Pages

Wednesday, May 27, 2009

opensuse11.1 and oracle installation

Installation of opensuse11.1 x86_64 was plain enough.
Download and install orarun.rpm this has prerequiste of the libc packages. install them if prompted.
Also this will create user oracle and groups oinstall and dba. and create /etc/profile.d/oracle.sh script.
Set the variables at this script tweaked to your settings.

Su as oracle user and extract the oracle files

#gunzip oracle_version.cpio.bz
#cpio -imdv < oracle_version.cpio

unset LD_PRELOAD ## this will releive you some pain if you donot want to see warning messages

run installer as oracle user (you need to export DISPLAY and xhost+

things will run smooth. But as the 64 bit systme dependencies are there.. you may run into problems later. the issues I faced
1. cannot find -lpthread
solution :
zypper install glibc-32bit
zypper install glibc-devel-32bit

2. Cannot find -lgcc
solution:
zypper install gcc-32bit

3./opt/oracle/product/10.2/db_1/lib32//libclntsh.so: file not recognized: File truncated
solution:
cd /opt/oracle/product/10.2/db_1/lib32
ln -s /opt/oracle/product/10.2/db_1/lib/libclntsh.so .

4. cannot find -lclntsh
solution
source /opt/oracle/product/10.2/db_1/bin/genclnts

and now.. undefined reference to "nnfyboot" i did not find solution for this. I post when I found solution

Thursday, May 21, 2009

ಒಂದು ಬುಡುಬುಡುಕೆ ಪ್ರಸಂಗ

ನಿನ್ನೆ ರಂಗಾಯಣದ ಭೂಮಿಗೀತದಲ್ಲಿ ನಾಟಕ ನೋಡಿ ಸುಖಿಸಿದ ಶಶಿಯವರ ಬ್ಲಾಗ್ ಓದಿ ನನಗೆ ಹೊಟ್ಟೆಕಿಚ್ಚಾಯಿತು. ಮೈಸೂರಿನ ಸಾಂಸ್ಕೃತಿಕ ವಾತಾವರಣದಲ್ಲಿ ಸುಖಿಸುವ ನನ್ನ ಹಳೆಯ ಗೆಳೆಯರನ್ನು ಕಂಡರೆ ನನಗೆ ಸ್ವಲ್ಪ ಹೊಟ್ಟೆಕಿಚ್ಚೇ..! ಆದರೆ ಈ ಬ್ಲಾಗ್ ನನ್ನ ಹಳೆಯ ನೆನಪುಗಳ ಕದ ತೆರೆದು ಮುಗುಳುನಗೆ ಮೆರೆಸಿದಾಗ, ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು.

ಮೈಸೂರಿನಲ್ಲೇ ನನ್ನ ಪೂರ್ತಿ ವಿದ್ಯಾಭ್ಯಾಸ ನಡೆದದ್ದು. ಶಾಲಾ ಕಾಲೇಜುಗಳಿಂದ ನಾಟಕ ಗಳಿಗೆ ಭಾಗವಹಿಸುತ್ತಿದ್ದ ನಾನು, ಆಗ ಮೈಸೂರಿನ ಪ್ರಸಿದ್ದ ರಂಗಸ್ಥಳಗಳೆಲ್ಲದರ ಮೇಲೂ ನಾಟಕ ಮಾಡಿದ್ದೇನೆಂದು ಹೇಳಿಕೊಳ್ಳಲು ಹೆಮ್ಮೆ. ಟೌನ್ ಹಾಲ್, ವಸ್ತುಪ್ರದರ್ಶನ, ಶಾರದಾವಿಲಾಸ ಕಾಲೇಜು , ಮರಿಮಲ್ಲಪ್ಪ, ಬನುಮಯ್ಯ, ಕಲಾಮಂದಿರ, ಜಗನ್ಮೋಹನ ಸಭಾಂಗಣ, ಜೆ.ಸಿ.ಇ. ಇನ್ನೂ ಹಲವು ನೆನಪಿಲ್ಲ. ಜೊತೆಗೆ ಗಣಪತಿ ಪೆಂಡಾಲ್ ಗಳ ಬಳಿಯೂ ನನ್ನ ಅಭಿನಯ ನಡೆದಿತ್ತು. ಇದರಲ್ಲಿ ಎರಡು ಘಟನೆಗಳು ಮರೆಯಲಾಗದಂತಹವುಗಳು.

