Pages

Tuesday, November 09, 2010

ಇಗ್-ನೋಬಲ್ ಪ್ರಶಸ್ತಿಗಳ ೨೦೧೦ರ ಪಟ್ಟಿ

ಇಗ್-ನೋಬಲ್ ಪ್ರಶಸ್ತಿಗಳ ೨೦೧೦ರ ಪಟ್ಟಿಯನ್ನು ನಿಮಗೆ ನೀಡುವಲ್ಲಿ ತಡಮಾಡಿದ್ದಕ್ಕೆ ಕ್ಷಮೆ ಇರಲಿ . ಸೆಪ್ಟೆಂಬರ್ ಮೂವತ್ತರಂದು ಈ ಪ್ರಶಸ್ತಿಗಳನ್ನು ನೀಡಲಾಯಿತು.

ನಗು ಮೂಡಿಸಿ ಚಿಂತನೆಗೆ ಹಚ್ಚುವ ಸಂಶೋಧನೆಗಳಿಗೆ ಈ ಪ್ರಶಸ್ತಿ ಮೀಸಲು. ಕಳೆದ ಬಾರಿಯ ಇಗ್ನೋಬಲ್ ಪ್ರಶಸ್ತಿ ವಿಜೇತರಿಗೆ ಈ ಬಾರಿಯ ನೋಬಲ್ ಪ್ರಶಸ್ತಿ ಸಂದಿದೆ ಎನ್ನುವ ಅಂಶ ನಿಮ್ಮ ಗಮನದಲ್ಲಿರಲಿ.

ಇದನ್ನು ಓದಿ, ನಕ್ಕು, ಚಿಂತನೆಗೆ ತೊಡಗಿಕೊಳ್ಳಿ.. ನಿಮಗೆ ಹಾಗೆನ್ನಿಸಿದರೆ


ಇಂಜಿನಿಯರಿಂಗ್ ಪ್ರಶಸ್ತಿ : ಕರೀನಾ ಅಸೆವೆಡೋ ಮತ್ತು ಅಗ್ನೆಸ್ ರೋಕಾ ಲಂಡನ್ ಜೂಯಲಾಜಿಕಲ್ ಸೊಸೈಟಿ. ಮತ್ತು ಡಿಅನೆ ಗೆಂಡ್ರೋನ್ : ನೀಲಿ ತಿಮಿಂಗಲಗಳ ಮೂಗಿನ ಸಿಂಬಳ ಸಂಗ್ರಹಿಸಲು ರಿಮೋಟ್ ಕಂಟ್ರೋಲ್ ಇರುವ ಹೆಲಿಕಾಪ್ಟರ್ ಬಳಸುವ ತಂತ್ರಜ್ನಾನ ರೂಪಿಸಿದ್ದಕ್ಕೆ.

ವೈದ್ಯಕೀಯ ಪ್ರಶಸ್ತಿ : ಸೈಮೊನ್ ರೈಟ್ ವೆಲ್ಡ್ , ಅಮ್ಸ್ ಟರ್ ಡ್ಯಾಮ್ ವಿಶ್ವವಿದ್ಯಾನಿಲಯ. ಮತ್ತು ಇಲಿಯಾ ವ್ಯಾನ್ ಬೀಸ್ಟ್ ಟಿಲ್ಬರ್ಗ್ ವಿಶ್ವವಿದ್ಯಾನಿಲಯ : ರೋಲರ್ ಕೋಸ್ಟರ್ ಮೇಲಿನ ಪಯಣದಿಂದ ಅಸ್ತಮಾವನ್ನು ಗುಣಪಡಿಸಬಹುದೆಂಬ ಸಂಶೋಧನೆಗೆ

ಸಾರಿಗೆ ಯೋಜನೆ ಪ್ರಶಸ್ತಿ
: ತೊಷಿಯಾಕು ನಾಕಾಗಾಕಿ, ಅತ್ಸುಶಿ ಟೆರೋ, ಸೀಜಿ ಟಕಾಗಿ, ಟೆತ್ಸು ಸೈಗುಸಾ ,ಕೆಂಟಾರೋ ಇಟೋ, ಕೆಂಜಿ ಯೂಮಿಕಿ , ರಯೋ ಕೊಬಾಯಾಶಿ , ಡಾನ್ ಬೆಬ್ಬರ್, ಮಾರ್ಕ್ ಫ್ರಿಕರ್, ಮರದ ಮೇಲೆ ಬೆಳೆಯುವ ಬೂಸ್ಟಿನ ಮಾದರಿ ಅನುಸರಿಸಿ ಅತ್ಯಂತ ಲಾಭದಾಯಕವಾದ ರೈಲು ಮಾರ್ಗದ ಯೋಜನೆ ಹಾಕಬಹುದೆಂದು ತೋರಿಸಿಕೊಟ್ಟಿದ್ದಕ್ಕೆ

ಭೌತಶಾಸ್ತ್ರ ಪ್ರಶಸ್ತಿ: ಲಿಯಾನ್ ಪಾರ್ಕಿನ್, ಶೀಲಾ ವಿಲಿಯಮ್ಸ್ ಮತ್ತು ಪ್ಯಾಟ್ರಿಷಿಯಾ ಪ್ರೀಸ್ಟ್ , ಒಟಾಗೋ ವಿಶ್ವವಿದ್ಯಾನಿಲಯ ನ್ಯೂಜಿಲ್ಯಾಂಡ್. : ಹಿಮದಾರಿಗಳಲ್ಲಿ ನಡೆದಾಡುವ ಜನ ಚಳಿಗಾಲದಲ್ಲಿ ತಮ್ಮ ಶೂ ಮೇಲುಗಡೆ ಮತ್ತೊಂದು ಸಾಕ್ಸ್ ಧರಿಸಿದರೆ ಜಾರಿ ಬೀಳುವುದು ಕಮ್ಮಿಯಾಗುತ್ತದೆಂದು ತೋರಿಸಿಕೊಟ್ಟಿದ್ದಕ್ಕಾಗಿ .

ಶಾಂತಿ ಪ್ರಶಸ್ತಿ
. ರಿಚರ್ಡ್ ಸ್ಟೀಫನ್, ಜಾನ್ ಅಟ್ಕಿನ್ಸ್ ಮತ್ತು ಆಂಡ್ರ್ಯೂ ಕಿಂಗ್ ಸ್ಟನ್, ಕೀಲೆ ವಿಶ್ವವಿದ್ಯಾನಿಲಯ , ಹರಕೆ ಹೊರುವುದು ನೋವನ್ನು ಕಡಿಮೆ ಮಾಡುತ್ತದೆ ಎಂಬ ಜನಪ್ರಿಯ ನಂಬಿಕೆ ನಿಜ ಎಂದು ಪ್ರಮಾಣೀಕರಿಸಿದ್ದಕ್ಕಾಗಿ.

ಸಾರ್ವಜನಿಕ ಆರೋಗ್ಯ ಪ್ರಶಸ್ತಿ: ಮಾನ್ಯುಯೆಲ್ ಬಾರ್ಬಿಟೋ, ಚಾರ್ಲ್ಸ್ ಮಾಥ್ಯೂ, ಲಾರಿ ಟೈಲರ್ , ಮೇರಿಲ್ಯಾಂಡ್ ಅಮೆರಿಕಾ ಸಂಯುಕ್ತ ಸಂಸ್ಥಾನ . ಪ್ರಯೋಗದ ಮೂಲಕ ಬ್ಯಾಕ್ಟೀರಿಯಾಗಳು ಗಡ್ಡ ಬಿಟ್ಟ ವಿಜ್ಯಾನಿಗಳ ಗಡ್ಡದಲ್ಲಿರುತ್ತವೆ ಎಂದು ತೋರಿಸಿಕೊಟ್ಟಿದ್ದಕ್ಕಾಗಿ

ಅರ್ಥಶಾಸ್ತ್ರ ಪ್ರಶಸ್ತಿ: ಗೋಲ್ಡ್ ಮ್ಯಾನ್ ಸಾಶ್, ಎ ಐ ಜಿ, ಲೆಹ್ಮಾನ್ ಬ್ರದರ್ಸ್, ಬೀರ್ ಸ್ಟೀರ್ನ್ಸ್, ಮೆರಿಲ್ ಲಿಂಚ್, ಮತ್ತು ಮಾಗ್ನೇಟರ್ ನ ಉನ್ನತ ಅಧಿಕಾರಿಗಳು ಮತ್ತು ನಿರ್ದೇಶಕರುಗಳಿಗೆ, ಲಾಭ ಹೆಚ್ಚು ಮಾಡಿ, ರಿಸ್ಕ್ ಕಡಿಮೆ ಮಾಡುವ ರೀತಿಯಲ್ಲಿ ಹಣ ಹೂಡಿಕೆಯ ಹೊಸಬಗೆಗಳನ್ನು ಸಂಶೋಧಿಸಿದ್ದಕ್ಕೆ

ರಸಾಯನ ಶಾಸ್ತ್ರ ಪ್ರಶಸ್ತಿ : ಎರಿಕ್ ಅಡಮ್ಸ್ , ಸ್ಕಾಟ್ ಸೊಕೊಲೊಫ್ ಸ್ಕಿ , ಸ್ಟೀಫನ್ ಮಸುಟಾನಿ ಮತ್ತು ಬ್ರಿಟಿಷ್ ಪೆಟ್ರೋಲಿಯಮ್ : ನೀರು ಮತ್ತು ಪೆಟ್ರೋಲ್ ಬೆರೆಯುವುದಿಲ್ಲವೆನ್ನುವ ಹಳೆಯ ನಂಬಿಕೆ ಸುಳ್ಳೆಂದು ತೋರಿಸಿದ್ದಕ್ಕೆ .

ಮ್ಯಾನೇಜ್ ಮೆಂಟ್ ಪ್ರಶಸ್ತಿ. ಅಲೆಸಾಂಡ್ರೋ ಪ್ಲುಚಿನೋ, ಆಂಡ್ರಿಯಾ ರಾಪಿಸಾರ್ಡಾ ಮತ್ತು ಸೆಸಾರೇ ಗಾರೋಫಾಲೋ , ಇಟಲಿ , ಸಂಸ್ಥೆಯೊಂದರಲ್ಲಿ ಪ್ರಮೋಷನ್ ನೀಡಲು ಯಾವುದೇ ನೀತಿ ಅನುಸರಿಸದೆ , ಸುಮ್ಮನೆ ಪದೋನ್ನತಿ ನೀಡುವುದರಿಂದ ಸಂಸ್ಥೆಗಳ ಚಾಕಚಕ್ಯತೆ ಹೆಚ್ಚುತ್ತದೆ ಎಂದು ಗಣಿತೀಯವಾಗಿ ನಿರೂಪಿಸಿದ್ದಕ್ಕಾಗಿ

ಜೀವಶಾಸ್ತ್ರ ವಿಭಾಗ : ಲಿಬಿಯವೋ ಝಾಂಗ್, ಮಿನ್ ಟಾನ್, ಝು, ಜಿಯಾನ್ ಪಿಂಗ್ ಯೆ, ತಿಯು ಹೋಂಗ್, ಶಾನ್ಯಿ ಝೂ, ಶುಯಿ ಝಾಂಗ್, ಚೀನಾ ಮತ್ತು ಗರೆತ್ ಜೋನ್ಸ್, ಬಾವಲಿಗಳ ಒಂದು ಬಗೆಯಲ್ಲಿ ಮುಖಮೈಥುನದಿಂದ ಮಿಥುನದ ಸಮಯ ಹೆಚ್ಚಾಗುತ್ತದೆಂಬ ಸಂಶೋಧನೆಗೆ

Wednesday, October 27, 2010

rm to mp3 conversion using lame

Converting rm to mp3 in ubuntu.. from the link http://ubuntu-virginia.ubuntuforums.org/showthread.php?t=1110872

#!/bin/sh
inputfile=$1
inputfilename=`basename $1 rm`
ext='mp3'
outputfilename=$inputfilename$ext

echo 'CONVERTING TO WAV FORMAT'
mplayer $inputfile -ao pcm

echo 'CONVERTING WAV FORMAT TO MP3'
lame -h -b 256 audiodump.wav $outputfilename

rm -f audiodump.wav

echo 'DONE...!'

Sunday, October 03, 2010

ಯಶಸ್ಸಿಗಾಗಿ ಆಲ್ಬರ್ಟ್ ಐನ್ ಸ್ಟೈನ್ ರ ೧೦ ಸೂತ್ರಗಳು

ಅಲ್ಬರ್ಟ್ ಐನ್ಸ್ ಟೈನ್ ಲೋಕ ಕಂಡ ಅಪ್ರತಿಮ ವಿಜ್ನಾನಿಗಳಲ್ಲೊಬ್ಬರು. ಅವರ ಸಾಪೇಕ್ಷತಾ ಸಿದ್ದಾಂತದ ತಿರುಳನ್ನರಿತವರು ಇಂದಿಗೂ ಬಹು ಕಡಿಮೆ ಮಂದಿ. ಸೈದ್ದಾಂತಿಕ ಭೌತವಿಜ್ಞಾನಿ, ತತ್ವಜ್ಞಾನಿ ಮತ್ತು ಲೇಖಕ ಎಂದವರು ಪ್ರಸಿದ್ದರು. ತಮ್ಮ ದ್ಯ್ತುತಿ ವಿದ್ಯುತ್ ಪರಿಣಾಮದ ಸಂಶೋಧನೆಗಾಗಿ ೧೯೨೧ ರಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾದವರು .

೩೦೦ಕ್ಕೂ ಮಿಕ್ಕ ವೈಜ್ಞಾನಿಕ ಲೇಖನಗಳನ್ನು ೧೫೦ ಇತರ ಲೇಖನಗಳನ್ನು ಬರೆದ ಅವರು ಜಗತ್ತು ಕಂಡ ಅತೀ ಯಶಸ್ವಿ ವಿಜ್ಞಾನಿ ಎನ್ನಬಹುದು.

ಅವರ ಬರಹಗಳಲ್ಲಿ ಕಾಣುವ ವಾಕ್ಯಗಳನ್ನು ಹಿಡಿದೇ ಬದುಕಿನ ಹತ್ತು ಮುಖ್ಯವಾದ ಪಾಠಗಳನ್ನು ನಾವಿಲ್ಲಿ ನೋಡೋಣ.

೧. ನನಗೆ ವಿಶೇಷ ಪ್ರತಿಭೆಯಿಲ್ಲ. ಆದರೆ ತೀವ್ರ ಆಸಕ್ತಿ ಇದೆ.

ಇದು ನಮ್ಮೆಲ್ಲರಿಗೂ ಅನ್ವಯಿಸುತ್ತದೆ. ವಿಶೇಷ ಪ್ರತಿಭೆ ಯಶಸ್ವಿಯಾಗಲು ಬೇಕಿಲ್ಲ. ಅದು ನಮ್ಮಲ್ಲಿ ಆಸಕ್ತಿ ಮೂಡಿದಾಗ ತಾನಾಗಿಯೇ ಬರುತ್ತದೆ.

ನಿಮ್ಮ ಆಸಕ್ತಿಯನ್ನು ಬೆಳೆಸಿಕೊಳ್ಳಿ .

೨. ನಾನೇನೂ ಚತುರನಲ್ಲ. ಆದರೆ ಸಮಸ್ಯೆಗಳನ್ನು ನಾನು ಸುಧೀರ್ಘವಾಗಿ ಚಿಂತಿಸುತ್ತೇನೆ.

ಅಲ್ಲವೇ. ಸಮಸ್ಯೆಗಳಿಂದ ದೂರ ಓಡುವುದು ಸುಲಭ. ಆದರೆ ಸ್ವಲ್ಪ ತಾಳ್ಮೆಯಿದ್ದರೆ ಈ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಬಹುದು.

ತಾಳ್ಮೆಯಿರಲಿ.

೩. ಕಾರು ಓಡಿಸುವಾಗ ಸುಂದರಿಗೆ ಮುತ್ತು ಕೊಡುಬಲ್ಲೆ ಎಂದು ಹೇಳಿಕೊಳ್ಳುವ ಮನುಷ್ಯ ಮುತ್ತಿಡಲು ಸಾಕಷ್ಟು ಗಮನ ನೀಡಿರಲಾರ ಎನಿಸುತ್ತದೆ.

ನೀವು ಮಾಡುವ ಕೆಲಸದಲ್ಲಿ ಗಮನ ನೀಡುವುದು ಅತೀ ಮುಖ್ಯ. ಮಾಡಬೇಕಾದ ಕೆಲಸದೆಡೆ ನಿಮ್ಮ ಸಂಪೂರ್ಣ ಶಕ್ತಿಯೊಂದಿಗೆ ಗಮನ ಕೇಂದ್ರೀಕರಿಸಿ.

ಗಮನಿಸಿ.

೪. ಕಲ್ಪನೆಯೇ ಎಲ್ಲಕ್ಕಿಂತ ಮಿಗಿಲು. ಮುಂದಿನ ಜೀವನದ ಆಕರ್ಷಣೆಗಳ ಮುನ್ನೋಟವದು. ಜ್ಞಾನಕ್ಕಿಂತ ಕಲ್ಪನೆ ಮುಖ್ಯವಾದುದು.

ಹೌದು. ಎಲ್ಲ ಅನ್ವೇಷಣೆಗಳ ಮುಂಗಾಣ್ಕೆ ಕಲ್ಪನೆಯಿಂದಲೇ ತಾನೇ. ನೀವು ಅರಿತಿರುವುದೆಷ್ಟು ಎನ್ನುವುದು ಬೇರೆ. ಆದರೆ ನಿಮ್ಮ ಕಲ್ಪನಾಶಕ್ತಿಯನ್ನು ವಿಕಸಿಸಿಕೊಳ್ಳಬೇಕಾದದ್ದು ಅತೀ ಅವಶ್ಯ.

ಕಲ್ಪಿಸಿಕೊಳ್ಳಿ

೫. ತಪ್ಪು ಮಾಡದ ವ್ಯಕ್ತಿ ಹೊಸತೇನನ್ನೂ ಪ್ರಯತ್ನಿಸಿದವನಲ್ಲ.

ಹೊಸತು ಮಾಡುವಾಗ ತಪ್ಪು ಸಹಜ. ತಪ್ಪನ್ನು ತಿದ್ದಿಕೊಂಡು ಮುನ್ನಡೆಯುವುದು ಯಶಸ್ವಿಗಳ ಗುಣ. ನಿಮಗೆ ಯಶಸ್ಸು ಬೇಕೆಂದರೆ, ಉದ್ದೇಶಪೂರ್ವಕವಲ್ಲದ ತಪ್ಪುಗಳು ನಿಮ್ಮಿಂದ ಹೆಚ್ಚಾಗಲಿ.

ಹೊಸ ಪ್ರಯತ್ನದಲ್ಲಾಗಬಹುದಾದ ತಪ್ಪುಗಳಿಗೆ ಹೆದರಬೇಡಿ..

೬. ಭವಿಷ್ಯದ ಬಗ್ಗೆ ಭಯ ಬೇಡ ಅದು ಹೇಗೂ ಬರುತ್ತದೆ.

ಮುಂದಿನದರ ಬಗ್ಗೆ ಯೋಚಿಸುತ್ತಾ, ಇಂದಿನ ಸುಖವನ್ನು ಕಳೆದುಕೊಳ್ಳುವುದರಲ್ಲಿ ಅರ್ಥವಿಲ್ಲ.

ಈ ಕ್ಷಣದ ಬದುಕಿನಲ್ಲಿ ಗಮನವಿಡಿ.

೭.ಯಶಸ್ವಿಯಾಗಲು ಪ್ರಯತ್ನಿಸುವುದಕ್ಕಿಂತ, ಮೌಲ್ಯಯುತವಾಗಲು ಪ್ರಯತ್ನಿಸಬೇಕು.

ಯಶಸ್ಸು ನಿಮ್ಮ ನಿಲುವುಗಳಿಂದ ಬರುತ್ತದೆ. ನಮ್ಮ ನಿಲುವುಗಳನ್ನು ನಿರ್ಧರಿಸುವುದು ನಮ್ಮ ಮೌಲ್ಯಗಳು. ನಮ್ಮ ಆಸೆ ಆಕಾಂಕ್ಷೆಗಳನ್ನು , ನಮ್ಮ ಪ್ರತಿಭೆ ಆಸಕ್ತಿಗಳನ್ನೂ ಪೋಷಿಸಿಕೊಂಡರೆ ಅವು ನಮ್ಮ ಯಶಸ್ಸಿಗೆ ಕಾರಣೀಭೂತವಾಗುತ್ತದೆ.

ಮೌಲ್ಯಗಳನ್ನು ಗಳಿಸಿಕೊಳ್ಳಿ .

೮. ಮೂರ್ಖತನದ ಪರಮಾವಧಿಯೆಂದರೆ ಮಾಡಿದ್ದನ್ನೇ ಮತ್ತೆ ಮತ್ತೆ ಮಾಡುತ್ತ ಬೇರೆ ಫಲಿತಾಂಶಗಳನ್ನು ನಿರೀಕ್ಷಿಸುವುದು.

ಮಾಡಿದ ತಪ್ಪನ್ನು ತಿಳಿದು, ಅದನ್ನು ಸರಿಪಡಿಸಿಕೊಳ್ಳಿ. ಹಾಗೆ ಮಾಡುವುದೆಂದರೆ ನಿಮ್ಮ ಯೋಚನಾ ರೀತಿ ಮತ್ತು ಕಾರ್ಯವಿಧಾನವನ್ನು ಬದಲಿಸಿಕೊಳ್ಳು ವುದು. ಅದು ನಿಮ್ಮ ಜೀವನವನ್ನು ಬದಲಿಸುತ್ತದೆ.

ನಿಮ್ಮ ತಪ್ಪುಗಳಿಂದ ಪಾಠ ಕಲಿಯಿರಿ.

೯. ಅರಿವು ತಿಳಿವಲ್ಲ ತಿಳಿವಿನ ಒಂದೇ ಮೂಲವೆಂದರೆ ಅನುಭವ

ಯಾವುದೇ ಸಮಸ್ಯೆಯ ಬಗ್ಗೆ ನೀವು ಬಹಳಷ್ಟು ಮಾತಾಡಬಹುದು. ಆದರೆ ಅದರಿಂದ ಲಭಿಸುವುದು ಅರಿವಷ್ಟೇ (Information). ತಿಳಿವು (knowledge) ಲಭಿಸಲು ನೀವೇ ಅದರಲ್ಲಿ ಬೀಳಬೇಕು. ಹಿಂಜರಿಯದೆ ಯಾವುದೇ ಕೆಲಸ ಮಾಡಲು ನುಗ್ಗಿ. ಅಗಣಿತವಾದ ತಿಳಿವು ನಿಮಗದರಿಂದ ಲಭಿಸುತ್ತದೆ.

ಅನುಭವದಿಂದ ತಿಳಿವು ಬರುತ್ತದೆ.

೧೦. ಆಟದ ನಿಯಮಗಳನ್ನು ಮೊದಲು ಅರಿಯಬೇಕು. ಆ ಮೇಲೆ ಬೇರೆಯವರಿಗಿಂತ ಚೆನ್ನಾಗಿ ಆಟವಾಡಬೇಕು.

ಅಲ್ಲವೇ..? ಆಟದ ನಿಯಮಗಳನ್ನರಿಯದೇ ಆಡುತ್ತೇವೆಂದರೆ, ಗೆಲುವು ಸೋಲು ಯಾವುದೆಂದು ನಿರ್ಣಯಿಸುವುದು ಹೇಗೆ. ಅಥವಾ ನಮ್ಮ ಕಾರ್ಯ ನಮ್ಮನ್ನು ಗೆಲುವಿನೆಡೆಗೆ ಕೊಂಡೊಯ್ಯುವುದೋ ಸೋಲಿನೆಡೆಗೆ ಕೊಂಡೊಯ್ಯುವುದೋ..?

ಮೊದಲು ನಿಯಮಗಳನ್ನರಿಯಬೇಕು. ನಂತರ ಚೆನ್ನಾದ ಆಟವನ್ನಾಡಬೇಕು.

ಮೊದ್ಮಣಿ

( ನನಗೆ ಬಂದ ಮಿಂಚೆಯೊಂದರಿಂದ ಭಾವಾನುವಾದ)

Tuesday, August 31, 2010

ಕಿಟ್ಟೆಲ್ ಸಮಾಧಿ -೨

ಧರ್ಮ ಪ್ರಚಾರಕ್ಕೆಂದು ಭಾರತಕ್ಕೆ ಬಂದ ರೆವರೆಂಡ್ ಫ಼ರ್ಡಿನಾಂಡ್ ಕಿಟ್ಟೆಲ್, ಬಂದಿಳಿದಿದ್ದು ಮಂಗಳೂರಿಗೆ, ಇಲ್ಲಿನ ಭಾಷೆಯ ಸೊಬಗಿಗೆ ಮನಸೋತು, ಬಂದ ಕಾರ್ಯ ಮರೆತು, ಈ ಭಾಷೆಯನ್ನು ಕಲಿತು, ಎಪ್ಪತ್ತು ಸಾವಿರ ಪದಗಳನ್ನೊಳಗೊಂಡ ಕನ್ನಡ ಇಂಗ್ಲಿಷು ಪದಕೋಶ ತಂದ ಮಹನೀಯ. ತನ್ನ ಕೆಲಸವನ್ನೇ ಮರೆತದ್ದಕ್ಕೆ, ಪ್ರಿಂಟಿಂಗ್ ಪ್ರೆಸ್ ನಲ್ಲಿ ಕಾರ್ಯ ನಿರ್ವಹಿಸಬೇಕಾಗಿ ಬಂದರೂ, ಮರಳಿ ತಾಯ್ನಾಡಿಗೆ ಹಿದಿರುಗಿದರೂ, ಮತ್ತೆ ಬಂದು ಛಲಬಿಡದ ತ್ರಿವಿಕ್ರಮನಾಗಿ ತನ್ನ ಪದಕೋಶ ಮುಗಿಸಿಕೊಟ್ಟ ದ್ರಷ್ಟಾರ.

A Grammar of the Kannada Language: Comprising the Three Dialects of the language ಕನ್ನಡ ವ್ಯಾಕರಣ , ಕನ್ನಡದ ಮೂರು ವಿಭಿನ್ನ ಆಡುಭಾಷೆಗಳಲ್ಲಿ ಎನ್ನುವ ಪುಸ್ತಕವನ್ನೂ ಕಿಟ್ಟೆಲ್ ಬರೆದಿದ್ದಾರೆ. ಜೊತೆಗೆ ನಾಗವರ್ಮ ಕವಿಯ ಛಂದೋಬುದಿಯನ್ನೂ ಅನುವಾದಿಸಿದರೆಂದು ವಿಕಿಪೀಡಿಯಾ ಹೇಳುತ್ತದೆ.

ಈ ಮಹನೀಯರ ಸಮಾಧಿ ಜರ್ಮನಿಯ ಟ್ಯೂಬಿಂಗೆನ್ ನಗರದಲ್ಲಿದೆಯೆಂದು ವಿಕಿಪೀಡಿಯಾ ನೋಡಿ ತಿಳಿದಿದ್ದೆ. ಆದರೆ ಅಲ್ಲಿ ಎಲ್ಲಿ ಹೇಗೆ ಹುಡುಕುವುದೆಂದು ತಿಳಿದಿರಲಿಲ್ಲ. ಈ ಬಗ್ಗೆ ಸಂಪದದಲ್ಲಿ ಪ್ರಸ್ತಾಪಿಸಿದಾಗ ಹೇಳಿಕೊಳ್ಳುವ ಪ್ರತಿಕ್ರಿಯೆಯೂ ಬಂದಿರಲಿಲ್ಲ. ಆದರೆ ಸಂಪದ ಸ್ಥಾಪಕ ಹರಿಪ್ರಸಾದ್ ನನಗೆ ಉತ್ತರ ಬರೆದು, ಜರ್ಮನಿಯಲ್ಲೇ ಇರುವ ಪ್ರೊ. ಬಿ. ಎ. ವಿವೇಕ ರೈ ಅವರನ್ನು ಸಂಪರ್ಕಿಸಿದರೆ ವಿವರ ತಿಳಿಯಬಹುದೆಂದು ತಿಳಿಸಿ, ಅವರ ವಿಳಾಸ ನೀಡಿದ್ದರು. ಜೊತೆಗೆ ಹೊಳೆನರಸೀಪುರ ಮಂಜುನಾಥ್ ಅವರು ನನ್ನ ಬಗ್ಗೆ ಪ್ರೊಫ಼ೆಸರಿಗೆ ಮಿಂಚೆ ಕಳಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರೊಫ಼ೆಸರರನ್ನು ಸಂಪರ್ಕಿಸಿದಾಗ ಅವರು, ೧೯೯೩ರ ಸುಮಾರಿನಲ್ಲಿ ಕಿಟ್ಟೆಲ್ ಸಮಾಧಿಯನ್ನು ತಾವು ಸಂದರ್ಶಿಸಿದ್ದುದಾಗಿಯೂ, ಬಹಳ ಜನ ಕಿಟ್ಟೆಲ್ ಗಳು ಇರಬಹುದಾದ ಸಾಧ್ಯತೆ ಇರುವುದರಿಂದ ಅಲ್ಲಿನ ನಾಗರಿಕರ ನೆರವು ಪಡೆದು ಹುಡುಕುವಂತೆಯೂ ತಿಳಿಸಿದರು. ನನ್ನ ಜರ್ಮನಿ ಪ್ರವಾಸದಲ್ಲಿ ವಿವೇಕ ರೈ ಗಳನ್ನು ಖುದ್ದಾಗಿ ಭೇಟಿ ಮಾಡಲು ಸಾಧ್ಯವಾಗದೇ ಹೋದದ್ದು ನನಗೆ ವಿಷಾದದ ಸಂಗತಿಯಾಗಿಯೇ ಉಳಿದುಹೋಯಿತು.

