Pages

Friday, September 28, 2012

ಪ್ರೇಮಿಸುವುದೇಕೆ ನೀ ಅವಳ

ಪ್ರೇಮಿಸುವುದೇಕೆ ನೀ ಅವಳ
ಎಂದು ಕೇಳುವವರಿದ್ದಾರೆ ಬಹಳ.

ಅವಳ ಸೊಂಟದ ಕುಲುಕು
ತುಂಬು ತೊಡೆಗಳ ಬಿಗಿಪು
ಹವಳ ತುಟಿಗಳ ಥಳುಕು
ದುಂಬಿ ಕಂಗಳ ಬೆಳಕು
ಚರ್ಮದೊಗಲಿನ ನುಣುಪು
ಕೇಶರಾಶಿಯ ಹೊಳಪು
ನಡಿಗೆಯಲ್ಲಿನ ಬಳುಕು
ಮಾತಿನೊಳಗಿನ ಮಿದುಪು
ಪ್ರೇಮಧಾರೆಯ ಹುರುಪು

ನನ್ನೆದೆಯಲಿ ಅನುರಾಗ ಮಿಡಿಸುವುದು
ಅನುದಿನವು ಪ್ರೀತಿಯನು ಸುರಿಸುವುದು

ಎಂದಷ್ಟೇ ಹೇಳುವೆನು ನಾನು.


ಜಸ್ಟಿನ್ ಹಚಿನ್ಸ್ ರ ಕವನದ ಭಾವಾನುವಾದ.   ಮೂಲ ಕೆಳಗಿನಂತಿದೆ



If asked why I love her I would say,
It’s the sway in her hips,
the thickness in her thighs.
It’s the lust in her lips,
the love in her eyes.
It’s the softness of her skin,
the silk in her hair.
It’s the twist in her walk;
it’s the sweetness in her talk.
It’s the way she loves me,
that makes me love her each day.
That is what I would say.






Tuesday, September 25, 2012

ತಲ್ಲಣಿಸದಿರು ಕಂಡ್ಯ ತಾಳು ಮನವೇ

ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೇ ಸಂಶಯವಿಲ್ಲ  ||ಪ||

ಬೆಟ್ಟದ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರು
ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು
ಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ    ||೧||

ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರವಿತ್ತವರು ಯಾರೊ
ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ          ||೨||

ಕಲ್ಲೊಳಗೆ ಹುಟ್ಟಿರುವ ಕ್ರಿಮಿಕೀಟಗಳಿಗೆಲ್ಲ
ಅಲ್ಲಲ್ಲೆ ಆಹಾರವನು ಇತ್ತವರು ಯಾರೊ
ಪುಲ್ಲಲೋಚನ ಕಾಗಿನೆಲೆಯಾದಿ ಕೇಶವನು
ಎಲ್ಲರನು ಸಲಹುವನು ಇದಕೇ ಸಂಶಯಬೇಡ     ||೩||

Friday, September 14, 2012

ಚೆಂಗುಲಾಬಿ ಚೆಲುವು ನನ್ನೊಲವು

ವರುಷ ಋತುವಿನಲರಳಿ ನಿಂತ
ಹೊಸ ಚೆಂಗುಲಾಬಿ ಚೆಲುವು ನನ್ನೊಲವು.
ಹರುಷ ನೀಡುವ ಗೀತದೊಡಲಿನ
ಮಧುರ ಇನಿದನಿಯ ಇಂಚರವು ನನ್ನೊಲವು

ಶ್ವೇತ ಸುಂದರಿಯಿವಳು, ಸಣ್ಣಮೈಯವಳು,
ತನ್ನೊಲವಬಲೆಯಲ್ಲಿ ನನ್ನ ಹಿಡಿದಿಹಳು.
ಬತ್ತಿಹೋದರು ಸಪ್ತಸಾಗರ,
ಬತ್ತದಂತಿಹುದು ನನ್ನೆದೆಯ ಒಲವು

ಬತ್ತಿಹೋಗಲಿ ಸಪ್ತ ಸಾಗರ
ಕರಗಿಹೋಗಲಿ ಮೇರು ಗಿರಿಗಳೆಲ್ಲ
ಜೀವಕಣಗಳು ಹರಿಯುತಿರಲು
ನಿನ್ನೊಲವಿನದೆ ಬಲವು ಬದುಕಿಗೆಲ್ಲ.

