Pages

Wednesday, December 12, 2012

ನಾ ಮೆಚ್ಚಿದ ಕನ್ನಡ ಚಿತ್ರಗಳು

 ಕೃಷ್ಣದೇವರಾಯ : ಕನ್ನಡನಾಡಿನ ಚರಿತೆಯಲ್ಲಿ ಹೊನ್ನಕ್ಕರಗಳಿಂದ ಬರೆದಿಡಬೇಕಾದ ಧೀರ ನಾಯಕನ ಜೀವನ ಚರಿತೆಯನ್ನು ಆಕರವಾಗಿಸಿಕೊಂಡು ಬಂದ ರಂಜನೀಯ ಚಿತ್ರ.  ಇಂತಹ ಆಗಾಧ ವಸ್ತುವನ್ನು ಮೂರುಗಂಟೆಗಳಲ್ಲಿ ತೆರೆಯ ಮೇಲೆ ಹಿಡಿದಿಟ್ಟವರು ಬಿ.ಆರ್. ಪಂತುಲು ಮತ್ತು ಕೃಷ್ಣದೇವರಾಯನನ್ನು ಕಣ್ಣ ಮುಂದೆ ತಂದಿರಿಸುವಂತೆ ಅಭಿನಯಿಸಿದವರು ರಾಜಕುಮಾರ್.

ಮಯೂರ  : ಕನ್ನಡಿಗರ ಆತ್ಮಶಕ್ತಿಯನ್ನು ಬಡಿದೆಚ್ಚರಿಸಿ, ಸ್ವಾಭಿಮಾನವನ್ನು ಒಗ್ಗೂಡಿಸಿದ ದೇವುಡು ಅವರ ಕಾದಂಬರಿ ಆಧಾರಿತ ಚಿತ್ರ. ರಾಜಕುಮಾರ್ ಅವರಿಗೆ ಸರಿಸಾಟಿಯಾಗಿ ನಿಂತು ಚಿತ್ರಕ್ಕೆ ರೋಚಕತೆ ಕೊಟ್ಟವರು ವಜ್ರಮುನಿ. ಎಂ.ಪಿ.ಶಂಕರ್ ಅಭಿನಯ ಮರೆಯುವಂತಹುದಲ್ಲ.

ಮೈಸೂರು ಮಲ್ಲಿಗೆ : ಕವಿಯೊಬ್ಬನ ಕವನಗಳನ್ನು ಎಲೆಗಳನ್ನಾಗಿಸಿ, , ಸುಧಾರಾಣಿಯಂತಹ ಸ್ನಿಗ್ಧ ಸುಂದರಿಯನ್ನು ನಾಯಕಿಯನ್ನಾಗಿಸಿ, ಸುಂದರ  ಕತೆಯ ತೋರಣ ನೇಯ್ದ ನಾಗಾಭರಣ ಮನ ಮುಟ್ಟುವಂತೆ ಚಿತ್ರವನ್ನು ನಿರ್ದೇಶಿಸಿದ್ದಾರೆ.  ಕನ್ನಡಿಗರೆಲ್ಲರೂ ನೋಡಬೇಕಾದದ್ದು ಈ ಚಿತ್ರ.

ಬಿಡುಗಡೆ   : ಮರಣದಂಡನೆಯ ಔಚಿತ್ಯವನ್ನು ಪ್ರಶ್ನಿಸಿ ನಿರ್ಮಿಸಿದ ಈ ಚಿತ್ರ ಮತ್ತು ಚಿತ್ರದ ವಸ್ತು ಕ್ರಾಂತಿಕಾರಕವಾದದ್ದು. ವೈ. ಆರ್. ಸ್ವಾಮಿ ನಿರ್ದೇಶನದ ರಾಜಕುಮಾರ್ ರಾಜೇಶ್ ಅಭಿನಯದ ರೋಮಾಂಚಕ ಚಿತ್ರ.