ಇದಕ್ಕೂ ಮುಂಚೆ ನನ್ನೊಂದಿಗೆ ವಿಮಾನದಲ್ಲಿ ಪಯಣಿಸಿದ ಸಹಪಯಣಿಗ ಶ್ರೀ ವಿಜಯಕುಮಾರ್ ರವರು ಟ್ಯೂಬಿಂಗೆನ್ ವಿಶ್ವವಿದ್ಯಾನಿಲಯದಲ್ಲೇ ಉಳಿದುಕೊಳ್ಳುವರಿದ್ದರು. ಆದರೆ ಅವರು ಇರುವವರೆಗೂ ನಾನಿದ್ದ ಸ್ಟುಟ್‍ಗಾರ್ಟ್ - ಎಷ್ಟರ್ಡಿಂಗೆನ್ ನಿಂದ ೪೦ ಕಿ.ಮೀ. ದೂರದ ಟ್ಯೂಬಿಂಗೆನ್ ಗೆ ಹೋಗಲೂ ನನಗೆ ಸಾಧ್ಯವಾಗಲಿಲ್ಲ. ಕೊನೆಗೆ ಹಿಂತಿರುಗುವ ದಿನ ಹತ್ತಿರ ಬಂದಂತೆ, ನನ್ನ ಸಹೋದ್ಯೋಗಿ ಜರ್ಮನಿಗರಲ್ಲಿ ಕಿಟ್ಟೆಲ್ ಬಗ್ಗೆ ವಿಚಾರಿಸಿದರೆ, ಅವರ ಬಗ್ಗೆ ತಿಳಿದವರು ಯಾರೂ ಇರಲಿಲ್ಲ. ಕಿಟ್ಟೆಲರ ಪ್ರತಿಮೆ ಬೆಂಗಳೂರಿನಲ್ಲಿರುವುದನ್ನು ತಿಳಿದು ಅವರಿಗೂ ಆಶ್ಚರ್ಯವಾಗುತ್ತಿತ್ತಷ್ಟೇ. ಸಿಮೋನ್ ನನಗಾಗಿ ಅಂತರ್ಜಾಲದಲ್ಲಿ ಹುಡುಕಿ ಟ್ಯೂಬಿಂಗೆನ್ ನಲ್ಲಿ ಮೂರು ರುದ್ರಭೂಮಿಗಳು ಇರುವುದನ್ನು ಕಂಡುಕೊಂಡ. ನಮ್ಮ ಹಿರಿಯ ಸಹೋದ್ಯೋಗಿ ಎಲಿಸಬೆತ್, ತನ್ನ ಮಗಳು ಟ್ಯೂಬಿಂಗೆನ್ ನಲ್ಲೇ ಓದುತ್ತಿರುವುದರಿಂದ ಈ ಬಗ್ಗೆ ನನಗೆ ಸಹಾಯ ಮಾಡುವುದಾಗಿ ಹೇಳಿದರು. ಆದರೆ ಹೆಚ್ಚಿನ ವಿಚಾರವೇನೂ ತಿಳಿಯಲಿಲ್ಲ. ಕೊನೆಗೆ ನಮ್ಮ ಇನ್ನೊಬ್ಬಳು ಸಹೋದ್ಯೋಗಿ ಸಿಬಿಲೆ, ನನ್ನ ಪಾಡು ಕಂಡು ಅಂತರ್ಜಾಲದಲ್ಲಿ ಹುಡುಕಿ ಕಿಟ್ಟೆಲ್ ಸಮಾಧಿ ಇರಬಹುದಾದ ರುದ್ರಭೂಮಿಯ ಹೆಸರನ್ನು ತಿಳಿಸಿ, ಆ ಸಮಾಧಿಯ ರೆಫರೆನ್ಸ್ ಸಂಖ್ಯೆಯನ್ನೂ ಹುಡುಕಿ ಕೊಟ್ಟಳು. ಇದೆಲ್ಲಾ ನನ್ನ ಜರ್ಮನ್ ಸಹೋದ್ಯೋಗಿಗಳೇ ಮಾಡಿದುದೇಕೆಂದರೆ, ಈ ವಿವರಗಳಿರುವ ಅಂತರ್ಜಾಲ ತಾಣಗಳೆಲ್ಲಾ ಜರ್ಮನ್ ಭಾಷೆಯಲ್ಲೇ ಇದ್ದುದು!!

ಕಡೆಗೆ ನನ್ನ ಭಾರತೀಯ ಸಹೋದ್ಯೋಗಿಗಳೊಂದಿಗೆ ಟ್ಯೂಬಿಂಗೆನ್ ಗೂ ಪಯಣಿಸಿದೆ. ಅವರಲ್ಲಿ ಒಬ್ಬರು ಉತ್ತರ ಭಾರತೀಯರು, ಕನ್ನಡದ ಬಗ್ಗೆ ಏನೂ ಗೊತ್ತಿರುವವರಲ್ಲ. ಟ್ಯೂಬಿಂಗೆನ್ ನೋಡಲೆಂದು ಹೊರಟವರು. ಇನ್ನೊಬ್ಬರು ಕನ್ನಡಿಗರೇ ಆದರೂ ಮಾಡರ್ನ್ ಕನ್ನಡಿಗರು.! ಕಿಟ್ಟೆಲ್ ಸಮಾಧಿ ನೋಡುವ ಆಸಕ್ತಿ ಇರುವವರಲ್ಲ. ಟ್ಯೂಬಿಂಗೆನ್ ನಲ್ಲಿ ಅವರಿಬ್ಬರನ್ನು ಅವರ ಪಾಡಿಗೆ ಬಿಟ್ಟು, ರುದ್ರಭೂಮಿಯ ವಿಳಾಸ ಹಿಡಿದು ಹುಡುಕುತ್ತಾ ಹೊರಟೆ. ವಿಶ್ವವಿದ್ಯಾನಿಲಯದ ಬದಿಯಲ್ಲೇ ಇದ್ದ ವಿಶಾಲ ರುದ್ರಭೂಮಿ ಅದು ಸ್ಟಾಟ್-ಫ್ರೀಢ್‍ಹಾಫ್. ( ಗಣ್ಯರ-ರುದ್ರಭೂಮಿ). ಅಲ್ಲಿನ ಪಿ ಬ್ಲಾಕ್ ಒಂದನೇ ವಿಭಾಗದಲ್ಲಿ ೧೭ ನೇ ಸಮಾಧಿ ಕಿಟ್ಟೆಲರದು ಎಂದು ಸಿಬಿಲೆ ಪ್ರಿಂಟ್ ಮಾಡಿ ಕೊಟ್ಟಿದ್ದಳಲ್ಲಾ.. ಅದನ್ನು ಹುಡುಕಲು ಒಳ ಹೊಕ್ಕರೆ...

ವಿಂಗಡಣೆಗೆ ಯಾವುದೇ ಸಂಖ್ಯೆಗಳಿರಲಿಲ್ಲ. ಪಿ ಬ್ಲಾಕ್ ಹುಡುಕುವುದು ಸುಲಭವಾದರೂ ಒಂದನೇ ವಿಭಾಗದ ಹದಿನೇಳನೇ ಸಮಾಧಿ ಹುಡುಕುವುದು ಸುಲಭವಾಗಿರಲಿಲ್ಲ. ನಿಶ್ಯಬ್ದ ಪಾಲಿಸಬೇಕಾದ ರುದ್ರಭೂಮಿಯಲ್ಲಿ ನಾನು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಅಲೆಯುತ್ತಿದ್ದೆ. ಸಹಾಯ ಕೇಳೋಣವೆಂದರೂ ಅಲ್ಲಿ ಯಾರೂ ಕಣ್ಣಿಗೆ ಬೀಳುವವರಿರಲಿಲ್ಲ. ಸುಮಾರು ಇಪ್ಪತ್ತು ನಿಮಿಷಗಳ ಹುಡುಕಾಟದಲ್ಲಿ ನೂರಾರು ಸಮಾಧಿಗಳ ಹೆಸರು ನೋಡಿದ್ದೆ. ಕಿಟ್ಟೆಲರ ಹೆಸರು ಎಲ್ಲಿಯೂ ಕಣ್ಣಿಗೆ ಬೀಳಲಿಲ್ಲ. ನಿರಾಸೆಯೊಂದಿಗೆ ಅಲ್ಲಿ ನಿಂತಾಗ, ಗಿಡಕ್ಕೆ ನೀರು ಹಾಕಲು ಬಂದ ಹಣ್ಣು ಹಣ್ಣು ಮುದುಕಿಯೊಬ್ಬರು ಕಣ್ಣಿಗೆ ಬಿದ್ದರು. ಅವರ ಬಳಿ ಈ ಸಮಾಧಿ ಕಂಡು ಹಿಡಿಯಲು ಸಹಾಯ ಯಾಚಿಸಿದೆ. ಅವರಿಗೆ ಇಂಗ್ಲಿಶ್ ಬರದು, ನನಗೆ ಜರ್ಮನ್ ಬರದು. ನಾನು ಕನ್ನಡದಲ್ಲೇ ಕೇಳಿದ್ದರೂ ಏನೂ ತೊಂದರೆ ಇರಲಿಲ್ಲ. ಆ ಮಾತೆ, ಒಂದು ನಿಮಿಶ ಚಿಂತಿಸಿ, ಕೈ-ಸನ್ನೆ ಯ ಜಾಗತಿಕ ಭಾಷೆಯಲ್ಲಿ ತನ್ನ ಮಗ ನನಗೆ ಸಹಾಯ ಮಾಡಬಹುದೆಂದೂ, ನಾನು ಆಕೆಯನ್ನು ಹಿಂಬಾಲಿಸಬೇಕೆಂದೂ ತಿಳಿಸಿದರು. ಅಂದೇನೋ ಜರ್ಮನಿಯಲ್ಲಿ ಬೆಂಕಿಯಂತ ಬಿಸಿಲು. ಮೂವತ್ತೈದು ಡಿಗ್ರಿ ಸೆಂಟಿಗ್ರೇಡುಗಳಷ್ಟು ಉಷ್ಣತೆ. ನಾನಾಗಲೇ ಐದಾರು-ಕಿಮೀಗಳಷ್ಟು ದೂರ ನಡೆದು ದಣಿದಿದ್ದೆ. ಆ ಅಜ್ಜಿಯನ್ನು ಹಿಂಬಾಲಿಸಿದೆ. ಆದರೂ ನಡಿಗೆಯ ವೇಗದಲ್ಲಿ ಅವರನ್ನು ಸರಿಗಟ್ಟಲು ನನಗಾಗಲಿಲ್ಲ. ನಾಲ್ಕು ನಿಮಿಷಗಳ ನಡಿಗೆಯಲ್ಲಿ ಆ ರುದ್ರಭೂಮಿಯಿಂದ ಹೊರಬಂದು ಅದರ ಪಕ್ಕದಲ್ಲಿರುವ ಮನೆಯೊಂದಕ್ಕೆ ಹೊಕ್ಕ ಅಜ್ಜಿ ತನ್ನ ಮಗನಿಗೇನೋ ಕೂಗಿ ಹೇಳಿದರು. ನನಗೆ ಕುಡಿಯಲು ಒಂದಷ್ಟು ನೀರು ಕೊಟ್ಟರು. ಜ್ಯೂಸ್ ಬೇಕಾ ಎಂದು ವಿಚಾರಿಸಿದರು. ಬೇಡವೆಂದೆ. ನನ್ನ ಮನಸ್ಸೆಲ್ಲಾ ಇಷ್ಟು ದೂರ ಬಂದರೂ ಇನ್ನೂ ಕಾಣದ ಕಿಟ್ಟೆಲ್ ಸಮಾಧಿಯ ಬಗ್ಗೆಯೇ ಚಿಂತಿಸುತ್ತಿತ್ತು. ಅಷ್ಟರಲ್ಲಿ ಅವರ ಮಗ ಆ ರುದ್ರಭೂಮಿಯ ಕೀಪರ್ ಇರಬೇಕು ಎನ್ನಿಸುತ್ತದೆ. ನಾನು ಹೇಳಿದ ಹೆಸರಿನಿಂದ ಅವನಿಗೇನೂ ಹೊಳೆದಂತೆನ್ನಿಸಲಿಲ್ಲ. ಆದರೆ ಸಮಾಧಿಯ ಸಂಖ್ಯೆ P I 17 - ೬೩ ಎನ್ನುವುದನ್ನು ಹೇಳಿದಾಗ ಅವನ ಮುಖದಲ್ಲಿ ಹೊಳಪು ಕಾಣಿಸಿತು. ಒಳ ಹೋಗಿ ಬಂದವನ ಕೈಯಲ್ಲಿ ರುದ್ರಭೂಮಿಯ ಮ್ಯಾಪ್ ಇತ್ತು. ಅದರಲ್ಲಿ ಹುಡುಕಿದಾಗ ನಾನು ಹೇಳಿದ ಸಂಖ್ಯೆ ಮತ್ತು ಹೆಸರು ಹೊಂದಿಕೆಯಾದದ್ದನ್ನು ಕಂಡು ನನಗೇ ಸಂತಸವಾಯಿತು. ಮತ್ತೆ ಎರಡು ನಿಮಿಷಗಳ ನಡಿಗೆಯ ನಂತರ ನಾನು ಕಿಟ್ಟೆಲ್ ಸಮಾಧಿಯ ಮುಂದಿದ್ದೆ. ಅವನಿಗೆ ಗುರುತು ಪರಿಚಯವಿರದ ಬೇರೆ ಧರ್ಮ ಮತ್ತು ದೇಶದ ವ್ಯಕ್ತಿ ಈ ಸಮಾದಿಯನ್ನು ಹುಡುಕಿ ಬಂದಿದ್ದು ಅಚ್ಚರಿಯಾಗಿದ್ದು ಅವನ ನೋಟದಲ್ಲಿ ಕಾಣುತ್ತಿತ್ತು. ಅದರಲ್ಲೂ ಫ಼ರ್ಡಿನಾಂಡ್ ಕಿಟ್ಟೆಲ್ ಮರಣಿಸಿದ್ದು ೧೯೦೩ ರಲ್ಲಿ ಎಂದಾಗ ಅವನಿಗಿನ್ನೂ ಅಚ್ಚರಿ. ನೂರು ವರುಷಗಳ ಹಿಂದೆ ಮರಣಿಸಿದ ವ್ಯಕ್ತಿಯ ಸಮಾಧಿ ಹುಡುಕುತ್ತಾ ೩೫ರ ಈ ವ್ಯಕ್ತಿ ಅವನಿಗೆ ಒಗಟಾಗಿಯೇ ಕಂಡಿರಬೇಕು.

ಕಿಟ್ಟೆಲ್ ಕರ್ನಾಟಕದಲ್ಲಿ ಮಾಡಿದ ಸಾಧನೆಯ ಬಗ್ಗೆ ಅವನಿಗೆ ತಿಳಿಸಿದೆ. ಅವರ ಪ್ರತಿಮೆ ಬೆಂಗಳೂರಿನಲ್ಲಿರುವುದನ್ನೂ ತಿಳಿಸಿದೆ. ಇಲ್ಲೆಲ್ಲಾ ಬೆಂಗಳೂರು ಜಗತ್ಪ್ರಸಿದ್ದ.! ಅಚ್ಚರಿಯೊಂದಿಗೆ ನನ್ನನ್ನು ಬೀಳ್ಕೊಟ್ಟು ಅವನು ಹೊರಟು ಹೋದ.

ಸುಮಾರು ಇಪ್ಪತ್ತು ನಿಮಿಷಗಳಷ್ಟು ಕಾಲ ನಾನಲ್ಲಿದ್ದೆ. ಕಿಟ್ಟೆಲ್ ಸಮಾಧಿಯೊಂದಿಗೆ ಕನ್ನಡದ ಇಂದಿನ ಸ್ಥಿತಿಗಳನ್ನು ನನಗೆ ತಿಳಿದಂತೆ ಹೇಳಿಕೊಂಡೆ. ಕುವೆಂಪು, ಪೂಚಂತೆ,ಬೇಂದ್ರೆ,ಗೋಕಾಕ್,ಕಾರ್ನಾಡ,ಅನಂತಮೂರ್ತಿ, ರಾಜಕುಮಾರ್, ವಿಷ್ಣು, ಶಂಕರನಾಗ್, ಹೀಗೆ ನನ್ನ ಮನಸ್ಸಿಗೆ ಹೊಳೆದವರ ಬಗ್ಗೆಯೆಲ್ಲಾ ಹೇಳಿದೆ. ಅವರ ಸಾಧನೆಯ ಶಕ್ತಿಗೆ ನನ್ನ ನಮನಗಳನ್ನರ್ಪಿಸಿ ಮೌನಾಚರಣೆ ಮಾಡಿದೆ. ನಂತರ ಹಿಂದಿರುಗಿ ಬಂದು ನೆಕರ್ ನದಿಯ ದಂಡೆಯಲ್ಲಿ ಕಾಯುತ್ತಿದ್ದ ನನ್ನ ಸಹೋದ್ಯೋಗಿಗಳನ್ನು ಸೇರಿಕೊಂಡೆ.

ಕಿಟ್ಟೆಲ್ ಸಮಾಧಿಯ ಚಿತ್ರಕ್ಕೆ ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಿ.

Tuesday, August 24, 2010

ಅಲ್ಲಿಲ್ಲಿಂದ

//೩.ಹದಿಮೂರು ಪಕ್ಷಗಳ ಹೊಂದಾಣಿಕೆಯ ಸರಕಾರಕ್ಕಿಂತ ಎರಡೇ ಪಕ್ಷದ ಬಹುಮತದ ಸರಕಾರ ನಿಭಾಯಿಸಲು ಕಡಿಮೆ ಕಷ್ಟ.
ಒಂದೇ ಪಕ್ಷದ ಸರಕಾರ ನಿಭಾಯಿಸಲು ಯಡ್ಯೂರಪ್ಪನವರ ಕಷ್ಟ ನೋಡಿಲ್ಲವೇ..!

//೫.ಇದರಿಂದ ರಾಜ್ಯ ಮಟ್ಟದ ಪಕ್ಷಗಳು ಕೇಂದ್ರ ಸರ್ಕಾರವನ್ನು ತಮ್ಮ ಬೇಡಿಕೆಗಳಿಗಾಗಿ ಬ್ಲಾಕ್ ಮೇಲ್ ಮಾಡುವುದು ತಪ್ಪುತ್ತದೆ
ಇಲ್ಲದಿದ್ದರೆ ರಾಜ್ಯಗಳ ಅದರಲ್ಲೂ ಹಿಂದಿ ಮಾತನಾಡದ ರಾಜ್ಯಗಳ ಮಾತುಗಳನ್ನು ಕೇಂದ್ರ ಸರ್ಕಾರ ಕೇಳುವುದೇ..?

//೬.ಸಣ್ಣ ಪುಟ್ಟ ಪಕ್ಷಗಳು ಚುನಾವಣೆಯಲ್ಲಿ kingmaker ಪಾತ್ರ ವಹಿಸಿ ಸರಕಾರವನ್ನು ಬುಗುರಿಯಾಡಿಸುವುದು ತಪ್ಪುತ್ತದೆ
ಹೀಗೆ ಮಾಡಬೇಕಾಗಿರುವುದು ಪ್ರಜಾಪ್ರಭುತ್ವದ ಅಂಗ ಅಲ್ಲವೇ..? ನಾಯಕನಾದವನು ದಕ್ಷನಾಗಿ ಎಲ್ಲರನ್ನೂ ಜೊತೆಯಲ್ಲಿ ಕೊಂಡೊಯ್ಯಬೇಕು.

//೭.ಕಮ್ಯೂನಿಸ್ಟರ ಹೊರಗಿನಿಂದ ಬೆಂಬಲ ಕೊಡುವ "ಅಧಿಕಾರ ಬೇಕು ಜವಾಬ್ದಾರಿ ಬೇಡ" ಧೋರಣೆಯಿಂದ ಕಾಂಗ್ರೆಸ್ ಪಾರಾಗುತ್ತದೆ.
ಅಧಿಕಾರ ಬೇಕು ಜವಾಬ್ದಾರಿ ಬೇಡ ಎನ್ನುವ ಧೋರಣೆಗಿಂತ, ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಕಮ್ಯುನಿಸಂ ಮುಂದೇನೆಂದು ಅರಿಯದೆ ಕುಳಿತಿದೆ. ಅಲ್ಲಿಯೂ ಬೇರು ಮಟ್ಟದ ಚಿಂತಕರ ಕೊರತೆ ಎದ್ದು ಕಾಣುತ್ತಿದೆ.

//೮.ಬೀಜೇಪಿ ಸರಕಾರಕ್ಕೆ ಬಂದರೆ ಭಜರಂಗ ದಳ ಮೊದಲಾದ fringe elements ಗಳ ಹಾವಳಿ ಬಹುಷಃ ಕಮ್ಮಿಯಾಗಬಹುದು
ನನ್ನ ಲೆಕ್ಕದಲ್ಲಿ ಇದು ಜಾಸ್ತಿಯಾಗಬಹುದೆನ್ನೆಸಿತ್ತದೆ....:) ಅಲ್ಲದೆ ಇವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳದ ಮಾತೃ ಪಕ್ಷ ತನ್ನ ರಾಜಕೀಯ ನಡತೆಯನ್ನು ಹೇಗೆ ರೂಢಿಸಿಕೊಳ್ಳುತ್ತದೆ.

//೯.ಸದ್ಯ ಪಾಕಿಸ್ತಾನದಲ್ಲಿ ತಾಲಿಬಾನ್ ಹಾವಳಿಯಿಂದ ಭಾರತಕ್ಕೂ ತೀವ್ರ ಗಂಡಾಂತರದ ಸಂಭವ ಇರುವಾಗಿ ನಮ್ಮ ಎರಡೂ ಪ್ರಧಾನ ಪಕ್ಷಗಳು ಒಟ್ಟುಗೂಡಿ ಭಾರತದ ಭದ್ರತೆಗೆ ಗಮನ ಕೊಡಬೇಕಾದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ
ರಕ್ಷಣೆಯ ವಿಷಯದಲ್ಲಿ ಭಾರತದ ರಾಜಕೀಯ ಪಕ್ಷಗಳು ಸುಮಾರಾಗಿ ಒಗ್ಗಟ್ಟಾಗಿಯೇ ಇವೆ.

ಪ್ರಜಾಪ್ರಭುತ್ವದಲ್ಲಿ ಸರ್ಕಾರ ನಡೆಸುವ ಪಕ್ಷದಷ್ಟೇ ಪ್ರಮುಖ ಅಂಗ ವಿರೋಧ ಪಕ್ಷ. ಏಕೆಂದರೆ ಸರ್ಕಾರದ ಮುಖ್ಯ ಕೆಲಸ ಯೋಜನೆಗಳನ್ನು ರೂಪಿಸುವುದಷ್ಟೇ. ಇದು ಶಾಸಕಾಂಗದ ಕೆಲಸ. ಕಾರ್ಯಾಂಗ ಅದನ್ನು ನಿರ್ವಹಿಸಬೇಕು. ಈಗೀಗ ಕಾರ್ಯಾಂಗ ಕೇವಲ ಶಾಸಕಾಂಗ ಹೇಳುದಂತೆ ನಡೆಯುವ ಕೀಲುಗೊಂಬೆಯಾಗಿರುವುದು, ಮತ್ತು ಎರಡೂ ಕಡೆಯೂ ಭ್ರಷ್ಟರಿರುವುದು ಸಮಸ್ಯೆಗಳ ಮೂಲ. ನ್ಯಾಯಾಂಗ ಈ ಎರಡರ ಬೆಂಬಲವಿಲ್ಲದೆ ಕೆಲಸ ಮಾಡಲಾಗದು. ಅದಕ್ಕೇ ಅದು ಇವನ್ನೇ ಅನುಸರಿಸುತ್ತಿದೆ.

ಈ ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳಲಿ ಬಿಡಲಿ, ಶಾಸಕಾಂಗದ ಕಾರ್ಯ ನಿರ್ವಹಣೆಗೆ ಚ್ಯುತಿ ಬರುವುದಿಲ್ಲ. ಎಲ್ಲಿಯವರೆಗೆ ಚಿಂತನೆಯ ಬಲವಿಲ್ಲದ, ನಿಯತ್ತಿಲ್ಲದ ಮತ್ತು ಹಣಬಲದ ನಾಯಕತ್ವವಿರುತ್ತದೋ, ಅಲ್ಲಿಯವರೆಗೆ ಈ ಹಣೆ ಬರಹ ತಪ್ಪಿದ್ದಲ್ಲ.


ಆದರೆ ಇನ್ನೂರು ಜನ ಒಪ್ಪಿದ್ದಾರಲ್ಲ.. ಅದೇ ನ್ಯಾಯ. ಪ್ರಜಾಪ್ರಭುತ್ವದಲ್ಲಿ ಬೇರೆ ಏನು ಮಾಡಲು ಸಾದ್ಯ. ನಿಜವಾಗಿಯೂ ಮಾಡಬಹುದಾದ ಸಂಗತಿಯೆಂದರೆ, ಉಳಿದವರು ಚುನಾವಣೆಯಿಂದ ಹೊರಗುಳಿದು, ಸೂಕ್ತ ಅಭ್ಯರ್ಥಿಯನ್ನು ಗೆಲ್ಲಿಸಲು ಸಹಕಾರಿಯಾಗುವುದು. ಆದರೆ, ಎಲ್ಲರೂ ಮುಂದುವರೆಯಲು ಹೊರಟಾಗ ಯಾರಿಗೆ ಬಹುಮತವಿರುತ್ತದೆಯೋ ಅವರ ನಾಯಕತ್ವ ಒಳಿತು. ಅಲ್ಲದೇ ಇದೇನೂ ಶಾಶ್ವತವಲ್ಲವಲ್ಲಾ..? ಐದು ವರುಷಗಳಲ್ಲಿ ಮತ್ತೆ ಚುನಾವಣೆ ಬರುತ್ತದೆ.!

Friday, August 20, 2010

ಕೆಲವರು ವಿಶೇಷ ವ್ಯಕ್ತಿಗಳಾಗಿರುತ್ತಾರೆ.

ಇದು ನನಗೆ ತಿಳಿದದ್ದು ಹೀಗೆ.


ಜರ್ಮನಿಯ ಸ್ಟುಟ್ಗಾರ್ಟ್ ನಗರದಲ್ಲಿ ಮಧ್ಯಭಾಗಲ್ಲೊಂದು ಕೋಟೆಯಿದೆ. ಅದರ ಮುಂದೊಂದು ಪ್ರತಿಮೆ. ಕ್ರಿಸ್ಟೋಫ್ ವುರ್ಟೆನ್‍ಬರ್ಗ್ ಎನ್ನುವ ಇಲ್ಲಿನ ರಾಜನದು (ಡ್ಯೂಕ್ ಎನ್ನುವುದಕ್ಕೆ ಸಾಮಂತ ಎನ್ನುವುದು ಸಮಾನಾರ್ಥಕವೇನೋ.. ಆದರೆ ನಾನು ರಾಜ ಎಂದೇ ಬಳಸುತ್ತೇನೆ.) ಸುಮಾರು ಐದು ಶತಮಾನಗಳ ಹಿಂದೆ ಕಟ್ಟಿದ ಕೋಟೆ ಮತ್ತು ಅರಮನೆ ಅದು.



ಅವನ ಚರಿತ್ರೆಯನ್ನು ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ಅವನು ಕಟ್ಟಿದ ಆ ಕೋಟೆಯನ್ನು ಇಲ್ಲಿ ಜನ ಹಳೇಕೋಟೆ ಎನ್ನುತ್ತಾರೆಂದು ಅದರಲ್ಲಿ ಕಡೆಯವರೆಗೂ ಅಲ್ಲಿಯ ವಂಶದ ಕುಡಿ ಕ್ಲಾಸ್ ಶೆಂಕ್ ಗ್ರಾಫ್ ಫ಼ೋನ್ ಸ್ಟಾಫ಼ೆನ್‍ಬೆರ್ಗ್ Claus Schenk Graf von Stauffenberg ಇದ್ದನೆಂದೂ, ೧೯೪೪ರ ಜುಲೈ ೨೧ರಂದು ಆತ ಹುತಾತ್ಮನಾದನೆಂದೂ, ನಂತರ ಆ ಕೋಟೆಯಲ್ಲೊಂದು ಕೋಣೆಯನ್ನು ಆತನ ನೆನಪಿನಲ್ಲಿ ಮ್ಯೂಸಿಯಂ ಮಾಡಿದ್ದಾರೆಂದೂ ತಿಳಿದು ಅಚ್ಚರಿಯಾಯಿತು. ಯಾರಪ್ಪಾ ಈ ಸ್ಟಾಫೆನ್ ಬೆರ್ಗ್ ಅವನು ಮಾಡಿದ್ದಾದರೂ ಏನು ಎಂದು ತಿಳಿಯೋಣವೆಂದು ಮತ್ತಷ್ಟು ಜಾಲಾಡಿದರೆ, ಈ ಮನುಷ್ಯನ ಬಗ್ಗೆ ಹೆಮ್ಮೆ ಮೂಡಿತು.



