Pages

Wednesday, August 28, 2013

ಎಲ್ಲಾರು ಮಾಡುವುದು ಹೊಟ್ಟೆಗಾಗಿ

ಎಲ್ಲಾರು ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ ಗೇಣು ಬಟ್ಟೆಗಾಗಿ

ನೆಲ್ಲುಗಳ ಕುಟ್ಟಿಕೊಂಡು,
ಬಿದಿರುಗಳ ಹೊತ್ತುಕೊಂಡು
ಕೂಲಿಗಳ ಮಾಡುವುದು ಹೊಟ್ಟೆಗಾಗಿ
ನಾಲ್ಕುವೇದ ಪುರಾಣ ಪಂಚಾಂಗ ಹೇಳಿಕೊಂಡು
ಕಾಲ ಕಳೆಯುವುದೆಲ್ಲ ಹೊಟ್ಟೆಗಾಗಿ..

ಬಡಿದು ಬಡಿದು ಕಬ್ಬಿಣವ
ಕಾಸಿ ತುಪಾಕಿ ಮಾಡಿ
ಹೊಡೆವ ಗುಂಡು ಮಾಡುವುದು ಹೊಟ್ಟೆಗಾಗಿ

ಚಂಡಭಟನ್ಗಾಗಿ ನಡೆದು  (ಚಂಡಭಟರೆಲ್ಲ ಮುಂದೆ)
ಕತ್ತಿ ಢಾಲು ಕೈಲಿ ಹಿಡಿದು (ಕತ್ತಿ ಹರಿಗೆಯ ಹಿಡಿದು)
ಖಂಡ ತುಂಡ ಮಾಡುವುದು ಹೊಟ್ಟೆಗಾಗಿ

ಬೆಲ್ಲದಂತೆ ಮಾತನಾಡಿ
ಎಲ್ಲರನ್ನು ಮರಳು ಮಾಡಿ
ಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ

ದೊಡ್ಡ ದೊಡ್ಡ ಕುದುರೆ ಏರಿ
ಮೇಜ ಹೊತ್ತು ರಾಹುತರಾಗಿ
ಹೊಡೆದಾಡಿ ಸಾಯುವುದು ಹೊಟ್ಟೆಗಾಗಿ
ಕುಂಟೆ ಕೂರಿಗೆಯಿಂದ
ಹೆಂಟೆ ಮಣ್ಣ ಹದಮಾಡಿ
ರಂಟೆ  ಹೊಡೆದು ಬೆಳೆಸುವುದು ಹೊಟ್ಟೆಗಾಗಿ


ಕೆಟ್ಟತನದಿಂದ
ಕಳ್ಳತನವನ್ನೆ ಮಾಡಿ
ಕತ್ತಿ ಹೊಡೆಸಿಕೊಳ್ಳುವುದು ಹೊಟ್ಟೆಗಾಗಿ
ಸನ್ಯಾಸಿ ಜಂಗಮ ಜೋಗಿ
ಜಟ್ಟಿ ಮೊಂಡ ಭೈರಾಗಿ
ನಾನಾವೇಷ ಕೊಂಬುವುದು ಹೊಟ್ಟೆಗಾಗಿ


ಉನ್ನತ ಕಾಗಿನೆಲೆ ಆದಿಕೇಶವನ
ಅನುದಿನ ನೆನೆವುದು ಭಕ್ತಿಗಾಗಿ// ಪರ ಮುಕ್ತಿಗಾಗಿ

Saturday, August 24, 2013

Shell script to assign each column value as a variable

Consider a txt file with two columns and many rows.

You may want to write a script which will take each column values in each row as variables

Then you can use the following script.



#!/bin/bash
cat text.txt | while read line;
do
var1=$(echo $line| awk '{print $1}')
var2=$(echo $line| awk '{print $2}')
done

Thursday, August 08, 2013

ಓದು ಕಲಿತ ಊಳಿಗದವನ ಪ್ರಶ್ನೆಗಳು.

ಥೀಬ್ಸ್‍ನ ಏಳುಸುತ್ತಿನ ಕೋಟೆ
ಕಟ್ಟಿದವರಾರು ಗೊತ್ತೆ?
ಹೊತ್ತಿಗೆಗಳಲಿದೆ ರಾಯರ ಹೆಸರು.
ಮೆತ್ತಿದೆಯೇನು ಅವರ ಕೈಗಿಷ್ಟಾದರು ಕೆಸರು.