ಅದು ಅಂತರ ಕಾಲೇಜು ನಾಟಕ ಸ್ಪರ್ಧೆ. ನೆಳಲು ಬೆಳಕು ಎಂದೇನೋ ಹೆಸರು ಇರಬೇಕು. ಮಹಾಜನ ಕಾಲೇಜಿನ ವಿಧಾರ್ಥಿಯಾಗಿ ನಾವು ಒಂದು ತಂಡ ಕಟ್ಟಿ ಆ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆವು. ನಾಟಕದ ಹೆಸರು ನೆನಪಿಲ್ಲ. ಆದರೆ ಶಂಕರ್ ಮುಂದಾಳತ್ವ ವಹಿಸಿದ್ದ. ಪಡುವಾರಹಳ್ಳಿಯ ಗೆಳೆಯ ವಿಜಿ ನಿರ್ದೇಶಕನಾಗಿದ್ದ. ಭೌತಶಾಸ್ತ್ರ ಅಧ್ಯಾಪಕರಾದ ನಂದಕುಮಾರರವರ್ ಒತ್ತಾಸೆ. ಒಂದು ಹುಡುಗಿಯನ್ನು ಮದುವೆಯಾಗಲು ಬರುವ ಮೂವರು ತರುಣರ ಕಥೆ. ಗೆಳೆಯ ಕೃಷ್ಣಕುಮಾರ್ ಕಾಲೇಜು ವಿಧ್ಯಾರ್ಥಿ. ನಾಟಕದ ಹುಚ್ಚಿನ ಅಡಿಗೆಯವನ ಪಾತ್ರದಲ್ಲಿದ್ದ ಗೆಳೆಯನ ಹೆಸರು ನೆನಪಿಲ್ಲ. ಮುಂದೆ ಅವನನ್ನು ಹೆಸರಿಸಬೇಕಾದರೆ ಭೀಮ ಎನ್ನುತ್ತೇನೆ. ನನ್ನದು ಬುಡುಬುಡುಕೆಯವನ ಪಾತ್ರ.

ಈ ನಾಟಕಕ್ಕಾಗಿ ಪ್ರಾಕ್ಟೀಸ್ ಮಾಡುತ್ತಿದ್ದಾಗ, ಗೆಳೆಯನ ಬಳಿಯಿಂದ ಕೇಳಿ ತೆಗೆದುಕೊಂಡು ಬಂದ ಸೈಕಲ್ ಕಾಲೇಜಿನ ಬಳಿ ಕಳುವಾಯಿತು . ಅದಕ್ಕಿಂತಲೂ ರೋಚಕ ಸಂಗತಿ ಎಂದರೆ, ನಾಟಕ ದ ಎರಡನೇ ದೃಶ್ಯದಲ್ಲಿ ನನ್ನ ರಂಗ ಪ್ರವೇಶ. ಬುಡುಬುಡುಕಿಯವನಾಗಿ ಅವರದೇ ಶೈಲಿಯಲ್ಲಿ ಏನೋ ಡೈಲಾಗ್ ಹೇಳಿಕೊಂಡು ಸ್ಟೇಜ್ ಮೇಲೆ ಬರಬೇಕು. ಬುಡುಬುಡುಕೆಯವರಂತೆಯೇ ಬುಡುಬುಡುಕೆ ಬಾರಿಸಬೇಕು. ಸಾಕಷ್ಟು ಅಭ್ಯಾಸ ಮಾಡಿದ್ದೆನಾದರೂ, ಶೈಲಿ ಇನ್ನೂ ಸಿದ್ದಿಸಿರಲಿಲ್ಲ. ಅದರಲ್ಲೂ ಅಷ್ಟು ದೊಡ್ಡ ವೇದಿಕೆಯ ಮೇಲೆ ... ಸ್ವಲ್ಪ ಎನೋ ಎಡವಟ್ಟಾಯಿತು. ಜೋರಾಗಿ ಬಾರಿಸಿದ ನನ್ನ ಕೈಯಿಂದ ಬುಡುಬುಡುಕೆ ಹಾರಿ ಹೋಗಿ ಕೆಳಗೆ ಬಿದ್ದುಬಿಟ್ಟಿತು...! ನನಗೆ ರಸಾವೇಷ ಭಂಗ.


