಾ ಕೆಲಸ ನೀವು ಅನಾರೋಗ್ಯದಿಂದಿದ್ದಾಗ ಬೇಡ.
೫. ಜ್ವರ ಕಡಿಮೆಯಾದ ನಂತರ ೨೪ ಘಂಟೆ ಮನೆಯಲ್ಲೇ ಇರಿ. (ಜ್ವರ ತಾನಾಗಿಯೇ ಕಡಿಮೆಯಾದರೆ)
೬. ದ್ರವರೂಪದ ಆಹಾರ ಸೇವಿಸಿರಿ ( ನೀರು, ಗಂಜಿ,ಶಕ್ತಿದಾಯಕ ಪೇಯಗಳು)
೭. ಮುಖಕ್ಕೆ ಮಾಸ್ಕ್ ಬಳಸಿ

ಮನೆಯಲ್ಲಿ
ಸೋಪು ಮತ್ತು ನೀರು ಶೇಖಡಾ ೩೦ರಷ್ಟು ರೋಗ ಹರಡುವಿಕೆಯನ್ನು ನಿಯಂತ್ರಿಸುತ್ತವೆ. ಆಗಾಗ ಕೈಗಳನ್ನು ಇದರಿಂದ ತೊಳೆಯುತ್ತಿರಿ. ಕಣ್ಣು, ಮೂಗು ಮತ್ತು ಬಾಯಿಗಳನ್ನು ಮುಟ್ಟುವುದನ್ನು ಸಾಕಷ್ಹ್ಟು ಕಡಿಮೆ ಮಾಡಿ.

ಆರೋಗ್ಯಕರ ಆಹಾರ ಸೇವಿಸಿ, ಮತ್ತು ನಿಯಮಿತ ವ್ಯಾಯಾಮ ಮಾಡಿ.. ಇವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಒಟ್ಟಿನಲ್ಲಿ,
ಕಾಯಿಲೆ ಮನುಷ್ಯರಿಂದ ದೂರವಿರಿ .
ಪ್ರಯಾಣವನ್ನು ಮುಂದೂಡಿ
ಅಗಾಗ ಕೈ ತೊಳೆದುಕೊಳ್ಳಿ
ಆಧಾರ : http://www.in.com/swineflu/inside.php?id=#q5

Monday, August 10, 2009

ತಿರುವಳ್ಳವರ ಬರಿಕಲ್ಲ ಮೂರ್ತಿ

ತಿರುವಳ್ಳವರದೊಂದು ಬರಿಕಲ್ಲ ಮೂರ್ತಿಯ
ತಿರೆಯೊಳಿಟ್ಟೆಡೆ ಮೆರೆಯಲದೇನದು
ತಿರೆಗೆದ್ದ ಸಾಧನೆಯೆ ಸಾಧಕನಿಗೆ ಜಗದಸುಖ ಮುಖ್ಯವೆಂ
ಬರಿವಿರಲುಬೇಕು ಬರಿ ಮಾತಮಲ್ಲ ರಿಗುಂಟೆ
ಅರಿವಿಗನ ನೀತಿಯ ಬಲುಹು ಕೈ ಮೇಲಾಟದಲ್ಲಿ
ಮರೆತಿಹರು ನಿಜರೀತಿ ಅರಿತಾರು ಅಧಿಕಾರ ಮದವಿಳಿಯಲು

Friday, August 07, 2009

knowledgeable but wisdom ...?

My exams got over on 1st august..

6 Papers leading to approximately 120 pages of writing for valuation and another 100 pages as notes, powered by reading of around two and a half thousand pages in print (skipping wherever and whenever possible). Sacrificed almost 40 hours of sleep, 5-7 square meals and 12 breakfasts, consumed 100+ Cigerettes ( mixed brands as and when available) and at-least 20 pegs of rum with almost 500 ml of Pepsi or coke. and 500kms of travel.. What will this fetch me ..?

Obvious that I have become a bit more knowledgeable then earlier.. But did I gain wisdom..?