ಸುಟ್ಟಿತೆಷ್ಟು ಬಾರಿ ಬ್ಯಾಬಿಲೋನ್ ನಗರ,
ಕಟ್ಟಿ ಕೊಟ್ಟವರಾರು ಮರಳಿ, ಬಲ್ಲಿರಾ..?

ಬೆಳಗಿದೆ ಮಿನುಗಿದೆ ಲಿಮಾ
ಫಳಫಳಿಸಿದೆ ಹೊನ್ನಿನ ಕಾಂತಿಯಲಿ!
ಕಟ್ಟಿದ ಕಾರ್ಮಿಕನವನು
ಮಲಗುವ ಮನೆಯಿರುವದದೆಲ್ಲಿ?

ಚೀನಾ ಗೋಡೆಯ ಮುಗಿಸಿದ ಸಂಜೆ
ಏನಾಯಿತು ಆ ಮೇಸ್ತ್ರಿಗೆ ಮುಂದೆ..? 
ಓಹೋ ರೋಮಿನ ಕಮಾನುಗಳೇನು?
ಯಾರೋ ಇದನು ಕಟ್ಟಿದ ಮನುಜನು?

ಸೀಸರ್ ಗೆಲುವದು ಯಾವನ ಮೇಲೋ?
ಗೀತಗಳಲ್ಲಿ ಹಾಡುವುದೇನೋ
ಬೈಜಾಂಟಿಯನ್ನರ ಅರಮನೆಯೇನೋ?
ಮುಳುಗಿದ ಅಟ್ಲಾಂಟಿಸಿನ ಜನರು
ಮುಳುಗುವ ಮೊದಲಿನ ಕೂಗದು ಏನೋ?

ಭಾರತವನ್ನೇ ಗೆದ್ದೆ ಎನ್ನುವ
ಯವನರ ರಾಜನೆ ತಾನೆ ಬೀಗುವ
ಅಲೆಕ್ಸಾಂಡರನೊಬ್ಬನೇ ಏನು?
ಗಾಲರ ಗೆದ್ದ ಸೀಸರನೆಡೆಗೆ
ಅಡಿಗೆ ಭಟ್ಟನ ಜೊತೆಯಿಲ್ಲವೇನು?

ಅಳುತಿರುವಾಗ ಸ್ಪೇನಿನ ಫಿಲಿಪನು
ಅಳದೇ ಉಳಿದನೇ ಊಳಿಗದವನು?
ಏಳು ವರುಷಗಳ ಕಾಳಗ ಗೆದ್ದನು
ಫ್ರೆಡರಿಕನವನು ಒಂಟಿಯೇನು?

ಗೆಲುವಿನ ಕತೆಯಿದೆ ಪುಟಪುಟದಲ್ಲೂ
ಗೆಲುವಿನ ಕುಣಿತಕೆ ಜೊತೆಯದು ಏನು?
ಗೆದ್ದವ ಮೆಲ್ಲುವ ಸವಿಯನು ಸವಿಯಲು
ಮುದ್ದೆಯ ಮಾಡುವ ಆಳಿನದೇನು?

ಎಷ್ಟೋ ಮಾತಿದೆ, ಎಷ್ಟೋ ಕತೆಯಿದೆ
ಕೇಳದೆ ಉಳಿದ ಪ್ರಶ್ನೆಗಳಷ್ಟಿವೆ.
ಬ್ರೆಷ್ಟ್ ನ ಮತ್ತೊಂದು ಕವಿತೆ  Questions From A Worker Who Reads  ಭಾವಾನುವಾದ

Friday, August 02, 2013

ಎಲ್ಲ ಬದಲಾಗಬಹುದು.


ಎಲ್ಲ ಬದಲಾಗಬಹುದು.
ನಿನ್ನ ಕಡೆಯುಸಿರಿಂದ
ಹೊಸ ಬದುಕು ಮೊದಲಾಗಬಹುದು.
ನಡೆದದ್ದು ನಡೆದಾಯ್ತು.
ಮದಿರೆಯೊಡನೆ ಬೆರೆತ ನೀರು
ಮರಳಿ ತರಬಲ್ಲವರಾರು

ನಡೆದದ್ದು ನಡೆದಾಯ್ತು
ಮದಿರೆಯೊಡನೆ ಬೆರೆತ ನೀರು
ಮರಳಿ ತರಬಲ್ಲವರಾರು?
ಎಲ್ಲ ಬದಲಾಗಬಹುದು.
ನಿನ್ನ ಕಡೆಯುಸಿರಿನಿಂದ
ಹೊಸ ಬದುಕು ಮೊದಲಾಗಬಹುದು.