ಸಿಪಾಯಿರಾಮು  : ಸೈನ್ಯದಿಂದ ಮರಳಿದ ಸಿಪಾಯಿ, ಊರ ಸಾಹುಕಾರನ ದುರಾಕ್ರಮಣಕ್ಕೆ ಸಿಕ್ಕು, ಚಂಬಲ್ ಕಣಿವೆಗೆ ಸೇರಿ ಡಕಾಯಿತನಾಗಿ ಊರಿಗೆ ಮರಳಿ, ತನ್ನ ಸಂಸಾರಕ್ಕಾಗಿ ಮತ್ತೆ ಬಂಧಿಯಾಗುವ ಕತೆಯುಳ್ಳ, "ಯಮುನೆ ನಾನಿನ್ನು ಬರಲೆ" ಕಾದಂಬರಿ ಆಧಾರಿತ ಚಿತ್ರ.

ನೋಡಿ ಸ್ವಾಮಿ ನಾವಿರೋದೆ ಹೀಗೆ : ಶಂಕರ್‌ನಾಗ್ ನಿರ್ದೇಶನದ ಜೀವನದ ಕಹಿಗಳನ್ನು ನಗುವಿನಲ್ಲೇ ತೋರಿಸಿ, ಬದುಕಿನ ಮೌಲ್ಯವನ್ನು ಕಲಿಸುವ ಚಿತ್ರ.

ಒಂದಾನೊಂದು ಕಾಲದಲ್ಲಿ : ಗಿರೀಶ್ ಕಾರ್ನಾರ್ಡ್ ನಿರ್ದೇಶನದ ಶಂಕರ್‌ನಾಗ್ ರ ರಂಗಪ್ರವೇಶದ ಚಿತ್ರ.  ಅಕಿರಾ ಕುರಸಾವೋ ನ ಸಂಜುರೋ ಚಿತ್ರದ ಅವತರಣಿಕೆಯಾದರೂ, ಕನ್ನಡದ್ದೇ ಸೊಗಡನ್ನು ಕಸುವನ್ನು ಮೈತುಂಬಿಕೊಂಡಂತೆ ಮಾಡಿದ್ದು, ಗಿರೀಶರ ಹೆಚ್ಚುಗಾರಿಕೆ. ಯೋಧನೊಬ್ಬನ, ಸ್ವತಂತ್ರ ನಿಲುವನ್ನೂ, ಮನಸ್ಸಿನ ಬೇಗುದಿಗಳನ್ನು ಬಿಡಿಸಿಡಿವ ಈ ಚಿತ್ರದಲ್ಲಿನ, ಸುಂದರಕೃಷ್ಣ ಅರಸು ಮತ್ತು ಸುಂದರರಾಜ್ ಅಭಿನಯವೂ ಅಮೋಘ.

ಬಂಧನ : ಕನ್ನಡದಲ್ಲಿ ಪ್ರೇಮಕತೆಗಳಿಗೆ ಬರವಿಲ್ಲ.  ಆದರೆ ತುಂಬು ಹೃದಯಯ ಪಕ್ವ ಪ್ರೇಮದ ಕತೆಯನ್ನು ತೆರೆಯಮೇಲೆ ರಾಜೇಂದ್ರ ಸಿಂಗ್ ಬಾಬು ತಂದ ರೀತಿ ಅನನ್ಯ, ವಿಷ್ಣುವರ್ಧನ್ ಮತ್ತು ಸುಹಾಸಿನಿಯರ ಅಭಿನಯ ಅತಿ ರೋಚಕ.