ನನಗೆ ನಾಟಕ ಆಡಲು ಕಲಿಸಿದ್ದವರೆಲ್ಲಾ ಸಾಮಾನ್ಯವಾಗಿ ಒಂದೆರಡು ನಿಯಮಗಳನ್ನು ಹೇಳಿರುತ್ತಾರೆ. ಅದರಲ್ಲಿ ಒಂದು ತೀವ್ರವಾದ ಅವಶ್ಯಕತೆ ನಾಟಕದ ಸನ್ನಿವೇಶಗಳಲ್ಲಿ ಒಂದಾಗಿ ಬರದಿದ್ದರೆ ಪ್ರೇಕ್ಷಕರಿಗೆ ಎಂದೂ ಬೆನ್ನು ತೋರಿಸಬಾರದು ಎಂದು ನೆನಪು. ಬುಡುಬುಡುಕೆ ಹಾರಿ ನನ್ನ ಬೆನ್ನ ಹಿಂದೆ ಬಿದ್ದಿದೆ. ನನಗೆ ಒಂದು ಕ್ಷಣ ಏನೂ ತೋಚಲಿಲ್ಲ. ತಕ್ಷಣವೇ ಸಾವರಿಸಿಕೊಂಡೆ. ಮುಂದಿನ ಡೈಲಾಗುಗಳು ಸ್ವಲ್ಪ ಹೆಚ್ಚು ಕಮ್ಮಿ ಕೆಳಗಿನಂತೆ.


"ಜೈ.. ಮಹಾಕಾಳ . ಏನೋ ಬುಡುಬುಡಿಕೆ ನಿನಗೂ ಸ್ವಾತಂತ್ರ ಬೇಕೆಂದು ನನ್ನಿಂದ ದೂರ ಹೋದೆಯಾ..? ನನ್ನ ಶಕ್ತಿ ನಿನಗಿನ್ನೂ ಗೊತ್ತಿಲ್ಲ. ನೋಡೀಗ, ಎಲ್ಲಾ ನೋಡಿ .. ನನ್ನಿಂದ ತಪ್ಪಿಸಿಕೊಳ್ಳುವ ಈ ಬುಡುಬುಡಿಕೆ ತಾನಾಗಿ ನನ್ನ ಕೈ ಸೇರಬೇಕು ಹಾಗೆ ಮಾಡುತ್ತೇನೆ."
(ಏನೋ ಮಂತ್ರ ಹೇಳಿದಂತೆ ನಟಿಸಿ...) ಬಾ ಬಾ .
ಹಾ.. ಬರೋದಿಲ್ಲವಾ ತಾಳು.. ಮಾಡ್ತೀನಿ..
(ಇನ್ನೂ ಜೋರಾಗಿ ಮಂತ್ರ ಹೇಳುತ್ತಾ .. ತಾರಕ ಸ್ವರದಲ್ಲಿ... ) ಬಾ..ಬಾ..ಬಾ...

ಅಯ್ಯೊ .. ಇವತ್ತು ನನ್ನ ಮಂತ್ರ ಯಾಕೆ ಕೆಲಸ ಮಾಡುತ್ತಾ ಇಲ್ಲ. ಹೋ ... ಗೊತ್ತಾಯ್ತು. ಇವತ್ತು ಭಾನುವಾರ.. ನನ್ನ ಮಂತ್ರಶಕ್ತಿಗೆ ಇವತ್ತು ರಜೆ. ನಾನೇ ಹೋಗಿ ಎತ್ಕೋಬೇಕು."