ಬ್ರೆಷ್ಟ್ ಕವಿಯ "ಎವೆರಿಥಿಂಗ್ ಚೇಂಜಸ್" ಕವಿತೆಯ ಭಾವಾನುವಾದ.

ಸಂಯುಕ್ತ ದಳದ ಹಾಡು United Front Song

ನನ್ನ ಮೆಚ್ಚಿನ ಕವಿ ಬರ್ಟೋಲ್ಟ್ ಬ್ರೆಷ್ಟ್ ಬರೆದ "ಸಂಯುಕ್ತ ದಳದ ಹಾಡು"  ಈ ಹಾಡನ್ನು ಅವನು ಬರೆದದ್ದು ಸಂಯುಕ್ತ ದಳದ ಗೀತೆಯಾಗಿ ೧೯೩೪ರಲ್ಲಿ. ಅದನ್ನು ನನ್ನ ಕೈಲಾದಷ್ಟು ಮಟ್ಟಿಗೆ ಕನ್ನಡೀಕರಿಸಿದ್ದೇನೆ. ಹೆಚ್ಚಿನ ಮಾಹಿತಿ ಬೇಕಾದವರು ಇಲ್ಲಿ ಮತ್ತು ಇಲ್ಲಿ ನೋಡಿ.

ಮಾನವ ದೇಹವು
ಮೂಳೆ ಮಾಂಸದ ತಡಿಕೆ
ಕೇಳುವುದನುದಿನ
ಅನ್ನ ನೀರು ಹೊದಿಕೆ

ಅರಗಿಸಲಾಗದ ಮಾತುಗಳೆಲ್ಲಾ
ಹಸಿದಿಹ ಹೊಟ್ಟೆಯ ತುಂಬುವುದಿಲ್ಲ

ಒಂದು ಎರಡು ಮೂರು
ಸೇರಿರಿ ನಿಮ್ಮಯ ಸಾಲು
ಶ್ರಮಿಕರ ದಳದಲಿ ನಿಲ್ಲಿರಿ
ನೀವೇ ಶ್ರಮಿಕರು ಮರೆಯದಿರಿ.

ಮಾನವ ದೇಹವು
ಮೂಳೆ ಮಾಂಸದ ತಡಿಕೆ
ಬೀಳುವವರೆಗೂ ತಡೆಯದೆ
ನಿಲ್ಲಲು ಆಗದು ಅದಕೆ

ಗುಲಾಮರೇನೂ ಬೇಕಿಲ್ಲ
ಆಳುವ ಧಣಿಯನೂ ಸಹಿಸಲ್ಲ.

ಒಂದು ಎರಡು ಮೂರು
ಸೇರಿರಿ ನಿಮ್ಮಯ ಸಾಲು
ಶ್ರಮಿಕರ ದಳದಲಿ ನಿಲ್ಲಿರಿ
ನೀವೇ ಶ್ರಮಿಕರು ಮರೆಯದಿರಿ.

ದುಡಿಯುವ ಜನರು ನಾವೆಲ್ಲ
ದುಡಿಮೆಯೆ ದೇವರು ನಮಗೆಲ್ಲ
ಬಿಡಿಸಲು ನಮ್ಮೀ ಬಂಧನ
ಬೇರೇ ಯಾರೂ ಬೇಕಿಲ್ಲ.
ನಮ್ಮದೆ ಬಲವು ಸಾಕಲ್ಲ..

ಒಂದು ಎರಡು ಮೂರು
ಸೇರಿರಿ ನಿಮ್ಮಯ ಸಾಲು
ಶ್ರಮಿಕರ ದಳದಲಿ ನಿಲ್ಲಿರಿ
ನೀವೇ ಶ್ರಮಿಕರು ಮರೆಯದಿರಿ


Wednesday, May 22, 2013

ಮಗ ಕೇಳುತ್ತಾನೆ.

ನನ್ನ ಹರೆಯದ ಮಗ ಕೇಳುತ್ತಾನೆ
ಕಲಿಯಬೇಕಾ ಅಪ್ಪ ಲೆಕ್ಕ?"
ಏನುಪಯೋಗ,
ಎರಡು ತುಣುಕು ರೊಟ್ಟಿ
ಒಂದಕ್ಕಿಂತ ಹೆಚ್ಚೆಂದು ಅರಿಯಲೇನು?
ಅದನು ಬದುಕೇ ಬಿಡದೆ ಕಲಿಸದೇನು?