ಮುತ್ತಿನಹಾರ  : ಅದೇ ರಾಜೇಂದ್ರ ಸಿಂಗ್, ವಿಷ್ಣುವರ್ಧನ್, ಸುಹಾಸಿನಿ ತ್ರೀಡಿಯ  (ಇಬ್ಬರಿಗೆ ಜೋಡಿ ಎಂದರೆ ಮೂವರಿಗೆ ತ್ರೀಡಿ ಎನ್ನಬಹುದೇ..?) ಈ ಚಿತ್ರದಲ್ಲಿ, ಮಗು ಕಳೆದುಕೊಂಡ ತಾಯಿಯ ವಾತ್ಸಲ್ಯ, ಯುದ್ದಕ್ಕೆ ನಡೆದುಹೋದ ವೀರಯೋಧನ ಧೈರ್ಯ ಮತ್ತವನ ಕುಟುಂಬದ ಸ್ಥೈರ್ಯ ಎಲ್ಲವೂ ಮಿಳಿತವಾಗಿ ರೋಮಾಂಚಕ ಅನುಭವ ನೀಡುವಲ್ಲಿ ಸಫಲವಾದ ಚಿತ್ರ.

ಹಂಸಗೀತೆ : ತರಾಸು ಕಾದಂಬರಿ ಆಧರಿಸಿ ರಚಿಸಿದ ಈ ಚಿತ್ರ, ಸಂಗೀತಗಾರನೊಬ್ಬ ಪಕ್ವಗೊಳ್ಳುವುದನ್ನು ತೋರಿಸುತ್ತಲೇ ಆತ್ಮಾಭಿಮಾನವನ್ನು ಉಳಿಸಿಕೊಳ್ಳುವ ಛಲವನ್ನೂ ತೋರಿಸಿ, ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಜಿ.ವಿ.ಅಯ್ಯರ್ ನಿರ್ದೇಶನದ, ಟಿ.ಜಿ. ಲಿಂಗಪ್ಪ ಮತ್ತು ಬಿ.ವಿ. ಕಾರಂತರ ಸಂಗೀತ ಇರುವ ಅನಂತನಾಗ್ ಅಭಿನಯದ ಚಿತ್ರ.

ಜೀವನ ಚೈತ್ರ : ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೆ ಬಣ್ಣಹಚ್ಚಿದ ಕನ್ನಡದ ಹಿರಿಯಣ್ಣನ ಚಿತ್ರ. ಕುಡಿತ ಮತ್ತು ಜಾಗತೀಕರಣವನ್ನೂ ಸಹ ಮೂರ್ತರೂಪವಾಗಿ ತೋರುವ ಈ ಚಿತ್ರ ನನ್ನ ಮೇಲೆ ಬೀರಿದ ಪ್ರಭಾವ ಅಪಾರವಾದದ್ದು.

ಸಮಯದ ಗೊಂಬೆ  : ಸಮಯದ ಕೈಯಲ್ಲಿ ನಾವೆಲ್ಲರೂ ಬೊಂಬೆಗಳೆಂದು ಸಾರುವ ಈ ಚಿತ್ರ, ನೊಂದ ಮನಸ್ಸುಗಳಿಗೆ ಸಾಂತ್ವನ ನೀಡಬಲ್ಲ ಶಕ್ತಿಯಿದೆ.  ಅದರಲ್ಲೂ ಶಕ್ತಿಪ್ರಸಾದರ ಅಭಿನಯ ಅತ್ಯಮೋಘವಾಗಿದೆ.

ಸಾವಿರ ಸುಳ್ಳು : ಮದುವೆ ಮಾಡಿಸುವ ನಂತರ ಆ ಸಂಸಾರದ ವಿರಸವನ್ನೂ ತೊಡೆಯುವ ಕೆಲಸ ಮಾಡುವ ಲೊಕೇಶ್, ಕಡೆಯಲ್ಲಿ ಎಲ್ಲರಿಂದ ನಿಂದಿತನಾಗಬೇಕಾಗುತ್ತದೆ.  ನಗಿಸುತ್ತಲೇ ಸಂಸಾರದ ಒಳಗುಟ್ಟುಗಳ ಪಟ್ಟು ತಿಳಿಸುವ ಈ ಚಿತ್ರದ ರವಿಚಂದ್ರನ್ ಆಪ್ತರಾಗುತ್ತಾರೆ.