Saturday, July 25, 2009

Tuesday, June 23, 2009

ಮಗನಿಗೊಂದು ಬುದ್ದಿಮಾತು

ಮನದ ಮಾತುಗಳು ಇರಲಿ ಮೌನದಲಿ.
ಗುರಿಯಿರದೆ ಚಿಂತನೆಗಳು ಕೃತಿಯಾಗದಿರಲಿ.
ಒಂದಾಗು ಎಲ್ಲರಲಿ, ಅತಿರೇಕವಿರದಿರಲಿ.
ಒರೆ ಹಚ್ಚಿ ನೋಡಲುಬೇಕು ,
ಗೆಳೆತನವ ಬೆಳೆಸುವ ಮುನ್ನ
ಹೃದಯ ಬಂಧಿಸಿರಬೇಕು ,
ಸ್ನೇಹ ಸಂಕೋಲೆಗಳಲಿ,ಬೇಕಿಲ್ಲ ಚಿನ್ನ.
ಸಿಕ್ಕಸಿಕ್ಕವರೆಲ್ಲ ಸ್ನೇಹಕಱರೇನಲ್ಲ ,
ಎಲ್ಲರನು ನೀನನಸುರಿಸಬೇಕಿಲ್ಲ.
ಬೇಡ ಕಾದಾಟ ಯಾರೊಡನೆಯೂ,
ಕಾದಿದರೆ ಅರಿಗಿರಲಿ ನಿನ್ನರಿವು ಕಾಳಗದಮುನ್ನ.
ಸಹನೆಯಲಿ ನೀ ಕೇಳು ಸರ್ವರ ನುಡಿಯ.
ನುಡಿದಾರೆ ನುಡಿ ಯೋಗ್ಯರಲಿ ಮುತ್ತಿನ ಹಾರ
ನಡತೆಯಲಿ ಸಿರಿತನವಿರಲಿ,
ಉಡುಗೆ ತೊಡುಗೆಗಳಿಗೂ ಉಂಟು ಬೆಲೆಯು,
ಲೆಕ್ಕದಾ ಅರಿವಿರಲಿ , ಅಳತೆ ಮೀರದೆ ಇರಲಿ.
ತರದು ಘನತೆಯ ಬರಿಯಬ್ಬರವು,
ಸಾಲದ ಹಂಗಿಲ್ಲದಿರಲಿ ,
ತರುವುದೇ ಬೇಡ,ಇನ್ನು ಕೊಡುವುದೇಕೆ?
ನೀನು ಸಾಲಿಗನಾದರೆ ಕಳೆಯಬಹುದು
ಕೆಳೆಯನನೂ ಸಾಲದ ಜೊತೆಗೆ
ಸಾಲದ ಹೊರೆ ನಿನಗಾದರೆ ,
ನಿನಗಿರದು ಆತ್ಮಗೌರವದ ರಕ್ಷೆ
ಎಲ್ಲಕ್ಕೂ ಮಿಗಿಲಾಗಿ ,
ಜೀವನವಿರಲಿ ಆತ್ಮಸಾಕ್ಷಿಗನುಗುಣವಾಗಿ
ಭಯವಿರದು ದೇವನಿಗೆ ಉತ್ತರಿಸಲು,
ಮನುಜರ ಲೆಕ್ಕವಿನ್ನೇನು..?
ಹೋಗಿ ಬಾ ಮಗು.. ಕಾಯಲಿ ನಿನ್ನನೀ ಹರಕೆಯು.

(Polonius advice to Laertes -- From Hamlet by William Shakespeare)

Rakesh Sharma -- The First Indian Austronaut

I remember the day in 1984, the headlines in newspapers read "Sare Jahan Se Achcha". This was the message given by Rakesh Sharma, flying astronaut, to Smt.Indiragandhi, then Prime Minister of India on satellite to earth communication systems, with the whole world listening when asked "how India looks from space?". He inspired dreams in me, and crores of children like me.

Thank you sir..

Here is his blog

Wednesday, June 10, 2009

SSL sigining

### Generate a server key and request for signing (csr).
openssl genrsa -des3 -out server.key 4096
openssl req -new -key server.key -out server.csr

####Sign the certificate signing request (csr) with the self-created Certificate Authority (CA)

openssl x509 -req -days 365 -in server.csr -CA ca.crt -CAkey ca.key -set_serial01 -out server.crt


####Make a server.key which doesn't cause Apache to prompt for a password.

openssl rsa -in server.key -out server.key.insecure
mv server.key server.key.secure
mv server.key.insecure server.key

####copy them into position.
cp server.key /etc/apache2/ssl.key
cp server.crt /etc/apache2/ssl.crt
cp server.csr /etc/apache2/ssl.csr

### Restart apache
/etc/init.d/apache2 restart

Tuesday, June 09, 2009

ಆಯಸ್ಸು .

ಭುವಿಗೆನ್ನ ಕಳುಹಿಸುವ ಮುಂಚೆ
ದೇವನ ಜೊತೆ ಮಾತಿಗೆ ಕುಳಿತೆ.
ಒಂದಷ್ಟು ವಿಷಯ ಫೈನಲೈಸ್
ಆಗಬೇಕಿತ್ತು ಬೇಗ.