ನನ್ನ ಹರೆಯದ ಮಗ ಕೇಳುತ್ತಾನೆ
ಕಲಿಯಲೇನು ಕನ್ನಡವನು ನಾನು?
ಏನುಪಯೋಗ,
ಭಾಷೆ ಮರೆತ ಆಡಳಿತ ಇರುವಾಗ
ಉದುರಿಸಿ ಇಂಗ್ಲಿಷಿನ ಅಣಿಮುತ್ತು
ಕರಜೋಡಿಸಿ ನಿಂತರೆ ಸಾಕಾಗುವ ಹೊತ್ತು
ಕನ್ನಡ ಕಲಿತೇನು ಬಂತು?

ಹರೆಯದ ಮಗ ಕೇಳುತ್ತಾನೆ
ಅರಿಯಬೇಕೇನು ನಮ್ಮ ಇತಿಹಾಸವನು?
ಏನುಪಯೋಗ
ನೆಲದೊಳಗೆ ತೂರಿಸಿ ತಲೆ
ಬಾಳುವುದೊಂದು ಹಿರಿಯ ಕಲೆ
ಅಷ್ಟಿದ್ದರೇ ಸಾಕಲ್ಲವೇ?

ನಾನು ಹೇಳುತ್ತೇನೆ..
ಹೌದು ಮಗೂ.. ಲೆಕ್ಕ ಕಲಿಯಬೇಕು
ಭಾಷೆ ಅರಿಯಬೇಕು, ಇತಿಹಾಸ ತಿಳಿಯಬೇಕು.
ಬ್ರೆಕ್ಟ್ ಕವಿಯ  " My young son asks me.. "    ಪದ್ಯದ  ಭಾವಾನುವಾದ. ಮೂಲ ಕೆಳಗಿನಂತೆ.



My young son asks me: Should I learn Mathematics?
What for? I feel like saying. That two bits of bread are more than one
You'll see that anyway.
My young son asks me: Should I learn French?
What for? I feel like saying. This Reich is going under.
Just rub your hand across your belly and groan
And you'll be understood.
My young son asks me: Should I learn history?
What for? I feel like saying. Learn to stick your head in the ground
Then maybe you'll come through.

Yes, learn mathematics, I say, learn French, learn history!

Monday, May 13, 2013

Installing Linux mint on Asus eeepc 1015cx

Why we Chose LinuxMint

I moved away from windows becuase of the license cost involved. Ubuntu was out of choice as the unity interface sucks. We chose Linux Mint because it looks like windows and have a better driver support.
As usual when we choose the latest version and it was linux-mint 14.1

Asus eeepc 1015cx comes without an optical drive. so the first requirement is to make a bootable USB. 

If you have a linux pc it is as simple as follows:

dd if=/path/to/image.iso of=/dev/sdb oflag=direct bs=1048576

If you donot have linux pc you can use plenty of tools available for windows OS.

But linuxmint 14.1 with this 1015cx has some issue with graphics and it does not give up a gui

so we changed to linuxmint 13.

Then installation was easy.  Even it took wireless drivers without any problem. But display drivers were at stake.

This was fixed by

apt-cache search cedarview

it listed 3 packages of cederview

apt-get install (all three packages)

viola

Your system is up and running

Now only thing I still need to fix is airtel datacard on it.. Will update soon....

Saturday, April 27, 2013

ಮಯೂರ ಚಿತ್ರದ ಏಕಪಾತ್ರಾಭಿನಯದ ಸಂಭಾಷಣೆ.

ಮಯೂರ ಚಿತ್ರದ ಏಕಪಾತ್ರಾಭಿನಯದ ಸಂಭಾಷಣೆ.  ವಿಡಿಯೋಗಾಗಿ ಇಲ್ಲಿ ನೋಡಿ.

ಅಮ್ಮ... ಅಮ್ಮ....

ಬುದ್ಧಿ ತಿಳಿಯುವ ಮುನ್ನವೇ ನಿನ್ನನ್ನು ಕಳೆದುಕೊಂಡ ನಿರ್ಭಾಗ್ಯ ನಾನು. 

ಕಣ್ಣಿಗೆ ಅರಿವಾಗದ ವಿಷಯ ಕರುಳಿಗೆ ಅರಿವಾಗುತ್ತದೆಂಬ ಮಾತು ಅದೆಷ್ಟು ಸತ್ಯ. 

ಹಾಗಾದರೆ....  ಹಾಗಾದರೆ....  ಆಗಾಗ ನನ್ನ ಕನಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ದೇವತೆ ನೀನೇ ಅಮ್ಮಾ..? 