ಜರ್ಮನಿ ಎಂದರೆ ನಮಗೆ ಮೊದಲು ನೆನಪಾಗುವುದು ಹಿಟ್ಲರ್. ಮನುಕುಲದ ಚರಿತ್ರೆಯಲ್ಲಿ ಹೆಸರಾದ ಒಬ್ಬ ರಾಕ್ಷಸನೆಂದು. ತನ್ನ ಮಹತ್ವಾಕಾಂಕ್ಷೆಯ ಸಾಧನೆಗಾಗಿ ಜಗತ್ತನ್ನೇ ಯುಧ್ಧಕ್ಕೆಳೆದು, ಕಡೆಗೆ ಆತ್ಮಹತ್ಯೆ ಮಾಡಿಕೊಂಡವನೆಂದು ಇನ್ನೂ ಅವನನ್ನು ನಾವು ನೆನೆಸಿಕೊಳ್ಳುತ್ತೇವೆ. ಇಂತಹ ಹಿಟ್ಲರನ ಸೇನೆಯಲ್ಲಿ ಒಬ್ಬ ಸೇನಾನಿಯಾಗಿದ್ದ ಈ ಸ್ಟಾಫೆನ್ ಬೆರ್ಗ್. ಮೊದಮೊದಲು ಪೋಲ್ಯಾಂಡ್ ಮತ್ತು ಫ಼್ರಾನ್ಸ್ ಗಳ ಯುದ್ಧಗಳಲ್ಲಿ ಭಾಗವಹಿಸಿದ್ದ. ರಷಿಯಾದ ಮೇಲಿನ ದಾಳಿ ಆಪರೇಷನ್ ಬಾರ್ಬರೋಸ್ ನಲ್ಲಿಯೂ ಟುನೇಶಿಯಾ ಮೇಲಿನ ಯುದ್ಧದಲ್ಲಿಯೂ ಭಾಗವಹಿಸಿದ್ದ. ಅಷ್ಟೇ ಅಲ್ಲ. ಬ್ರಿಟಿಷರ ಬಾಂಬು ದಾಳಿಗೆ ಬಲಿಯಾಗಿ ತನ್ನ ಎಡಗಣ್ಣು, ಬಲಗೈ ಕಳೆದುಕೊಂಡಿದ್ದ. ಅವನ ಎಡಗೈನಲ್ಲಿ ಉಳಿದದ್ದು ಮೂರೇ ಬೆರಳು. ಆಸ್ಪತ್ರೆಯಿಂದ ನಂತರ ತನ್ನ ಸ್ನೇಹಿತರ ಜೊತೆ ಮಾತನಾಡುತ್ತ, ಮುಂಚೆ ಅಷ್ಟೊಂದು ಬೆರಳುಗಳಿದ್ದಾಗಲೂ ಅವುಗಳಿಂದ ಏನು ಮಾಡಬೇಕೆಂದು ತನಗೆ ಗೊತ್ತಿರಲಿಲ್ಲ. ಈಗ ಬೆರಳು ಮತ್ತು ಕೈ ಕಳೆದುಕೊಂಡು ತೊಂದರೆಯೇನೂ ಇಲ್ಲ ಎಂದ ಧೀರ ಯೋಧ ಈತ. ಆದರೆ ಟ್ಯುನೇಶಿಯಾ ಯುದ್ಧದ ವೇಳೆಗೆ ಹಿಟ್ಲರನ ನೀತಿಗಳ ಬಗ್ಗೆ ಭ್ರಮನಿರಸನ ಹೊಂದಿದ್ದ. ಅವು ಮಾನವೀಯವಾಗಿಲ್ಲ ಮತ್ತು ಜರ್ಮನಿಗೆ ಅನುಕೂಲಕರವಾಗಿಲ್ಲ ಎನ್ನುವುದು ಆತನ ನಿಲುವಾಗಿತ್ತು.

ಜರ್ಮನರು ಏನು ಮಾಡಿದರೂ ಅಚ್ಚುಕಟ್ಟಾಗಿ ಮಾಡುತ್ತಾರೆ ಎನ್ನುವುದಕ್ಕೆ ಒಂದು ನಿದರ್ಶನ "ಉಂಟರ್ಮೆಹ್ಮೆನ್ ವಾಲ್ಕೌರೆ" ಅಥವಾ ಆಪರೇಷನ್ ವಾಲ್ಕೀರಿ (Valkyrie). ಯುದ್ಧದಲ್ಲಿ ಘಾಸಿಗೊಳಗಾದ ಜರ್ಮನಿಯ ಜನತೆ ಅರಾಜಕತೆಗೆ ಒಡಗೊಡದಿರಲೆಂದು, ತಕ್ಷಣವೇ ರಾಜಕೀಯ ಸ್ಧಿರತೆ ಸ್ಥಾಪಿಸುವ ಉದ್ದೇಶ ಈ ಯೋಜನೆಯದು. (ಇಂತಹುದೇ ಒಂದು ಯೋಜನೆ ನಮ್ಮ ಇಂಟರ್ನೆಟ್ ಶೋಧಕ್ಕೆ ಅಡಿಗಲ್ಲಾಗಿದ್ದು ನಿಮಗೂ ತಿಳಿದಿದೆ.) ಹಿಟ್ಲರನ ನೀತಿಗಳ ಬಗ್ಗೆ ಭ್ರಮನಿರಸನಗೊಂಡಿದ್ದ ಮಂದಿಯೊಡಗೂಡಿದ ಸ್ಟಾಫ಼ೆನ್ ಬರ್ಗ್ ಈ ಯೋಜನೆಯನ್ನು ಆತನ ವಿರುದ್ದವೇ ಬಳಸುವ ತಂತ್ರ ರೂಪಿಸಿದ. ಹಿಟ್ಲರು ದೇಶದ ಸೈನಿಕರ ಕೈಯಲ್ಲಿ ಆತನಿಗೆ (ಜರ್ಮನಿಯ ಅಧ್ಯಕ್ಷನಿಗೆ) ನಿಯತ್ತಾಗಿರುವಂತೆ ವಚನ ಪಡೆಯುತ್ತಿದ್ದ. ಮೊದಲಿಗೆ ಇಂತಹ ಸೈನಿಕರನ್ನು ವಚನಭ್ರಷ್ಟರಾಗದಂತೆ ತಡೆಯಲು, ಹಿಟ್ಲರನನ್ನು ಹತ್ಯೆಗೈದು, ಆ ನಂತರ ಉಂಟಾಗಬಹುದಾದ ರಾಜಕೀಯ ಅನಿಶ್ಚಿತತೆಯನ್ನು ವಾಲ್ಕೀರಿಯಿಂದ ಕೊನೆಗಾಣಿಸಿ, ದೇಶವನ್ನು ನರಳುವಿಕೆಯತ್ತ ಕೊಂಡೊಯ್ಯುತ್ತಿರುವ ಯುದ್ದದಿಂದ ಮುಕ್ತಿ ನೀಡುವುದು ಸ್ಟಾಫ಼ೆನ್ ಬೆರ್ಗ್ ಮತ್ತವನ ಸಂಗಡಿಗರ ಉದ್ದೇಶವಾಗಿತ್ತು. ಇದರಂತೆ ಜುಲೈ ಇಪ್ಪತ್ತು ೧೯೪೪ ರಂದು ಯೋಜನೆ ಕಾರ್ಯಗತವಾಗಲು ಪ್ರಯತ್ನ ನಡೆಯಿತು. ಅದೇ ಜುಲೈ ೨೦ರ ಷಡ್ಯಂತ್ರ.

ವೋಲ್ಫ಼್‍ಶಾಂಜ್ ನಲ್ಲಿ ಹಿಟ್ಲರನೊಂದಿಗೆ ಮಿಲಿಟರಿ ಚರ್ಚೆ ಜುಲೈ ೨೦ರಂದು ನಿಗದಿಯಾಗಿತ್ತು. ಅಲ್ಲಿಗೆ ಹೋದ ಸ್ಟಾಫ಼ೆನ್‍ಬರ್ಗ್ ತನ್ನ ಬ್ರೀಫ಼್‍ಕೇಸಿನಲ್ಲಿ ಎರಡು ಬಾಂಬುಗಳನ್ನೂ ಕೊಂಡೊಯ್ದಿದ್ದ. ಅವನ ರಿವಾಲ್ವರ್ ಅನ್ನು ಪಡೆದುಕೊಂಡು ಬ್ರೀಫ಼್ ಕೇಸ್ ಪರೀಕ್ಷಿಸದೆ ಆತನನ್ನು ಒಳಗೆ ಬಿಡಲಾಯಿತು. ಅಲ್ಲಿ ಬಾಂಬುಗಳನ್ನು ಜೋಡಿಸುತ್ತಿರುವಾಗ, ಹಿಟ್ಲರ್ ನಿಗದಿತ ಅವಧಿಗಿಂತ ಮುಂಚೆಯೇ ಬರುತ್ತಿರುವನೆಂದೂ ಸ್ಟಾಫ಼ೆನ್ ತನ್ನ ಕೆಲಸವನ್ನು ಬೇಗನೇ ಮುಗಿಸಬೇಕೆಂದೂ ಸುದ್ದಿ ಬಂದಿತು. ಕೇವಲ ಎಡಗೈ ಮತ್ತದರ ಮೂರು ಬೆರಳುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ಟಾಫ಼ೆನ್ ಗೆ ಎರಡೂ ಬಾಂಬುಗಳನ್ನು ಜೋಡಿಸಲಾಗಲಿಲ್ಲ. ಒಂದನ್ನು ಜೋಡಿಸಿ, ಬ್ರೀಫ಼್ ಕೇಸಿನಲ್ಲಿಟ್ಟು, ಹಿಟ್ಲರಿಗೆಂದು ನಿಗದಿತವಾದ ಕುರ್ಚಿಯ ಆದಷ್ಟೂ ಸಮೀಪಕ್ಕೆ ತಳ್ಳಿ, ತಾನು ಸಭೆಯಲ್ಲಿ ಭಾಗವಹಿಸದೆ ಹೊರನಡೆದುಬಿಟ್ಟ, ಬಾಂಬೂ ನಿಗದಿಯಂತೆ ಸ್ಪೋಟವಾಯ್ತು. ಆದರೆ ಹಿಟ್ಲರನ ಸುದೈವ. ಪಾಪಿ ಚಿರಾಯು ಎನ್ನುತ್ತಾರಲ್ಲ ಹಾಗೆ.. ದಪ್ಪ ಮೇಜಿನ ಹಲಗೆಯಿಂದಾಗಿ, ಹಿಟ್ಲರ್ ಸಣ್ಣಪುಟ್ಟಗಾಯಗಳೊಡನೆ ಪಾರಾಗಿದ್ದ. ಅಲ್ಲದೇ ಅಂದೇ ಸಂಜೆ ರಾಷ್ಟ್ರವನ್ನುದ್ದೇಶಿಸಿ ರೇಡಿಯೋ ಭಾಷಣವನ್ನೂ ಮಾಡಿದ.

ಇತ್ತ ಸಭೆಯಿಂದ ಹೊರಬಂದ ಸ್ಟಾಫ಼ೆನ್ನನಿಗೆ ಬಾಂಬು ಸ್ಪೋಟವಾದದ್ದು ಕಾಣಿಸಿತು. ಆ ಸ್ಫೋಟದಲ್ಲಿ ಖಂಡಿತವಾಗಿಯೂ ಹಿಟ್ಲರ್ ಸತ್ತಿರುತ್ತಾನೆಂಬ ನಂಬಿಕೆಯೊಂದಿಗೆ, ಮುಂದಿನ ರಾಜಕೀಯ ಚಟುವಟಿಕೆಗಳಿಗಾಗಿ ಬರ್ಲಿನ್ ಗೆ ಹೊರಟು ಬಿಟ್ಟ, ಆದರೆ ಬದುಕುಳಿದ ಹಿಟ್ಲರ್ ಈ ಸೇಡಿಗಾಗೆ ನಾಲ್ಕೂವರೆ ಸಾವಿರ ಜನರ ಸಾವಿಗೆ ಆದೇಶಿಸಿದ. ಕೆಲವರು ಗುಂಡಿಗೆ ಬಲಿಯಾದರೆ, ಮತ್ತೆ ಕೆಲವರು ನಿರಾಹಾರದಿಂದ, ಮತ್ತೆ ಕೆಲವರು ನಿಧಾನವಾಗಿ ಕತ್ತು ಹಿಸುಕುವ ಯಂತ್ರ ಗೆರೇಟ್ ವೀಲ್ ಗೆ ಬಲಿಯಾದರು. ಬರ್ಲಿನ್ ನಲ್ಲಿ ಬಂಧನಕ್ಕೊಳಗಾದ ಮೂವತ್ತಾರು ವರ್ಷದ ಸ್ಟಾಫ಼ೆನ್ ವಿಚಾರಣೆಯಲ್ಲಿ ಇದೆಲ್ಲವೂ ತನ್ನೊಬ್ಬನದೇ ತಂತ್ರ. ಮರಣದಂಡನೆಯಾಗುವುದಾದರೆ ತನಗೊಬ್ಬನಿಗೇ ಆಗಬೇಕು ಎಂದು ವಾದಿಸಿದ. ಆದರೆ ಅವನ ಜೊತೆ ಇನ್ನೂ ನಾಲ್ವರಿಗೆ ಗುಂಡಿನಿಂದ ಸಾಯುವ ಆದೇಶ ದೊರೆಯಿತು . ಈ ಆದೇಶ ನೀಡಿದ್ದು, ಆತನ ಜೊತೆ ಈ ಸಂಚಿನಲ್ಲಿ ಭಾಗಿಯಾಗಿದ್ದ ಫ಼್ರಾಮ್ ಎಂಬ ಕರ್ನಲ್. ಅದರಲ್ಲೂ ತನ್ನ ಹೆಸರು ಹೊರಗೆ ಬರಬಾರದೆಂಬ ಭಯದಿಂದ ಈ ಸಂಚಿನಲ್ಲಿ ಸಿಕ್ಕಿಕೊಂಡವರನ್ನು ಕೂಡಲೇ ಕೊಲ್ಲಲು ಆದೇಶಿಸಿದ. ಆದರೆ ಸ್ಟಾಫೆನ್ ಬರ್ಗ್ ನನ್ನು ತನ್ನ ಸಮವಸ್ತ್ರ ಮತ್ತು ಪದಕಗಳೊಂದಿಗೆ ಸಮಾಧಿ ಮಾಡಲು ಆದೇಶಿಸಿದ್ದ. ಮರುದಿನ ಹಿಟ್ಲರನ ವಿಶೇಷ ಪಡೆ ಗೆಸ್ಟಾಪೋ ಅವನ ಶವವನ್ನು ಮೇಲೆತ್ತಿ ಸಮವಸ್ತ್ರ ಮತ್ತು ಪದಕಗಳನ್ನು ಬಿಚ್ಚಿ ಅವನನ್ನು ಮತ್ತೆ ಹೂಳಿತು. ಫ಼್ರಾಮ್ ಸಂಚಿನಲ್ಲಿ ತನ್ನ ಪಾತ್ರವನ್ನು ಯಶಸ್ವಿಯಾಗಿ ಮುಚ್ಚಿಹಾಕಿದ್ದೇನೆನ್ನುವ ಭ್ರಮೆಯಲ್ಲಿದ್ದರೂ, ಎಸೆಸ್ಸ್ ಪಡೆ ಆತನನ್ನುಬಂಧಿಸಿ, ಸಂಚನ್ನು ಮುಂಗಾಣಲು ವಿಫಲನಾದ ಅರೋಪದ ಮೇಲೆ ಅವನನ್ನು ಮಾರ್ಚಿ ೧೯೪೫ರಲ್ಲಿ ಗಲ್ಲಿಗೇರಿಸಿತು ..!

ಸಾಯುವ ಮುನ್ನ ಶಾಂತಿಯಿಂದ ಸ್ಟಾಫೆನ್ "Es lebe unser heiliges Deutschland!" ಎಂದು ಹೇಳಿದ ಎನ್ನುತ್ತಾರೆ ಅಂದರೆ "ಪವಿತ್ರ ಜರ್ಮನಿ ಚಿರಕಾಲ ಬಾಳಲಿ" ಎಂದರ್ಥ. ಇನ್ನೂ ಕೆಲವರು ಆತನ ಕಡೆಯ ಮಾತುಗಳು "Es lebe das geheime Deutschland!" ಎನ್ನುತ್ತರೆ. ಅಂದರೆ "ಗುಪ್ತ ಜರ್ಮನಿ ಚಿರಕಾಲ ಬಾಳಲಿ" ಎಂದರ್ಥ.

ಯುದ್ದದ ತರುವಾಯು ಈ ವಿಷಯವನ್ನಾಧರಿಸಿ ಹಲವಾರು ಚಲನಚಿತ್ರಗಳೂ, ಟಿವಿ ಸೀರಿಯಲ್ಲುಗಳೂ ಬಂದಿವೆ. Valkyrie ವಲ್ಕಿರಿ ಅವುಗಳಲ್ಲಿ ತೀರಾ ಇತ್ತೀಚಿಗೆ ೨೦೦೮ರಲ್ಲಿ ಬಿಡುಗಡೆಯಾದ ಚಿತ್ರ ಇದರಲ್ಲಿ ಟಾಮ್ ಕ್ರೂಸ್ ಸ್ಟಾಫ಼ೆನ್ ಬರ್ಗ್ ನ ಪಾತ್ರ ಮಾಡಿದ್ದಾನೆ. ಜುಲೈ ಇಪ್ಪತ್ತರ ಷಡ್ಯಂತ್ರ ಮನುಷ್ಯನ ಅದಮ್ಯ ವಿಶ್ವಾಸ ಮತ್ತು ಹೋರಾಟಕ್ಕೆ ಮತ್ತೊಂದು ನಿದರ್ಶನ. ಇಲ್ಲಿ ಸ್ಟಾಫ಼ೆನ್ ಬರ್ಗ ಅಣ್ಣ, ಹೆಂಡತಿ ಮತ್ತು ಇನ್ನೂ ಅನೇಕ ಹೀರೋಗಳಿದ್ದಾರೆ. ಆದರೆ ನಾನಿಲ್ಲಿ ಹೇಳುತ್ತಿರುವುದು ಸ್ಟಾಫ಼ೆನ್ ಬರ್ಗ್ ಬಗ್ಗೆ ಮಾತ್ರ..!


ಚಿತ್ರಗಳು ನನ್ನವೇ
ಆಧಾರಗಳು ಮತ್ತು ಹೆಚ್ಚಿನ ಮಾಹಿತಿಗೆ :

http://en.wikipedia.org/wiki/Claus_Schenk_Graf_von_Stauffenberg
http://en.wikipedia.org/wiki/Valkyrie_(film)
http://www.historylearningsite.co.uk/july_bomb_plot.htm
http://en.wikipedia.org/wiki/Adolf_Hitler
http://en.wikipedia.org/wiki/July_20_plot
http://en.wikipedia.org/wiki/Reichswehreid
http://www.stauffenbergthemovie.com/history_july20.html

Wednesday, August 18, 2010

ಪ್ರಪಂಚದ ಮೊದಲನೇ ಟಿವಿ ಗೋಪುರ !

ಎರಡನೇ ಮಹಾಯುದ್ದದ ನಂತರ ಜರ್ಮನಿ ನಾಲ್ಕು ಭಾಗಗಳನ್ನಾಗಿ ಸೀಳಿ ಇಂಗ್ಲೆಂಡ್ ಅಮೆರಿಕಾ ಫ಼್ರಾನ್ಸ್ ಮತ್ತು ರಷಿಯಾಗಳು ಹಂಚಿಕೊಂಡವಷ್ಟೇ.. ಮತ್ತೇ ಇಂಗ್ಲೆಂಡ್, ಫ಼್ರಾನ್ಸ್ ಮತ್ತು ಅಮೆರಿಕಾಗಳು ತಮ್ಮ ವಶದಲ್ಲಿದ್ದ ಭಾಗಗಳನ್ನು ಸೇರಿಸಿ, ಗಣತಂತ್ರ ವ್ಯವಸ್ಥೆಯೊಂದಿಗೆ ಪಶ್ಚಿಮ ಜರ್ಮನಿಯನ್ನು ಸ್ವತಂತ್ರಗೊಳಿಸಿದವು. ಆದರೆ ಪೂರ್ವ ಜರ್ಮನಿ ರಶಿಯಾದ ಕಮ್ಯುನಿಸ್ಟ್ ಹಿಡಿತದಲ್ಲೇ ಇತ್ತು.

ಗಣತಂತ್ರದ ಜೊತೆಗೇ ಕಾಲಿಟ್ಟ ಬಂಡವಾಳಶಾಹಿ ವ್ಯವಸ್ಥೆ ಮತ್ತು ಜರ್ಮನಿಗರ ಮತ್ತೊಂದು ಮುಖವಾದ ಕ್ರಿಯಾಶೀಲತೆಯ ಕುರುಹಾಗಿ ಪಶ್ಚಿಮ ಜರ್ಮನಿಯ ಬಾದೆನ್-ವುರ್ಟನ್ ಬರ್ಗ್ ರಾಜ್ಯದ ರಾಜಧಾನಿ ಸ್ಟುಟ್ಗಾರ್ಟ್ ನಲ್ಲಿ ಪ್ರಪಂಚದ ಮೊದಲ ಟೆಲಿವಿಶನ್ ಟವರ್ ೧೯೫೬ರಲ್ಲಿ ಸ್ಥಾಪಿಸಲ್ಪಟ್ಟಿತು. ೨೩೦ ಮೀಟರ್ ಎತ್ತರದ ಈ ಕಟ್ಟಡ ತನ್ನ ರಚನೆಯ ವಿನೂತನ ತಂತ್ರಜ್ಞಾನದೊಂದಿಗೆ ಜಗತ್ತಿನ ಹಲವಾರು ಈ ರೀತಿಯ ಕಟ್ಟಡಗಳಿಗೆ ಮಾದರಿಯಾಯಿತು.



ಕಟ್ಟಡಕ್ಕೆ ಹೋಗುವ ದಾರಿ ಮರಗಳಿಂದ ಕೂಡಿ ಕಾಡಿನ ಮಧ್ಯೆ ನಡೆದು ಬಂದ ಅನುಭವ ನೀಡುತ್ತದೆ. ಕೆಳಗೆ ಮಕ್ಕಳಿಗೆ ಆಟವಾಡಲು ವಿವಿಧ ಆಟಗಳಿವೆ. ಆದರಲ್ಲಿ ನಾಣ್ಯ ಹಾಕಿ ಚಲಾಯಿಸುವ ಆಟಿಕೆ ಕ್ರೇನ್ ಕೂಡಾ ಒಂದು.



ಈ ಕಟ್ಟಡದಲ್ಲಿ ನೂರೈವತ್ತು ಮೀಟರುಗಳವರೆಗೂ ಮೇಲೆ ಹೋಗಲು ಲಿಫ್ಟ್ ವ್ಯವಸ್ಥೆಯಿದೆ. ೪೬ ಸೆಕೆಂಡುಗಳಲ್ಲಿ ಮೇಲೆ ಕರೆದೊಯ್ಯುವ ಈ ಲಿಫ್ಟ್ ೧೯೫೪ರಲ್ಲಿ ಕಟ್ಟಡದೊಂದಿಗೇ ಸ್ಥಾಪಿತವಾಯಿತು. ೨೦೦೩ರಲ್ಲಿ ಸಂಪೂರ್ಣವಾಗಿ ಆಧುನೀಕೃತವಾಯಿತು.



ಮೇಲೆ ಒಂದು ಮಹಡಿಯಲ್ಲಿ ಹೋಟೆಲು ಮತ್ತೊಂದರಲ್ಲಿ ಕಾಫೀ ಶಾಪ್ ಇದೆ. ಇಲ್ಲಿ ಕುಳಿತು ಹೊರಗಡೆಯ ವಿಹಂಗಮ ನೋಟವನ್ನು ಸವಿಯುತ್ತಾ ಕಾಫೀ ಕುಡಿಯುವುದು ಚೆನ್ನ. ಜೊತೆಯಲ್ಲಿ ಆತ್ಮೀಯರಿದ್ದರೆ ಇನ್ನೂ ಚೆನ್ನ. ಇದಕ್ಕಿಂತಲೂ ಮೇಲೆ ನಿಂತು ನೋಡಲು ಅನುವಾಗುವಂತೆ ಬಾಲ್ಕನಿ ವ್ಯವಸ್ಥೆಯಿದೆ. ಇಲ್ಲೊಂದು ಪುಟ್ಟ ಯಂತ್ರವಿದೆ. ಅದರಲ್ಲಿ ಒಂದು ಯುರೋ ನಾಣ್ಯ ಮತ್ತು ಐದು ಸೆಂಟಿನ ನಾಣ್ಯಗಳನ್ನು ಹಾಕಿ, ಹಿಡಿಕೆ ತಿರುಗಿಸಿದರೆ, ಒಂದು ಯೂರೋ ನಾಣ್ಯವನ್ನು ನುಂಗಿಕೊಂಡು, ಅರ್ಧ ಸೆಂಟಿನ ನಾಣ್ಯವನ್ನು ಒತ್ತಿ ಮೊಟ್ಟೆಯಾಕಾರದಲ್ಲಿ ಮಾಡಿ, ಅದರಲ್ಲಿ ಟಿವಿ ಗೋಪುರದ ಚಿತ್ರವನ್ನು ಟಂಕಿಸಿ ಕೊಡುತ್ತದೆ. ಇನ್ನೂ ಒಂದು ಮಹಡಿ ಮೇಲಕ್ಕೆ ಮೆಟ್ಟಿಲು ಹತ್ತಿ ಹೋದರೆ ಇಲ್ಲಿ ಕಟ್ಟಡದ ಸುತ್ತಾ ಸುಮಾರು ೫೦ ಕಿಮೀ ವರೆಗಿನ ದೃಶ್ಯಗಳನ್ನು ಕಾಣಬಹುದು. ಜೊತೆಗೆ ನಾಣ್ಯ ಹಾಕಿ ನೋಡಬಹುದಾದ ಟೆಲಿಸ್ಕೋಪ್ ಕೂಡಾ ಇದೆ. ಮತ್ತು ಕಂಚಿನಲ್ಲಿ ಆ ದಿಕ್ಕಿನ ಭೂಕೃತಿಯನ್ನು ರಚಿಸಿ ನಮಗೆ ಕಾಣಬಹುದಾದ ಕಟ್ಟಡಗಳ ವಿವರಗಳನ್ನು ಬರೆದಿದ್ದಾರೆ. .



ಬಂಡವಾಳಶಾಹಿ ಮತ್ತು ಕಮ್ಯುನಿಸ್ಟ್ ವ್ಯವಸ್ಥೆಗಳ ಬೆಳವಣಿಗೆಯ ಪರಸ್ಪರ ಅವಲೋಕನಕ್ಕೆ ಪೂರ್ವ ಮತ್ತು ಪಶ್ಚಿಮ ಜರ್ಮನಿಗಳ ಬೆಳವಣಿಗೆ ಒಂದು ಒಳ್ಳೆಯ ಉದಾಹರಣೆಯಾಗಬಲ್ಲುದು. ಅಂದಹಾಗೆ ಲಿಫ಼್ಟ್ ನಲ್ಲಿ ಮೇಲೆ ಹೋಗಲು ಐದು ಯೂರೋಗಳ ಶುಲ್ಕ. ಲಿಫ್ಟ್ ನಲ್ಲಿದ್ದಾಗ ನಾನು ಪ್ರದರ್ಶಿಸಿದ ನನ್ನ ವಿಕಿಪೀಡಿಯಾ ಅಧಾರಿತ ಟಿವಿ ಟವರ್ ನ ಬಗೆಗಿನ ಜ್ಞಾನಕ್ಕೆ ಮನಸೋತ ಲಿಫ಼್ಟ್ ಆಪರೇಟರ್ ನನಗಾಗಿ ಒಂದು ವಿಶಿಷ್ಟ ಬ್ರೋಚರ್ ಅನ್ನೇ ಉಡುಗೊರೆಯಾಗಿತ್ತ! ನನಗೆ ಅದಕ್ಕಿಂತಲೂ ಅಚ್ಚರಿಯ ಸಂಗತಿ ಎಂದರೆ ಅವನು ಶುಧ್ಧ ಇಂಗ್ಲಿಷ್ ಮಾತಾಡುತ್ತಿದ್ದುದು.

ಅಂದಹಾಗೇ ಇಲ್ಲೂ ಗೋಡೆ ಬರಹ ಕಣ್ಣಿಗೆ ಬಿದ್ದದ್ದು ಅದಕ್ಕಿಂತಲೂ ಅಚ್ಚರಿ

Monday, August 16, 2010

sieve filtering Howto

STEP 1 Write a script as follows:

## test script to work on folders
require "fileinto";
if header :contains ["Received"] ["gmail.com"] {discard;} This line is to block gmail
if header :contains ["Received"] ["FALSE"] [".domain.A","Domain.B","Domain.C","Domain.D"] {discard;} ### this is supposedly block all the mails apart from our domain.A/B/C/D
save this as a file block_gmail

STEP 2

Login to seive shell and put the script

sieveshell --auth=manager --user=manager localhost
put scriptname
quit


STEP 3
cyradm -u manager localhost
mboxconfig shared/test_seive seive block_gmail

(for all shared folder)
mboxconfig shared/* seive block_gmail

info shared.somefolder

sources:
http://wiki.kolab.org/index.php/Filtering_Emails_on_the_Server
http://www.cmu.edu/computing/doc/email/sieve/developing.html
http://www.cs.cmu.edu/~help/mail_news/corvid/sieve_intro.html
http://wiki.bath.ac.uk/display/bucstech/Sieve+scripts


Currently stuck at :(
localhost> mboxcfg shared/test_seive seive block_gmail
mboxconfig: Permission denied

Saturday, July 24, 2010

Rudra will come

When the metal bird
Flys overs the town in night
Town looks with brightening light
Unveils like coal, Hot and red.
Veerabhadra’s walking bed

This glow is everywhere
To end the dark around
Death meets night
When floods Bright

So bright like shining fire
Ah, It was the Parvati’s pyre.
Or was it the eternal fire
Burn to test Sita’s pure

This flood of light causes fear
Even To the dark cloud in high sphere
It is Himavantha’s eternal fire

To stop artificial brightness
From killing the light of own(inside)
Rudra will come
He pours the blood rain
To extinct the killer fire

(Translation of my own poem from kannada)

Monday, July 19, 2010

ಹಬೆನಾರೊ

ಮೊನ್ನೆ ಮಧ್ಯಾಹ್ನ ಗೆಳೆಯ ಮತ್ತು ಸಹೋದ್ಯೋಗಿ ಬ್ರಜೇಂದ್ರನ ಮನೆಗೆ ಹೋದಾಗ ಅವನು :ನಿನಗೊಂದು ವಿಶೇಷ ಕೊಡುಗೆಯಿದೆ." ಎಂದ
"ಏನಪ್ಪಾ ಅದು" ಅಂದೆ.
"ನಿನಗಾಗಿ ಇಂಡಿಯಾ ಸ್ಟೋರ್ ನಿಂದ ತಂದಿರುವೆ. ತಿನ್ನಲು ತಾಕತ್ತಿದೆಯಾ" ಅಂದ.
"ಅದೇನೋ ನೋಡೇ ಬಿಡೋಣ ವೆಂದು ನೋಡಿದರೆ ಅದು ಹೀಗೆ ಕಾಣುತ್ತಿತ್ತು. ಅದರಿಂದ ಒಂದು ತುಂಡು ಕತ್ತರಿಸಿ "ತಿಂದು ನೋಡು" ಎಂದು ಕೊಟ್ಟ.