ಹೀಗೆ ಹೇಳುತ್ತಾ ನಾನು ಬುಡುಬುಡುಕೆಯನ್ನೆತ್ತುಕೊಂಡರೆ ಪ್ರೇಕ್ಷಕರಲ್ಲಿ ನಗೆ ಬುಗ್ಗೆ. ಹಾಸ್ಯ ನಾಟಕದಲ್ಲಿ ನನ್ನ ಅಭಾಸ ತನ್ನಂತೆಯೇ ಮರೆಯಾಯ್ತೆಂದೂ ನನಗೂ ಖುಷಿ. ಮುಂದೆ ಭೀಮ ದೊಡ್ಡ ವೇದಿಕೆಯ ಮೇಲೆ ಮರೆತ ಡೈಲಾಗುಗಳನ್ನು ನಾಟಕದಲ್ಲಿ ಸಹಜವೆಂಬಂತೆ ನೆನಪಿಸಿಕೊಡುತ್ತಾ.. ನಾಟಕವನ್ನು ತೇಲಿಸಿದ್ದು. ಮರೆಯದ ಅನುಭವ. ಅದಕ್ಕಿಂತಲೂ ದೊಡ್ಡದೆಂದರೆ ಡೈಲಾಗು ಮರೆತ ಭೀಮನಿಗೆ ಉತ್ತಮನಟ ಪ್ರಶಸ್ತಿ ಬಂದದ್ದು. ಮರುದಿನದ ವಿಮರ್ಶೆಗಳಲ್ಲಿ ನನ್ನ ಪಾತ್ರವನ್ನೂ ಮೆಚ್ಚಿಕೊಂಡು ಬರೆದಿದ್ದರೆನ್ನಿ,

ಈ ನಾಟಕದ ಕತೆ ಇಲ್ಲಿಗೇ ಮುಗಿಯಲಿಲ್ಲ. ಕಾಲೇಜ್ ಡೇ ಗೆ ಇದೇ ನಾಟಕ ಆಡಿಸಲು ನಂದಕುಮಾರ್ ಸರ್ ನಿರ್ಧರಿಸಿ, ಕಾಲೇಜು ರಜೆ ಇದ್ದರಿಂದ ನನ್ನ ಮನೆಗೆ ಶಂಕರ್ ಕೈಯಲ್ಲಿ ಹೇಳಿಕಳಿಸಿದರು. ಅವನು ಮನೆಯ ಪಕ್ಕದ (ಪಡುವಾರಹಳ್ಳಿಯ) ಗೆಳೆಯನೊಬ್ಬನ ಜೊತೆ ನಮ್ಮ ಮನೆಗೆ ಬಂದ. ಅವನೊಂದಿಗೆ ಮಾತಾಡುತ್ತಾ.. "ಅಯ್ಯೋ ಈ ನಾಟಕ ಮಾಡಕ್ಕೆ ಹೋಗಿ ಸೈಕಲ್ ಕಳೆದೋಯ್ತು, ಇನ್ನೇನು ನಾಟಕ ಮಾಡುವುದು " ಅಂದೆ. ಜೊತೆಯಲ್ಲಿದ್ದ ಗೆಳೆಯ " ಯಾವ ಥರಾ ಸೈಕಲ್ಲು.. ಎಲ್ಲಿ ಕಳೆದದ್ದು ?" ಅಂದ. ಅದೇ ಕೆಂಪು ಬೆಂಡ್ ಹ್ಯಾಂಡಲ್ ಸೈಕಲ್. ನಮ್ಮ ರಮೇಶನದು . ಕಾಲೇಜಿನ ಹತ್ತಿರ " ಅಂದೆ . " ಆದೇ ಹೋದ ಭಾನುವಾರ ಕಾಲೇಜಿನ ಫೀಲ್ಡಲ್ಲೇ ನಿಂತಿತ್ತಲ್ಲಾ ಅದಾ ?" ಅಂದ."ಹೂಂ" ಅಂದೆ. "ನಾವೇ ಯಾರೋ ಮರೆತುಹೋಗಿದ್ದಾರೆ ಅಂತ ಎತ್ತಿಟ್ಟಿದ್ದೀವಿ. ನಾಳೆ ಬನ್ನಿ ಕೊಡ್ತೀವಿ" ಅಂದ.

ಈ ಸಂತಸದಲ್ಲಿ ಕಾಲೇಜಿನ ವೇದಿಕೆಯಲ್ಲಿ ನಾಟಕ ಮಾಡಿದೆ. ಅದೇ ಕೊನೆ ಬಾರಿ ನಾನು ನಾಟಕ ಮಾಡಲು ವೇದಿಕೆ ಹತ್ತಿದ್ದು.

(ಇನ್ನೊಂದು ಘಟನೆಯನ್ನ ಮತ್ತೊಮ್ಮೆ ಹೇಳುತ್ತೇನೆ.)

