Pages

Wednesday, October 27, 2010

rm to mp3 conversion using lame

Converting rm to mp3 in ubuntu.. from the link http://ubuntu-virginia.ubuntuforums.org/showthread.php?t=1110872

#!/bin/sh
inputfile=$1
inputfilename=`basename $1 rm`
ext='mp3'
outputfilename=$inputfilename$ext

echo 'CONVERTING TO WAV FORMAT'
mplayer $inputfile -ao pcm

echo 'CONVERTING WAV FORMAT TO MP3'
lame -h -b 256 audiodump.wav $outputfilename

rm -f audiodump.wav

echo 'DONE...!'

Sunday, October 03, 2010

ಯಶಸ್ಸಿಗಾಗಿ ಆಲ್ಬರ್ಟ್ ಐನ್ ಸ್ಟೈನ್ ರ ೧೦ ಸೂತ್ರಗಳು

ಅಲ್ಬರ್ಟ್ ಐನ್ಸ್ ಟೈನ್ ಲೋಕ ಕಂಡ ಅಪ್ರತಿಮ ವಿಜ್ನಾನಿಗಳಲ್ಲೊಬ್ಬರು. ಅವರ ಸಾಪೇಕ್ಷತಾ ಸಿದ್ದಾಂತದ ತಿರುಳನ್ನರಿತವರು ಇಂದಿಗೂ ಬಹು ಕಡಿಮೆ ಮಂದಿ. ಸೈದ್ದಾಂತಿಕ ಭೌತವಿಜ್ಞಾನಿ, ತತ್ವಜ್ಞಾನಿ ಮತ್ತು ಲೇಖಕ ಎಂದವರು ಪ್ರಸಿದ್ದರು. ತಮ್ಮ ದ್ಯ್ತುತಿ ವಿದ್ಯುತ್ ಪರಿಣಾಮದ ಸಂಶೋಧನೆಗಾಗಿ ೧೯೨೧ ರಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾದವರು .

೩೦೦ಕ್ಕೂ ಮಿಕ್ಕ ವೈಜ್ಞಾನಿಕ ಲೇಖನಗಳನ್ನು ೧೫೦ ಇತರ ಲೇಖನಗಳನ್ನು ಬರೆದ ಅವರು ಜಗತ್ತು ಕಂಡ ಅತೀ ಯಶಸ್ವಿ ವಿಜ್ಞಾನಿ ಎನ್ನಬಹುದು.

ಅವರ ಬರಹಗಳಲ್ಲಿ ಕಾಣುವ ವಾಕ್ಯಗಳನ್ನು ಹಿಡಿದೇ ಬದುಕಿನ ಹತ್ತು ಮುಖ್ಯವಾದ ಪಾಠಗಳನ್ನು ನಾವಿಲ್ಲಿ ನೋಡೋಣ.

೧. ನನಗೆ ವಿಶೇಷ ಪ್ರತಿಭೆಯಿಲ್ಲ. ಆದರೆ ತೀವ್ರ ಆಸಕ್ತಿ ಇದೆ.

ಇದು ನಮ್ಮೆಲ್ಲರಿಗೂ ಅನ್ವಯಿಸುತ್ತದೆ. ವಿಶೇಷ ಪ್ರತಿಭೆ ಯಶಸ್ವಿಯಾಗಲು ಬೇಕಿಲ್ಲ. ಅದು ನಮ್ಮಲ್ಲಿ ಆಸಕ್ತಿ ಮೂಡಿದಾಗ ತಾನಾಗಿಯೇ ಬರುತ್ತದೆ.

ನಿಮ್ಮ ಆಸಕ್ತಿಯನ್ನು ಬೆಳೆಸಿಕೊಳ್ಳಿ .

೨. ನಾನೇನೂ ಚತುರನಲ್ಲ. ಆದರೆ ಸಮಸ್ಯೆಗಳನ್ನು ನಾನು ಸುಧೀರ್ಘವಾಗಿ ಚಿಂತಿಸುತ್ತೇನೆ.

ಅಲ್ಲವೇ. ಸಮಸ್ಯೆಗಳಿಂದ ದೂರ ಓಡುವುದು ಸುಲಭ. ಆದರೆ ಸ್ವಲ್ಪ ತಾಳ್ಮೆಯಿದ್ದರೆ ಈ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಬಹುದು.

ತಾಳ್ಮೆಯಿರಲಿ.