ನಾಗಮಂಡಲ:  ಟಿ.ಎಸ್. ನಾಗಾಭರಣ ನಿರ್ದೇಶನದ ಈ ಚಿತ್ರ, ಎ.ಕೆ. ರಾಮಾನುಜಂ ಅವರ ನಾಟಕ ಆಧರಿಸಿದ್ದು.  ಕತೆ ಜಾನಪದದ್ದು.  ಹಾದರದ ಬಗ್ಗೆ ಜಾನಪದರ ಕಲ್ಪನೆಯೇ ಬೇರೆ ಎನ್ನುವುದನ್ನು ನಾಗದಿವ್ಯದ ಮೂಲಕ ತೋರಿಸುವ ಈ ಚಿತ್ರ, ಕಾವ್ಯಾತ್ಮಕ ಗುಣಗಳಿಂದ ಕೂಡಿ, ನೆಳಲು ಬೆಳಕುಗಳ ವಿನ್ಯಾಸದಿಂದ ಮನ ಸೆಳೆಯುತ್ತದೆ.


ಅರಸು : ಲಕ್ಷ್ಮೀ ಪುತ್ರನೊಬ್ಬ ಕಾಸಿನ ಬೆಲೆ ಅರಿಯಲು ಮಾರುವೇಷದಲ್ಲಿ ದುಡಿಯುವ ಮಾಮೂಲಿ ಕತೆಯಾದರೂ, ಅದು ಮನಸ್ಸಿಗೆ ತಟ್ಟುವ ರೀತಿ ಹಿತಕರ. ಪುನೀತ್ ಅತ್ಯಂತ ಆಪ್ತವಾಗಿ ನಟಿಸಿರುವ ಈ ಚಿತ್ರದಲ್ಲಿ, ಪ್ರೇಮಕತೆ ಹಳ್ಳ ಹಿಡಿಯುತ್ತದೆ.

ಉಪೇಂದ್ರ: ವಿಭಿನ್ನ ಆಯಾಮಗಳನ್ನೊಳಗೊಂಡ ಈ ಚಿತ್ರ ಒಂದು ಮಾಸ್ಟರ್ ಪೀಸ್. ಆದರೆ ಆಯಾಮಗಳ ಅಂತಸತ್ವವನ್ನು ಎತ್ತರಿಸುವಲ್ಲಿ ವಿಫಲರಾಗಿದ್ದು, ಉಪೇಂದ್ರರ ಎಡವಟ್ಟು.

ಬೂತಯ್ಯನ ಮಗ ಅಯ್ಯು : ಜಿಪುಣ, ಕ್ರೂರಿ ಜಮೀನ್ದಾರನ ಮಗ ಮತ್ತು ಊರ ಹೈದರ ಜಗಳದಲ್ಲಿ  ತನಗರಿವಿಲ್ಲದೆಯೇ  ಪರಿವರ್ತಿತನಾಗುವ ಜಮೀನ್ದಾರನ ಮಗನ ಕತೆ ಇದು. ಬೂತಯ್ಯ ಸರ್ಕಲ್ ಎನ್ನುವ ಹೆಸರು ಎಂ.ಪಿ. ಶಂಕರ್ ಮನೆಯ ಬಳಿ ಇರುವ ವೃತ್ತಕ್ಕೆ ಜನಪ್ರಿಯ ಹೆಸರಾಯಿತೆಂದರೆ, ಆ ಬೂತಯ್ಯನ ಪ್ರಭಾವ ಎಂತಹುದಿರಬೇಕಿನ್ನು..? ಅಯ್ಯುವಾಗಿ ಲೋಕೇಶ್, ಗುಳ್ಳನಾಗಿ ವಿಷ್ಣುವರ್ಧನ್ ಅಭಿನಯ ಮರೆಯಲಾಗದಂತಹುದು.  ಸಿದ್ದಲಿಂಗಯ್ಯ ನಿರ್ದೇಶನದ ಈ ಚಿತ್ರದ ಕತೆ ಗೊರೂರು ರಾಮಸ್ವಾಮಿ ಅಯ್ಯಂಗಾರರ ಅದೇ ಹೆಸರಿನ ಕಾದಂಬರಿಯದು.