ಬಾ ಮಗೂ ಈ ಮಣಿ ಕಿರೀಟ ನಿನಗೆ ಬೇಡವೇ, ಈ ರತ್ನ ಸಿಂಹಾಸನ ನಿನಗೆ ಬೇಡವೇ?, ಈ ಸಾಮ್ರಾಜ್ಯ ನಿನಗೆ ಬೇಡವೇ ಎಂದು ಅಕ್ಕರೆಯಿಂದ ಕೇಳುತ್ತಿದ್ದವಳು ನೀನೆಯೇ ಅಮ್ಮಾ..  

ಈ ನಿನ್ನ ಮಗನಲ್ಲಿ ನಿನಗದೆಷ್ಟೊಂದು ಭರವಸೆ ತಾಯಿ.
ಭೂಮ್ಯಾಕಾಶಗಳೇ ಸಿಡಿದೆದ್ದು ಹಗೆಯಾಗಲಿ.  ನಿನ್ನ ಈ ನಂಬಿಕೆಯನ್ನು ಮಾತ್ರ ಸುಳ್ಳು ಮಾಡುವುದಿಲ್ಲ ತಾಯೀ..  ನಿನ್ನ ಈ ನಂಬಿಕೆಯನ್ನು ಮಾತ್ರ ಸುಳ್ಳು ಮಾಡುವುದಿಲ್ಲ.  

ಹೊಂಚು ಹಾಕಿ ಸಂಚು ಮಾಡಿ ವಂಚನೆಯಿಂದ ನಮ್ಮ ರಾಜ್ಯವನ್ನು ಕಬಳಿಸಿ ಮೆರೆಯುತ್ತಿರುವ ಶಿವಸ್ಕಂದವರ್ಮ.. 
ಯಾವ ಕದಂಬರ ವಂಶವೃಕ್ಷ ನಿನ್ನ ಕ್ರೌರ್ಯಕ್ಕೆ ಸಿಕ್ಕು ಸಂಪೂರ್ಣ ನಿರ್ನಾಮವಾಗಿ ಹೋಯಿತು ಎಂದು ತಿಳಿದಿರುವೆಯೋ, ಆ ಮಹಾ ವಂಶವೃಕ್ಷವಿಂದು ಮತ್ತೆ ಚಿಗುರಿ ತಲೆಯೆತ್ತಿ ನಿಂತಿದೆ.

ಪಲ್ಲವರ ಸೊಲ್ಲಡಗಿಸಿ, ನಮ್ಮ ನೆಲದಿಂದವರನ್ನು ಬಡಿದೋಡಿಸಿ, ವೈಜಯಂತಿಯ ರತ್ನ ಸಿಂಹಾಸನದಲ್ಲಿ ಕನ್ನಡ ರಾಜ್ಯಲಕ್ಷ್ಮಿಯನ್ನು ಪ್ರತಿಷ್ಠಾಪಿಸುವ ಮುಹೂರ್ತ ಹತ್ತಿರವಾಗಿದೆ.

ಕನ್ನಡಿಗರ ಸಾಹಸ, ಕನ್ನಡಿಗರ ಪೌರುಷ, ಕನ್ನಡಿಗರ ಸ್ವಾಭಿಮಾನ, ಆಚಂದ್ರಾರ್ಕವಾಗಿ ಉಳಿಯುವಂತಹದೇ ಹೊರತು, ನಿನ್ನಂತಹ ಕೋಟಿ ಪಲ್ಲವರ ನಿರಂತರ ದಾಳಿಯಿಂದ ಅಳಿಯದು. ಎಂಬ ಮಾತನ್ನು ಪ್ರತ್ಯಕ್ಷ ಪ್ರಮಾಣ ಮಾಡಿ ತೋರಿಸುತ್ತೇನೆ.

ಇದೇ ನನ್ನ ಗುರಿ,
ಇದೇ ನನ್ನ ಮಂತ್ರ
ಇದೇ ನನ್ನ ಪ್ರತಿಙ್ಞೆ

Thursday, April 04, 2013

bash script to extract and join pdf files


Here is a script which will take out the last page from a pdf file and attache it to a template pdf file.

The requirement are ghostscript and xpdf-utils.