೩. ಕಾರು ಓಡಿಸುವಾಗ ಸುಂದರಿಗೆ ಮುತ್ತು ಕೊಡುಬಲ್ಲೆ ಎಂದು ಹೇಳಿಕೊಳ್ಳುವ ಮನುಷ್ಯ ಮುತ್ತಿಡಲು ಸಾಕಷ್ಟು ಗಮನ ನೀಡಿರಲಾರ ಎನಿಸುತ್ತದೆ.

ನೀವು ಮಾಡುವ ಕೆಲಸದಲ್ಲಿ ಗಮನ ನೀಡುವುದು ಅತೀ ಮುಖ್ಯ. ಮಾಡಬೇಕಾದ ಕೆಲಸದೆಡೆ ನಿಮ್ಮ ಸಂಪೂರ್ಣ ಶಕ್ತಿಯೊಂದಿಗೆ ಗಮನ ಕೇಂದ್ರೀಕರಿಸಿ.

ಗಮನಿಸಿ.

೪. ಕಲ್ಪನೆಯೇ ಎಲ್ಲಕ್ಕಿಂತ ಮಿಗಿಲು. ಮುಂದಿನ ಜೀವನದ ಆಕರ್ಷಣೆಗಳ ಮುನ್ನೋಟವದು. ಜ್ಞಾನಕ್ಕಿಂತ ಕಲ್ಪನೆ ಮುಖ್ಯವಾದುದು.

ಹೌದು. ಎಲ್ಲ ಅನ್ವೇಷಣೆಗಳ ಮುಂಗಾಣ್ಕೆ ಕಲ್ಪನೆಯಿಂದಲೇ ತಾನೇ. ನೀವು ಅರಿತಿರುವುದೆಷ್ಟು ಎನ್ನುವುದು ಬೇರೆ. ಆದರೆ ನಿಮ್ಮ ಕಲ್ಪನಾಶಕ್ತಿಯನ್ನು ವಿಕಸಿಸಿಕೊಳ್ಳಬೇಕಾದದ್ದು ಅತೀ ಅವಶ್ಯ.

ಕಲ್ಪಿಸಿಕೊಳ್ಳಿ

೫. ತಪ್ಪು ಮಾಡದ ವ್ಯಕ್ತಿ ಹೊಸತೇನನ್ನೂ ಪ್ರಯತ್ನಿಸಿದವನಲ್ಲ.

ಹೊಸತು ಮಾಡುವಾಗ ತಪ್ಪು ಸಹಜ. ತಪ್ಪನ್ನು ತಿದ್ದಿಕೊಂಡು ಮುನ್ನಡೆಯುವುದು ಯಶಸ್ವಿಗಳ ಗುಣ. ನಿಮಗೆ ಯಶಸ್ಸು ಬೇಕೆಂದರೆ, ಉದ್ದೇಶಪೂರ್ವಕವಲ್ಲದ ತಪ್ಪುಗಳು ನಿಮ್ಮಿಂದ ಹೆಚ್ಚಾಗಲಿ.

ಹೊಸ ಪ್ರಯತ್ನದಲ್ಲಾಗಬಹುದಾದ ತಪ್ಪುಗಳಿಗೆ ಹೆದರಬೇಡಿ..

೬. ಭವಿಷ್ಯದ ಬಗ್ಗೆ ಭಯ ಬೇಡ ಅದು ಹೇಗೂ ಬರುತ್ತದೆ.

ಮುಂದಿನದರ ಬಗ್ಗೆ ಯೋಚಿಸುತ್ತಾ, ಇಂದಿನ ಸುಖವನ್ನು ಕಳೆದುಕೊಳ್ಳುವುದರಲ್ಲಿ ಅರ್ಥವಿಲ್ಲ.

ಈ ಕ್ಷಣದ ಬದುಕಿನಲ್ಲಿ ಗಮನವಿಡಿ.

೭.ಯಶಸ್ವಿಯಾಗಲು ಪ್ರಯತ್ನಿಸುವುದಕ್ಕಿಂತ, ಮೌಲ್ಯಯುತವಾಗಲು ಪ್ರಯತ್ನಿಸಬೇಕು.