ಬಾಯಿಗಿಟ್ಟು ಅಗಿದೆ.

ಅಬ್ಬಬ್ಬಾ ಒಂಥರ ಸಪ್ಪಗೆ ಶುರುವಾದ ರುಚಿ, ನಂತರ ಒಗೊರೊಗರಾಗಿ, ಆಮೇಲೆ ಖಾರವಾಗಿ ಮೈಯೆಲ್ಲಾ ವ್ಯಾಪಿಸಿತು. ಉರಿಗೆ ಎರಡೂ ಕಣ್ಣುಗಳಲ್ಲಿ ಮಾತ್ರವೇ ಏನು ಸರ್ವಾಂಗಗಳಲ್ಲಿಯೂ ನೀರು ಸೋರಲಾರಂಭಿಸಿತು.
"ಏನೋ ಅದು" ಎಂದೆ ಕೋಪದಿಂದಲ್ಲದಿದ್ದರೂ ಕಾರದಿಂದ ಕೆಂಪಾದ ಕಣ್ಣುಗಳಿಂದ.
"ರೆಡ್ ಸವೀನಾ ಹಬೆನಾರೊ" ಎಂದ

ನಮ್ಮ ಗುಂಟೂರು ಮೆಣಸಿನಕಾಯಿಗಿಂತಲೂ ಮೂರು ಪಟ್ಟು ಖಾರದ ಈ ಮೆಣಸಿನಕಾಯಿ ಮೆಕ್ಸಿಕನ್ ಮೂಲದ್ದು. ಸ್ಕೊವಿಲ್ಲೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಈ ಮೆಣಸಿನಕಾಯಿಯ ಖಾರವನ್ನು ಐದು ಲಕ್ಷದ ಎಂಬತ್ತು ಸಾವಿರ ಊನಿಟ್ಟುಗಳೆಂದು ಗುರುತಿಸುತ್ತಾರೆ. ನಮ್ಮದೇ ಅಸ್ಸಾಮಿನ ನಾಗ ಝಲೋಕಿಯ ಮೆಣಸಿನಕಾಯಿಯ ಸ್ಕೊವಿಲ್ಲೆ ಅಂಕಗಳು ಹತ್ತು ಲಕ್ಷ.

ಆದರೂ ಅದನ್ನು ಬಿಡದೆ, ನನಗೆ ಮೆಣಸಿನಕಾಯಿ ತಿನ್ನಿಸಿದ ಪಾಪಕ್ಕೆ ಪರಿಹಾರವಾಗಿ, ಎರಡೇ ಎರಡು ಹಬೆನಾರೋ ಹಾಕಿಸಿ, ಆಲೂ-ಬೈಂಗನ್ ಪಲ್ಯ, ಜೊತೆಗೆ ಪರೋಟ ಮಾಡಿಸಿ, ಗಡದ್ದಾಗಿ ಉಂಡು ಚೆನ್ನಾಗಿ ನೀರು ಕುಡಿದು ಸುಧಾರಿಸಿಕೊಂಡೆ

Friday, July 16, 2010

ರಾಮಧಾನ್ಯದ ದೋಸೆ.

ರಾಮಧಾನ್ಯ ಚರಿತೆ ಎನ್ನುವ ಪದಪುಂಜ ವನ್ನು ಮೊದಲ ಬಾರಿಗೆ ಓದಿದಾಗ ಅದು ಮುದ್ರಾರಾಕ್ಷಸನ ದೋಷವಿರಬೇಕೆಂದುಕೊಂಡಿದ್ದೆ. ಅದನ್ನು ನಾನಿದುವರೆಗೂ ಓದಿಲ್ಲ. ಆದರೆ ಯಾವುದೋ ಸಮಯದಲ್ಲಿ ಆಗಿನ್ನೂ ಹರಿಕಥೆಗಳು ಸಾಕಷ್ಟು ಪ್ರಚಲಿತದಲ್ಲಿದ್ದ ಕಾಲದಲ್ಲಿ, ಹರಿಕಥೆಯೊಂದರಲ್ಲಿ ರಾಮಧಾನ್ಯದ ಕಥೆ ಕೇಳಿದ ಮೇಲೆ ಭಲಾ ಭಲಾ ರಾಮಧಾನ್ಯವೇ ಎನಿಸಿತು.

ಕನಕದಾಸರ ಈ ಕಥೆಯಲ್ಲಿ ಅಕ್ಕಿಗೂ ರಾಗಿಗೂ ಜಗಳವಾಗುವ ಪ್ರಸಂಗ, ನಾನು ಮೇಲು ನಾನು ಮೇಲೆಂದು ಎರಡೂ ಧಾನ್ಯಗಳೂ ಜಗಳವಾಡುತ್ತ ಜಗಳ ಬಿಡಿಸಲು ರಾಮನಲ್ಲಿಗೆ ಹೋಗುತ್ತವೆ. ತಮ್ಮ ಗುಣಾಗುಣಗಳನ್ನು ವರ್ಣಿಸಿಕೊಂಡ ಅವುಗಳ ಜಗಳ ಬಿಡಿಸಲು ರಾಮನಂತ ರಾಮಚಂದ್ರನಿಗೂ ತಬ್ಬಿಬ್ಬಾಗುತ್ತದೆ. ಕಡೆಗೆ ಎಷ್ಟೇ ಗುಣಾತಿಶಯಗಳಿದ್ದರೂ, ಕಾಲನ ಹೊಡೆತಕ್ಕೆ ವಿಧಿಯ ಬಡಿತಕ್ಕೆ ಸಿಕ್ಕೂ ತನ್ನ ಗುಣಗಳನ್ನು ಉಳಿಸಿಕೊಳ್ಳಬಲ್ಲ ಶಕ್ತಿ ಇರುವ ಧಾನ್ಯವೇ ಲೇಸಾಗಿರುವುದರಿಂದ, ತನ್ನ ಪರೀಕ್ಷೆಗೆ ಎರಡೂ ಧಾನ್ಯಗಳೂ ಒಳಪಡಬೇಕೆಂದು ರಾಮ ಆಙ್ಞೆ ಮಾಡುತ್ತಾನೆ. ಅದೆಂತಹ ಪರೀಕ್ಷೆ? ಗುಂಡಿಯೊಂದರಲ್ಲಿ ಎರಡೂ ಧಾನ್ಯಗಳನ್ನು ಬುಟ್ಟಿಯಲ್ಲಿ ಹಾಕಿ ಹೂತಿಟ್ಟು ವರುಷದ ನಂತರ ತೆಗೆದು ಪರೀಕ್ಷಿಸುವ ಪರೀಕ್ಷೆ. ಅದರಂತೆ ಎರಡೂ ಧಾನ್ಯಗಳನ್ನೂ ಬುಟ್ಟಿಯೊಂದರಲ್ಲಿ ಹಾಕಿ, ಗುಣಿ ತೋಡಿ ಮುಚ್ಚಲಾಗುತ್ತದೆ. ವರುಷದ ಬಳಿಕ ಗುಂಡಿ ತೆರೆದು ಬುಟ್ಟಿ ಬಿಚ್ಚಿ ನೋಡಿದರೆ, ಅಕ್ಕಿ ಮುಗ್ಗುಲಾಗಿರುತ್ತದೆ. ರಾಗಿ ಎಂದಿನಂತೆ ತನ್ನ ಸಹಜ ಗುಣದಿಂದಿರುತ್ತದೆ. ಇದನ್ನು ನೋಡಿ ರಾಮಚಂದ್ರ ರಾಗಿಯೇ ಮೇಲೆಂದು ಇನ್ನು ಅದನ್ನು ರಾಮಧಾನ್ಯವೆಂದು ಕರೆಯತಕ್ಕದ್ದೆಂದು ಆಜ್ಞೆ ಮಾಡುತ್ತಾನೆ.

ನಮ್ಮ ಮನೆಯಲ್ಲಿ ನಾನು ಚಿಕ್ಕವನಾಗಿದ್ದಾಗಿನ ಊಟದ ಮೆನುವಿನಲ್ಲಿ ರಾಗಿ ಮುದ್ದೆ ಕಡ್ಡಾಯ. ನಾನು ಮೈಸೂರಿನಲ್ಲಿದ್ದರಿಂದ ನಮ್ಮ ರಾಗಿ ಮುದ್ದೆಗೂ ನಾಗರೀಕತೆ ಬಂದು ಬಿಟ್ಟಿತ್ತು. ಮೃದುವಾಗಿ ಮುರಿಯಬಹುದಾದ ನನ್ನ ಅಂಗೈ ತುಂಬುವಂತಹ ಒಂದು ಉಂಡೆ. ಜೊತೆಗೆ ಯಾವ ಸಾರದರೇನು? ಮುದ್ದೆಯ ಜೊತೆಗೆ ಸಾರು ಎನ್ನುವ ವಸ್ತು ಇದ್ದರೆ ಅದರಲ್ಲಿ ಬಾಯಿ ರುಚಿ ತರಿಸುವ ಉಪ್ಪು ಕಾರ ಹುಳಿಗಳಿದ್ದರೆ, ಮುದ್ದೆಯನು ಮೆಲ್ಲಲ್ಲು ಭಯವೇ ಇಲ್ಲ. ಬೇಸಿಗೆಯ ರಜೆಗೆ ನಮ್ಮ ತಾತನ ಊರಿಗೆ ಹೋದರೆ ಅಲ್ಲಿಯ ಮುದ್ದೆಗೂ ನಮ್ಮ ಮುದ್ದೆಗೂ ಅಜಗಜಾಂತರ. ನಮ್ಮ ಮನೆಯ ರಾಗಿ ಮುದ್ದೆಯನ್ನು ಚಾಮುಂಡಿ ಬೆಟ್ಟಕ್ಕೆ ಹೋಲಿಸಿದರೆ ಈ ಮುದ್ದೆ ಹಿಮಾಲಯ ಎನ್ನಬಹುದು ಗಾತ್ರದಲ್ಲಿ, ಕಲ್ಲಿಗಿಂತಲೂ ಗಟ್ಟಿ ಇದು. ಗೋಡೆಗೆ ಎಸೆದರೆ ಕಾರ್ಕ್ ಬಾಲಿನಂತೆ ಹಿಂದೆ ಹಾರಿ ಬರುವಂತದ್ದು. ಬೆಳಿಗ್ಗಿನ ನಮ್ಮ ತಿಂಡಿಗೆ ಉಪ್ಪಿಟ್ಟು. ಅಂದರೆ ಉಪ್ಪು+ ಹಿಟ್ಟು ಜೊತೆಗೆ ಗಟ್ಟಿ ಮೊಸರು. ಆ ಹಿಟ್ಟಿನ್ನು ತಿಂದರೆ , "ಹಿಟ್ಟಂ ತಿಂದ ದಿಟ್ಟಂ ಬೆಟ್ಟಂ ಕಿತ್ತಿಟ್ಟಂ" ಎನ್ನುವ ಮಾತು ನಿಜವೆನ್ನುವ ಅರಿವು ಯಾರಿಗಾದರೂ ಆಗುತ್ತದೆ.

ಇಷ್ಟೆಲ್ಲಾ ಪೀಠಿಕೆ ಹಾಕಿ ರಾಗಿಯ ಕತೆ ಹೇಳಿದ್ದಕ್ಕೆ ಕಾರಣವಿದೆ. ಮದುವೆಯಾದ ಮೇಲೆ ನನ್ನ ಮನೆಯಲ್ಲಿ ರಾಗಿ ಮುದ್ದೆ ಸ್ವಲ್ಪ ಅಪರೂಪವಾಗತೊಡಗಿತು. ಈ ಬಗ್ಗೆ ನಮ್ಮಾಕೆಯೊಂದಿಗೆ ಒಂದೆರಡು ಮಾತುಗಳೂ ನಡೆದವೆನ್ನಿ. ಶ್ರೀಮತಿಯ ಮಾತಿನಂತೆ ರಾಗಿ ಮುದ್ದೆ ಮಾಡುವುದು ಶ್ರಮದಾಯಕವಾದ ಕೆಲಸ. ಅನ್ನ ಮಾಡುವುದೋ ಬಹು ಸುಲಭ. ಒಲೆ ಹತ್ತಿಸಿ(ಮರೆಯದೆ) ಕುಕ್ಕರಿನಲ್ಲಿ ಅಕ್ಕಿ ನೀರು ಇಟ್ಟು ಬಿಟ್ಟರೆ ಒಂದು ಸಿಳ್ಳೆಯಾಗುವ ಹೊತ್ತಿಗೆ ಒಲೆ ಆರಿಸಿದರೆ ಸಾಕು. ಮುದ್ದೆ ಮಾಡಲು, ನೀರು ಕಾದಿದೆಯಾ ನೋಡಬೇಕು. ಸರಿಯಾಗಿ ಕಾದಮೇಲೆ ಹಿಟ್ಟು ಸುರಿಯಬೇಕು. ಸಮಾ ಇರುವಂತೆ ಕಲಕಬೇಕು. ಮಧ್ಯೆ ಹಿಟ್ಟು ಗಂಟಾಗದಂತೆ ಚುರುಕಾಗಿ ಕೈ ತಿರುಗಿಸಬೇಕು. ಅದು ಚೆನ್ನಾಗಿ ಬೇಯುವವರೆಗೂ ಕಲಸುತ್ತಲೇ ಇರಬೇಕು. ಬೆಂದು ಹದಕ್ಕೆ ಬಂದಾಗ ಕೆಳಗಿಳಿಸಿ ತಿರುವಿ ಮುದ್ದೆ ಕಟ್ಟಬೇಕು. ನೀರು ಹೆಚ್ಚಾದರೆ ಮುದ್ದೆ ಕಟ್ಟಲು ಆಗುವುದಿಲ್ಲ. ಕಡಿಮೆಯಾದರೆ ಕಲ್ಲಿಗಿಂತಲೂ ಗಟ್ಟಿ. ಅಬ್ಬಾಬ್ಬಾ ಎಷ್ಟೊಂದು ರೇಜಿಗೆ. ಎಂದಾಕೆಯ ಮಾತು ಕೇಳಿ ನಾನು ಕಡುಕೋಪದಿಂದ ಅನ್ನ ತಿಂದು ಬೊಜ್ಜು ಬೆಳೆದು ನಾನು ಬೇಗ ಸಾಯುತ್ತೇನೆ ಎನ್ನುವ ಮಂತ್ರ ಪಠಿಸಿ, ವಾರಕ್ಕೆ ಎರಡು ಬಾರಿ ಮುದ್ದೆ ನನ್ನ ಊಟದ ಮೆನುವಿನಲ್ಲಿ ಸೇರುವಂತೆ ಮಾಡಿದ್ದೆ.

ಚಿಕ್ಕಂದಿನಿಂದ ಮುದ್ದೆ ತಿಂದುಬೆಳೆದ ನನಗೆ ನನ್ನ ತಾಯಿ, ಅಕ್ಕ, ಅಜ್ಜಿ, ಸೋದರತ್ತೆಯರು ಯಾವುದೇ ಸದ್ದಿಲ್ಲದೆ ಮುದ್ದೆ ಮಾಡಿಡುತ್ತಿದ್ದುದ್ದನ್ನು ಕಂಡಿದ್ದ ನನಗೆ ಈ ನೆವ ಸ್ವಲ್ಪ ಅತಿರೇಕದ್ದೇ ಅನಿಸಿತ್ತು. ಈ ಸಿಟ್ಟನ್ನು ಹೊಟ್ಟೆಯಲ್ಲಿಟ್ಟುಕೊಂಡೇ ಮೊನ್ನೆ ಜರ್ಮನಿಗೆ ಹೊರಡುವ ಮುನ್ನ ಮನೆಯಲ್ಲಿ ಘೋಷಿಸಿದೆ.

"ನನ್ನ ಜೊತೆಗೆ ಸ್ವಲ್ಪ ರಾಗಿ ಹಿಟ್ಟು ತಗೊಂಡು ಹೋಗ್ತೀನಿ. ಅಲ್ಲಿ ನಾನೇ ಮುದ್ದೆ ಮಾಡಿಕೊಂಡು ತಿಂತೀನಿ"
ನನ್ನ ಹೆಂಡತಿ ಇದೇನು ಹೊಸ ಅವತಾರ ಎನ್ನುವಂತೆ ನನ್ನೆಡೆಗೆ ನೋಡಿದಳು. ನಮ್ಮಮ್ಮ " ನಿನಗೆ ಅಡಿಗೆ ಮಾಡೇ ಗೊತ್ತಿಲ್ಲ, ಇನ್ನು ಮುದ್ದೆ ಮಾಡ್ತೀಯಾ, ಸುಮ್ಮನೆ ಸ್ವಲ್ಪ ಅಕ್ಕಿ ಜೊತೆಗೆ ಹುಳಿಯನ್ನದ ಗೊಜ್ಜು, ಕೆಂಪುಕಾರ ನಿಪ್ಪಟ್ಟು ಕೋಡುಬಳೆ ಇದನ್ನ ತಗೊಂಡು ಹೋಗು" ಎಂದರು
"ಇಲ್ಲ ನಾನೇನು ಮುದ್ದೆ ಮಾಡಿಲ್ಲವಾ, ರಾಗಿ ಹಿಟ್ಟು, ಮುದ್ದೆ ಕೋಲು ತಗೊಂಡು ಹೋಗ್ತಿನಿ. ಅಲ್ಲಿ ಊಟ ಹೇಗಿರುತ್ತೋ ಏನೋ, ಮುದ್ದೆ ಜೊತೆಗೆ ಎರಡು ಮೆಣಸಿನಕಾಯಿ, ಒಂದು ಈರುಳ್ಳಿ ಸ್ವಲ್ಪ ಉಪ್ಪು ಇದ್ದರೆ ಸಾಕು" ಎಂದೆ.
"ಮುದ್ದೆ ಕೋಲನ್ನು ಇಲ್ಲಿಂದ ಜರ್ಮನಿಯವರೆಗೆ ತಗೊಂಡು ಹೋಗ್ತೀರಾ?" ಎಂದಳು ನನ್ನ ಅರ್ಧಾಂಗಿ. ಅದು ನನ್ನ ತಾಕತ್ತನ್ನು ಉಚಾಯಿಸಿಯೇ ಆಡುತ್ತಿರುವ ಮಾತು ಎಂದೇ ತಿಳಿದ ನಾನು "ನೋಡುತ್ತಿರು" ಎಂದೆ. ಕಡೆಗೆ ಜರ್ಮನಿಗೆ ಹೊರಡುವವರೆಗೂ ಮುದ್ದೆ ಕೋಲನ್ನು ಹೊಂದಿಸಲು ಆಗಲೇ ಇಲ್ಲ. ಅಥವಾ ಇದರಲ್ಲಿ ನಮ್ಮ ಯಜಮಾನಿತಿಯ ಪಾತ್ರವೂ ಇದೆಯೋ ನನಗೆ ತಿಳಿಯಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮೆಣಸಿನಕಾಯಿ ಜರ್ಮನಿಯಲ್ಲಿ ಸಿಗುವುದು ಎಷ್ಟು ಕಷ್ಟ ಎಂದು ನನಗಿಲ್ಲಿ ಬಂದ ಮೇಲೆ ಅರಿವಾಗಿದ್ದು. ನಾಲ್ಕು ಬೆಳ್ಳುಳ್ಳಿಗೆ ನಾಲ್ಕು ಯೂರೋ ಕೊಟ್ಟು ಇದುವರೆಗೂ ನಾನು ಖರೀದಿಸಲು ಹೋಗಲೇ ಇಲ್ಲ. ಮೊದಲೇ ರುಚಿಕಟ್ಟಾಗಿ ಸರ್ವಭಕ್ಷಣೆ ಮಾಡುವ ನನಗೆ ಇಲ್ಲಿನ ಖಾದ್ಯಗಳ ರುಚಿ ನೋಡುವಲ್ಲಿ ಹೊಟ್ಟೆ ಕೆಡದೇ ಇರುವುದೇ ಪುಣ್ಯ ಎನ್ನುವ ಸ್ಥಿತಿ ತಲುಪಿ ಅಡುಗೆ ಮಾಡುವ ಮಾತು ದೂರವೇ ಉಳಿಯಿತು. ಆದರೆ ಹಠ ಹಿಡಿದು ಬ್ಯಾಗಿಗೆ ಸೇರಿಸಿದ್ದ ರಾಗಿ ಹಿಟ್ಟು ನನ್ನಭಿಮಾನವನ್ನು ಕೆಣಕುತ್ತಿತ್ತು.

ಒಂದು ದಿನ ನಿರ್ಧಾರ ಮಾಡಿಯೇ ಬಿಟ್ಟೆ. "ಮುದ್ದೆ ಮಾಡದಿದ್ದರೆ ಬೇಡ, ರಾಗಿ ಹಿಟ್ಟಿನಲ್ಲಿ ದೋಸೆ ಮಾಡಿಕೊಂಡು ತಿನ್ನುತ್ತೇನೆ" ಅಂತ.

ಇನ್ನು ದೋಸೆಯ ವಿಷಯಕ್ಕೆ ಬಂದರೆ, ಬೆಂಗಳೂರಿಗರಿಗೆ ಎಂ.ಟಿ.ಆರ್ ದೋಸೆ, ವಿದ್ಯಾರ್ಥಿ ಭವನ್ ದೋಸೆ, ದಾವಣಗೆರೆ ಬೆಣ್ಣೆ ದೋಸೆಗಳು ಪರಿಚಿತ, ಮಂಗಳೂರಿಗರ ನೀರು ದೋಸೆ ಜಗತ್ಪ್ರಸಿದ್ದ. ದೆಹಲಿಯ ಹೋಟೆಲಿನಲ್ಲಿ ಕೆಟ್ಟ ಮಸಾಲೆದೋಸೆಗೆ ಮೈಸೂರುದೋಸೆ ಎಂದು ಎಂಬತ್ತು ರೂಪಾಯಿಗಳನ್ನು ತೆತ್ತಿದ್ದು ನನಗಿನ್ನೂ ನೆನಪಿದೆ. ಮೈಸೂರಿನ ದೋಸೆಗಳ ವೈಶಿಷ್ಟ್ಯವೇ ಬೇರೆ. ಅಲ್ಲಿ ಸೆಟ್ ದೋಸೆಗೆ ನಾಲ್ಕು ದೋಸೆ. ಅರ್ಧ ಸೆಟ್ಟು ಇನ್ನೂ ಸಿಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಅರ್ದ ಸೆಟ್ಟು ದಿನವೆಲ್ಲಾ ಹೊಟ್ಟೆ ತುಂಬಿಸಿದೆ. ಒಮ್ಮೆ ಅಗ್ರಹಾರದ ಗುರುಪ್ರಸಾದ್ ಹೋಟೆಲಿನಲ್ಲಿ ಹಠ ತೊಟ್ಟು ಎಂಟು ಸೆಟ್ ಮಸಾಲೆ ಕಬಳಿಸಿದ್ದು ನನಗಿನ್ನೂ ನೆನಪಿದೆ. ರಮಾವಿಲಾಸ ರಸ್ತೆಯ ಸ್ವಾಗತ್ ಹೋಟೆಲಿನಲ್ಲಿ (ಈಗಿಲ್ಲ) ಎರಡು ಈರುಳ್ಳಿ ದೋಸೆಗೆ ಎರಡು ಬಕೆಟ್ ಚಟ್ನಿ ತಿನ್ನುತ್ತಿದ್ದ ಕಾಲವೊಂದಿತ್ತು. ರಮ್ಯಾ ಹೋಟೆಲಿನ ದೋಸೆಗೆ ಆಗ್ಗೆಯೇ ಜಗತ್ಪ್ರಸಿದ್ದ. ಇನ್ನು ಮೈಸೂರಿನ ಕೀರ್ತಿಗೆ ಕಳಶಪ್ರಾಯವಿಟ್ಟಂತೆ ಮೈಲಾರಿ ಹೋಟೆಲಿನ ದೋಸೆ, ಅಗ್ರಹಾರದ ಮನೆಮನೆ ಯಲ್ಲಿ ಮಾರುವ ಬೆಣ್ಣೆ ದೋಸೆ, ಮನೆಯ ದೋಸೆ, ಒಬ್ಬೆ ದೋಸೆ. ಎಷ್ಟೆಲ್ಲ ತರದ ದೋಸೆಗಳು. ದೋಸೆಯ ಬಗ್ಗೆಯೇ ಒಂದು ವಿಶೇಷ ಲೇಖನ ಬರೆಯಬಹುದು, ದೋಸೆ ತಿಂದು ಮನಸು ಹಗುರಾದಾಗ. ಇರಲಿ ಈಗ ನಾನು ಮಾಡಿದ ರಾಗಿ-ದೋಸೆಗೆ ಬರೋಣ.

ನಾಚಿಕೆ ಬಿಟ್ಟು ನನ್ನಾಕೆಗೆ ಫೋನ್ ಮಾಡಿದೆ. ಎಷ್ಟೇ ಆಗಲಿ ಅರ್ಧಾಂಗಿ ಅವರ ಬಳಿ ನಾಚಿಕೆಯೇಕೆ?. ಕೇಳಿದೆ. " ಹೇಗೂ ರಾಗಿ ಹಿಟ್ಟಿದೆ, ಕೋಲಿಲ್ಲ. ಅದಕ್ಕೆ ದೋಸೆ ಮಾಡಿಕೊಳ್ಳಬೇಕೆಂದಿದ್ದೇನೆ ಹೇಗೆ ಮಾಡುವುದು?"
ನಗುತ್ತಾ ಅಲ್ಲಿಂದ ಬಂತು ಉತ್ತರ. " ಇದ್ದರೆ ಸ್ವಲ್ಪ ಮೊಸರು ಹಾಕಿ ಸ್ವಲ್ಪ ನೀರು ಹಾಕಿ ನೆನೆಸಿ, ಸುಮಾರು ಎರಡು ಘಂಟೆಗಳ ಕಾಲ ನೆನೆದರೆ ಹಿಟ್ಟು ಮೃದುವಾಗುತ್ತದೆ. ಆಮೇಲೆ ದೋಸೆ ಹುಯ್ದರಾಯಿತು". ಧ್ವನಿಯಲ್ಲಿ ಕುಹುಕವಿತ್ತೇ ನನಗಂತೂ ಕಂಡಿತಾ ಗೊತ್ತಿಲ್ಲ. "ಜೊತೆಗೆ ಏನು ಮಾಡುತ್ತೀರಾ?" ಕೇಳಿದಳವಳು. "ಏನು ಮಾಡುವುದು. ಊರಿಂದ ತಂದ ತೊಕ್ಕು ಇದೆ. ಅಡಿಗೆ ಮನೆಯಲಿ ಸ್ವಲ್ಪ ಕ್ಯಾರೆಟ್ ಇದೆ" ಎಂದೆ. " ಸರಿ ಹಾಗಿದ್ದರೆ ಕ್ಯಾರೆಟ್ ತುರಿದು ಹಿಟ್ಟಿಗೆ ಕಲಿಸಿ. ಅಥವಾ ದೋಸೆಯ ಮೇಲೆ ಹೆಂಚಿನಲ್ಲಿದ್ದಾಗ ಹಾಕಿದರೂ ಚೆನ್ನಾಗಿರುತ್ತದೆ" ಎನ್ನುವ ಸಲಹೆ ಬಂದಿತು.