ಬಂಗಾರದ ಮನುಷ್ಯ : ಇದೇ ಸಿದ್ದಲಿಂಗಯ್ಯನವರ ಮರೆಯಲಾಗದ ಮಾಸ್ಟರ್ ಪೀಸ್ ಬಂಗಾರದ ಮನುಷ್ಯ. ವಿದ್ಯಾವಂತ ಯುವಕ, ಪರಿಸ್ಥಿತಿಯ ಒತ್ತಡವೇ ಇದ್ದರೂ ಸ್ವಪ್ರೇರಣೆಯಿಂದ ಮಣ್ಣಿನ ಮಗನಾಗಿ, ತನ್ನ ಗುಣಗಳಿಂದಾಗಿ ಬಂಗಾರದ ಮನುಷ್ಯನಾಗುವ ಈ ಚಿತ್ರ ಜನಸಮೂಹಕ್ಕೆ ಬೀರಿದ ಪ್ರಭಾವ ಅಷ್ಟಿಷ್ಟಲ್ಲ. ಇದೂ ಟಿ.ಕೆ. ರಾಮರಾಯರ ಕಾದಂಬರಿ ಆಧಾರಿತ ಕೃತಿ. ಸಾಧನೆಯ ಜೊತೆಜೊತೆಗೇ ಮನುಷ್ಯ ಪ್ರವೃತ್ತಿಗಳ ಚಿತ್ರಣವೂ ಇಲ್ಲಿ ಸೊಗಸಾಗಿ ಮೂಡಿ ಬಂದಿದೆ.


ಬೆಟ್ಟದ ಹೂವು : ಚಿಕ್ಕವಯಸ್ಸಿನಲ್ಲೇ ರಾಷ್ಟ್ರಪ್ರಶಸ್ತಿಯನ್ನು ಪುನೀತ್ ಗೆ ತಂದುಕೊಟ್ಟ ಚಿತ್ರವಿದು. ಪುಸ್ತಕ ಓದಬೇಕೆನ್ನುವ ಹುಡುಗನ ಅದಮ್ಯ ಆಸೆ ಮತ್ತು ಜೀವನದ  ಬಂಡಿ ಸಾಗಲು  ಬೇಕಾಗುವ ಚೈತನ್ಯದ ಸಂಘರ್ಷವನ್ನು ಸೆರೆಹಿಡಿಯುವಲ್ಲಿ ನಿರ್ದೇಶಕ ಎನ್. ಲಕ್ಷ್ಮೀನಾರಯಣರು ಯಶಸ್ವಿಯಾಗಿದ್ದಾರೆ.

ಇಲ್ಲಿರುವುದು ನಾನು ನೋಡಿರುವ ಚಿತ್ರಗಳಲ್ಲಿ ನಾನು ಮೆಚ್ಚಿದ ಚಿತ್ರಗಳ ಪಟ್ಟಿಯಷ್ಟೇ, ಈ ಪಟ್ಟಿಯೂ ನನ್ನ ನೆನಪಿನ ಶಕ್ತಿಯ ಗುಣದೋಷಗಳಿಂದ ಮುಕ್ತವಾಗಿಲ್ಲ.  ಅಲ್ಲದೇ ನನಗರಿವಿಲ್ಲದ ಉತ್ತಮಚಿತ್ರಗಳು ಇಲ್ಲಿ ಚರ್ಚೆಗೆ ಬಂದೇ ಇಲ್ಲ.  ಹಾಗಾಗಿ ಇದು ನನ್ನ ಈ ಕ್ಷಣದ ಅಭಿಪ್ರಾಯವೆಂದಷ್ಟೇ ಭಾವಿಸಬೇಕೆನ್ನುವುದು ನನ್ನ ಮನವಿ.