ಪೂರ್ತಿ ನೂರು ವರುಷ
ಬದುಕಬೇಕು ನಾನು .
ಏಕೆ ಎಂದೂ ಕೇಳದೆ
ನೀಡಿದ ವರವನು ದೇವನು .

ಮತ್ತೆ ಕೇಳಿದ ,
ಭೂಮಿಯಲ್ಲಿ ಬದುಕಲು ಬಯಸುವೆ ಎಲ್ಲಿ ?
ನಾನು ಹೇಳಿದೆ,
ಕುರಿತೋದದೆಯುಂ ಕಾವ್ಯಪ್ರಯೋಗ
ಪರಿಣಿತಮತಿಗಳಿರುವ ಬೆಂಗಳೂರಲ್ಲಿ
ಹಾಗಿದ್ದರೆ ಮುರಿಯುವೆ ಹತ್ತು .
ಬೆಂಗಳೂರಲ್ಲಿ ಬದುಕುವ ಗತ್ತು .

ಹೋದರೆ ಹೋಯಿತು ಹತ್ತು .
ಬೆಂಗಳೂರಿನ ಗಮ್ಮತ್ತು ..
ಹತ್ತಕ್ಕೂ ಮಹತ್ತು .

ಮತ್ತೊಂದಿದೆ ಪ್ರಶ್ನೆ ಬೇಕೆ ನಿನಗೆ ಸಿಗರೇಟು ?
ಸಾಕೆ ಬೆಂಗಳೂರಿನ ಹೊಗೆ ಘಾಟು..?
ಹುಟ್ಟಿದ ಮೇಲೆ ಸೇದದೆ ಹೋದರೆ ಸಿಗರೇಟು
ಬದುಕಿಗೆ ಏನಿದೆ ರೇಟು.
ಸರಿ ಹಾಗಾದರೆ ತೆಗೆಯುವ ಇನ್ನೈದೇ ವರ್ಷ .
ನನಗೋ ಬಲು ಹರುಷ .

ಬಸ್ಸಲಿ ಓಡಾಡುವೆಯೋ, ಇಲ್ಲ
ನಿನ್ನದೇ ವಾಹನ ಬೇಕೊ?
ಏನೇ ಆದರು , ಟ್ರಾಫಿಕ್ ಜಾಮಿಗೆ
ಐದೇ ವರ್ಷದ ರೆಂಟು
ಹೋದರೆ ಐದು , ಕಳೆಯುವುದೇನು ಗಂಟು.

ಪಬ್ಬಿದೆ,ಬಾರಿದೆ, ಥರ ಥರ ಡ್ರಿಂಕ್ಸ್ ಇದೆ ..
ಬೇಕೆ ನಿನಗೆ ಗುಂಡು
ಕುಡಿಯದೆ ಉಳಿದರೆ ನಾನಾಗುವೆನೆ
ಬೆಂಗಳೂರಿನ ಗಂಡು ?
ಕುಡಿತ ಕೆಟ್ಟದು ಎನ್ನುವರು
ಕುಡಿದು ಬದುಕಿದರೆ ಲಾಂಗ್ ಲೈಫ್
ಬೇರೆಯವರಿಗದು ರಾಂಗ್ ಟೈಪ್
ಅದಕೇ ತೆಗೆಯುವೆ ಇನ್ನೂ ಹತ್ತು
ಉಳಿದಿದೆ ಇನ್ನೂ ಎಪ್ಪತ್ತು .

ಎಲ್ಲಾ ಓಕೆ. ಇನ್ನೊಂದೇ ಪ್ರಶ್ನೆ .
ಮದುವೆಯು ನಿನಗೆ ಬೇಕೆ.. ?
ಮದುವೆಯು ಇಲ್ಲದೆ ಬದುಕುವುದಾದರೆ
ಆ ಥರ ಬದುಕೇಕೆ ..?

ಸರಿ ಹಾಗಾದರೆ ಮದುವೆಯ ಲೆಕ್ಕಕೆ ಮೂವತ್ತು.
ಉಳಿದಿದೆ ನಿನಗೆ ನಲವತ್ತು.
ಜ್ಞಾನೋದಯವಾಗುವ ತನಕ ಮರೆತಿರು ಈ ಲೆಕ್ಕ
ಎಂದೇನೋ ಹೇಳಿ ಭೂಮಿಗೆ ಕಳಿಸಿದ ಠಕ್ಕ.

ಮೊನ್ನೆ ತುಂಬಿತು ಮೂವತ್ತೇಳು.
ಲೆಕ್ಕವು ನೆನಪಿಗೆ ಬಂತು.
ಉಳಿದ ದಿನದಲ್ಲಿ ಏನಾದರು ಸಾಧಿಸಲು
ಮಡದಿ ಮಕ್ಕಳ ಗೋಳು.