#!/bin/bash
for i in `ls *.pdf`
do

pdfinfo -meta $i | grep -i pages
count=$(pdfinfo -meta $i | grep -i pages |cut -d ":" -f2| tr -d " ")
gs -sDEVICE=pdfwrite -dNOPAUSE -dBATCH -dSAFER \
-dFirstPage=$count -dLastPage=$count \
-sOutputFile=lastpage.$i $i
gs -sDEVICE=pdfwrite -dNOPAUSE -dBATCH -dSAFER \
-sOutputFile=finished.$i template.pdf lastpage.$i
done
echo "converted files successfully"

Saturday, February 23, 2013

ಅಳೆಯಲಾಗದ ಒಲವು


ಆ ಸಂಜೆಯಲಿ ನಿನ್ನಿಂದ ದೂರ ನಡೆವಾಗ
ನನ್ನೆದೆಯಲಿದ್ದ ಒಲವನ್ನು ಅಳೆಯಲಾರೆ.
ಕಾಪಿಟ್ಟ  ನೀಲಿ ಕಾನನದಲಿ ಕಣ್ಮರೆಯಾದಾಗ
ಪಡುವಣದ ಬಾನಿನಲಿ ತಾರೆಗಳ ಎಣಿಸಲಾರೆ.

ಇನಿತಾದರೂ ನಗೆಯ ಸುಳಿವಿರಲಿಲ್ಲ, ಅಂದು
ಕಾಣದ ವಿಧಿಯಡೆಗೆ ನಾ ನಡೆಯುವಂದು.
ಬೆನ್ನ ಹಿಂದಿನ ಮುಖಗಳು ಮಸುಕಾಗಿ
ನೀಲಿ ಕಾನನದ ಸಂಜೆಯಲ್ಲಿ ಕರಗಿಹೋದಂದು

ಆ ರಾತ್ರಿ ಬಲು ಸೊಬಗು, ಬಹು ಸೊಬಗು
ಹಿಂದೆಂದು ಕಾಣದ್ದು, ಮುಂದೆ ಕಾಣಬರದು.
ನಿಜ ನುಡಿಯಲೇ,  ಆ ಸಂಜೆ ನನ್ನ ಬಳಿ ಉಳಿದದ್ದು..
ನೀಲಿ ಕಾಡಿನ ದೊಡ್ಡಹಕ್ಕಿಗಳು ಮತ್ತದರ ಹಸಿವಿನ ಕೂಗು.


ಬರ್ಟೋಲ್ಟ್ ಬ್ರೆಷ್ಟ್ ಕವಿಯ  "Ich habe dich nie je so geliebt "   ಪದ್ಯದ ಭಾವಾನುವಾದ.  

ಮೂಲದ ಕವಿತೆಯ ಇಂಗ್ಲಿಷ್ ಅನುವಾದ ಕೆಳಗಿನಂತೆ.

Ich habe dich nie je so geliebt

I never loved you more, ma soeur
Than as I walked away from you that evening.
The forest swallowed me, the blue forest, ma soeur
The blue forest and above it pale stars in the west.

I did not laugh, not one little bit, ma soeur
As I playfully walked towards a dark fate -
While the faces behind me
Slowly paled in the evening of the blue forest.

Everything was grand that one night, ma soeur
Never thereafter and never before -
I admit it: I was left with nothing but the big birds
And their hungry cries in the dark evening sky.







Thursday, February 21, 2013

ಹುರುಳಿ ಕಟ್ಟಿನ ಸಾರು.


ಕರ್ನಾಟಕದ ಅಧ್ಬುತ ಅಡಿಗೆಗಳಲ್ಲೊಂದು ಹುರುಳಿ ಕಟ್ಟಿನ ಸಾರು.  ಯುಧ್ಧಕ್ಕೆ ಹೊರಟ ಯೋಧರ ಕುದುರೆಗಳಿಗೆ ಬೇಯಿಸಿದ ಹುರುಳಿಯನ್ನು ತಿನ್ನಿಸಿದರೆ, ಹುರುಳಿಕಟ್ಟನ್ನು ಮಸಾಲೆ ಸೇರಿಸಿ, ರುಚಿಕಟ್ಟಾದ ವಾರಗಟ್ಟಲೆ ಕೆಡದ ಹಾಗೆ ಸಾರು ಮಾಡಿ ಚಪ್ಪರಿಸಿ ಹೊಡೆಯುವುದು ಪಟುಭಟರಿಗೆ ಬಿಟ್ಟ ವಿಚಾರ.

ಇಲ್ಲಿ ಈ ಸಾರನ್ನು ಹೇಗೆ ಮಾಡಬೇಕೆಂದು ನಮ್ಮಕ್ಕ ಹೇಳಿಕೊಟ್ಟಿದ್ದನ್ನು ಬರೆದಿದ್ದೇನೆ.