ಸರಿ ಪ್ರಯೋಗಕ್ಕೆ ಇಳಿದೇ ಬಿಟ್ಟೆ. ಹಿಟ್ಟು ಕಲಿಸಿ ಅದಕ್ಕೆ ಮೊಸರು ಹುಯ್ದು, ಕ್ಯಾರೆಟ್ ತುರಿ ಬೆರೆಸಿ ಇಟ್ಟಾಯಿತು. ಎಣ್ಣೆ, ದೋಸೆ ಹುಯ್ಯಲು ಕಾವಲಿ ಸಿದ್ದ ಮಾಡಿಕೊಂಡದ್ದಾಯಿತು. ಎರಡು ಘಂಟೆ ನೆನೆದ ಹಿಟ್ಟನ್ನು ಸೌಟು ಹಾಕಿ ತಿರುವಿದಾಗ ನನಗೆ ಮೊದಲಬಾರಿಗೆ ಮೈ ಜುಮ್ಮೆಂದಿತು. ತಿಳಿಯಾಗಿ ಕಾಣುತ್ತಿದ್ದ ಕಲಿಸಿದ ಹಿಟ್ಟಿನಲ್ಲಿ ನೀರು, ಮೊಸರು ಎಲ್ಲಾ ಮೇಲಿದೆ. ಅದರಡಿಯ ಭಾಗ ಕ್ಯಾರೆಟ್ ತುರಿಯದು, ಕೆಳಗೆ ಜೇಡಿ ಮಣ್ಣಿನಂತೆ ಒಗ್ಗಟ್ಟು ಬಿಟ್ಟು ಕೊಡದೆ ಗುಂಪಾಗಿ ಗಟ್ಟಿಯಾಗಿ ನಿಂತಿದೆ ರಾಗಿ ಹಿಟ್ಟು. ಇರಲಿ ಅದೇನಾಗುತ್ತದೋ ನೋಡೇ ಬಿಡೋಣವೆಂದು ಚೆನ್ನಾಗಿ ಕಲಸಿದೆ. ಒಲೆಯ ಮೇಲೆ ಪ್ಯಾನ್ ಇಟ್ಟು, ಅದು ಕಾದ ನಂತರ ಒಂದು ಚಮಚ ಎಣ್ಣೆ ಬಿಟ್ಟೆ. ಅದೂ ಕಾದ ನಂತರ ಒಂದು ಸೌಟು ರಾಗಿ ಹಿಟ್ಟನ್ನು ಹುಯ್ದೆ. ನಾನೇನೋ ಹೆಂಚು ಎಣ್ಣೆ ಕಾದಿದೆ ಎಂದುಕೊಂಡಿದ್ದೆ. ಆದರೆ ಅದು ರಾಗಿ ದೋಸೆಯ ಮಟ್ಟಕ್ಕೆ ಕಾದಿರಲಿಲ್ಲ. ಹಿಟ್ಟು ದುಂಡಾಗಿ ಹೆಂಚಿನ ಮೇಲೆ ಹರಡಿಕೊಂಡಾಗ ನನಗೀ ಗುಟ್ಟು ಗೊತ್ತಾಗಲಿಲ್ಲ. ಸ್ವಲ್ಪ ಹೊತ್ತಿನ ನಂತರ ದೋಸೆ ಸೀದು ಹೋದೀತೆಂಬ ಭಯದಿಂದ ತಿರುವಿಹಾಕಲು ಹೋದಾಗಲೇ ನನಗದು ಗೊತ್ತಾಗಿದ್ದು. ದೋಸೆ ಹೆಂಚನ್ನು ಬಿಟ್ಟು ಮೇಲೇಳಲಿಲ್ಲ. ಸ್ವಲ್ಪ ದಬಾಯಿಸಿದರೆ ರಷ್ಯಾದಂತೆ ಚುಕ್ಕಾ ಚೂರಾಗಿ ಹೋಯಿತು. ಅದನ್ನು ಸವರಿ ಪಕ್ಕಕ್ಕಿಟ್ಟೆ. ಈ ಬಾರಿ ಇನ್ನೂ ಸ್ವಲ್ಪ ಹೆಂಚು ಕಾದು ಅದರ ಮೇಲೆ ನೀರು ಚಿಮುಕಿಸಿ ಚುಯ್ ಎಂದು ಸದ್ದು ಬಂದಾಗ ಚೆನ್ನಾಗಿ ಕಾದಿದೆ ಎಂದು ಖಾತ್ರಿ ಮಾಡಿಕೊಂಡು ಒಂದು ಸೌಟು ಹಿಟ್ಟು ಸುರಿದೆ. ಚುಯ್ ಎನ್ನುವ ಶಬ್ದದೊಂದಿಗೆ ದೋಸೆ ಹಿಟ್ಟು ಹರಡಿಕೊಂಡಿತು. ಜೊತೆಗದರಲ್ಲಿ ತೂತುಗಳೂ ಕಾಣಿಸಿಕೊಂಡವು. ಎಲ್ಲರ ಮನೆ ದೋಸೆನೂ ತೂತೇ, ಎನ್ನುವ ಮಾತು ನನಗೆ ನೆನಪಿಗೆ ಬಂದಿತು. ಒಟ್ಟಿನಲ್ಲಿ ನಾನು ಸರಿ ದಾರಿಯಲ್ಲಿದ್ದೇನೆ ಎಂದುಕೊಳ್ಳುತ್ತಾ ಹುಯ್ದ ಹಿಟ್ಟನ್ನು ಗುಂಡಾಗಿ ಮಾಡಲು ಸೌಟಿನಿಂದ ಸವರಿದು. ಅದು ಸ್ವಾತಂತ್ರಾನಂತರ ಭಾರತದಂತೆ, ಮೂರು ಭಾಗಗಳಾಗಿ ಹೋಯಿತು. ಒಂದೊಂದೂ ಒಂದೊಂದು ತುತ್ತಿಗೂ ಸಾಲದಷ್ಟು ದೊಡ್ಡದು. ಅದನ್ನು ನೋಡಿ ದಿಕ್ಕೆಟ್ಟು ಯೋಚನೆ ಮಾಡುವಷ್ಟರಲ್ಲಿ ಮೊದಲೇ ತೆಳ್ಳಗಾಗಿದ್ದ ಅದು ಸೀದು ಕರಕಲಾಗಿ ಹೋಯಿತು. ಹೆಂಚಿಗೆ ಅಂಟಿದ್ದ ಆ ದೋಸೆ ಎನ್ನುವ ಪದಾರ್ಥವನ್ನು ಕೆರೆದು ತೆಗೆಯಬೇಕಾಗಿ ಬಂತು.

ಇರಲಿ ಕಲಿಯಲು ಎರಡು ದೋಸೆ ಹಾಳಾಗಿದ್ದು ದೊಡ್ಡ ವಿಷಯವಲ್ಲ ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡು, ಎರಡರ ಪಾಠದಿಂದ ಮೂರನೇ ದೋಸೆ ಹುಯ್ದೆ. ಈ ಬಾರಿ ಎಚ್ಚರಿಕೆಯಿಂದ ಎರಡು ಸೌಟುಗಳಷ್ತು ಹಿಟ್ಟನ್ನು ಹೆಂಚಿನ ಮೇಲೆ ಹುಯ್ದೆ. ಹೆಂಚಿನ ಒಂದೊಂದು ಬದಿಗೆ ಒಂದೊಂದು ಬಾರಿ ಹಿಟ್ಟು ಜಾರಿ ಹೋಗುವಂತೆ. ಮತ್ತು ಅವೆರಡೂ ಬರ್ಲಿನ್ ಗೋಡೆ ಒಡೆದು ಜರ್ಮನಿ ಸೇರಿದಂತೆ ಸೇರುವಂತೆ ಎಚ್ಚರಿಕೆ ವಹಿಸಿದ್ದೆ. ಅದೇನೋ ಸೇರಿತು. ಆದರೆ ಸ್ವಲ್ಪ ಮಂದವಾಗಿ ಬಂತು. ಸುತ್ತಲೂ ಎಣ್ಣೆ ಬಿಟ್ಟು. ಮೇಲಷ್ಟು ತೊಟಕಿಸಿ, ದೋಸೆ ಕಾಯಲು ನಾನೂ ಕಾದೆ. ಈಗ ರಾಗಿ ಹಿಟ್ಟಿನ ಇನ್ನೊಂದು ಸ್ವರೂಪದ ಅರಿವು ನನಗಾಯಿತು. ರಾಗಿಯ ಬಲಿಷ್ಟ ಗುಂಉಗಾರಿಕೆಯ ಗುಣ ಹಿಟ್ಟು ಕಲಿಸುವಾಗಲೇ ನನಗೆ ಗೊತ್ತಾಗಿತ್ತು. ಆದರೆ ಅದಕ್ಕೆ ಉಷ್ಣ ನಿರೋಧಕ ಗುಣವೂ ಇದೆ ಎಂದು ನನಗೆ ತಿಳಿದದ್ದು ಈಗಲೇ. ಮೇಲೆಲ್ಲಾ ಚೆನ್ನಾಗಿ ಬೆಂದಂತೆ ಕಾಣುತ್ತಿದ್ದ, ಯೂರೋಪಿನ ಭೂಪಟದ ಮಾದರಿಯಲ್ಲಿದ್ದ ಆ ದೋಸೆಯನ್ನು ಹೆಂಚಿನಿಂದಿಳಿಸಿ, ತಟ್ಟೆಗೆ ಹಾಕಿ, ಕುತೂಹಲವನ್ನೂ, ಹಸಿವನ್ನೂ ಒಟ್ಟಿಗೆ ತಣಿಸಲು, ಒಂದು ಚೂರು ಮುರಿದು ಬಾಯಿಗೆ ಹಾಕಿಕೊಂಡರೆ ಅದು ಮೇಲೆ ಹೇಗೆಯೇ ಕಂಡರೂ ಒಳಗೆ ಹಸೀ ರಾಗಿ ಹಿಟ್ಟು. ತಿನ್ನಲಾಗದೆ ಅದನ್ನೂ ಪಕ್ಕಕ್ಕಿಟ್ಟೆ.

ಇಷ್ಟರಲ್ಲಾಗಲೇ ನನ್ನ ಸಹನೆ ಮೀರಿತ್ತು. ಆದರೆ ಇನ್ನೊಮ್ಮೆ ಪ್ರಯತ್ನಿಸಿ ನೋಡೇ ಬಿಡುವ ಹಠ ನನ್ನಲ್ಲಿ ಕುಣಿಯುತ್ತಿತ್ತು. ಚೆನ್ನಾಗಿ ಹೆಂಚು ಕಾಯಲು ಬಿಟ್ಟೆ. ಈ ಘಳಿಗೆಯಲ್ಲಿ ನಾನೂ, ನನ್ನಾಕೆ ಮುದ್ದೆಯ ವಿಷಯದಲ್ಲಿ ಮಾತಾಡಿದ್ದೆಲ್ಲಾ ನೆನಪಿಗೆ ಬಂತು. ರಾಮಧಾನ್ಯ ಚರಿತವೂ ನೆನಪಾಯಿತು. ಈ ದೋಸೆ ಚೆನ್ನಾಗಿ ಬಂದರೆ, ಆ ರಾಮನಾಣೆ ಇನ್ನು ಅಡಿಗೆಯ ವಿಷಯದಲ್ಲಿ ಮನೆಯಾಕೆಯೊಂದಿಗೆ ಜಗಳವಾಡುವುದಿಲ್ಲ ಎಂದು ದೋಸೆಯ ಮೇಲೆ ಹರಕೆ ಹೊತ್ತೆ. ಹೆಂಚು ಕಾದಿರಬಹುದಾದ ಕ್ಷಣ ಎಂದು ನನಗನ್ನಿಸಿದಾಗ, ಮೆಲ್ಲನೆ ಸೌಟಿನಿಂದ ಹಿಟ್ಟು ಹೊಯ್ದೆ, ಹೊಯ್ಯುವಾಗಲೇ ಕೈ ಅಲ್ಲಾಡಿಸುತ್ತಾ ಸಾದ್ಯವಾದಷ್ಟು ದುಂಡಾಗಿರುವಂತೆ ಮಾಡಿದೆ. (ಇಲ್ಲಿ ಜರ್ಮನಿಯಲ್ಲಿ ಕ್ರುಪ್ಪೆ ಎನ್ನುವ ತಿಂಡಿ ಮಾಡುತ್ತಾರೆ. ಅದು ಥೇಟು ನಮ್ಮ ಮಸಾಲೆದೋಸೆಯ ಥರಾ.. ಅದನ್ನು ಮಾಡುವವರು ಹಿಟ್ಟನ್ನು ಹೆಂಚಿನ ಮೇಲೆ ಹೊಯ್ದು, ಒಂದು ಕೈವಾರದಂತ ಕಡ್ಡಿಯೊಂದನ್ನು ಅದರ ಮಧ್ಯದಲ್ಲಿಟ್ಟು ತಿರುಗಿಸುತ್ತಾರೆ. ಅದು ದೋಸೆಯ ದಪ್ಪ ಸಮವಾಗಿರುವಂತೆ ಮಾಡುವುದಲ್ಲದೆ, ಪೂರ್ಣ ಚಂದಿರನಂತೆ ಗುಂಡಾಗಿರುವಂತೆಯೂ ಮಾಡುತ್ತದೆ. ಬಹುಶಃ ಜರ್ಮನ್ನರ ಪರ್ಪ್ಫ಼ೆಕ್ಷನ್ ಇಂತಹ ಉಪಕರಣಗಳನ್ನು ತಯಾರಿಸುವಂತೆ ಮಾಡಿರಬೇಕು. ಇಂತಹುದೇ ಪರ್ಫ಼ೆಕ್ಷನ್ ಅನ್ನು ಅವರ ಇತರ ಕೆಲಸಗಳಲ್ಲೂ ಕಾಣಬಹುದು). ಈ ಬಾರಿ ದೋಸೆ ತಕ್ಕ ಮಟ್ಟಿಗೆ ಗುಂಡಾಗಿ ಪೂರ್ಣ ಚಂದ್ರನಂತೆ ಅಲ್ಲದಿದ್ದರೂ, ಶುಕ್ಲಪಕ್ಷದ ಏಕಾದಶಿಯ ಚಂದಿರನಂತೆ ಮೂಡಿತು. ಹಿಂದಿನ ದೋಸೆಯ ನೆನಪಿನಿಂದ ಅದನ್ನು ಸಾಕಷ್ಟು ಹೊತ್ತು ಬೇಯಿಸಿದೆ. ನಿಧಾನವಾಗಿ ಎತ್ತಿದಾಗ ಹಾಗೆಯೇ ಮೇಲೆ ಬಂತು. ತಿರುವಿ ಹಾಕಿ ಇನ್ನಷ್ಟು ಹೊತ್ತು ಬೇಯಿಸಿ, ಹೆಂಚಿನಿಂದಿಳಿಸಿದೆ. ಬಾಯಿಗಿಟ್ಟುಕೊಂಡೆ, ರುಚಿಯಾಗಿಯೂ ಇತ್ತು. ಮೊಸರಿನ ಹುಳಿ, ಕ್ಯಾರೆಟ್ ಸಿಹಿ, ಉಪ್ಪಿನ ರುಚಿಯಜೊತೆಗೆ ರಾಗಿಯ ಒಗರು ರುಚಿಯೂ ಸೇರಿ ಹಿತವಾಗಿತ್ತು.

ಹರಕೆ ಹೊತ್ತದ್ದಕ್ಕೂ ಸಾರ್ಥಕವಾಯಿತೆಂಬ ಭಾವದಿಂದ, ಇನ್ನು ರಾಗಿ ದೋಸೆ ಮಾಡುವ ಹದ ನನಗೆ ಸಿಕ್ಕಿತೆಂದು ಗರ್ವ ಪಟ್ಟುಕೊಂಡೆ, ಇದೆಲ್ಲೋ ರಾಮಧಾನ್ಯಕ್ಕೆ ತಿಳಿಯಿತೆಂದು ಕಾಣುತ್ತದೆ. ಅರ್ಜುನನ ಮದವಡಗಿಸಲು ಶ್ರೀಕೃಷ್ಣ ಸಂಕಲ್ಪ ಮಾಡಿದಂತೆ ಅದೂ ಸಂಕಲ್ಪ ಮಾಡಿರಬೇಕು. ಐದನೇ ದೋಸೆಗೆ ಮೊದಲ್ ದೋಸೆಗಾದ ಗತಿಯೇ ಆಯ್ತು. ಎಚ್ಚರಿಕೆಯಿಂದ ಇನ್ನೆರಡು ದೋಸೆ ಹುಯ್ದೆ. ಆದರಲ್ಲಿ ಒಂದು ತಿನ್ನುವಂತಿತ್ತು. ಹಿಟ್ಟೇನೋ ಸಾಕಷ್ಟಿತ್ತು. ಆದರೆ ಮುಂದೆ ದೋಸೆ ಹುಯ್ಯಲು ತಾಳ್ಮೆ ನನ್ನಲ್ಲಿ ಉಳಿಯಲಿಲ್ಲ. ಈ ಎರಡು ದೋಸೆಗಳೋ ನನಗೆ ಯಾವ ಮೂಲೆಗೂ ಸಾಲವು. ಹಿಟ್ಟನ್ನು ತಂಗಳು ಪೆಟ್ಟಿಗೆಯಲ್ಲಿಟ್ಟು, ಒಂದಷ್ಟು ಅಕ್ಕಿಗೆ ನೀರು ಹಾಕಿ ಅನ್ನ ಮಾಡಲು ಇಟ್ಟೆ, ಮನೆಯಿಂದ ತಂದ ಹುಳಿಯನ್ನದ ಗೊಜ್ಜಿನೊಂದಿಗೆ, ಮಾವಿನಕಾಯಿ ತೊಕ್ಕು ಊಟಕ್ಕೆ ನನಗೆ ಜೊತೆಯಾಯಿತು. ಕಲಸಿದ ಹಿಟ್ಟು ಮಾರನೇ ದಿನ ದೋಸೆಯಾಯಿತು.! ಈಗ ನಾನು ನಾನೇ ಮೆಚ್ಚುವ ದೋಸೆ ಮಾಡುವಲ್ಲಿ ಪರಿಣಿತನಾಗಿದ್ದೇನೆ. ರಾಗಿ ಹಿಟ್ಟು ಇನ್ನೂ ಸಾಕಷ್ಟಿದೆ. ನಿಮ್ಮಲ್ಲಿ ಯಾರಾದರೂ ಇಲ್ಲಿಗೆ ಬರುವರಿದ್ದರೆ, ಒಂದು ತೆಂಗಿನಕಾಯಿ, ಎರಡು ಮೆಣಸಿನಕಾಯಿ ಹಿಡಿದು ತನ್ನಿ, ರಾಗಿ ದೋಸೆಗೆ ಚಟ್ನಿ ಮಾಡಿ ತಿನ್ನೋಣವಂತೆ. ನನ್ನ ಲೆಕ್ಕದಲ್ಲಿ ಬೀರು ನಿಮಗಭ್ಯಂತರವಿಲ್ಲದಿದ್ದರೆ.

Monday, June 21, 2010

rsync from *nx machine to windows machine

This document describes how to setup a ssh+rsync on windows such that a *nx machine can backup/copy files using rsync


Install cygwin you need opnessh and rsync components
once it is installed
add CYGWIN=ntsec tty as system variable
add path of cygwin in PATH varialble (usally it is c:\cygwin\bin)
Open a cygwin terminal and type
ssh-host-config
(manually answer Yes to all questions except)
If the script says "This script plans to use cyg_server, Do you want to use a different name? Answer no.
now type
cyglsa-config
Restart
You can add the system users by typing
mkgroup -l >> ../etc/group
mkpasswd -l >> ../etc/passwd


You can add keys (consider your security environment)

Now you are ready to use rsync from your *nx backup server to the windows machine.

References:
http://pigtail.net/LRP/printsrv/cygwin-sshd.html
http://sysblogd.wordpress.com/2008/01/07/ubuntu-connect-to-your-windows-machine-securely-using-vnc-and-ssh-with-little-installation/
http://blog.myownserver.info/2010/04/how-to-install-cwrsync-for-windows-vista7-tutorial/

Notes: To allow port 22 in windows firewall the following commands are useful.

netsh advfirewall firewall add rule name=”Opensshd” dir=in action=allow protocol=TCP localport=22

netsh firewall add portopening tcp 22 "opensshd"

Friday, June 18, 2010

ವೀರಭದ್ರನ ಕೊಂಡ

ಲೋಹದ ಹಕ್ಕಿ ಹಾರಲು,
ಕಂಡಿದ್ದೇನು ಇರುಳಲು?
ಊರೆಲ್ಲಾ ಹೊಳೆವ ಕೆಂಡ.
ವೀರಭದ್ರನ ಕೊಂಡ

ಉರಿದಿದೆ ಮೆರೆದಿದೆ ಜಗಜಗ ದೀಪ
ಇರುಳಿನ ಕೊರಳಿಗೇ ಉರುಳು ಪಾಪ

ಕತ್ತಲ ಕೊಲ್ಲಲು, ಬೆಳಕಿನ ಹೊನಲು
ಶಿವಸತಿ ಚಿತೆಯುರಿ ನಾಡಿನ ಮಡಿಲು

ಭೂಸುತೆಯಗ್ನಿ ಪರೀಕ್ಷೆಯ ಭುಗಿಲು
ಬೆಳಕಿನ ಹೊನಲಲಿ ಮುಗಿಲಿಗು ದಿಗಿಲು

ಹಿಮವಂತನ ಯಙ್ಞ ಕುಂಡದ ಒಡಲು
ಬದುಕಿನ ಬೆಳಕನು ನಂದಿಸದಿರಲು

ಬರುವನೋ ರುದ್ರ
ಅಗ್ನಿಯ ಮೇಲೆ ರಕ್ತದ ಮಳೆಯನು
ಸುರಿವನೋ ರುದ್ರ

Monday, May 31, 2010

Post Recession Investment Opportunities in India

" I do not look to jump over 7 foot bars;
I look for 1 foot bars that I can step over".
- Warren Buffet

Most experts agree that recession is over. But what lies ahead for the investors?

Answer to this question depends on whom you ask. although economic forecast for the next 12-18 months vary greatly, they can be reduced to three essential types.

Slow growth caused by tightened credit, as occurred in 1992. Although production levels are normal, it is achieved by less employees. Hence increase in unemployment causes the growth to be slow.

Sharp rebound : Mainly caused by the stimulus funds by the Government and other agencies. This happened in 1970. Now also it is evident that automobile sector has started to expand, just six months after a sharp contraction. Also $850 billion stimulus funds of the US Government alone should enter the market in 2010 . This should add the wind for economy to sail.

Double-Dip Recession : This is the most pessimistic scenario. We may fall back to another recession. Unemployment, huge Government deficit, stingy credit markets and uncertainty in global business scenarios can lead to another contraction as happened in 1982.

(India opened for capital word only after 1990s. We have just seen two downfalls. The other I mentioned here are from the other parts where the capital based economy is in effect.)

Nobody except history repeats, But it is likely that it can borrow characteristics from all three scenarios, or may have its own characteristics. So it is important to look for portfolios that could survive those three types of recovery namely rebound, lightening bolt and Double-Dip. As long as investments portfolios are diversified, it takes a good shape, no matter which ride we take. It is not necessary for us to be accurate in prediction. Clairvoyance is not important but diversification is.

With the previous records it is evident that small-company stocks are better opportunities, they usually fall in the down-time very quickly, and also regain very quickly during an up-time. In short there is high risk and also high rewards.

United Kingdom Trade and investment department (UKTI) made an interesting observation in its report saying that India is top 3rd country to invest, after China and US. it observed that "starting point of success is to take an informed strategic and long term view about where opportunity lies".

Stimulus packages unveiled by Government of India should boost exports. Relaxation on export to gulf countries in the field of food, textiles and construction materials is a welcome news to some 30 million people in that area, as well a great business opportunity for the Indian exporters.

Impact of US visa regulations affects the IT and ITeS companies, still if service oriented companies are coming with products, then it is a good opportunity for investing. The power in infrastructure field including Power sector cannot be ignored. Oil and natural gas is still a lucrative business, FMCG will be regaining its position. Business like inland fisheries, food commodities and hardware items will be on rising.

Service oriented Models in IT like SAAS(software as a service) and Cloud computing, storage solutions is a growth opportunity. Educational and health remain at their positions substantially. Hospitality business is acceptable if the holding capacity is there for long time.

Basic economy of any countries follows a hierarchy like

economy based on tourism
economy based on agriculture
economy based on raw material export
economy based on finished goods export
economy based on inland services.

This period, for India is convergence period where we are moving from economy based on raw material export to finished goods export. Any investments based on technology firms and R & D are worthy.

Statistics suggest that there are only 12 cars in India for every 1000 people. It simply means that automobile industry has a huge potential in spite of the hit by recession. renewable energy research and production is another field. Ultimately the opportunities for investment in India are abundant. But the question to be asked before making any decision is "Does this company makes an essential or non-essential product?"

No decision is right or wrong, only time will show it. But the strategy and environmental scanning makes to make the failures less fatal. As Warren Buffet rightly said " It is only when the tide goes out that you discover who's been swimming naked".

Friday, May 28, 2010

Role of Private Finance Companies in Social Development

"Everymorning I wake up and look through
Forbe's list of richest people.
If my name is not there I will go to work"
- Robert Orben.

Yes, everyman has a dream and one more and another one. And lots of them. These dreams generates aspirations. Man being social animal his aspirations are summed up with his neighbours will become social aspirations.

Social development is a process which results in transformation of social structures in a manner which improves the capacity of society to fulfill its aspirations.

Society develops by consciousness and social consciousness develops by organisations. The structural advances are in the form of new social attitudes, values, behaviours or organisations. Development is a term applied for the "positive" changes which are beneficiary to society.

In development of society the influence of financial firms is tremendous because of their role and magnitude of aid in fulfilling aspirations.

The Society in India is primarily comprised of joint families which are splitting up to nucleus families now a days. Hence we study the influence of finance companies on the three segments of populations, separated by age and their position in the family.

Elderly people are also feeling secured now. thanks to reverse mortgage plans, pension-plans from different firms. Earning members are satisfied because they can save for their old age. They also can build their dream-house. They can have a packaged tour to their place of like. They get a education loan for their kids.( of course beneficiary will repay it.. so no tension!)

Children are happy because their parents can fulfill their wishes. parents can present a bicycle worth of 10k on his/her 10th birthday. The kid gets the best education available around the world, because parents no more worry about finances.

Let us re-examine it based on the income levels.

Private finances have a model for every income groups and assist them in fulfilling their aspirations.

ICICI home-loans has plans for all kinds of peoples of all kinds of income level.

Insurances.. a plethora of plans.. life insurances...! your beloved ones are safe ..even if you are not there any more..! health cover.. make you merry even if you are sick because you are not worrying further about the bills.

Public Transport is still a hell. No problem you can buy your own bike. and have jolly rides on the weekends. You have some more money..? Go for a car loan.. Now you do not need to worry about all that haze and rain, as well your kids are protected from the dust falling in their eyes. (Of course Tatas gave us Nano)

Let us look at the rural areas.. Sundaram finance gives you a loan if a well known person recommends you for one. Sriram chits networked in almost all places. and it is a kind of unconventional investments.. still you gain money (these companies are marking profits consistently since past 10-15 years.

You have a farm and need a tractor? Mahindra finance is answer. crop loans are easy now with nationalised banks or co-operative banks. You do not need to worry about withered crops due to any reason because you have crop insurance at your doorsteps now. But no body supports you in the market, you are at the mercy of brokers. (but they are not financiers. But entrepreneurs.!) wanna grow a commercial crop? You just need to touch base with the right person in the bank!

If you are an entrepreneur, there are many plans and easily available loans, sometime subsidies too.. This easily available finance has reduced the stress of human relations and hence the social bonding is comparatively high.

There is another advantage on social development. Postal Bank agents and insurance agents..? What a network they build. and how the small savings are improved and added together to invest in mega-infrastructure projects..? you know that a penny saved is two pennies earned.

Micro-financing firms and self-help groups are gold rush now. For the low-income group it is multi beneficiary. Either a group of people who have come together with common skills will start a cottage industry kind of an outfit. or the savings are used to do micro financing among the group members for their petty needs at one time. Both aspects gives new dimension to life, either creating jobs or fulfilling small needs without major hassle.

It is evident that money is all pervasive and development engine runs on the fuel of money. The private finance companies fuel the development even in social context.

In the end I could not resist mentioning about the credit collection agents and their ways.. ! But John Paul Getty summarised it as follows:

"If you owe the bank $100 it is your problem. and if you owe the bank $100 million, that's certainly banks problem"

Monday, May 10, 2010

server migration -Tips and notes

April 15th 7:04
ssh into the computer
apt-get install apache2
apt-get install mysql-server-5.0
apt-get install php5
apt-get install php5-mysql
--

April 16th 2:58

apt-get update
apt-get upgrade
wget http://downloads.sourceforge.net/project/typo3/TYPO3%20Source%20and%20Dummy/TYPO3%204.3.3/typo3_src-4.3.3.tar.gz?use_mirror=space

wget http://downloads.sourceforge.net/project/typo3/TYPO3%20Source%20and%20Dummy/TYPO3%204.3.3/typo3_src%2Bdummy-4.3.3.zip?use_mirror=nchc

apt-get install zip
apt-get install imagemagick
unzip typo3+dummy....zip

April 27th

mv typo3_dumm.. yourname
cd prion/typo3conf

admin/adminpass

chown -R www-data:www-data typo3temp/
chown -R www-data:www-data typo3conf
chown -R www-data:www-data uploads
chown -R www-data:www-data fileadmin
chown -R www-data:www-data typo3/ext/

### for suhosin patch for php5
apt-get install php5-suhosin
/etc/init.d/apache2 restart

apt-get install php5-gd

vim /etc/php5/apache2/php.ini
vim /etc/php5/conf.d/suhosin.ini
/etc/init.d/apache2 restart


# not needed below
apt-get install dpkg-dev build-essential
cd /usr/src
apt-get source php5
wget http://www.hardened-php.net/hardened-php-signature-key.asc
gpg --import < hardened-php-signature-key.asc
wget http://www.hardened-php.net/suhosin/_media/suhosin-patch-5.2.0-0.9.6.2.patch.gz
gunzip suhosin-patch-5.2.0-0.9.6.2.patch.gz
cd php5-5.2.0
patch -p 1 -i ../suhosin-patch-5.2.0-0.9.6.2.patch
dpkg-buildpackage
### Till here


May 10th

Generating SSL
http://www.akadia.com/services/ssh_test_certificate.html

openssl genrsa -des3 -out server.key 1024
************

openssl req -new -key server.key -out server.csr


cp server.key server.key.org
cp server.key server.key.orig

openssl rsa -in server.key.org -out server.key

mkdir /etc/apache2/ssl
cp server.crt /etc/apache2/ssl/
cp server.key /etc/apache2/ssl/

a2enmod rewrite
a2enmod ssl

add the following lines in virtual host entry

RewriteEngine on
RewriteCond %{SERVER_PORT} ^80$
RewriteRule ^(.*)$ https://your.domain.com$1 [L,R]
RewriteLog "/var/log/apache2/rewrite.log"
RewriteLogLevel 2

SSLEngine on
SSLCertificateFile /usr/local/apache/conf/ssl.crt/server.crt
SSLCertificateKeyFile /usr/local/apache/conf/ssl.key/server.key

Thursday, May 06, 2010

ಸಹವಾಸ ದೋಷ

Submitted by hamsanandi on May 5, 2010 - 5:40am ಸಂಪದದಲ್ಲಿ

ಕಾದ ಕಬ್ಬಿಣದ ಮೇಲೆ ಬೀಳಲು ನೀರಹನಿ ಹೆಸರಿಲ್ಲದಂತಳಿವುದು
ಕಮಲದೆಲೆಯ ಮೇಲೆ ಬೀಳಲದುವೇ ಮುತ್ತಿನ ಹೊಳಪು ತೋರುವುದು
ಸ್ವಾತಿಯಲಿ ಕಡಲ ಚಿಪ್ಪಿನಲಿ ಬಿದ್ದರೆ ಹನಿ ತಾನೆ ಮುತ್ತಾಗಿಬಿಡುವುದು
ಮೇಲು-ನಡು-ಕೀಳೆಂಬ ಹಲವು ದೆಸೆಗಳನು ಒಡನಾಟವೇ ತರುವುದು!