ವಿದಾಯಗಳು ಚೆಲುವೆ,
ನೀನೊಬ್ಬಳೇ ಗೆಳತಿ ನನಗೆ
ಕಾಲದ ಪಯಣದಲಿ ಕ್ಷಣಿಕವೀ ವಿರಹ
ಬೇಗ ಬರುವೆ ನಾ ನಿನ್ನೆಡೆಗೆ

ಹತ್ತು ಸಾಸಿರ ಮೈಲು
ಮತ್ತೆ ಸಾವಿರ ತಡೆಯು
ದಾಟಿ ಬರುವೆನು ನಿನ್ನ ನೆನಪಿನೊಳಗೆ
ನಿನ್ನೊಲವ ತಂಪು ನೆರಳಿನಡಿಗೆ.

ರಾಬರ್ಟ್ ಬರ್ನ್ಸ್ ಕವಿಯ "  My love is like red, red rose"  ಕವನದ ಭಾವಾನುವಾದ

Thursday, September 13, 2012

ನೀನ್ ನನ್ ಹಟ್ಟೀಗ್ ಬೆಳಕಂಗಿದ್ದೆ ನಂಜು

ಜಿ.ಪಿ.  ರಾಜರತ್ನಂ ಅವರ  ರತ್ನನ ಪದಗಳ ಒಂದು ಸುಂದರ ಪದ್ಯ.

ನೀನ್ ನನ್ ಹಟ್ಟೀಗ್ ಬೆಳಕಂಗಿದ್ದೆ ನಂಜು
ಮಾಗೀಲ್ ಹುಲ್ಲ್ ಮೇಲ್ ಮಲಗಿದ್ದಂಗೆ ಮಂಜು

ಮಾಗೀ ಕುಗ್ತು, ಬೇಸಿಗೆ ನುಗ್ತು,
ಇದ್ಕಿದ್ದಂಗೆ ಮಾಯವಾಗೊಯ್ತು ಮಂಜು
ನಂಗೂ ನಿಂಗೂ ಎಂಗ್ ಅಗಲೋಯ್ತ್ ನಂಜು

ಶ್ರೀರಂಗಪಟ್ಟಣ್ ದ್ ತಾವ್ ಕಾವೇರಿ ಒಡ್ದಿ
ಎರಡ್ ಹೋಳಾಗಿ ಪಟ್ಣದ ಸುತ್ತಾ ನಡ್ದಿ

ಸಂಗಂದಲ್ಲಿ ಸೇರ್ಕೊಂದು ಮಳ್ಳಿ
ಮುಂದಕ್ಕೋದ್ದು ನಮ್ಗೆ ಙ್ನಾನದ್ ಪಂಜು
ಈಗಗಲಿದ್ರೇನ್ ಮುಂದ್ ನಾವ್ ಸೇರ್ತೀವ್ ನಂಜು.

ಹಗಲೋಡ್ಗ್ತೆ ರಾತ್ರೀ ಬಂತಂತಂಜಿ
ರಾತ್ರಿ ಮುಗ್ದೋದ್ರೆ ಹಗಲೇ ಅಲ್ವ ನಂಜಿ
ರಾತ್ರಿ ಬಿತ್ತು ಹಗಲೇ ಬತ್ತು
ಹೋಗೋದ್ ಮಳ್ಳಿ ಬರೋಕಲ್ವಾ ನಂಜಿ
ಆ ನೆಂಬ್ಕೆ ನನ್ ಜೀವ ಉಳ್ಸೋ ಗಂಜಿ




Wednesday, September 12, 2012

cert7 file generation

cert7 file generation

It is tricky sometime as the latest nss tools will generate cert8.db
If you need cert7 only because of some reason like ldap auth, or solaris lesser than 10 auth then you might be in need of generating cert7.db files only.

Here is a how you can do it with windows.

Download NSS with version  3.2.2 from ftp://ftp.mozilla.org/pub/mozilla.org/security/nss/releases
you can go to command prompt and set path as

set path=%PATH%;C:\path\to\nssfolder\lib
also you might need nspr 4.6 for missing dll and library files.

You can download it from http://ftp.mozilla.org/pub/mozilla.org/nspr/releases/

also from the same command prompt set the path to the lib directory of nspr

set path=%PATH%;c:\path\to\nsprfolder\lib

Now you can execute

certutil -A -n "certificateName" -t "C,C,C" -a -i certFile -d path




Where certificate Name is optional
certfile is the .pem certificate file and
path is the path where you want your cert7.db files to be stored.


Read more to understand what each of these functions do  here.