ಯಶಸ್ಸು ನಿಮ್ಮ ನಿಲುವುಗಳಿಂದ ಬರುತ್ತದೆ. ನಮ್ಮ ನಿಲುವುಗಳನ್ನು ನಿರ್ಧರಿಸುವುದು ನಮ್ಮ ಮೌಲ್ಯಗಳು. ನಮ್ಮ ಆಸೆ ಆಕಾಂಕ್ಷೆಗಳನ್ನು , ನಮ್ಮ ಪ್ರತಿಭೆ ಆಸಕ್ತಿಗಳನ್ನೂ ಪೋಷಿಸಿಕೊಂಡರೆ ಅವು ನಮ್ಮ ಯಶಸ್ಸಿಗೆ ಕಾರಣೀಭೂತವಾಗುತ್ತದೆ.

ಮೌಲ್ಯಗಳನ್ನು ಗಳಿಸಿಕೊಳ್ಳಿ .

೮. ಮೂರ್ಖತನದ ಪರಮಾವಧಿಯೆಂದರೆ ಮಾಡಿದ್ದನ್ನೇ ಮತ್ತೆ ಮತ್ತೆ ಮಾಡುತ್ತ ಬೇರೆ ಫಲಿತಾಂಶಗಳನ್ನು ನಿರೀಕ್ಷಿಸುವುದು.

ಮಾಡಿದ ತಪ್ಪನ್ನು ತಿಳಿದು, ಅದನ್ನು ಸರಿಪಡಿಸಿಕೊಳ್ಳಿ. ಹಾಗೆ ಮಾಡುವುದೆಂದರೆ ನಿಮ್ಮ ಯೋಚನಾ ರೀತಿ ಮತ್ತು ಕಾರ್ಯವಿಧಾನವನ್ನು ಬದಲಿಸಿಕೊಳ್ಳು ವುದು. ಅದು ನಿಮ್ಮ ಜೀವನವನ್ನು ಬದಲಿಸುತ್ತದೆ.

ನಿಮ್ಮ ತಪ್ಪುಗಳಿಂದ ಪಾಠ ಕಲಿಯಿರಿ.

೯. ಅರಿವು ತಿಳಿವಲ್ಲ ತಿಳಿವಿನ ಒಂದೇ ಮೂಲವೆಂದರೆ ಅನುಭವ

ಯಾವುದೇ ಸಮಸ್ಯೆಯ ಬಗ್ಗೆ ನೀವು ಬಹಳಷ್ಟು ಮಾತಾಡಬಹುದು. ಆದರೆ ಅದರಿಂದ ಲಭಿಸುವುದು ಅರಿವಷ್ಟೇ (Information). ತಿಳಿವು (knowledge) ಲಭಿಸಲು ನೀವೇ ಅದರಲ್ಲಿ ಬೀಳಬೇಕು. ಹಿಂಜರಿಯದೆ ಯಾವುದೇ ಕೆಲಸ ಮಾಡಲು ನುಗ್ಗಿ. ಅಗಣಿತವಾದ ತಿಳಿವು ನಿಮಗದರಿಂದ ಲಭಿಸುತ್ತದೆ.

ಅನುಭವದಿಂದ ತಿಳಿವು ಬರುತ್ತದೆ.

೧೦. ಆಟದ ನಿಯಮಗಳನ್ನು ಮೊದಲು ಅರಿಯಬೇಕು. ಆ ಮೇಲೆ ಬೇರೆಯವರಿಗಿಂತ ಚೆನ್ನಾಗಿ ಆಟವಾಡಬೇಕು.

ಅಲ್ಲವೇ..? ಆಟದ ನಿಯಮಗಳನ್ನರಿಯದೇ ಆಡುತ್ತೇವೆಂದರೆ, ಗೆಲುವು ಸೋಲು ಯಾವುದೆಂದು ನಿರ್ಣಯಿಸುವುದು ಹೇಗೆ. ಅಥವಾ ನಮ್ಮ ಕಾರ್ಯ ನಮ್ಮನ್ನು ಗೆಲುವಿನೆಡೆಗೆ ಕೊಂಡೊಯ್ಯುವುದೋ ಸೋಲಿನೆಡೆಗೆ ಕೊಂಡೊಯ್ಯುವುದೋ..?

ಮೊದಲು ನಿಯಮಗಳನ್ನರಿಯಬೇಕು. ನಂತರ ಚೆನ್ನಾದ ಆಟವನ್ನಾಡಬೇಕು.

ಮೊದ್ಮಣಿ

( ನನಗೆ ಬಂದ ಮಿಂಚೆಯೊಂದರಿಂದ ಭಾವಾನುವಾದ)