ಸಂಸ್ಕೃತ ಮೂಲ:


ಸಂತಪ್ತಾಯಸಿ ಸಂಸ್ಥಿತಸ್ಯ ಪಯಸೋ ನಾಮಾಪಿ ನ ಜ್ಞಾಯತೇ
ಮುಕ್ತಾಕಾರತಯಾ ತದೇವ ನಲಿನೀಪತ್ರಸ್ಥಿತಂ ರಾಜತೇ |
ಸ್ವಾತ್ಯಾಂ ಸಾಗರ ಶುಕ್ತಿಮಧ್ಯಪತಿತಂ ಸಮ್ಮೌಕ್ತಿಕಂ ಜ್ಞಾಯತೇ
ಪ್ರಾಯೇಣೋತ್ತಮಮಧ್ಯಮಾಧಮದಶಾ ಸಂಸರ್ಗತೋ ಜಾಯತೇ ||

ಸವಿತೃ ಅವರ ಅನುವಾದ

ಕಾದ ಕಾವಲಿಯಲಿ ಹೇಳ ಹೆಸರಿಲ್ಲದಂತಳಿಪುದು
ಕಮಲದೆಲೆಯಲದುವೆ ಸ್ವಯಂ ರಾಜಿಪುದು
ಚಿಪ್ಪೋಳಗಿಳಿದ ಸ್ವಾತಿಹನಿ ಮುತ್ತಪ್ಪುದು

ಅತಿ ಮಿತಿಗಳೆಂಬ ಗತಿಗಳನು ಗೆಳೆತನವೆ ತರುವುದು

ನನ್ನದು

ಕಾದ ಕಬ್ಬಿಣದ ಮೇಲೆ
ಹೆಸರಿಲ್ಲದೆ ಮರೆಯಾಗುವ ಲೀಲೆ.
ಬಿದ್ದರದು ಕಮಲೆದೆಲೆ ಮೇಲೆ
ಹೊಳೆಯುವುದಲ್ಲಿ ಮುತ್ತಿನ ಮಾಲೆ.
ಸ್ವಾತಿ ಮಳೆಯ ನೀರಹನಿಯು
ತಾನೇ ಮುತ್ತಾಗುವುದು ಕಪ್ಪೆಚಿಪ್ಪಿನಲೆ
ಅಧಮ,ಮಧ್ಯಮನೋ ಮೇಣ್
ಉತ್ತಮನೋ , ಸಖರೊಡನಾಟವದೇ
ನಮ್ಮ ಸ್ಥಿತಿಗತಿಗೆ ಕಾರಣವು ತಾನೆ.

Saturday, April 24, 2010

ರಾಜ ಮುತ್ತಿನ ನೆನಪಲ್ಲೊಂದು ಸ್ವಗತತ

ರಾಜಣ್ಣ, ರಾಜಕುಮಾರ್, ಮುತ್ತುರಾಜ್, ಅಣ್ಣಾವ್ರು

ಯಾರೆಂದು ಗೊತ್ತಾಯಿತಲ್ಲ. ಇವರ ಬಗ್ಗೆ ಚತುಷ್ಕೋಟಿ ಕನ್ನಡಿಗರು ಇನ್ನೊಬ್ಬರ ಬಳಿ ಹೇಳಬೇಕಾದುದೇನೂ ಇಲ್ಲ. ಹೇಳಿಕೊಳ್ಳ ಬೇಕಾದುದು ಮಾತ್ರ ಇದೆ. ಅದು ಬರೀ ಸ್ವಗತ. ಐದು ದಶಕಗಳ ಕಾಲ ಕನ್ನಡಿಗರ ಮನರಂಜಿಸಿದ ಮಹಾನ್ ಚೇತನ. ಸದ್ದಿಲ್ಲದೆ ತನ್ನದೇ ಆದ ರೀತಿಯಲ್ಲಿ ಸಮಾಜದ ಹಲವಾರು ಸ್ತರದ ಹಲವಾರು ವಿಭಿನ್ನ ರೀತಿಯ ಜನಗಳಲ್ಲಿ ಸ್ಪೂರ್ತಿ ಸೆಲೆ ಬಿತ್ತಿದ ಸುಗುಣೇಂದ್ರ. ಬಂಗಾರದ ಮನುಷ್ಯನಲ್ಲಿ ತಮ್ಮನ್ನೇ ಕಂಡು, ವಿದೇಶಗಳನ್ನು ತೊರೆದು ಮಣ್ಣಿನ ಮಕ್ಕಳಾದ ಮಂದಿ ಎಷ್ಟೋ..! ಜೀವನಚೈತ್ರ ವನ್ನು ನೋಡಿ ಕುಡಿಯುವುದನ್ನು ಬಿಟ್ಟವರೆಷ್ಟೋ.!!
ತಾಯಿಯಲ್ಲಿ ಭಕ್ತಿ ವಾತ್ಸಲ್ಯಗಳನ್ನೂ, ಸೋದರಸೋದರಿಯರಲ್ಲಿ ಪ್ರೀತಿಯನ್ನೂ, ಅತ್ತಿಗೆಯಲ್ಲಿ ದೇವರನ್ನೂ , ಕಾಯಕದಲ್ಲಿ ಕೈಲಾಸವನ್ನೂ ಕಾಣಲು ಕನ್ನಡಿಗರ ಮೂರು ತಲೆಮಾರುಗಳನ್ನು ಉತ್ತೇಜಿಸಿದವರಾರು. ಪ್ರೇಯಸಿಗೆ ತೋರುವ ಸರಸ , ಸಂಕಷ್ಟದಲ್ಲೂ ಧೃತಿಗೆಡದ ಸ್ಥೈರ್ಯ , ವಿಧಿಯಾಟಕ್ಕೆ ಬಲಿಯಾದರೂ ನಲುಗದ ಸ್ಥಿತಪ್ರಜ್ಞತೆ ಇವನ್ನು ನಮ್ಮಲ್ಲಿ ತುಂಬಿದವರಾರು?

ರಾಜಕುಮಾರ್ ಬಗ್ಗೆ ಏಕಷ್ಟು ಅಭಿಮಾನ? ಕನ್ನಡವೇ ಸತ್ಯ ಎಂದು ಹಾಡಿದ ಕೊರಳದು, ಕನ್ನಡಿಗರ ದನಿಯಾಗಿ ನಿಂತ ಧಣಿಯವರು. ಸುಶ್ರಾವ್ಯ ಕಂಠದಲ್ಲಿ ಸಾವಿರಾರು ಗೀತೆಗಳು, ಕನ್ನಡಿಗರಿಗೆ ಸಂಗೀತದ ರಸದೌತಣ, ಅವರ ದನಿಯಲ್ಲಿ ರುವ ಭಕ್ತಿಗೀತೆಗಳನ್ನು ಆಸ್ವಾದಿಸುವುದು ಒಂದು ಯೋಗವೇ.! ಅದೆಷ್ಟು ಪ್ರೇಮಿಗಳ ನಡುವೆ ರಾಜ್ ಹಾಡುಗಳ ವಿನಿಮಯ ನಡೆದಿಲ್ಲ? ರಾಜ್ ಹಾಡನ್ನು ಹಾಡಿ ತನ್ನೊಲವಿನ ಹುಡುಗಿಯನ್ನು ಒಲಿಸಿಕೊಂಡ ಅದೆಷ್ಟು ತರುಣರಿಲ್ಲ? ಏಕೆ ಮಳ್ಳಿ ಹಂಗೆ ಕದ್ದು ಕದ್ದು ನೋಡುತೀಯೆ , ಇಫ್ ಯು ಕಮ್ ಟುಡೇ, ಇಟ್ಸ್ ಟೂ ಲೇಟ್,
ಎಂಥಾ ಸೊಗಸು ಪ್ರೇಮದ ಕನಸು, ಲವ್ ಮಿ ಆರ್ ಹೇಟ್ ಮಿ, ಅದೆಷ್ಟು ಬಗೆಯ ಪ್ರೇಮ ಗೀತೆಗಳು.? (ಹತ್ತಿರ ಬಂದರೆ ಕಿವಿಯಲಿ ಹೇಳುವೆ ). ಅಮ್ಮನಿಗಾಗಿ, ಹಾಡಿದ ಹಾಡುಗಳೆಷ್ಟು, ಅಮ್ಮನ ಆರ್ದ್ರ ಭಾವವನ್ನು ನಮ್ಮಲ್ಲನುರಣಿಸಿದ ಆಪ್ತನಾರು? ನಾದಮಯ, ಅರಾಧಿಸುವೆ ಮದನಾರಿ ಗೀತೆಗಳ ಮಾಧುರ್ಯ ಎಂತದು? ಜೋಗದ ಝೋಕಿನ ಸೊಬಗೇನು? ಸಿಗೆವೆಂ ಕ್ಷಣದಲಿ ನಿನ್ನ ನಾ ಎಂದು ಆರ್ಭಟಿಸಿದ ಪರಿಯೇನು? ಅದೆಷ್ಟು ಕವಿಗಳ ಗೀತೆಗಳು ರಾಜ್ ದನಿಯಲ್ಲಿ ಮರುಹುಟ್ಟು ಪಡೆದಿಲ್ಲ. ಆಲಾಪದೇರಿಳಿತದಲಿ ಮೋಹನ ಮುರಳಿ ಮಿಡಿದವರಾರು?

ಯೋಗ ಕಲಿತದ್ದು ಐವತ್ತರ ಇಳಿವಯಸ್ಸಿನಲ್ಲಿ, ಆದರೆ ಜೀವಮಾನದ ಸಾಧನೆ ಸಿಕ್ಕ ಷ್ಟೇ ಸಮಯದಲ್ಲಿ. ಈ ಯೋಗವೇ ಇರಬೇಕು, ಹುಡುಕಿಕೊಂಡು ಬರುತ್ತಿದ್ದ ಪದವಿಗಳನ್ನು ನಿರಾಕರಿಸುವ ಸ್ಥಿತ್ಯತೆ ತಂದುಕೊಟ್ಟಿದ್ದು. ಇಂದಿರಾಗಾಂಧಿ ಎದುರಾಗಿ ಚುನಾವಣೆಗೆ ನಿಲ್ಲಲು ಮುರಾರ್ಜಿ ದೇಸಾಯರೇ ಕರೆ ಮಾಡುತ್ತಿದ್ದರೂ, ಮದರಾಸಿಗೆ ಹೋಗಿ ಯಾರ ಕೈಗೂ ಸಿಗದೆ ಕುಳಿತದ್ದು. ಯೋಗದಲ್ಲಿ ಕಳೆದು ಹೋದ ರಾಜಕುಮಾರ್, ಯೋಗ ಪುರುಷನಾಗಿಯೇ ಕಂಗೊಳಿಸಿದರು. ಅವರ ಸಾನಿಧ್ಯದಲ್ಲಿ ದಿವ್ಯ ಯೋಗದ ಅನುಭವವಿತ್ತು.

ಅವರು ಒಬ್ಬೊಬ್ಬರಿಗೆ ಒಂದೊಂದು ತೆರನ ಮಾದರಿ. ಕನ್ನಡ ಮೇಷ್ಟ್ರು, ಮಾತಾಡಿದರೆ ರಾಜಕುಮಾರನ ಹಾಗೆ ಕನ್ನಡ ಮಾತಾಡಬೇಕು ಅನ್ನುವ ಆಸೆ ಹಲವರದು. ಬಭ್ರುವಾಹನ ಚಿತ್ರದ ದೃಶ್ಯವನ್ನು ಸುಮಾರು ಇಪ್ಪತ್ತು ವರುಷಗಳ ಕಾಲ ಏಕಪಾತ್ರಾಭಿನಯದಲ್ಲಿ ಕರ್ನಾಟಕದ ಉದ್ದಗಲಕ್ಕೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಅಭಿನಯಿಸಿಲ್ಲವೇ? ಭಲೇಜೋಡಿಯ ಎಚ್ಚಮನಾಯಕನ ಮಾತನ್ನು ನಾನೇ ಏಕಪಾತ್ರಾಭಿನಯಕ್ಕೆ ಬಳಸಿ ಬಹುಮಾನ ಗೆದ್ದಿದ್ದೇನೆ. ಭಕ್ತಿರಸದಲ್ಲಿ, ಭಕ್ತ ಕುಂಬಾರ, ಕನಕದಾಸ, ಓಹಿಲೇಶ್ವರ, ಗುರು ರಾಘವೇಂದ್ರರ ಅಭಿನಯಕ್ಕೆ ಮನಸೋಲದವರಾರು?

ಸಮಾಜಕ್ಕೆ ನೀಡಿದ ಕೊಡುಗೆ ಏನು ಎಂದು ಕೇಳುವರಿದ್ದಾರೆ. ಒಬ್ಬ ಕಲಾವಿದನಾಗಿ ಐದು ದಶಕಗಳ ಕಾಲ ಉತ್ತಮ ನಡತೆಗಳನ್ನು ಇಡೀ ಸಮಾಜಕ್ಕೆ ಕಟ್ಟಿಕೊಟ್ಟ ಸಾಧನೆಗಿಂತ ಬೇರಿನ್ನೇನು ಬೇಕು, ರಾಜ್ ಚಿತ್ರಗಳಲ್ಲಿ ಕುಡಿತ ವಿಲ್ಲ, ಹೆಂಡತಿಗೆ ಹೊಡೆಯುವುದಂತೂ ಇಲ್ಲವೇ ಇಲ್ಲ. ಅವರ ಅಭಿನಯ ಸೂಕ್ಷ್ಮತೆಯನ್ನು ನೋಡಿಯೇ ತಿಳಿಯಬೇಕು. ಚಲಿಸುವ ಮೋಡಗಳು ಚಿತ್ರದ ಲಾಯರ್ ತನ್ನ ಕಕ್ಷಿದಾರಿಣಿಯ ವಿರುದ್ದ ಸಾಕ್ಷ್ಹಿಯನ್ನು ಪಾಟೀಸವಾಲು ಮಾಡಿ ಆ ಪಾತ್ರದ ಬಾಯಿಂದ ನಿಜ ಹೊರಹಾಕಿಸಿದ ಮೇಲೆ, ಗೆಲುವಿನ ಸಂತಸ,ಮತ್ತು ನಿಜದ ಬಗ್ಗೆ ಜುಗುಪ್ಸೆ ಇನ್ನೂ ಹಲವಾರು ಭಾವನೆಗಳನ್ನು ಕಣ್ಣೋಟದಲ್ಲಿಯೇ ಹೊರಹಾಕುವುದನ್ನು ನೋಡಿಯೇ ಅನುಭವಿಸಬೇಕು. ಚಿ.ಉದಯಶಂಕರ ಸಂಭಾಷಣೆಗಳು ರಾಜ್ ರಿಗೆ ಎಷ್ಟು ಚೆನ್ನಾಗಿ ಒಪ್ಪುತ್ತಿದ್ದವೆಂದರೆ, ಕನ್ನಡದ ಶಕ್ತಿ, ಉಪಮೆಗಳ ಮತ್ತು ಪದಗಳ ನಡುವಿನ ಅರ್ಥವನ್ನು ಹುಡುಕುವುದನ್ನು ನಾವೆಲ್ಲಾ ಕಲಿತಿದ್ದು ಅದರಿಂದಲೇ.

ಕಡೆಯ ದಿನಗಳ ನೋವನ್ನೂ, ದೇವರು ಕೊಟ್ಟ ವರ ಎಂದೇ ತಿಳಿದವರು ರಾಜಕುಮಾರ್, ಏಪ್ರಿಲ್ ೨೪ ಅವರ ಜನ್ಮದಿನ. ಕೆಲವರಿಗೆ ವಯಸ್ಸಾಗುವುದಿಲ್ಲ, ಅವರು ಕಣ್ಮರೆಯಾಗುವುದಿಲ್ಲ. ಅಮರರಾಗಿ ಚಿರಯೌವನಿಗರಾಗಿ ಇರುತ್ತಾರೆ. ಅಂತಹವರು ರಾಜಕುಮಾರ್.

ಇದು ಅವರ ನೆನಪಿನ ಸ್ವಗತ.

Monday, April 19, 2010

changing the wheel

ಹೆದ್ದಾರಿ ಬದಿಯಲ್ಲಿ ಕುಳಿತು
ಬದಲಾಯಿಸುತಿರುವ ಚಕ್ರ
ನಾ ಬಂದ ಊರು ನನಗೇನು ಹಿಡಿಸಿಲ್ಲ.
ಮುಂದೆ ಹೋಗುವ ಊರೂ ಪ್ರಿಯವಲ್ಲ.
ಆದರೂ, ಏಕೀ ಅಸಹನೆಯ ನೋಟ
ಚಕ್ರ ಬದಲಾಯಿಸುತಿರುವ ಚಾಲಕನೆಡೆಗೆ

CHANGING THE WHEEL

sit by the roadside
The driver changes the wheel.
I do not like the place I have come from.
I do not like the place I am going to.
Why with impatience do I
Watch him changing the wheel?

By Brecht

Tuesday, April 13, 2010

ನಾ ನಿನ್ನ ಮರೆಯಲಾರೆ

ಕಳೆಯಿತೇನು ನಾಲ್ಕು ವರುಷ
ನಿನ್ನನೊಯ್ದು ಕಾಲನು
ನಾ ನಿನ್ನ ಮರೆಯಲಾರೆನು.

ಗುಟ್ಟೊಂದ ಹೇಳಿದ ಪರೋಪಕಾರಿ ನೀನು
ಚಂದದ ನುಡಿಯನಾಡುವ
ಗಂಧದ ಗುಡಿಯ ರಾಜಕುಮಾರನು

ದೇಶ ಕಾಲ ಗಡಿಯ ಮೀರಿ ,
ಸಾಕ್ಷಾತ್ಕಾರದೊಲವ ತೋರಿ ,
ಸಂಧ್ಯಾರಾಗದಿಂಪು ತಂದ ಸಿಪಾಯಿ ರಾಮನು.

ತಾಯಿಗೆ ತಕ್ಕ ಮಗ ,ಜಗಮೆಚ್ಚಿದ ಮಗ
ಮನಮೆಚ್ಚಿದ ಮಡದಿಗೊಡೆಯ
ಹೃದಯಗೆದ್ದ ನೀನೊಬ್ಬ ಕಳ್ಳ , ಒಳಗಣ್ಣ ತೆರೆದ ಬೇಡರ ಕಣ್ಣಪ್ಪನು

ನಟಸಾರ್ವಭೌಮ -ಗಾನಗಂಧರ್ವ
ಅಪೂರ್ವಸಂಗಮದ ಒಂದು ಮುತ್ತಿನ ಕತೆ ನೀನು
ನಿನ್ನ ಕಂಡ ಭಾಗ್ಯವಂತರು ನಾವು . ಅಮರ ನಿನ್ನ ನೆನಪು.

ಪದ್ಮಭೂಷಣ, ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರ
ಕಳೆಯಲೇಳು ಸಾವಿರವರುಷ ನಾ ನಿನ್ನ ಮರೆಯಲಾರೆನು.

Monday, March 22, 2010

ಬಭ್ರುವಾಹನ ಚಿತ್ರದ ಮೆಚ್ಚಿನ ಹಾಡು

ಬಭ್ರುವಾಹನ: ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ
ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮಾ
ಎಲ್ಲದಕು ಕಾರಣನು ಶ್ರೀ ಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆಕಾಯ್ದು ಕಾಪಾಡಿ
ಜಯವ ತಂದಿತ್ತ ಆ ಯದುನಂದನಾ
ಅವನಿಲ್ಲದೇ ಬಂದ ನೀನು ತೃಣಕ್ಕೆ ಸಮಾನ
-
ಅರ್ಜುನ: ಅಸಹಾಯ ಶೂರ ನಾ ಅಕ್ಷೀಣ ಬಲನೋ
ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ
ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೊ ವ್ಯಾಘ್ರನಿವನೋ
ಉಗ್ರಪ್ರತಾಪೀ….
-
ಬಭ್ರುವಾಹನ: ಓಹೊಹೊಹೊ… ಉಗ್ರಪ್ರತಾಪಿ…. ಆ…
ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ
ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
ನೂಪುರಂಗಳ ಕಟ್ಟಿ ನಟಿಸಿ ತಕಥೈ ಎಂದು
ನಾಟ್ಯ ಕಲಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ
ಮಗನನ್ನು ಬಲಿಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೊ
ಖಂಡಿಸದೆ ಉಳಿಸುವೆ ಹೋಗೊ ಹೋಗೆಲೊ ಶಿಖಂಡೀ…
-
ಅರ್ಜುನ : ಫಡಫಡಾ ಶಿಖಂಡಿಯೆಂದಡಿಗಡಿಗೆ ನುಡಿಯ ಬೇಡಲೋ ಮೂಢ
ಭಂಡರೆದೆ ಗುಂಡಿಗೆಯ ಖಂಡಿಸುತೆ ರಣಚಂಡಿ ಗೌತಣವೀವ ಈ ಗಾಂಢೀವಿ
ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡಾ
-
ಬಭ್ರುವಾಹನ: ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ
ಹೂಡು ಬಾಣಗಳ ಮಾಡುವೆ ಮಾನಭಂಗ
ಅರ್ಜುನ : ಕದನದೊಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ
ಬಭ್ರುವಾಹನ: ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ
-
ಅರ್ಜುನ : ಆರ್ಭಟಿಸಿ ಬರುತಿದೆ ನೋಡು ಅಂತಕನ ಆಹ್ವಾನ
ಬಭ್ರುವಾಹನ: ಅಂತಕನಿಗೇ ಅಂತಕನು ಈ ಬಭ್ರುವಾಹನಾ

ಎ. ಆರ್ ಮಣಿಕಾಂತ್ ಅವರ ಬ್ಲಾಗಿನಲ್ಲಿ ಈ ಹಾಡು ಹುಟ್ಟಿದ ಸಂಧರ್ಭ ತಿಳಿಯಬಹುದು..

Tuesday, March 02, 2010

ಹೋಳಿಯ ದಿನ

ಸಮಗಾರ ಸಾವು

ಸಿಡಿಮದ್ದ ಸಿಡಿತದಲಿ ಮುರಿದು ಬಿದ್ದಿಹರಿಬ್ಬರು
ತಾಯ್ನಾಡ ಬಯಕೆಗೆ ಬಾಳ ನೈವೇದ್ಯವಿತ್ತ ಧೀರ ಯೋಧರು
ಹದಿನೆಂಟರ ಹರೆಯದ ಮುಗ್ಧನೊಬ್ಬ ಇನ್ನೂ ಬಲಿಯದ ಮೈ
ನಲ್ವತ್ತರ ಮತ್ತೊಬ್ಬ ಕಂಡಿಹನು ಯುದ್ಧಗಳ, ಬಡಿದಾಡಿಹನು ಹೊಯ್ ಕಯ್

ಹರೆಯದ ಹುಡುಗನಿಗೆ ಪಳಗಿಲ್ಲ ಮೈ -ಮನ . ಅಳಿದಿಲ್ಲ ಹುಡುಗುತನ
ಎಳೆಯ ಹೃದಯದಲ್ಲಿನ್ನೂ ಕಳೆದಿಲ್ಲ ಮಗುತನ ಮೊಳೆತಿಲ್ಲ ಧೀರತನ
ತುಕಡಿಗವ ನಿಮಿತ್ತ, ಯುದ್ದದಾವೇಶಕೆ ಬಲಿಯಾದ ಮೇಷ
ಮರಣದ ಮುಂದು ಸಿಡಿದ ಬೈಗಳೋ, ದೇವನನೇ ಕೊಲ್ಲುವಾವೇಶ.

ಇನ್ನೊಬ್ಬ ಅನುಭವದ ಮೂಟೆ, ಸಾವಿಗಂಜದ ಮನಸು
ಜೀವನದ ತುಂಬೆಲ್ಲ ಕಂಡಿಹನು ಸಾವಿನ ಸೊಗಸು
ಕಡೆ ಉಸಿರಲವನ ಮನದಲಿ ಏನಿತ್ತೋ ಕೇಳಿದವರಾರು
ನುಡಿ ಕೇಳಿ ಅರಿಯಬಲ್ಲೆಯಾದರೆ ಅಮ್ಮಾ ಎಂದವನ ಒರಲು..?

ತುಕಡಿಯೊಡೆಯ ಸರ್ದಾರ ದುಃಖದಲಿ ಘೋಷಿಸಿದ ಉಳಿದವರ ಮುಂದೆ
"ವೀರರಿವರೇ ಸೈ, ತಾಯ್ನಾಡಿಗಾಗಿ ನೀಡಿಹರು ಜೀವಾರ್ಪಣ
ನಮಗಿವರದೇ ಆದರ್ಶ, ಇವರೇ ನಮ್ಮ ಹೆಮ್ಮೆ"
ಇದೇ ಮಾತ ಎರಡು ಪ್ರತಿಗಳಲಿ ಇಬ್ಬರ ಮನೆಗೂ ಕಳಿಸಿಬಿಡಿ ಒಮ್ಮೆ.

The leveller - ಎಂಬ ರಾಬರ್ಟ್ ಗ್ರೇವ್ಸ್ ರ ಪದ್ಯದ ಭಾವಾನುವಾದ.

Thursday, February 25, 2010

ಊರುಗೋಲುಗಳು

ಒಂದೇ ಒಂದು ಹೆಜ್ಜೆ
ಇಡಲಿಲ್ಲ ನಾನು ಏಳು ವರುಷಗಳ ವರೆಗೆ
ಪ್ರಸಿದ್ದ ವೈದ್ಯರೊಬ್ಬರ ಕಂಡೆ ಈ ಬಗ್ಗೆ
ಕೇಳಿದರವರು 'ಈ ಊರುಗೋಲುಗಳು ನಿನಗೇಕೆ?'
ನುಡಿದೆ ನಾ 'ನಾನಲ್ಲವೆ ಕುಂಟ ಅದಕೆ'

ಮರುನುಡಿದ ಕೂಡಲೇ ವೈದ್ಯ 'ಆಶ್ಚರ್ಯವೇನದರಲ್ಲಿ
ಊರುಗೋಲುಗಳ ಕಿತ್ತತ್ತಲಿಡು ಪಕ್ಕದಲ್ಲಿ
ಕುಂಟಾದರೇನು ? ಹಾಗೆ ಕುಂಟುತಲೇ ನಡೆ
ನೆಲಕೆ ಬೀಳು, ಬಿದ್ದು ತೆವಳು ನಡೆಯಲಾಗದೆಡೆ"

ಕಿತ್ತುಕೊಂಡ ನನ್ನ ಪ್ರೀತಿಯ ಆಸರೆಗೋಲುಗಳ
ಹೇಳುತ್ತ ಹೀಗೆ, ನಗುತ್ತ ದೆವ್ವದ ನಗೆ !
ಮುರಿದನೆರಡೂ ಕೋಲುಗಳ ಬೆನ್ನ ಹಿಂದೆ
ಮುರಿದು ಒಲೆಗಿಟ್ಟ ನನ್ನ ಆಶೆಯನ್ನೇ

ಅರೆ,! ನಾನೀಗ ಗುಣವಾಗಿದ್ದೇನೆ .. ನಡೆಯಬಲ್ಲೆ
ಬರೆ ನಗೆಯ ಮದ್ದು .. ಇನ್ನೆಂಥದಲ್ಲೆ
ಆದರೂ ಒಮ್ಮೊಮ್ಮೆ ಕೋಲುಗಳ ಕಂಡಾಗ
ಕುಂಟುತ್ತಲಿರುತ್ತೇನೆ ಕೆಲವು ಘಳಿಗೆ.

(ಬರ್ಟೋಲ್ಟ್ ಬ್ರೆಕ್ಟ್ ನ "The cruches" ನ ಭಾವಾನುವಾದ)
೨೫/೫/೧೯೯೨

English version is here

THE CRUTCHES

Seven years I could not walk a step.
When I to the great physician came
He demanded: Why the crutches?
And I told him: I am lame.

He replied: That¹s not surprising.
Be so good and try once more.
If you¹re lame, it¹s those contraptions.
Fall then! Crawl across the floor!

And he took my lovely crutches
Laughing with a fiend¹s grimace
Broke them both across my back and
Threw them in the fireplace.

Well, I¹m cured now: I can walk.
Cured by nothing more than laughter.
Sometimes, though, when I see sticks
I walk worse for some hours after.