Tuesday, December 11, 2012

Batch Script for editing something in a file in DOS

The below Batch script will find something inside a file and replace it with something of your wish 

@echo off
setlocal enabledelayedexpansion

if not exist "%1" (echo this file does not exist...)&goto :eof

set  /p findthis=Enter here what you want to find:
set  /p replacewith=Enter here what you want to replace:
for /f "delims= tokens=* eol=^ " %%a in (%1) do (
   set write=%%a
   if %%a==!findthis! set write=!replacewith!
   echo !write!

   echo !write!>>%~n1.replaced%~x1
)


donot add a space after the varialbe in the last line.. this will add a space after the line in your output.  I took three hours to find and fix this bug.


Friday, December 07, 2012

Six skills for CIOs

CIOs are cerebellum of  corporate world.  Techtarget survey reveals that the following are the most required skills for CEO in the below order.

The numbers in the bracket depicts the percentage of the people who voted for the skill.

No. 1: IT security and compliance expertise take top billing for CIOs(47.4%)

No. 2: IT project management expertise deemed a necessity for CIOs (31%)

No. 3: Partner management and IT vendor management crucial to success( (27%)

No. 4: Enterprise data management skills increasingly vital for CIOs (23.1%)

No. 5: Corporate financial skills a must for CIOs(19.1%)

No. 6: Legal expertise a sought-after skill in CIOs(11.9%)

Any comments ..?

Friday, November 23, 2012

೨೦೧೨ನೇ ಸಾಲಿನ ಇಗ್ನೊಬಲ್ ಪ್ರಶಸ್ತಿಗಳ ವಿವರ

೨೦೧೨ನೇ ಸಾಲಿನ ಇಗ್ನೊಬಲ್ ಪ್ರಶಸ್ತಿಗಳ ವಿವರ. (ತಡವಾಗಿದ್ದಕ್ಕೆ ಕ್ಷಮೆ ಇರಲಿ)


ಮನೋವೈದ್ಯಕೀಯ ಶಾಸ್ತ್ರ : ಎಡಬಾಗಕ್ಕೆ ವಾಲುವುದರಿಂದ ಐಫಿಲ್ ಗೋಪುರ ಚಿಕ್ಕದಾಗಿ ಕಾಣುತ್ತದೆ ಎನ್ನುವ ಸಂಶೋಧನೆಗೆ
ಅನಿತಾ ಎರ್ಲಾಂಡ್, ಮತ್ತು ರಾಲ್ಫ್ ಸ್ವಾನ್ (ನೆದರ್‌ಲ್ಯಾಂಡ್) ಮತ್ತು ಟುಲಿಯೋ ಗೌಡಲೂಪೆ (ಪೆರು)

ಶಾಂತಿ ಪ್ರಶಸ್ತಿ. ಎಸ್.ಕೆ.ಎನ್. ಕಂಪನಿ.(ರಶಿಯಾ) ಹಳೆಯ ರಷಿಯದ ಸಿಡಿಮದ್ದುಗಳನ್ನು ಹೊಸ ವಜ್ರಗಳನ್ನಾಗಿ ಮಾರ್ಪಡಿಸಿದ್ದಕ್ಕೆ.


ಶಬ್ದಶಾಸ್ತ್ರ ಪ್ರಶಸ್ತಿ : ವ್ಯಕ್ತಿಯ ಮಾತುಗಳನ್ನು, ಕೆಲವೇ ಸೂಕ್ಷ್ಮ ಸೆಕೆಂಡುಗಳ ತಡೆಯ ನಂತರ ಪ್ರತಿಧ್ವನಿಸುವಂತೆ ಮಾಡಿ, ವ್ಯಕ್ತಿ ಮಾತಾಡದಂತೆ ತಡೆಯೊಡ್ಡುವ ಸಂಶೋಧನೆ ಮಾಡಿದ್ದಕ್ಕೆ. ಕಜುತುಕಾ ಕುರಿಹಾರ ಮತ್ತು ಕೋಜಿ ಸುಕಾಡ (ಜಪಾನ್) ಅವರಿಗೆ.