Tuesday, September 04, 2012

ಈ ಕಾಲದ ಸರ್ಕಾರಿ ಜನ

ಒಂದೂರಿನಲ್ಲೊಬ್ಬ ರಾಜ.
ಬಹುಜನ ಭೋಜ.
ಅವನಿಗೊಬ್ಬ ಮಂತ್ರಿ. 
ಬುದ್ದಿಯವಲನು ತಂತ್ರಿ.
ಅವರಿಗೊಂದು ಸಮಸ್ಯೆ. 
ರಾಣಿಯ ಪ್ರೀತಿಯ ತಮ್ಮ
ಆ ರಾಜ್ಯದ ಅಧಿಕಾರಿ.
ಅವನೋ ಬಲು ಭ್ರಷ್ಟ. 
ಜನಗಳ ದೂರು ಸಾವಿರಾರು.
ರಾಜನ ಕಷ್ಟ ಕೇಳುವರಾರು?

ಏಕೆಂದರೆ ಅವನು ರಾಣಿಯ ಪ್ರೀತಿಯ ತಮ್ಮ. ಅವನಿಗೆ ಏನೂ ಮಾಡಲಾಗದ ಸ್ಥಿತಿ ರಾಜನದು.
ಮಂತ್ರಿ ಹೇಳಿದ,

"ಪ್ರಯೋಜನವಿಲ್ಲ ಮಹಾರಾಜ,
ಬ್ರಷ್ಟತೆ ಅವನ ಹುಟ್ಟುಗುಣ.
ಲಂಚವೇ ಅವನ ಆಭರಣ.
ಎಲ್ಲಿ ಕಳಿಸಿದರು ಅವನನ್ನು,
ಹುಡುಕುತ್ತಾನೆ ಸಂಪಾದನೆಯ ದಾರಿಯನ್ನು."

ಮಹಾರಾಜನದೊಂದು ಪಟ್ಟು. 
ಹುಡುಕಿದನೊಂದು ಉಪಾಯ.
ನಾನವನಿಗೆ ಏನೂ ಮಾಡಲಾರೆ. 
ಆದರೆ ಅವನಿಂದ ನನ್ನ ಪ್ರಜೆಗಳಿಗಿರದಿರಲಿ ತೊಂದರೆ.
ಅವನಿಗಿರಲಿ ಸಮುದ್ರದ ಅಲೆಗಳ ಎಣಿಸುವ ಕೆಲಸ.
ಅದರಲ್ಲಿ ಅವನೇನು ಮಾಡುವ ಮೋಸ.

ಹುಸಿನಗೆ ನಕ್ಕ ಮಂತ್ರಿ. 
ಕಾದು ನೋಡೋಣ ತಿಳಿಯುವುದು ಬೇಗ ಎಂದ.
ಮೊದಲ ವಾರದಲಿ ಬರಲಿಲ್ಲ  ದೂರು.
ರಾಜನ ಮುಖದಲಿ ನಗೆ ಬಹು ಜೋರು.
ಕಳೆದಿಹವು ವಾರವಿನ್ನೆರಡು.
ಅದರೊಳಗೇ  ದೂರು ಹನ್ನೆರಡು.

ಸಾಗರದಲಿ ಸ್ನಾನ ಮಾಡುವ ಜನ ತಪ್ಪಿಸುತ್ತಾರೆ ಲೆಕ್ಕ,
ಅದಕೇ ಕೊಡಬೇಕು ಲಂಚ ಎನ್ನುವುದೊಂದು.
ಸಾಗರದಲಿ ಸಂಚರಿಸುವ ನಾವೆಗಳೆಲ್ಲಾ
ಅಲೆಗಳ ಹರಿವಿಗೆ ತಡೆಯಾಗುವುದಲ್ಲಾ 
ಹೋಗಬಾರದೆ ದೊರೆಗೆ ದೂರು?
ಹಾಗಿದ್ದರೆ ಬರಲಿ ನನ್ನಯ ಪಾಲು.

ತಲೆ ತಿರುಗಿತು ದೊರೆಗೆ,
ಕೆರಳಿಸಿ ನಕ್ಕಿತು ಮಂತ್ರಿಯ ನಗೆ.
ಉಕ್ಕಿದ ಸಿಟ್ಟಿಗೆ  ಅಬ್ಬರಿಸಿ,
 ಆದೇಶವ ನೀಡಿದ ಪರಿಜನಕೆ.
"ಅಧಿಕಾರಿಯ  ತಲೆ ಕತ್ತರಿಸಿ, 
ಮುಂಡವ ಚೂರು ಚೂರಾಗಿಸಿ.
ಸಮುದ್ರದ ಮೀನುಗಳೆಲ್ಲ
ತಿನ್ನಲಿ ಅವನ ದೇಹವನು."

ಆ ಮೀನನು ತಿಂದವರ ವಂಶಜರೆಲ್ಲಾ 
ಈ ಕಾಲದ ಸರ್ಕಾರಿ ಜನರಂತೆ,
ಏನೇ ನಿಯಮವ  ಮಾಡಿದರೂ
ಲಂಚವನಿವರು ಬಿಡರಂತೆ.