ಎರಡು ಪಾವು ಹುರುಳಿ ಕಾಳಿಗೆ ಏಳೆಂಟು ಪಾವುಗಳಷ್ಟು ನೀರು ಸೇರಿಸಿ, ಬೇಯಿಸಿಕೊಳ್ಳಬೇಕು.  ಸೌದೆ ಒಲೆಯಲ್ಲಿ ಮಾಡುವುದಾದರೆ ಒಳ್ಳೆಯದು.  ಆ ಅವಕಾಶ ಇಲ್ಲವಾದರೆ, ಪ್ರೆಶರ್ ಕುಕರ್‌ನಲ್ಲಿ ಮೂರು ಸಿಳ್ಳೆ ಹೊಡೆಸಬೇಕು.  ಬೇಯಿಸಲು ಉಪ್ಪು ಸೇರಿಸಬಾರದು. ಇದಾದ ಮೇಲೆ ಮತ್ತೆ ರುಚಿಗೆ ಬೇಕಷ್ಟು ಉಪ್ಪು ಸೇರಿಸಿ ಮತ್ತೆ ಮೂರು ಸಿಳ್ಳೆ ಹೊಡೆಸಬೇಕು.

ಒಂದು ಚಮಚೆ ಉದ್ದಿನಬೇಳೆ, ಒಂದು ಚಮಚೆ ಕಡ್ಲೇಬೇಳೆ, ಧನಿಯಾ ಮೂವತ್ತು ಗ್ರಾಂಗಳಷ್ಟು, ಒಣಮೆಣಸಿನಕಾಯಿ ೬-೫, ಒಣಕೊಬ್ಬರಿ, ಕರಿಬೇವಿನ ಸೊಪ್ಪು ಚಕ್ಕೆ, ಲವಂಗ, ಜೀರಿಗೆ, ಮೆಣಸು ಇವನ್ನು ಹುರಿದುಕೊಳ್ಳಬೇಕು. ೪೦೦ ಗ್ರಾಂಗಳಷ್ಟು ಈರುಳ್ಳಿಯ ಜೊತೆಗೆ ಹುರಿದ ಮಸಾಲೆ ಸಾಮಗ್ರಿಗಳನ್ನು ಸೇರಿಸ್, ಜೊತೆಗೆ ಹುಣಸೇಹಣ್ಣಿನ ರಸ ಸೇರಿಸಿ ರುಬ್ಬಿಕೊಳ್ಳಬೇಕು.

ಬೇಯಿಸಿದ ಕಟ್ಟಿನಿಂದ ಕಾಳನ್ನು ಬೇರೆ ಮಾಡಿಕೊಳ್ಳಬೇಕು.  ಇನ್ನೊಂದು ಪಾತ್ರೆಯಲ್ಲಿ ಜೀರಿಗೆ, ಸಾಸುವೆ, ಕರಿಬೇವು ಮತ್ತು ಒಣಮೆಣಸಿನಕಾಯಿ ಒಗ್ಗರಣೆ ಮಾದಿಕೊಂಡು, ಅದಕ್ಕೆ ಕಟ್ಟನ್ನು ಸೇರಿಸಿ,  ಆಡಿಸಿದ ಮಸಾಲೆಯನ್ನು ಸೇರಿಸಿ, ಚೆನ್ನಾಗಿ ಕುದಿಸಬೇಕು.  ಮೊದಲ ದಿನ ಸಾರು ತೆಳುವಾಗಿದ್ದರೆ ಅಡ್ಡಿಯಿಲ್ಲ.  ಎರಡು ದಿನಗಳ ಕಾಲ ದಿನಕ್ಕೆ ಎರದು ಹೊತ್ತು ಕುದಿಸಿ ಇಳಿಸಬೇಕು.  ಮೂರನೇ ದಿನಕ್ಕೆ, ಬಿಸಿ ಅನ್ನದ ಜೊತೆಗೆ, ತುಪ್ಪ ಹಾಕಿಕೊಂಡು ಕಟ್ಟಿನ ಸಾರಿನ ರುಚಿ ನೋಡಿ.. ಆಮೇಲೆ ಮಾತನಾಡಿ.

ಅಂದಹಾಗೆ,  ಬೇಯಿಸಿದ ಹುರಳಿ ತಿನ್ನಿಸಲು ನಮ್ಮಬಳಿ ಕುದುರೆಯಿಲ್ಲವಲ್ಲಾ..? ತೊಂದರೆಯಿಲ್ಲ.  ಅದಕ್ಕೆ ಒಗ್ಗರಣೆ ಹಾಕಿ ಪಲ್ಯ ಮಾಡಿದರೆ, ಊಟದ ಜೊತೆಗೆ ನಂಜಿಕೊಳ್ಳಬಹುದು,  ಸ್ವಲ್ಪ ಬೆಲ್ಲ, ಎಸೆನ್ಸ್ ಸೇರಿಸಿ, ನುಣ್ಣಗೆ ರುಬ್ಬಿಕೊಂಡರೆ, ಹುರುಳಿ ಸೀಕರಣೆ ಸಿದ್ದ.  ಹಾಗೇ ಸಾರು ತುಂಬಾ ತೆಳುವೆನಿಸಿದರೆ, ಸ್ವಲ್ಪ ಹುರುಳಿಯನ್ನು ರುಬ್ಬಿ, ಸಾರಿನೊಂದಿಗೆ ಸೇರಿಸಬಹುದು.