ನರಶಾಸ್ತ್ರ ಪ್ರಶಸ್ತಿ. ಸತ್ತ ಸಾಲ್ಮನ್ ಮೀನೂ ಸೇರಿದಂತೆ ಎಲ್ಲಾದರೂ, ಮಿದುಳಿನ ಚಟುವಟಿಕೆ ಗಮನಿಸುವದುಕ್ಕಾಗಿ, ಸಂಕೀರ್ಣ ಉಪಕರಣಗಳನ್ನು ಮತ್ತು ಸರಳ ಲೆಕ್ಕಗಳನ್ನು ರೂಪಿಸಿದ್ದಕ್ಕೆ, ಕ್ರೇಗ್ ಬೆನೆಟ್ ಅಬಿಗೇಲ್ ಬೇರ್ಡ್, ಮೈಕೇಲ್ ಮಿಲ್ಲರ್ ಮತ್ತು ಜಾರ್ಜ್ ವೋಲ್‌ಫೋರ್ಡ್ (ಅಮೆರಿಕಾ ಸಂಯುಕ್ತ ಸಂಸ್ಥಾನ).


ರಸಾಯನ ಶಾಸ್ತ್ರ : ಸ್ವೀಡನ್ನಿನ ಆಂಡರ್‌ಸ್ಲಾವ್ ನಗರದ ಕೆಲವು ಮನೆಗಳ ಜನರ ಕೂದಲು ಹಸಿರಾಗುವ  ಕಾರಣ ಕಂಡುಹಿಡಿದ್ದಕ್ಕೆ, ಜೊಹಾನ್ ಪೀಟರ್‌ಸನ್ (ಸ್ವೀಡನ್) ಅವರಿಗೆ.


ಸಾಹಿತ್ಯ ಪ್ರಶಸ್ತಿ : ವರದಿಗಳ ಬಗ್ಗೆ ವರದಿಯ ವರದಿಗಳನ್ನು ತಯಾರು ಮಾಡುವ ಬಗ್ಗೆ ಸಲಹೆ ನೀಡುವ ವರದಿಗಳ ಬಗೆಗಿನ ವರದಿಗಳ ವರದಿಯನ್ನು ನೀಡಿದ್ದಕ್ಕೆ ಅಮೆರಿಕಾ  ಸಂಯುಕ್ತ ಸಂಸ್ಥಾನದ ಅಕೌಂಟಬಿಲಿಟಿ ಕಚೇರಿಗೆ.


 ಭೌತಶಾಸ್ತ್ರ ಪ್ರಶಸ್ತಿ : ವ್ಯಕ್ತಿಯೊಬ್ಬ/ಳು ಕಟ್ಟಿಕೊಳ್ಳುವ ಕುದುರೆಬಾಲದ ಜಡೆಯ ಆಕಾರ ಮತ್ತು ಚಲನೆಯನ್ನು ನಿರ್ಧರಿಸುವ ಬಲಗಳ ತುಲನೆಯನ್ನು ಲೆಕ್ಕಿಸಿದ್ದಕ್ಕಾಗಿ, ಜೋಸೆಫ್ ಕೆಲ್ಲರ್ (ಅಮೆರಿಕಾ) ರೇಮಂಡ್ ಗೋಲ್ಡ್‌ಸ್ಟೀನ್ (ಅಮೆರಿಕಾ ಮತ್ತು ಇಂಗ್ಲೆಂಡ್), ಪ್ಯಾಟ್ರಿಕ್ ವಾರೆನ್ ಮತ್ತು ರಾಬಿನ್ ಬಾಲ್ (ಇಂಗ್ಲೆಂಡ್) ಇವರಿಗೆ.