Wednesday, February 24, 2010

ಜಾದೂ ಪೆಟ್ಟಿಗೆಯ ನಿರೀಕ್ಷೆಯಲ್ಲಿ

ಜೀವದ ಮೇಲಿನ ಆಸೆ ಬಹು ದೊಡ್ಡದು. ಕೆಲಸಕ್ಕೆ ರಾಜೀನಾಮೆ ಇತ್ತು ಕುಟುಂಬದದೊಂದಿಗೆ ಕಾಲ ಕಳೆಯುವ ಬಯಕೆಯ ಯುವತಿ ಅದಕ್ಕಾಗಿ ಬದುಕುವ ಹಂಬಲ ಹೊತ್ತು ಕಿಟಕಿಗೆ ಸೀರೆ ಕಟ್ಟಿ ಕೆಳಗಿದಳು. ಆದರೆ ಕಾಲನ ಲೆಕ್ಕಾಚಾರವೇ ಬೇರೆ. ಅವಳನ್ನು ಸೀರೆಯಿಂದ ಬಿಡಿಸಿ ನೇರ ತನ್ನ ತೆಕ್ಕೆಗೆ ತೆಗೆದುಕೊಂಡ. ಬದುಕಬೇಕೆಂಬದ ಹಂಬಲದ ಹಲವರ ಸಾವು ಕಾರ್ಲ್ ಟನ್ ಕಟ್ಟಡದ ದುರಂತ. ಆಧುನಿಕತೆಯ ಹೆಸರಿನ ಆಮಿಷಗಳೂ , ಅವುಗಳ ಹಿಂದೆ ಅರಿಯದೆ ಕಾಲಿಡುವ ಅನಿಷ್ಟಗಳೂ ಈದುರಂತದ ಪಾಠ. ದುರಂತದ ಘಟನಾಸ್ಥಳಕ್ಕೆ ಕೇವಲ ಮೂರು ಅಗ್ನಿಶಾಮಕ ವಾಹನಗಳು ಸಮಯದಲ್ಲಿ ತಲುಪಲು ಸಾಧ್ಯವಾಯಿತು. ಇದು ಬೆಂಗಳೂರಿನ ಸಂಚಾರ ದಟ್ಟಣೆಯ ದುರಂತ. ಸಿನಿಮಾಗಳ ಪ್ರಭಾವದಿಂದಲೋ, ಅಥವಾ ಇನ್ನ್ಯಾವುದೋ ಭಂಡ ಧೈರ್ಯದಿಂದಲೋ ಮೇಲಿಂದ ಹಾರುವ ಸಾಹಸಕ್ಕಿಳಿದವರು ಜೀವ ತೆತ್ತದು ಮತ್ತೊಂದು ದುರಂತ. ಇದು ಬೆಂಗಳೂರಿನಲ್ಲಿ ಕೇವಲ ಹಣದಾಸೆಯಿಂದ ಸುರಕ್ಷತಾ ನಿಯಮಗಳನ್ನು ಮೀರಿ ಕಟ್ಟಡ ಕಟ್ಟುವವರ ಕಲ್ಲು ಮನಸ್ಸಿನ ನಿರ್ದರ್ಶನ. ಆಧುನಿಕತೆ ತನ್ನ ಅನುಕೂಲಗಳನ್ನು ತೋರಿಸುತ್ತಲೇ ತನ್ನ ಅನಿಷ್ಟಗಳ ತೆಕ್ಕೆಯಲ್ಲಿ ಎಲ್ಲರನ್ನೂ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುತ್ತದೆ ಎನ್ನುವುದಕ್ಕೊಂದು ಜೀವಂತ ನಿದರ್ಶನ.

ಇಂತಹ ಆಧುನಿಕತೆಗೆ ಭಾರತ ತೆರೆದುಕೊಳ್ಳಲಾರಂಭಿಸಿದ್ದು ತೊಂಬತ್ತರ ದಶಕದ ಪ್ರಾರಂಭದಲ್ಲಿ. ಅಂದು ನಾವು ವಿದ್ಯಾರ್ಥಿಗಳಾಗಿದ್ದಾಗ, ಡಂಕೆಲ್ ಒಪ್ಪಂದವನ್ನು ಉಗ್ರವಾಗಿ ವಿರೋಧಿಸಿದ ಪಕ್ಷಗಳು ಇಂದು ಬಂಡವಾಳಶಾಹಿಗಳ ಕೈಯಲ್ಲಿ ಸೂತ್ರದ ಗೊಂಬೆಗಳಾಗಿರುವುದು ಇತಿಹಾಸದ ಒಂದು ಐರನಿ. ಅಂದು ಈ ಒಪ್ಪಂದ ಜಾರಿಗೆ ಬರಲೆಂದು ಹೃದಯಪೂರ್ವಕವಾಗಿ ಹೋರಾಡಿದ ಹಲವರು ಬಂಡವಾಳ ಶಾಹಿಯ ವಿರುದ್ದ ಹೋರಾಡುವ ಮನಸ್ಸು ಮಾಡುತ್ತಿರುವುದೂ ಇಂತಹ ಐರನಿಯಿಂದಲೇ. ಬದಲಾವಣೆಯೊಂದೇ ಜಗತ್ತಿನಲ್ಲಿ ಶಾಶ್ವತ ಎಂಬ ಮಾತು ಎಷ್ಟು ಸತ್ಯ. ಮನಮೋಹನ ಸಿಂಗ್ - ನರಸಿಂಹರಾವ್ ಜೋಡಿಯಿಂದ ಆರಂಭವಾದ ಈ ಬದಲಾವಣೆಯ ಹಿಂದಿನ ಬೀಜ ಶಕ್ತಿ ರಾಜೀವ ಗಾಂಧಿಯವರ ಕನಸುಗಳು. ರಾಜೀವರ ಕಾಲದಲ್ಲಿ ಭಾರತ ಅಣುಶಕ್ತಿ, ತಂತಜ್ಞಾನ ವಿದ್ಯ್ತುತ್ ವಿಜ್ಞಾನ ಕ್ಷೇತ್ರಗಳಲ್ಲಿ ಬದಲಾವಣೆ ಕಂಡಿತು. ಅದರೊಂದಿಗೆ ಬಂಡವಾಳಶಾಹಿ ವ್ಯವಸ್ಥೆ ಅರ್ಥಿಕ ಬೆಳವಣಿಗೆಗೆ ಅಗತ್ಯ ಎಂಬ ಅರಿವು, ಅದು ನಿಜವೋ ಸುಳ್ಳೋ ಭಾರತೀಯರಿಗೆ ಮೂಡಿದ್ದಂತೂ ಸತ್ಯ. ಕೆಲವೇ ಹೈ- ಪ್ರೊಫೈಲ್ ಜನ ಹೇಳುತ್ತಿದ್ದ ಶೇರು ಮಾರುಕಟ್ಟೆ ಇಂದು ಮಧ್ಯಮ ವರ್ಗದ ಭಾರತೀಯರ ಮನೆ ಹೊಕ್ಕಿದೆ. ತಂತ್ರಜ್ಞಾನದ ಅರಿವು ಮತ್ತು ಅದರ ಸಾಧ್ಯತೆಗಳು ನಮ್ಮರಿವಿಗೇ ಬಾರದಂತೆ ನಮ್ಮಲ್ಲಿ ಸರ್ವವ್ಯಾಪಿಯಾಗಿದೆ. ಭಾರತದ ಕಡಲ ತೀರದ ಮೀನುಗಾರರು ಸಮುದ್ರಕ್ಕೆ ಇಳಿಯುವ ಮುಂಚೆ ನಾಸಾ ಅಂತರ್ಜಾಲ ತಾಣದಲ್ಲಿ ಹವಾಮಾನ ವರದಿ ನೋಡುತ್ತಾರೆ. ಮೈಸೂರಿನ ಗಲ್ಲಿಯೊಂದರಲ್ಲಿ ವಾಸವಿರುವ ಕ್ರಿಕೆಟ್ ಬೆಟ್ಟಿ ಇಂಗ್ಲೆಂಡ್ ನಲ್ಲಿ ನಡೆಯುವ ಪಂದ್ಯದ ಹವಮಾನ ವರದಿಯನ್ನು ಅಂತರ್ಜಾಲದಲ್ಲಿ ನೋಡುತ್ತಾನೆ. ಮುಂಬೈ ಕುದುರೆ ಪಂದ್ಯಕ್ಕೆ ಕೇರಳದ ಪಾಲಕ್ಕಾಡಿನ ಜಮೀನುದಾರ ಕೊಯಮತ್ತೂರಿಗೆ ಬಂದು ಸೈಬರ್ ಕೆಫೆಯಲ್ಲಿ ಕುದುರೆಗಳ ಜಾತಕ ನೋಡುತ್ತಾನೆ. ನಾಸ್ಡಾಕ್ ನ ಶೇರು ಮಾರುಕಟ್ಟೆಯ ಬೆಳಗಿನ ಪ್ರಾರಂಭದ ಘಂಟೆಯನ್ನು ಮೈಸೂರಿನಲ್ಲಿ ನಾರಾಯಣ ಮೂರ್ತಿ ಹೊಡೆಯುತ್ತಾರೆ. ವಿಚಾರಣೆಗೆ ಮೈಸೂರಿನ ನ್ಯಾಯಾಲಯ, ನ್ಯೂಯಾರ್ಕಿನ ಪ್ರತಿವಾದಿಯನ್ನು ಟೆಲಿ ವಿಚಾರಣೆ ನಡೆಸುತ್ತದೆ. ಅಮೆರಿಕಾದ ಬೆಳಗಿನ ಕೆಲಸ ಇಲ್ಲಿನ ರಾತ್ರಿ ಪಾಳಿಯ ಕಾಲ್ ಸೆಂಟರ್ ನಲ್ಲಿ ನಡೆಯುತ್ತದೆ. ರಾತ್ರಿ ಮಾಡಬೇಕಾದ ಕೆಲಸ ಬೆಳಗಿನ ಪಾಳಿಯ ಔಟ್ ಸೋರ್ಸಿಂಗ್ ಕೇಂದ್ರದಲ್ಲಿ ನಡೆಯುತ್ತದೆ. ಪ್ರಪಂಚ ಗ್ಲೋಬಲ್-ವಿಲೇಜ್ ಆಗುತ್ತಿದೆ. ಇಂತಹ ಸಮಾಜದಲ್ಲಿ ನಮ್ಮ ಸರ್ಕಾರ ಅಭಿವೃದ್ದಿಯ ಅಧ್ಯಯನಕ್ಕಾಗಿ ಚೀನಾಕ್ಕೆ ಸಚಿವರನ್ನು ಪ್ರವಾಸ ಕಳಿಸುತ್ತದೆ. ಅದೂ ಅತಿವೃಷ್ಟಿಯಿಂದ ರಾಜ್ಯ ನರಳುತ್ತಿದ್ದಾಗ. ಬಂಡವಾಳ ಶಾಹಿ ಸರ್ಕಾರ ಕಮ್ಯುನಿಸ್ಟ್ ದೇಶವೊಂದಕ್ಕೆ ಅಭಿವೃದ್ದಿಯ ಅಧ್ಯಯನಕ್ಕೆ ಹೋಗುವುದು ಮತ್ತೊಂದು ಇತಿಹಾಸ. ಅಂದು ಸೋವಿಯತ್ ಒಕ್ಕೂಟದ ವ್ಯವಸ್ಥೆಯಿಂದ ಪ್ರೇರಿತರಾದ ನೆಹರೂರವರಂತೆ, ಇಂದು ಯಡಿಯೂರಪ್ಪನವರ ತಂಡ ಚೀನಾದಿಂದ ಪ್ರೇರಿತರಾಗುತ್ತಾರೆ. ಕರ್ನಾಟಕದ ಕಬ್ಬಿಣದ ಅದಿರನ್ನು ಮುಕ್ತವಾಗಿ ಚೀನಾಕ್ಕೆ ಮಾರುತ್ತಾರೆ. ಪರಿಸರ ಇಲಾಖೆ ,ಲೋಕಾಯುಕ್ತ ಇವರೆಲ್ಲರ ಮಾತು ಮೀರಿ, ಕರ್ನಾಟಕದಲ್ಲಿ ಇನ್ನಷ್ಟು ಜಾಗೆಗಳನ್ನು ಗಣಿಗಾರಿಕೆಗೆ ನೀಡುತ್ತಾರೆ. ಇವೆಲ್ಲಾ ಆಯಾ ಕಾಲಘಟ್ಟಗಳಲ್ಲಿ ನಡೆಯಲೇಬೇಕಾದ ಕೆಲಸಗಳೇನೋ? ಮುಂದಿನದ್ದು ಕಣ್ಣಿಗೆ ಬೀಳದಾದಾಗ ಇಂದಿನ ದಿನ ಕಳೆದರೆ ಸಾಕು ಎನ್ನುವ ಮನೋಭಾವ. ಯಥಾರಾಜಾ.. ತಥಾ ಪ್ರಜಾ.. ತಿನ್ನಲು ಅನ್ನ ನೀಡುವ ಭೂಮಿಯನ್ನು ಹಣಕಾಸಿಗೆ ಮಾರಿ, ಬಂದ ಹಣವನ್ನು ಮೂರೇ ತಿಂಗಳಲ್ಲಿ ಉಡಾಯಿಸಿ ಮತ್ತೆ ಕೂಲಿ ಕೆಲಸ ಹುಡುಕುತ್ತಾ, ಸಿಗದಿದ್ದಾಗ ಅಪರಾಧಗಳಿಗಿಳಿಯುವ ಜನಕ್ಕೆ ದಾರಿ ತೋರುವ ನಾಯಕರಿವರು. ನೈಸ್ ಭೂಮಿಗೆ ಹೋರಾಡಿದರೆ ಅಲ್ಲಿ ನಿಮ್ಮ ಜಮೀನೆಷ್ಟೆಕರೆ ಎನ್ನುತ್ತಾರೆ. ಖೇಣಿಯ ಹುಟ್ಟುಹಬ್ಬ ಅಭಿಮಾನದಿಂದ ನಡೆಯಿತೋ, ಹಣದ ಹೊಳೆ ಹೇಗೆ ಹರಿಯಿತೋ ಎನ್ನುವುದನ್ನು ಹುಡುಕುವವರೆಷ್ಟು ಮಂದಿ.

ಇದನ್ನೆಲ್ಲಾ ಹೇಳುವುದಕ್ಕೆ ಹೊರಟಿದ್ದು, ಈ ವಾರದ ವಿಶೇಷವೊಂದು ಇರುವುದರಿಂದ. ಇದು ಫೆಬ್ರುವರಿ ತಿಂಗಳ ಕಡೆಯ ವಾರ. ಈ ವಾರದ ಶನಿವಾರದಂದು ಸಂಸತ್ತಿನಲ್ಲೊಂದು ಮಾಯಾಪೆಟ್ಟಿಗೆ ಬಿಚ್ಚಿಕೊಳ್ಳುತ್ತದೆ. ಅದರಿಂದ ಭರವಸೆಗಳ ಹೂ ಮಳೆ ಹರಿಯುತ್ತದೆ. ತೆರಿಗೆ ಭಾರದ ಹೊರೆಯ ಮೊಳೆಯೂ ಹೊಳೆಯುತ್ತದೆ. ಅದೇ ನಮ್ಮ ಬಜೆಟ್. ಪ್ರಣವ ಮುಖರ್ಜಿ ಎಂಬ ಮಾಂತ್ರಿಕನ ಕೈಯಲ್ಲಿ ಈ ಪೆಟ್ಟಿಗೆ. ನಮ್ಮ ಬಜೆಟ್ ನ ನಿರೀಕ್ಷೆಯ ಮುಂಚೆ ನಿಮಗೊಂದು ಸಣ್ಣ ಕತೆ ಹೇಳುತ್ತೇನೆ. ಅಮೆರಿಕಾದ ಮೂಲ ನಿವಾಸಿ ರೆಡ್-ಇಂಡಿಯನ್ನ್ ಬುಡಕಟ್ಟು ಜನಾಂಗಕ್ಕೆ ಒಂದು ಅಭ್ಯಾಸವಿದೆಯಂತೆ . ಅವರಿಗೆ ಹೇಗೋ ತಮ್ಮದೇ ಆದ ವಿಧಾನಗಳ ಮೂಲಕ ಆ ವರ್ಷ ಮಳೆಯಾಗುವ ಪ್ರಮಾಣ ಎಷ್ಟೆಂಬುದು ಅವರ ನಾಯಕನ ಮೂಲಕ ತಿಳಿಯುತ್ತದಂತೆ. ಕಣಿ ಕೇಳಿಯೋ, ಆಕಾಶ ನೋಡಿಯೋ, ಅಶರೀರವಾಣಿಯೋ ಅವನಿಗೆ ಈ ರಹಸ್ಯ ಬಯಲು ಮಾಡುತ್ತದಂತೆ. ಅದು ಹೇಗೆ ತಿಳಿದುಕೊಳ್ಳಬೇಕೆಂಬುದು ಅವರ ನಾಯಕರಿಗೆ ಮಾತ್ರ ಗೊತ್ತಿರುವ ಗುಟ್ಟು. ಅದನ್ನು ವಂಶಪಾರಂಪರ್ಯವಾಗಿ ತಮ್ಮ ವಾರಸುದಾರರಿಗೆ ಸಮಯ ಬಂದಾಗ ತಿಳಿಸುವ ಪದ್ದತಿ ಅವರದ್ದು. ನಾಯಕನ ಮಾತಿನಂತೆ ಮಳೆ ಹೆಚ್ಚಾಗಿ ಬರುತ್ತದೆ ಎಂದರೆ ಸುತ್ತಲಿನ ಕಾಡುಗಳಿಂದ ಮರವನ್ನು ಹೆಚ್ಚಾಗಿ ಸಂಗ್ರಹಿಸುತ್ತಾರೆ. ಧೀರ್ಘ ಮಳೆಗಾಲಕ್ಕೆ ಹೆಚ್ಚಿನ ಮರ ಸಂಗ್ರಹಿಸಿ ಸರಿದೂಗಿಸಿಕೊಳ್ಳಬೇಕೆಂಬುದು ಅವರ ತಂತ್ರ.

ಅಂತಹ ಒಬ್ಬ ನಾಯಕನ ವಾರಸುದಾರನಾಗಬೇಕಿದ್ದ ಪುತ್ರನೊಬ್ಬ ನಗರಕ್ಕೆ ಹೋಗಿ ಹೆಚ್ಚಿನ ವಿದ್ಯೆ ಕಲಿತು ಬಂದನಂತೆ. ವಿದ್ಯೆ ಕಲಿತು ಬಂದ ಮಗನಿಗೆ ಮರಣಶಯ್ಯೆಯೊದಗಿದಾಗ ನಾಯಕ ಹತ್ತಿರ ಕರೆದು ಮಳೆಯ ಮುನ್ಸೂಚನೆ ತಿಳಿಯುವ ವಿದ್ಯೆ ತಿಳಿ, ಇನ್ನು ಮುಂದೆ ಅವನೇ ತನ್ನ ಜನಾಂಗಕ್ಕೆ ಮಾರ್ಗದರ್ಶನ ಮಾಡಬೇಕೆಂದು ಹೇಳಿ ಮರಣಿಸುತ್ತಾನೆಸಿ ನಾಯಕ. ವಿದ್ಯೆ ಕಲಿತ ಹೊಸನಾಯಕನಿಗೆ ತಂದೆ ಹೇಳಿದ ಮಾತು ಅಪಥ್ಯ. ಅವೈಜ್ಞಾನಿಕವಾಗಿ ಮಳೆ ಬೀಳುವುದನ್ನು ನಿರ್ಧರಿಸುವುದು ಸರಿಯಲ್ಲವೆಂದು ಅವನ ಭಾವನೆ. ಮಳೆ ಬೀಳುವ ಪ್ರಮಾಣ ತಿಳಿಸಲು ದೊಡ್ಡದೊಂದು ಇಲಾಖೆಯೇ ಇದೆ. ಅಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಾರೆ. ಸಹಸ್ರಸಹಸ್ರ ಸಂಖ್ಯೆಯ ಗಣಕಗಳಿವೆ. ಪುಟಗಟ್ಟಲೇ ಉದ್ದದ ಸೂತ್ರಗಳಿವೆ, ಕಿಲೋಬೈಟುಗಟ್ಟಲೇ ಪ್ರೋಗ್ರಾಮುಗಳಿವೆ. ಅವನ್ನು ಬಿಟ್ಟು ತಂದೆ ಹೇಳಿದ ವಿಧಾನ ಸರಿ ಎಂದು ಅವನ ಮನಸ್ಸೊಪ್ಪಲಿಲ್ಲ. ಏನೇ ಆಗಲಿ ವೈಜ್ಞಾನಿಕ ಮಾರ್ಗದರ್ಶನ ಮಾಡಬೇಕೆಂದು ನಿರ್ಧರಿಸಿದ ಅವನು ಹವಾಮಾನ ವರದಿಯನ್ನು ರೇಡಿಯೋನಲ್ಲಿ ಕೇಳಿದ, ಅಂತರ್ಜಾಲದಲ್ಲಿ ಓದಿದ. ಸಾಧಾರಣ ಮಳೆಯ ಸೂಚನೆಗಳಿವೆ ಎಂದು ತನ್ನ ಜನಗಳಿಗೆ ತಿಳಿಸಿದ. ಜನ ಮರ ಸಂಗ್ರಹಿಸಲು ಮೊದಲಿಟ್ಟರು, ಹವಾಮಾನ ವರದಿ ಬದಲಾಯಿತು. ಹೆಚ್ಚಿನ ಮಳೆ ಎಂಬ ವರದಿ ಕೇಳಿಸಿತು. ಅದನ್ನು ತನ್ನ ಜನಕ್ಕೆ ಹೇಳಿದೆ. ಅವರು ಇನ್ನೂ ಹೆಚ್ಚಿನ ಮರ ಕಡಿಯತೊಡಗಿದರು. ಆ ವಾರದ ವರದಿ ಇನ್ನಷ್ಟು ತೀಕ್ಷ್ಣ ವಾಗಿತ್ತು. ಧಾರಾಕಾರ ಮಳೆ ಎಂಬ ವರದಿ. ಅದನ್ನೇ ತನ್ನ ಜನಕ್ಕೆ ಹೇಳಿದ. ಅವರು ಇನ್ನೂ ಹೆಚ್ಚಿನ ಮರ ಸಂಗ್ರಹಣೆಗೆ ತೊಡಗಿದರು. ಮುಂದಿನ ವಾರದ ವರದಿ ಅತ್ಯುಗ್ರ ಮಳೆ ಬೀಳುವ ಸಾಧ್ಯತೆ ಎನ್ನುತ್ತಿತ್ತು. ಈಗ ಈ ನಾಯಕನಿಗೆ ಯೋಚನೆ ಹತ್ತಿತ್ತು. ಯಾವುದಕ್ಕೂ ಹವಮಾನ ಇಲಾಖೆಯವರು ಈ ವರದಿ ಹೇಗೆ ಸಂಗ್ರಹಿಸುತ್ತಾರೆ ತಿಳಿಯಬೇಕೆಂದು, ಹವಮಾನ ಇಲಾಖೆಯ ಕಾರ್ಯಾಲಯಕ್ಕೆ ಹೋದ. ಅಲ್ಲಿ ತನ್ನ ಭೂಪ್ರದೇಶದ ಮಳೆಯ ವರದಿಯ ಬಗ್ಗೆ ವಿಚಾರಿಸಿದ. ಈ ಬಾರಿ ಅತ್ಯುಗ್ರ ಮಳೆ ಎನ್ನುವ ವರದಿ ಅವನಿಗೆ ಮತ್ತೆ ಸಿಕ್ಕಿತು. ಅವನು ಕೇಳಿದ ರೇಡಿಯೋ /ಅಂತರ್ಜಾಲದ ವರದಿ ಈ ವರದಿಯ ಆಧಾರದ ಮೇಲೇ ಇದ್ದಿತು. ಹಾಗಿದ್ದರೆ ಈ ವರದಿ ತಯಾರಾದದ್ದು ಹೇಗೆ. ಅಲ್ಲಿನ ಮುಖ್ಯಸ್ಥರನ್ನು ಭೇಟಿ ಮಾಡಿ , ಈ ವರದಿಯ ಆಧಾರದ ಬಗ್ಗೆ ವಿಚಾರಿಸಿದೆ. ಮುಖ್ಯಸ್ಥರ ಮಾತು ಆತನನ್ನು ಬೆಚ್ಚಿ ಬೀಳಿಸಿತು.

ಅವರು ಹೇಳಿದ್ದು .. " ನಾವು ಇಷ್ಟೆಲ್ಲಾ ಸಾಧನೆ-ಸಾಧನಗಳಿದ್ದರೂ ಪ್ರಕೃತಿಯ ಮುಂದೆ ಅಲ್ಪರು. ನಮ್ಮ ಲೆಕ್ಕಾಚಾರ ಹಲವಾರು ಬಾರಿ ಏರು-ಪೇರಾಗುತ್ತದೆ. ಆದರೆ ನಿಮ್ಮ ಭೂ ಪ್ರದೇಶದ ವಿಷಯದಲ್ಲಿ ನಾವು ಬೇರೆಯದೇ ಆದ ಲೆಕ್ಕಾಚಾರ ಅನುಸರಿಸುತ್ತೇವೆ. ಆ ಪ್ರದೇಶದ ಮೂಲವಾಸಿಗಳಾದ ರೆಡ್-ಇಂಡಿಯನ್ನರು ಮಳೆ ಹೆಚ್ಚಾಗಿ ಬೀಳುವ ವರ್ಷಗಳಲ್ಲಿ ಹೆಚ್ಚಿನ ಮರ ಸಂಗ್ರಹಿಸುತ್ತಾರೆ. ಈ ಬಾರಿಯಂತೂ ಅವರು ಅತ್ಯಂತ ಹೆಚ್ಚಿನ ಮರ ಸಂಗ್ರಹಿಸುತ್ತಿದ್ದಾರೆ ಅವರ ಲೆಕ್ಕಾಚಾರ ಇಷ್ಟೂ ವರ್ಷಗಳಲ್ಲಿ ತಪ್ಪಿದ್ದಿಲ್ಲ. ಅಂದರೆ ಈ ಬಾರಿ ಅತ್ಯುಗ್ರ ಮಳೆ ಬೀಳುತ್ತದೆ ಎನ್ನುವುದೇ ನಮ್ಮ ಅನಿಸಿಕೆ"

ಹೀಗೆ ನಮ್ಮ ಸುತ್ತಲಿನ ವೈಜ್ಞಾನಿಕ ವೆನ್ನಿಸುವ ಎಷ್ಟೋ ವರದಿಗಳು, ಅಸಂಬದ್ದ ತಳಹದಿಯ ಮೇಲೆ ನಿಂತಿರುತ್ತವೆ. ಈ ಬಾರಿಯ ಅರ್ಥಿಕ ಮುಗ್ಗಟ್ಟಿಗೆ ರಿಯಲ್ ಎಸ್ಟೇಟ್ ಉದ್ಯಮ ಕಾರಣ ಎನ್ನುವರಾರು, ನಾಗಾಲೋಟ ಓಡುತ್ತಿದ್ದಾಗ ಎಲ್ಲಿಯೋ ಏನೋ ತಪ್ಪಿರಬಹುದೇ ಎನ್ನುವ ಯೋಚನೆ ಮಾಡುವುದಿಲ್ಲ. ಇಂತಹ ವರದಿಗಳನ್ನು ಆಧರಿಸಿಯೇ ನಮ್ಮ ಬಜೆಟ್ ನಿರ್ಧರಿತವಾಗುತ್ತದೆ. ಪ್ರಣವ್ ಮುಖರ್ಜಿ ಸಮಾಜವಾದಿ ಗರಡಿಯಲ್ಲಿ ಬೆಳೆದವರು. ಆದರೂ ಇಂದಿಗೂ ಪ್ರಸ್ತುತವೆನಿಸುವ ರಾಜಕಾರಣಿ. ಹೊಸಸರ್ಕಾರದಲ್ಲಿ ಹಣಕಾಸು ಸಚಿವ ಸ್ಥಾನ ಚಿದಂಬರಂ ಅವರ್ನ್ನು ಬಿಟ್ಟು ಪ್ರಣವ್ ಮುಖರ್ಜಿಯವರತ್ತ ಹೋದಾಗ, ನನಗನ್ನಿಸಿದ್ದು ಭಾರತ ಈ ಬಂಡವಾಳಶಾಹಿಯ ಕಬಂಧ ಬಾಹುಗಳಿಂದ ಬಿಡಿಸಿಕೊಂಡು ಮತ್ತೆ ಸಮಾಜವಾದದ ನೆರಳಡಿಗೆ ತೆರಳುತ್ತಿದೆಯೇ ಎಂದು. ಅವರ ಮೊದಲ ಬಜೆಟ್ ಹೊಸತನವಿಲ್ಲದಿದ್ದರೂ, ಹೊರೆತನವೂ ಇರಲಿಲ್ಲ. ಅಲ್ಲದೆ ಅರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ಬಂಡವಾಳಶಾಹಿಗಳಿಗೆ ಒಂದಿಷ್ಟು ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದ್ದು ಸತ್ಯ. ಈ ಬಂಡವಾಳಶಾಹಿಗಳ ಬಾಹು ಬಂಧನ ಎಷ್ಟು ಬಿಗಿಯೆಂದರೆ, ಎಂದೂ ಬಂಡವಾಳಶಾಹಿಯ ತತ್ವದ ಮೇಲೇ ಸ್ಥಾಪಿತವಾದ ಅಮೆರಿಕೆಯಂತಹ ಪ್ರಜಾಪ್ರಭುತ್ವದ ನಾಯಕರು ಸಮಾನ ಅರ್ಥಿಕ ಲಾಭ ಎನ್ನುವ ಪದ ಬಳಸಿದ್ದಷ್ಟಕ್ಕೇ, ಉದ್ದುದ್ದದ ಚಾಟಿಗಳು ಬೀಸಲ್ಪಡುತ್ತವೆ. "you cannot multiply wealth by dividing it" ಎನ್ನುವ ಮಾತುಗಳನ್ನು ಜನಪ್ರಿಯಗೊಳಿಸುವ ಕ್ಕ್ಯಾಂಪೇನ್ (ಪ್ರಚಾರ ಸರಣಿ)ಗಳೇ ಆರಂಭವಾಗುತ್ತದೆ. ಬರಾಕ್ ಒಬಾಮ ಒಬ್ಬ ಸಮಾಜವಾದಿ - ಕಮ್ಯುನಿಸ್ಟ್ ಎನ್ನುವ ಹಣೆಪಟ್ಟಿಯನ್ನೂ, ಹೊಡೆದುಬಿಡುತ್ತವೆ. ಅದೂ ಒಬಾಮ ಸಮಾನ ಅರ್ಥಿಕತೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮಾತ್ರ ಎನ್ನುವ ಭರವಸೆಯನ್ನು ಕೊಟ್ಟ ಮೇಲೆಯೂ.
ಇಂತಹ ಬಾಹುಗಳಿಂದ ಬಿಡಿಸಿಕೊಳ್ಳುವ ಶಕ್ತಿ ಪ್ರಣವ್ ಮುಖರ್ಜಿಯವರಿಗಿದೆಯೇ?