ಮತ್ತೂ ಮುಂದಿನ ವಿಷಯವೆಂದರೆ, ಮಾಂಸಾಹಾರಿ ಪ್ರಿಯ ಸ್ನೇಹಿತರಿಗೆ, ಮೊದಲನೇ ದಿನದ ಹುರುಳಿಕಟ್ಟಿನ ಸಾರಿಗೆ, ಕೈಮ-ಉಂಡೆಗಳನ್ನು ಸೇರಿಸಿ ಬೇಯಿಸಬಹುದು,  ಅದು ಖಾಲಿಯಾಗಿ ಸಾರು ಹಾಗೇ ಇದ್ದರೆ, ಮೊಟ್ಟೆಯನ್ನು ಬೇಯಿಸಿ ಸೇರಿಸಬಹುದು,  ಇನ್ನೂ ತಿಳಿಯಾದ ಸಾರು ಉಳಿದಿದ್ದರೆ, ಆಲೂಗೆಡ್ಡೆಯನ್ನು ಸೇರಿಸಬಹುದು, ಸಾರಿನ ಜೊತೆಗೆ ನಂಜಿಕೊಳ್ಳಲು ಇದು ತರಕಾರಿಯಾಗುತ್ತದೆ.


ನಿಜವಾದ ಹುರುಳಿ ಕಟ್ಟಿನ ರುಚಿ ನೋಡಬೇಕೆಂದರೆ, ತಪ್ಪಲೆ ತುಂಬಾ ಮಾಡಿದ ಸಾರು ಚೆನ್ನಾಗಿ ಕುದ್ದು, ದೊಡ್ಡ ಚಂಬಿನಷ್ಟಾದಾಗ, ಪೇಸ್ಟಿನಷ್ಟು ಗಟ್ಟಿಯಾದಾಗ ಅದನ್ನು ಬಾಟಲಿನಲ್ಲಿ ತುಂಬಿಸಿಟ್ಟುಕೊಳ್ಳಬಹುದು. ಇದು ತಿಂಗಳಾದರೂ ಕೆಡದೆ ಉಳಿಯುತ್ತದೆ. ಒಂದು ಬಟ್ಟಲು ಅನ್ನಕ್ಕೆ ಒಂದೇ ಚಮಚ ಸಾರು ಈ ಸ್ಥಿತಿಯಲ್ಲಿ ಸಾಕಾಗುತ್ತದೆ. ಅದರ ರುಚಿಯನ್ನು ಅನುಭವಿಸಿಯೇ ತಿಳಿಯಬೇಕು. 

Tuesday, January 22, 2013

ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ತಂತ್ರಙ್ಞಾನ

ತಂತ್ರಙ್ಞಾನದ ಸಹಯೋಗವಿಲ್ಲದೆ ಭಾಷೆ ಬೆಳೆಯುವುದಿಲ್ಲ ಎನ್ನುವ ಸತ್ಯ  ಬ್ರಿಟಿಷರ ಮೋಹದಲ್ಲಿ  ಕಣ್ಣಿಂದ ಮರೆಯಾಯಿತು. ಆಂಗ್ಲ ಮೋಹದ ಪೊರೆ ಬೆಳೆದು ತಂತಙ್ಞಾನ ವಿಙ್ಞಾನಗಳಲ್ಲಿ ಕನ್ನಡದಲ್ಲಿ ಚಿಂತಿಸುವುದೇ ಮರೆತು ಹೋಯಿತು. 
ಅಂದು ಕಣ್ಣಿಗೆ ಮೊಳೆದ ಪೊರೆಯನ್ನು ಈಗಲಾದರೂ ಕತ್ತರಿಸಿ ತೆಗೆಯದಿದ್ದರೆ, ಮೆದುಳಿಗೆ ಹಾಕಿದ ಬೇಲಿಯನ್ನು ಕಿತ್ತೊಗೆಯದಿದ್ದರೆ, ಭಾಷೆ ಉಳಿಯುವುದು ದುಸ್ತರವಾದೀತು... ಎಚ್ಚರ...!