Pages

Tuesday, September 04, 2012

ಈ ಕಾಲದ ಸರ್ಕಾರಿ ಜನ

ಒಂದೂರಿನಲ್ಲೊಬ್ಬ ರಾಜ.
ಬಹುಜನ ಭೋಜ.
ಅವನಿಗೊಬ್ಬ ಮಂತ್ರಿ. 
ಬುದ್ದಿಯವಲನು ತಂತ್ರಿ.
ಅವರಿಗೊಂದು ಸಮಸ್ಯೆ. 
ರಾಣಿಯ ಪ್ರೀತಿಯ ತಮ್ಮ
ಆ ರಾಜ್ಯದ ಅಧಿಕಾರಿ.
ಅವನೋ ಬಲು ಭ್ರಷ್ಟ. 
ಜನಗಳ ದೂರು ಸಾವಿರಾರು.
ರಾಜನ ಕಷ್ಟ ಕೇಳುವರಾರು?

ಏಕೆಂದರೆ ಅವನು ರಾಣಿಯ ಪ್ರೀತಿಯ ತಮ್ಮ. ಅವನಿಗೆ ಏನೂ ಮಾಡಲಾಗದ ಸ್ಥಿತಿ ರಾಜನದು.
ಮಂತ್ರಿ ಹೇಳಿದ,

"ಪ್ರಯೋಜನವಿಲ್ಲ ಮಹಾರಾಜ,
ಬ್ರಷ್ಟತೆ ಅವನ ಹುಟ್ಟುಗುಣ.
ಲಂಚವೇ ಅವನ ಆಭರಣ.
ಎಲ್ಲಿ ಕಳಿಸಿದರು ಅವನನ್ನು,
ಹುಡುಕುತ್ತಾನೆ ಸಂಪಾದನೆಯ ದಾರಿಯನ್ನು."

ಮಹಾರಾಜನದೊಂದು ಪಟ್ಟು. 
ಹುಡುಕಿದನೊಂದು ಉಪಾಯ.
ನಾನವನಿಗೆ ಏನೂ ಮಾಡಲಾರೆ. 
ಆದರೆ ಅವನಿಂದ ನನ್ನ ಪ್ರಜೆಗಳಿಗಿರದಿರಲಿ ತೊಂದರೆ.
ಅವನಿಗಿರಲಿ ಸಮುದ್ರದ ಅಲೆಗಳ ಎಣಿಸುವ ಕೆಲಸ.
ಅದರಲ್ಲಿ ಅವನೇನು ಮಾಡುವ ಮೋಸ.

ಹುಸಿನಗೆ ನಕ್ಕ ಮಂತ್ರಿ. 
ಕಾದು ನೋಡೋಣ ತಿಳಿಯುವುದು ಬೇಗ ಎಂದ.
ಮೊದಲ ವಾರದಲಿ ಬರಲಿಲ್ಲ  ದೂರು.
ರಾಜನ ಮುಖದಲಿ ನಗೆ ಬಹು ಜೋರು.
ಕಳೆದಿಹವು ವಾರವಿನ್ನೆರಡು.
ಅದರೊಳಗೇ  ದೂರು ಹನ್ನೆರಡು.

ಸಾಗರದಲಿ ಸ್ನಾನ ಮಾಡುವ ಜನ ತಪ್ಪಿಸುತ್ತಾರೆ ಲೆಕ್ಕ,
ಅದಕೇ ಕೊಡಬೇಕು ಲಂಚ ಎನ್ನುವುದೊಂದು.
ಸಾಗರದಲಿ ಸಂಚರಿಸುವ ನಾವೆಗಳೆಲ್ಲಾ
ಅಲೆಗಳ ಹರಿವಿಗೆ ತಡೆಯಾಗುವುದಲ್ಲಾ 
ಹೋಗಬಾರದೆ ದೊರೆಗೆ ದೂರು?
ಹಾಗಿದ್ದರೆ ಬರಲಿ ನನ್ನಯ ಪಾಲು.

ತಲೆ ತಿರುಗಿತು ದೊರೆಗೆ,
ಕೆರಳಿಸಿ ನಕ್ಕಿತು ಮಂತ್ರಿಯ ನಗೆ.
ಉಕ್ಕಿದ ಸಿಟ್ಟಿಗೆ  ಅಬ್ಬರಿಸಿ,
 ಆದೇಶವ ನೀಡಿದ ಪರಿಜನಕೆ.
"ಅಧಿಕಾರಿಯ  ತಲೆ ಕತ್ತರಿಸಿ, 
ಮುಂಡವ ಚೂರು ಚೂರಾಗಿಸಿ.
ಸಮುದ್ರದ ಮೀನುಗಳೆಲ್ಲ
ತಿನ್ನಲಿ ಅವನ ದೇಹವನು."

ಆ ಮೀನನು ತಿಂದವರ ವಂಶಜರೆಲ್ಲಾ 
ಈ ಕಾಲದ ಸರ್ಕಾರಿ ಜನರಂತೆ,
ಏನೇ ನಿಯಮವ  ಮಾಡಿದರೂ
ಲಂಚವನಿವರು ಬಿಡರಂತೆ.

No comments:

Post a Comment