Tuesday, May 19, 2009

ಮಳೆಭೈರವ ರೋಷ

ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ
ಸಿಡಿಲ್ಮಿಂಚಿಗೆ ನಡುಗುತ್ತಿದೆ ಪರ್ವತ ವನ ಧಾತ್ರಿ


ಕುವೆಂಪು ರವರ ಕವನದ ಮೇಲಿನ ಸಾಲುಗಳು ನನಗೆ ನೆನಪಾದದ್ದು, ಅನುಭವಕ್ಕೆ ಬಂದದ್ದು ಮೊನ್ನೆ ಶುಕ್ರವಾರ ರಾತ್ರಿ, ಬೆಂಗಳೂರಿನಿಂದ ಹೊಳೆನರಸೀಪುರಕ್ಕೆ ಹೊರಟಾಗ .. ತುಮಕೂರು ರಸ್ತೆಯ ಟ್ರಾಫಿಕ್ ಜಾಮ್ ತಪ್ಪಿಸಿಕೊಳ್ಳಲು , ಮಾಗಡಿ ರಸ್ತೆಯಲ್ಲಿ ಹೊರಡುತ್ತಿದ್ದಂತೆ ಶುರುವಾದ ಮಳೆ....

ಮೂರಡಿ ಮುಂದಿನ ರಸ್ತೆ ಕಾರಿನ ದಾರಿದೀಪಗಳ ಪ್ರಖರ ಬೆಳಕಿನಲ್ಲೂ ಕಾಣದಾದಾಗ, ಸುರಿದ ಮಳೆಹನಿ ಟಾರು ರಸ್ತೆಗೆ ಮುತ್ತಿಟ್ಟು ಸರ್ರ್ನೆ ಹಿಮಮಣಿಯಂತೆ ಕಾರೆತ್ತರಕ್ಕೂ ಚಿಮ್ಮಿ ಬರುವಾಗ , ಸುತ್ತಲಿನ ಕತ್ತಲೆಯ ಜಗತ್ತಿನಲ್ಲಿ, ನಮ್ಮ ಮುಂದಷ್ಟೇ ಬೆಳಕಿನ ದಾರಿ, ಅಲ್ಲಿ ನೀರ್ ಮಣಿಗಳ ನರ್ತನ ಲೋಕ , ನೋಡಿ ಕಣ್ತುಂಬಿಕೊಳ್ಳಲು ಖಾಲಿ ಮನಸು, ಜೊತೆಗೆ ಪಿ.ಬಿ. ಶ್ರೀನಿವಾಸರ ಮಧುರಕಂಠದ ಯುಗಳ ಗೀತೆ, ಆ ಗೀತೆಗೆ ತಾಳ ಹಾಕಿದಂತೆ ಕಾರಿನ ತಲೆಯ ಮೇಲೆ ಬಿದ್ದು ಗರ್ಜಿಸುವ ನೀರ ಹನಿಯ ಸದ್ದು. ಮಧ್ಯೆ ಮಧ್ಯೆ ಕಮರ್ಷಿಯಲ್ ಬ್ರೇಕ್ ಬರುವಂತೆ, ಗುಡುಗು ಸಿಡಿಲುಗಳ ಆರ್ಭಟ , ಒಂದೇ ಮಾತಿನಲ್ಲಿ ಹೇಳಬೇಕೆಂದರೆ ರುದ್ರಮನೋಹರ .

ಮುಸಲಧಾರೆ, ಕುಂಭದ್ರೋಣ ಎಂದೆಲ್ಲಾ ಹೇಳುವ ಹಾಗೆ ಆಕಾಶಕ್ಕೆ ತೂತು ಬಿದ್ದಂತೆ ಒಂದೇ ಸಮನೆ ಹೊಯ್ದ ಮಳೆ ಬಾಯಾರಿದ ಇಳೆಗೆ ತಂಪುಣಿಸಿತೋ , ಈ ಇಳೆಯಲ್ಲಿ ತೃಣಮಾತ್ರನಾದರೂ, ತಾನೇ ತಾನಾಗಿ ಮೆರೆಯುತ್ತಿರುವ ಮಾನವನೆದೆಯಲ್ಲಿ ಕಂಪನವನುರಣಿಸಿತೋ ನಾ ಕಾಣೆನಾದರೂ, ಮೇಲಿಂದ ಬಿದ್ದು ಭೂತಾಯಿಯ ಮಡಿಲಲ್ಲಿ ಒಂದಾಗಿ ಹೋಗುವ ಮಳೆಹನಿಗಳ ಆಟ ನನ್ನೆದೆಯಲ್ಲಿ ಮೂಡಿಸಿದ್ದು ಭಾವಗಳ ಸಂತೆ. ಈ ಆಟ ಕಂಡು ನಾನಾದೆ ಭಗವಂತನೆದುರಾದ ಭಕ್ತನಂತೆ.