ಇದೆಯೆಂದೇ ಮನಮೋಹನ ಸಿಂಗ್ ನಂಬಿದ್ದಾರೆ. ಅದಕ್ಕಾಗಿಯೇ ಈ ಬಾರಿಯ ಬಜೆಟ್ ಅನ್ನು ನಾವು ಉತ್ಸುಕತೆಯಿಂದ ಎದುರು ನೋಡಬೇಕಿದೆ. ಸಿರಿವಂತರು ಮತ್ತು ಬಡವರ ನಡುವಿನ ಕಂದಕ ದೊಡ್ಡದಾಗುತ್ತಿದೆ. ಹಿರಿಯರು ಬದಲಾದ ವಾತಾವರಣದಲ್ಲಿ ಬಿಕ್ಕುತ್ತಿದ್ದಾರೆ. ಕಿರಿಯರು ಸ್ವಚ್ಚಂದವಾಗುತ್ತಾ, ಒಮ್ಮೆ ಎದುರಾಗುವ ಕಷ್ಟಕ್ಕೇ ಬರಿದಾಗಿ, ಬಲಿಯಾಗುತ್ತಿದ್ದಾರೆ. ಮೊದಲೇ ಹೇಳಿದಂತೆ ಆಧುನಿಕತೆಯ ಅನಿಷ್ಟಗಳು ಬಾಗಿಲ ಒಳಗೆ ಹೆಜ್ಜೆಯಿಟ್ಟಾಗಿದೆ. ಇವೆಲ್ಲವನ್ನು ಗಮನಿಸಿ ಹೆಚ್ಚರಿಕೆಯ ಹೆಜ್ಜೆಯಿಡುವ ಸವಾಲು ಪ್ರಣವ್ ಮುಖರ್ಜಿಯವರ ಮುಂದಿದೆ. ಅವರೇನು ಮಾಡುತ್ತಾರೆ? ತಮ್ಮ ಮಂತ್ರದಂಡವನ್ನಾಡಿಸಿ ಜಾದೂ ಪೆಟ್ಟಿಗೆಯನ್ನು ತೆರೆಯಲಿದ್ದಾರೆ. ಇದೇ ೨೬ರಂದು... ಅಲ್ಲಿಯವರೆಗೆ ಕಾದು ನೋಡೋಣ.

ಕೊನೆಯ ಮಾತು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೆ ಅನಾವೃಷ್ಟಿ. ಜನತಾ ಸರ್ಕಾರ ಇದ್ದರೆ ಅತಿವೃಷ್ಟಿ. .. ಈಗ ಬಿಜೆಪಿ ಸರ್ಕಾರದಲ್ಲಿ ಎರಡೂನಾ..? (ಈ ತಿಂಗಳ ಬಿಸಿಲು ನೋಡಿ ಅನಿಸಿದ ಮಾತು..ಸುಮ್ಮನೆ ನಕ್ಕುಬಿಡಿ)

Wednesday, February 17, 2010

Magic of thinking BIG --ಮಾಯೆ ಮಾಡುವ ಚಿಂತನೆ

ಹೀಗೆ ಸುಮ್ಮನೆ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಿದ್ದಾಗ, ಡೇವಿಡ್ ಜೆ ಶ್ವಾರ್ಜ್ ಬರೆದ "Magic of thinking big" ಪುಸ್ತಕದ ಕಣ್ಣಿಗೆ ಬಿದ್ದಿತು. ಇಂಗ್ಲಿಷಿನಲ್ಲಿ ಪರ್ಸನಾಲಿಟಿ ಡೆವಲಪ್ ಮೆಂಟ್ ಬಗ್ಗೆ ಸಹಸ್ರ ಸಹಸ್ರ ಪುಸ್ತಕಗಳು ಸಿಗುತ್ತವೆ, ಕನ್ನಡದಲ್ಲಿ ಇಂತಹ ಪುಸ್ತಕಗಳು ಬಹಳ ಕಡಿಮೆ. ಯಂಡಮೂರಿಯವರ ವಿಜಯಕ್ಕೆ ಐದು ಮೆಟ್ಟಿಲುಗಳು ಅಥವಾ ಶಿವ್ ಖೇರಾ ಅವರ "ನೀವೂ ಗೆಲ್ಲಬಲ್ಲಿರಿ" ಪುಸ್ತಕಗಳ ಅನುವಾದ ಬಿಟ್ಟರೆ ಅಂತಹ ಪ್ರಯತ್ನ ಬಂದಿದ್ದು ರವಿ ಬೆಳಗೆರೆ ಅವರಿಂದ.

ಆದರೆ ಕನ್ನಡ ಕಾದಂಬರಿಗಳಲ್ಲಿ ತರಾಸು ಚಿತ್ರಿಸುವ ವ್ಯಕ್ತಿ ಚಿತ್ರಗಳಿಂದ ಪರ್ಸನಾಲಿಟಿ ಡೆವಲಪ್ ಮೆಂಟ್ ಕಲಿಯುವುದಾದರೆ ಅದರ ಸೊಬಗೇ ಬೇರೆ. ಪೂಚಂತೆ ಸೃಷ್ಟಿಸಿದ ಜುಗಾರಿ ಕ್ರಾಸ್ ನ ಸುರೇಶನ ವ್ಯಕ್ತಿತ್ವವಾಗಲೀ ,ಕುವೆಂಪುರವರ ರಕ್ತಾಕ್ಷಿಯ ಬಸವಣ್ಣನಾಗಲಿ, ಬಿ ಎಂ ಶ್ರೀಯವರ ಅಶ್ವಥಾಮನ್ ಆಗಲೀ ಅದ್ವಿತೀಯರಷ್ಟೇ. ಈ ಸಂಚಿಕೆಯಲ್ಲಿ ನಾ ಹೇಳಬೇಕೆಂದಿರುವುದು ಈ ಪುಸ್ತಕದ ಬಗ್ಗೆ ಮಾತ್ರ. ಯೋಗವೂ ಯೋಗ್ಯತೆಯೂ ಕೈಗೂಡಿ ಬಂದರೆ ಇನ್ನಷ್ಟು ಹೇಳಬಹುದೇನೋ

"ಮಾಯೆ ಮಾಡುವ ಚಿಂತನೆ" Magic of thinking big ನಮ್ಮ ಚಿಂತನೆಗಳು ಇರಬೇಕಾದ ರೀತಿಯನ್ನು ಹೇಳಿಕೊಡುವ ಪ್ರಯತ್ನ ಮಾಡುತ್ತದೆ. ನಮ್ಮ ಚಿಂತನೆಗಳು ಹಿರಿಯವಾದಷ್ಟೂ ನಮ್ಮ ಸಾಧನೆ ದೊಡ್ಡದಾಗುತ್ತದೆನ್ನುವುದು ಈ ಪುಸ್ತಕದ ಸಾರಾಂಶ.

ನಂಬಿಕೆಯಿಂದ ಪರ್ವತವೇ ಚಲಿಸಬಲ್ಲುದು ಎನ್ನುತ್ತಾನೆ ಬೈಬಲ್ಲಿನ ಡೇವಿಡ್. ಇಂತಹ ನಂಬಿಕೆ ಬೆಳೆಸಿಕೊಳ್ಳಲು ನಮ್ಮ ಚಿಂತನೆಗಳೂ, ಯೋಚನೆಗಳೂ, ಯೋಜನೆಗಳೂ ಹೇಗಿರಬೇಕೆಂದು ತಿಳಿಸಿಕೊಡುವ ಒಂದು ಸುಂದರ ಪುಸ್ತಕ ಇದು. ನಾನಿಲ್ಲಿ ಇದರಲ್ಲಿನ ಕೆಲವು ಅಂಶಗಳನ್ನು ಹಿಡಿದುಕೊಡಲು ಯತ್ನಿಸಿದ್ದೇನೆ. ನಿಮಗೆ ಅವು ಸರಿ ಎನಿಸಿದರೆ ಆ ಪುಸ್ತಕವನ್ನು ಓದಿ ನೋಡಿ. ಕನ್ನಡದಲ್ಲಿ ಸದ್ಯಕ್ಕೆ ಈ ಪುಸ್ತಕ ದೊರಕುವುದೇ ಎನ್ನುವ ಮಾಹಿತಿ ಇಲ್ಲ.

ಡೇವಿಡ್ ಶ್ವಾರ್ಝ್ ಹೇಳುವ ಮೊದಲ ಅಂಶ
೧. ಕಾರ್ಯ-ಭಯವನ್ನು ನೀಗುತ್ತದೆ.
ಏನಾದರೂ ಮಾಡಲು ಭಯವಿದ್ದಲ್ಲಿ, ಆ ಕೆಲಸ ಮಾಡಲು ಪ್ರಾರಂಭಿಸಿ . ನಿಮ್ಮ ಭಯ ತಂತಾನೇ ಮಾಯವಾಗುತ್ತದೆ. ಈಜು ಬರದವನು, ಈಜಲು ಶುರುಮಾಡಿದರೆ ಅವನ ನೀರಿನ ಭಯ ನೀಗುತ್ತದೆ.
೨. ನೆನಪಿನ ಬ್ಯಾಂಕಿನಲ್ಲಿ ಮಧುರ ಯೋಚನೆಗಳಿರಲಿ.
ಮನಸ್ಸಿಗೆ ದುಃಖ ಕೊಡುವ ವಿಷಯಗಳನ್ನು ಆದಷ್ಟು ಮರೆತು ಬಿಡಬೇಕು. ಧನಾತ್ಮಕ ಮತ್ತು ಮುದ ನೀಡುವ ನೆನಪುಗಳು ಇನ್ನಷ್ಟು ಕಾರ್ಯ ಮಾಡಲು ಪ್ರೋತ್ಸಾಹಿಸುತ್ತವೆ . ಅದೇ ನೋವಿನ ವಿಷಯಗಳು ನಮ್ಮ ಉತ್ಸಾಹವನ್ನು ಕುಂದಿಸುತ್ತವೆ.
೩. ನಿಮ್ಮ ದೃಷ್ಟಿಕೋನ ಜನರಿಗನುಗುಣವಾಗಿರಲಿ.
ಎಲ್ಲರೂ ನಿಮ್ಮಂತೆಯೇ, ಆದರೆ ಅವರ ವಿಚಾರಧಾರೆಗಳು, ಅರ್ಥ ಮಾಡಿಕೊಳ್ಳುವ ಶಕ್ತಿಯೂ ಬೇರೆ ಬೇರೆ. ನಾವು ಆಡಿದ ಮಾತನ್ನು ಇತರರು ಅರ್ಥ ಮಾಡಿಕೊಳ್ಳುವಲ್ಲಿ ತಪ್ಪಿರಬಹುದು. ಅಥವಾ ಅವರ ನಿಲುವನ್ನು ನಾವು ಅರ್ಥ ಮಾಡಿಕೊಂಡಿಲ್ಲದಿರಬಹುದು. ಅವರ ದೃಷ್ಠಿಕೋನ ದ ಆಯಾಮಗಳೇ ಬೇರೆ ಇರಬಹುದು. ಈ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು ನಿಮ್ಮ ಸುತ್ತಲಿನ ಜನರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಮತ್ತು ನಿಮ್ಮ ಮಾತು ಅವರಿಗೆ ಸರಿಯಾಗಿ ಅರ್ಥವಾಗಿದೆಯೇ ಎಂದು ವಿಚಾರಿಸಿ.
೪. ನಿಮ್ಮ ಆತ್ಮಸಾಕ್ಷ್ಹಿ ಸರಿ ಎಂದು ಹೇಳುವುದನ್ನೇ ಮಾಡಲು ಶುರು ಮಾಡಿರಿ. ಒಮ್ಮೆ ನಿಮಗೆ ಇದು ಅಭ್ಯಾಸವಾಯಿತೆಂದರೆ ನೀವು ಮುಂದೆ ಯಾರ ಮುಂದೂ ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿಲ್ಲ. ತತ್ ಕ್ಷ್ಹಣದ ಅನಾನುಕೂಲಗಳು ಇದರಿಂದ ಕಂಡರೂ, ದೀರ್ಘಕಾಲೀನ ಪರಿಣಾಮಗಳು ನಿಮ್ಮ ಆತ್ಮಸಾಕ್ಷ್ಹಿಗೆ ಧಕ್ಕೆಯನ್ನುಂಟು ಮಾಡುವುದಿಲ್ಲ.
೫. ನಿಮ್ಮ ನಡೆ,ನುಡಿ,ನೋಟಗಳಲ್ಲಿ ಆತ್ಮವಿಶ್ವಾಸ ತುಂಬಿರಲಿ. ನೀವು ಧರಿಸಿದ ಬಟ್ಟೆ, ನೀವು ನೋಡುವ ನೋಟ, ನಿಮ್ಮ ಮಾತು , ನಿಮ್ಮ ನಡಿಗೆ ಮತ್ತು ನೀವು ಮಾಡುವ ಎಲ್ಲ ಕೆಲಸಗಳಲ್ಲೂ ಆತ್ಮವಿಶ್ವಾಸವಿರಲಿ. ನಾನು ಮಾಡಬಲ್ಲೆ ಎಂಬ ನಂಬಿಕೆ ನಿಮಗಿದ್ದರೆ ನಿಮಗೆ ಖಂಡಿತವಾಗಿಯೂ ಅದನ್ನು ಸಾಧಿಸಲು ಸಾಧ್ಯ.


ಕೆಲವು ಸಣ್ಣ ಸಂಗತಿಗಳು ನಿಮ್ಮ ನಿಮಗೆ ಈ ಗುಣಗಳನ್ನು ತಂದುಕೊಡಬಲ್ಲುವು.
ಅ. ಮುಂದಿನ ಕುರ್ಚಿಯಲ್ಲೇ ಕೂಡುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಆ. ಮಾತಾಡುವಾಗ ಕಣ್ಣೋಟ ಕೂಡಿಸಿ.
ಇ. ಉಳಿದವರಿಗಿಂತ ಶೇ.೨೫ ರಷ್ಟು ವೇಗವಾಗಿ ನಡೆಯಿರಿ.
ಈ. ಮಾತಾಡಿ.
ಉ. ನಗುನಗುತ್ತಿರಿ.

ಇವನ್ನು ನೀವು ಅಭ್ಯಾಸ ಮಾಡುತ್ತಿದ್ದರೆ ನಿಮಗೆ ಅವು ಉಳಿದ ಗುಣಗಳು ನಿಮ್ಮಲ್ಲಿ ತುಂಬಲು ದಾರಿ ಮಾಡುತ್ತವೆ.


ಹಿರಿದಾಗಿ ಯೋಚಿಸುವುದು ನೀವು ಅನುಸರಿಸಬೇಕಾದ ಅತೀ ಮುಖ್ಯ ಗುಣ. ಅದಕ್ಕೆ ನೀವು
೧. ನಿಮ್ಮನ್ನು ನೀವೇ ಕೀಳರಿಮೆಯಿಂದ ಕಾಣಬೇಡಿ.
೨. ಹಿರಿಯ ಚಿಂತಕರು/ವ್ಯಕ್ತಿಗಳು ಬಳಸುವ ಶಬ್ದಗಳನ್ನೇ ಬಳಸಲು ಪ್ರಯತ್ನ ಪಡಿ
೩. ನಿಮ್ಮ ಕಾಣ್ಕೆಯನ್ನೂ / ದರ್ಶನವನ್ನೂ ಹಿಗ್ಗಿಸಿಕೊಳ್ಳಿ. ದೂರದವರೆಗೆ ಆಲೋಚಿಸಲು ಪ್ರಯತ್ನಿಸಿ.
೪. ನೀವು ಮಾಡುತ್ತಿರುವ ಕೆಲಸದ ಹಿರಿದಾದ ಚಿತ್ರಣವನ್ನು ತಂದುಕೊಳ್ಳಿ. (ದೇಗುಲ ಕಟ್ಟುವ ಕೂಲಿಗಳ ಕತೆ ನೆನಪಿದೆಯೇ? ಒಬ್ಬ ನನ್ನ ಹೊಟ್ಟೆಪಾಡು ಎಂದ, ಇನ್ನೊಬ್ಬ ಕೂಲಿ ಕೆಲಸ ಎಂದ. ಮತ್ತೊಬ್ಬ ಸಾವಿರಾರು ಜನಕ್ಕೆ ಭಗವದ್ದರ್ಶನ ಮಾಡಿಸುವ ಕೆಲಸ ಎಂದ.. ನಿಮ್ಮ ದೃಷ್ಠಿಕೋನ ಯಾವುದು?)
೫. ಸಣ್ಣ-ಸಣ್ಣ ತಪ್ಪುಗಳನ್ನು ದೊಡ್ಡದಾಗಿ ಮಾಡಬೇಡಿ, ಹಿರಿದಾಗಿ ಯೋಚಿಸಿ.


ಹಿರಿದಾಗಿ ಯೋಚಿಸುವುದರಿಂದ ನಿಮ್ಮ ಸೃಜನಶೀಲತೆ ಹೆಚ್ಚಬೇಕು. ಸೃಜನಶೀಲರಾಗಿ ಯೋಚಿಸುವತ್ತ ಮುಂದಿನ ಹೆಜ್ಜೆ ಇಡಬೇಕು. ಇದಕ್ಕೆ.
೧. ಮೊದಲನೆಯದಾಗಿ ಯಾವುದೇ ಕೆಲಸವಿರಲಿ ಅದು ಸಾಧ್ಯ ಎಂದು ನಂಬಿ.
೨. ಸಂಪ್ರದಾಯ ನಿಮ್ಮನ್ನು ವಿಕಲಚೇತನರನ್ನಾಗಿಸಲು ಬಿಡಬೇಡಿ. ಇದುವರೆಗೂ ಯಾರು ಮಾಡಿಲ್ಲದಿದ್ದರೆ ನೀವೇಕೆ ಮಾಡಬಾರದು ಎಂದು ಕೇಳಿಕೊಳ್ಳಿ. ನೀವು ಹಿರಿದಾಗಿ ಯೋಚಿಸುತ್ತಿದ್ದರೆ ನೀವು ತಪ್ಪು ಮಾಡುವ ಸಾಧ್ಯತೆ ಕಡಿಮೆ.
೩. ಪ್ರತಿದಿನವೂ " ನಾನು ಇನ್ನಷ್ಟು ಚೆನ್ನಾಗಿ ಈ ಕೆಲಸವನ್ನು ಮಾಡಲು ಹೇಗೆ ಸಾಧ್ಯ?" ಎಂದು ಪ್ರಶ್ನಿಸಿಕೊಳ್ಳಿ.
೪. ಪ್ರತಿದಿನವೂ " ನಾನು ಈ ಕೆಲಸವನ್ನು ಇನ್ನಷ್ಟು ಮಾಡಬಹುದೇ?" ಎಂದು ಪ್ರಶ್ನಿಸಿಕೊಳ್ಳಿ.
೫. ಪ್ರಶ್ನೆ ಕೇಳುವುದನ್ನೂ, ಬೇರೆಯವರ ಚಿಂತನೆಗಳನ್ನು ಆಲಿಸುವುದನ್ನೂ ಅಭ್ಯಾಸ ಮಾಡಿಕೊಳ್ಳಿ.
೬. ನಿಮ್ಮ ಭಾವನೆಗಳನ್ನೂ, ಚಿಂತನೆಗಳನ್ನು ಹಿಗ್ಗಿಸಿ. ಒಟ್ಟಾರೆಯಾಗಿ ಹೇಳುವುದಾದರೆ ಮಿದುಳಿಗೆ ಇನ್ನಷ್ಟು ಕೆಲಸ ಕೊಡಿ. ಕೆಲಸ ಹೆಚ್ಚಾದಷ್ಟೂ ಮಿದುಳು ಚುರುಕಾಗುತ್ತದೆ. (ನಿದ್ದೆ, ಜ್ಞಾನ , ಹಸಿವು ಇವು ತೃಪ್ತಿ ಪಡಿಸಿದಷ್ಟೂ ಹೆಚ್ಚಾಗುತ್ತದೆಂಬುದೊಂದು ಸಂಸ್ಕೃತ ಸುಭಾಷಿತ)

ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಮೊದಲು ನೀವು ಪ್ರಮುಖ ವ್ಯಕ್ತಿಯೆಂಬ ಭಾವನೆ ನಿಮಗೇ ಬರಬೇಕು. ಅದಕ್ಕೆ
೧. ಪ್ರಮುಖ ವ್ಯಕ್ತಿ ನೀವೆಂದುಕೊಳ್ಳಿ. ಮತ್ತು ಹಾಗೇ ವರ್ತಿಸಿ
೨. ನಿಮ್ಮ ಕೆಲಸ ಮುಖ್ಯವಾದುದು ಎಂಬುದು ಸದಾ ನಿಮ್ಮ ಅರಿವಿನಲ್ಲಿರಲಿ.
೩. ದಿನದಲ್ಲಿ ಹಲವಾರು ಬಾರಿ ನಿಮ್ಮನ್ನು ನೀವೇ ಹೊಗಳಿಕೊಳ್ಳಿ.
೪. ನಿಮ್ಮನ್ನು ನೀವೇ "ಇದು ಮುಖ್ಯ /ಪ್ರಮುಖ ವ್ಯಕ್ತಿಗಳು ಯೋಚಿಸುವ ರೀತಿಯೇ?" ಎಂದು ಕೇಳಿಕೊಳ್ಳಿ. ಉತ್ತರ "ಇಲ್ಲ"ವೆಂದಾದರೆ ಪ್ರಮುಖ ವ್ಯಕ್ತಿಗಳು ಯೋಚಿಸುವ ರೀತಿ ಯೋಚಿಸಲು ಪ್ರಾರಂಭಿಸಿ.

ನಿಮ್ಮ ಯಶಸ್ಸಿಗೆ ನಿಮ್ಮ ಸುತ್ತಲಿನ ಪರಿಸರದ ಕೊಡುಗೆ ಬಹು ಮುಖ್ಯ. ಅದನ್ನು ಸರಿಯಾದ ರೀತಿಯಲ್ಲಿ ಕಾಯ್ದಿಟ್ಟುಕೊಳ್ಳಿ. ನಿಮ್ಮ ಯಶಸ್ಸನ್ನು ನಿಮ್ಮ ಪರಿಸರ ರೂಪಿಸುವಂತೆ ಮಾಡಿ. ಅದಕ್ಕೆ.

೧. ನಿಮ್ಮ ಸುತ್ತಲಿನ ಪರಿಸರದ ಬಗ್ಗೆ ಸದಾ ನಿಗಾ ಇರಲಿ.
೨. ನಿಮ್ಮ ಪರಿಸರ ನಿಮ್ಮಲ್ಲಿ ಉಲ್ಲಾಸ ತುಂಬುವಂತಿರಲಿ. ಅದನ್ನು ನೀವೇ ಹಾಗೆ ಮಾಡಿಕೊಳ್ಳಬೇಕು. ನಿಮ್ಮ ಪರಿಸರ ನಿಮ್ಮ ವಿರುದ್ದವಿದ್ದರೆ ಗೆಲುವು ಕಷ್ಟ.
೩. ಸಣ್ಣದಾಗಿ ಯೋಚಿಸುವ ವ್ಯಕ್ತಿಗಳು ನಿಮ್ಮ ಕಾಲೆಳೆಯಲು ಬಿಡಬೇಡಿ. ಅವರನ್ನು ದೂರ ಇಡಿ.
೪. ನಿಮಗೆ ಸಲಹೆ ಬೇಕಾದಾಗ ಯಶಸ್ವಿ ವ್ಯಕ್ತಿಗಳಿಂದ ಪಡೆಯಿರಿ, ಯಾರಿಗೆ ಯಶಸ್ಸಿನ ಅನುಭವ ಇರುವುದಿಲ್ಲವೋ ಅವರು ಯಶಸ್ವಿಯಾಗುವ ಸಲಹೆ ನೀಡುವುದಿಲ್ಲ. ಯಶಸ್ವಿಯೆಂದರೆ ಬರೀ ಹಣವಲ್ಲ.
೫. ಮಾನಸಿಕವಾಗಿ ಸದಾ ಪ್ರಪುಲ್ಲಿತರಾಗಿರಿ.
೬. ಥಾಟ್- ಪಾಯಿಸನ್ ಹಿಂಜರಿಕೆಯನ್ನು ನಿಮ್ಮ ಪರಿಸರದಿಂದ ದೂರವಿಡಿ.
೭. ನೀವು ಮಾಡುವ ಕೆಲಸಗಳಲ್ಲಿ ಅದು ಯಾವುದೇ ಇರಲಿ ಮೊದಲನೇ ದರ್ಜೆಯ ಕೆಲಸವಾಗಿರುವಂತೆ ನೋಡಿಕೊಳ್ಳಿ.
೮. ಮೊದಲು ಸೇವೆ ಆಮೇಲೆ ಲಾಭ. ನೀವು ಮಾಡುವ ಕೆಲಸದ ತಕ್ಷಣದ ಪ್ರತಿಫಲಾಪೇಕ್ಷೆ ಧೀರ್ಘಕಾಲೀನವಾಗಿ ದುಷ್ಪರಿಣಾಮ ಬೀರಬಹುದು. ಮೊದಲು ನೀವೆ ಹೇಗೆ ಕೆಲಸ ಮಾಡಿಕೊಡಬಹುದೆಂದು ಯೋಚಿಸ್. ಲಾಭ ನಷ್ಟಗಳ ಗಣನೆ ನಂತರದ್ದು.
೯. ನಾಳೆ ಮಾಡುವ ಕೆಲಸ ಇಂದೇ ಮಾಡಿ (ಇದನ್ನು ನಮ್ಮ ದಾಸರೇ ಹೇಳಿದ್ದಾರಲ್ಲವೇ .. ಹೌದು. ಹಿರಿಯ ಚೇತನಗಳು ಒಂದೇ ತೆರನಾಗಿ ಚಿಂತಿಸುತ್ತಾರೆ.. Great people think alike)
೧೦. ನೀವು ಎಲ್ಲಿಗೆ ತಲುಪಬೇಕು ಎನ್ನುವುದು ನಿಮಗೆ ಧೃಡವಾಗಿರಲಿ. ಹತ್ತು ವರುಷಗಳ ನಂತರ ನೀವು ಏನಾಗಿರಬೇಕೆನ್ನುವುದು ನಿಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿರಲಿ.
೧೧. ಈ ಹತ್ತು ವರುಷಗಳಲ್ಲಿ ನೀವು ಮಾಡಬೇಕೆಂದುಕೊಂಡ ವಿಷಯಗಳ ಪಟ್ಟಿ ಮಾಡಿ ಮತ್ತು ಅದನ್ನು ಮಾಡಲು ಏನು ಮಾಡಬೇಕೆಂದು ಚಿಂತಿಸಿ.
೧೨. ನಿಮ್ಮ ಆಸೆಗಳಿಗೆ ನೀವೇ ಶರಣಾಗಿ.
೧೩. ತಿಂಗಳು-ತಿಂಗಳಿಗೊಂದು ಗುರಿ ನಿಗದಿಪಡಿಸಿ. ಅದನ್ನು ಸಾಕಾರಗೊಳಿಸಲು ಪ್ರತಿದಿನ ಕೆಲಸ ಮಾಡಿ.
೧೪. ಸೋಲುಗಳನ್ನು ಮರೆತು ಮತ್ತೆ ಕೆಲಸ ಮಾಡಲು ಮುನ್ನಡೆಯಿರಿ
೧೫. ನಿಮ್ಮ ಮೇಲೇ ಬಂಡವಾಳ ಹೂಡಿ. ಅಂದರೆ ನಿಮಗೆ ಬೇಕಾದ ತರಬೇತಿ, ಪುಸ್ತಕ, ಜ್ಞಾನ ಇವುಗಳಿಗೆ ಅಗತ್ಯವಿದ್ದರೆ ಖರ್ಚು ಮಾಡಲು ಹಿಂಜರಿಯಬೇಡಿ.

ಇವು ನಿಮ್ಮನ್ನು ನಿಸ್ಸಂದೇಹವಾಗಿ ಒಬ್ಬ ನಾಯಕನನ್ನಾಗಿ ಮಾಡುತ್ತವೆ. ನಿಮ್ಮ ನಾಯಕತ್ವ ಮತ್ತಷ್ಟು ಪರಿಣಾಮಕಾರಿಯಾಗಬೇಕಾದರೆ..
೧. ನಿಮ್ಮ ಸುತ್ತಲಿನ ಜನರೊಡನೆ, ನಿಮ್ಮ ಪ್ರಭೆಯ ಪರಿಧಿಯಲ್ಲಿ ಬರುವ ಜನರೊಡನೆ ಚಿಂತನೆಗಳನ್ನು ಹಂಚಿಕೊಳ್ಳಿ.
೨. ಎಲ್ಲರೊಳಗೊಂದಾಗಿ.
೩. ಪ್ರಗತಿಯ ಬಗ್ಗೆ ಯೋಚಿಸುತ್ತಿರಿ
೪. ಪ್ರತಿ ದಿನವೂ ಸ್ವಲ್ಪ ಸಮಯ ಒಂಟಿಯಾಗಿರಿ,

ಸುತ್ತಲಿನ ಸಣ್ಣ ಜನ ನಿಮ್ಮ ಕಾಲೆಳೆದರೆ... ಹಿರಿದಾಗಿ ಚಿಂತಿಸಿ

"ಬುದ್ದಿವಂತ ಮನದ ಒಡೆಯನಾದರೆ, ಮೂರ್ಖ ಮನದ ಗುಲಾಮ" ಮರೆಯದಿರಿ.

ಮೇಘದೂತ ಪತ್ರಿಕೆಗೆ ಬರೆದ ಲೇಖನ. ನನ್ನ ಹಿಂದಿನ ಇಂಗಿಷ್ ಪೋಸ್ಟ್ ಒಂದರ ಕನ್ನಡ ಅನುವಾದ.