ಈ ಮಳೆ ಯ ವೈಭವ ...ಏನದರ ಸೊಬಗು.. ಇದೇನು ಮನದನ್ನೆಯನ್ನಗಲಿ ಯುದ್ದಕ್ಕೆ ಹೋದ ಪ್ರಿಯಕರ ಮತ್ತೆ ಮನೆಗೆ ಮರಳಿ ಬಂದ ಬಗೆಯೋ..? ಬೆಳ್ಳಂಬೆಳಗೇ ಮನೆಯಿಂದ ಹೊರಬಿದ್ದ ಮಗ ಹಸಿದೇ ಕಾಯುತ್ತಿರುವ ತಾಯಿಯನ್ನು ನೆನೆದು ಓಡೋಡಿ ಬರುವ ಪರಿಯೋ. ಭೂಮಾತೆಯ ಮೇಲೆ ನರರೆಸಗುತ್ತಿರುವ ದೌರ್ಜನ್ಯವನ್ನು ಅಳಿಸಲು ಸುರಿದ ಪುಣ್ಯಾಹಜಲವೋ. ತೃಣಗಾತ್ರದ ಮನುಜನ ಭೀಮ ಸಾಧನೆಗಳನ್ನೂ.. ಅದರ ಉಪಯುಕ್ತತೆಯನ್ನೂ ಕಂಡ ಆನಂದದ ಅಶ್ರುಗಳೋ. ಮಾತು ಕೇಳದ ಮಗನ ಮೇಲೆ ಕೋಪಿಸಿಕೊಂಡು ಬಯ್ಗುಳವನುಣಿಸುವ ಪಿತನ ಕೋಪವೋ. ಅಥವಾ.. ನೀನು ಏನೇ ಮಾಡಿದರೂ ನನ್ನ ಕಿರುಬೆರಳ ಸಾಮರ್ಥ್ಯಕ್ಕೂ ನೀನು ಸಮವಲ್ಲವೆಂದು ನಮಗೆ ಹೇಳುವ ಪರಿಯೋ..?

ಏನಾದರಾಗಲಿ.. ನಾವು ತೃಣವೆಂಬರಿವು ನಮಗಿದ್ದರೆ.. ಇದು ಮಳೆ ಯಾಟ. ಇಲ್ಲವೆಂದರೆ.. ಇದು ..
ಮಳೆಯಲ್ಲಿದು ಮಳೆಯಲ್ಲಿದು ಮಳೆಭೈರವ ರೋಷ.

Tuesday, May 12, 2009

Remote installation for new SUSE server

##### Remote installation for new SUSE server

### download required kernel and initrd images ( you can choose 32 bit or 64 bit kernel and your desired)

wget http://mirrors.kernel.org/opensuse/distribution/10.3/repo/oss/boot/x86_64/loader/linux
wget http://mirrors.kernel.org/opensuse/distribution/10.3/repo/oss/boot/x86_64/loader/initrd

### copy them to /boot

cp linux /boot/linux.install
cp initrd /boot/initrd.install

### make suitable menu.lst entries

title Boot-- SUSE Linux 10.3
root (hd0,0)
kernel /boot/linux.install noapic usessh=1 sshpassword="12345678" install=http://mirrors.kernel.org/opensuse/distribution/10.3/repo/oss/ hostip=yo.ur.ip.here netmask=yo.ur.net.mask gateway=yo.ur.gate.way nameserver=yo.ur.name.server
initrd /boot/initrd.install

### reboot

when it comes up it will do ssh -X root@yo.ur.ip.here

when ssh prompt is available run yast and follow the instruction

When it finishes you are done. : )

Easy.... Isn't it :P