ದ್ರವಚಲನ ಶಾಸ್ತ್ರ ಪ್ರಶಸ್ತಿ: ವ್ಯಕ್ತಿಯೊಬ್ಬ ಕಾಫಿ ಕಪ್ಪನ್ನು ಕೈಯಲ್ಲಿ ಹಿಡಿದು ನಡೆದಾಗ ಏನಾಗುತ್ತದೆ ಎಂದು ತಿಳಿಯಲು ದ್ರವದ ಎರಚುವಿಕೆಯ ಚಲನೆಯನ್ನು ಅಭ್ಯಾಸ ಮಾಡಿದ ಸಂಶೋಧನೆಗೆ, ರೌಸ್ಲನ್ ಕ್ರೆಚೆಟ್ನಿಕೋವ್(ಅಮೆರಿಕಾ, ರಷಿಯಾ ಮತ್ತು ಕೆನಡಾ) ಮತ್ತು ಹಾನ್ಸ್ ಮೇಯರ್ (ಅಮೆರಿಕಾ) ಅವರಿಗೆ

ದೇಹ ರಚನಾಶಾಸ್ತ್ರ ಪ್ರಶಸ್ತಿ: ಚಿಂಪಾಂಜಿಗಳು ಬೇರೆ ಚಿಂಪಾಂಜಿಗಳ ಹಿಂಭಾಗದ ಚಿತ್ರ ನೋಡುವುದರಿಂದಲೇ ಅವನ್ನು ಗುರುತು ಹಿಡಿಯಬಲ್ಲುವು ಎನ್ನುವ ಸಂಶೋಧನೆಗೆ ಫ಼್ರಾನ್ಸ್ ಡಿ ವಾಲ್ (ನೆದರ್‌ಲ್ಯಾಂಡ್ ಮತ್ತು ಅಮೆರಿಕಾ) ಜೆನ್ನಿಫರ್ ಪೊಕೊರ್ನಿ (ಅಮೆರಿಕಾ) ಇವರಿಗೆ.

ಔಷಧಿ ಶಾಸ್ತ್ರ ಪ್ರಶಸ್ತಿ: ಕೊಲೋನೊಸ್ಕೋಪಿ ಶಸ್ತ್ರಚಿಕಿತ್ಸೆ ಮಾಡುವಾಗ ರೋಗಿಗಳ ಹೊಟ್ಟೆ ಒಡೆದುಹೋಗುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದಾದ ಸಲಹೆಗಳನ್ನು ವೈದ್ಯರಿಗೆ ನೀಡಿದ್ದಕ್ಕೆ, ಇಮಾನ್ಯುಯೆಲ್ ಬೆನ್-ಸೌಸನ್ ಮತ್ತು ಮೈಕೇಲ್ ಅಂಟಾನಿಯೆಟ್ಟಿ (ಫ಼್ರಾನ್ಸ್) ಅವರಿಗೆ.


ವಿಶೇಷ ಪ್ರಶಸ್ತಿ : ೧೯೯೧ರ ತಪ್ಪೊಂದನ್ನು ತಿದ್ದಿಕೊಳ್ಳುವ ಸಲುವಾಗಿ, ಈಗ ಜೋಸೆಫ್ ಕೆಲ್ಲರ್ ಅವರಿಗೆ ಮತ್ತೆ ಪ್ರಶಸ್ತಿ ನೀಡಲಾಗುತ್ತಿದೆ.  ಟೀ ಹರಿಯದಂತಿರುವ ಟೀ ಪಾಟ್ ಕೊಳವೆಯನ್ನು ಮಾಡಿದ್ದಕ್ಕಾಗಿ..  ಈ ಮೂಲಕ ಅವರು ೧೯೯೯ ಮತ್ತು ೨೦೧೨  ಎರಡು ಬಾರಿ ಇಗ್ನೊಬಲ್ ಪ್ರಶಸ್ತಿ ಗಳಿಸುತ್ತಿದ್ದಾರೆ.

Thursday, November 22, 2012

ತುಂಬುಗನ್ನಡದ ಶತಾವಧಾನ

ಪ್ರಪಂಚದಲ್ಲಿ ಜೀವಂತವಿರುವ ಭಾಷೆಗಳಲ್ಲಿ ಅತ್ಯಂತ ಹಳೆಯ ಭಾಷೆಗಳಲ್ಲೊಂದಾಗಿರುವ ಕನ್ನಡದಲ್ಲಿ ಅವಧಾನ ಕಲೆಯೂ ಅರಳಿದೆ.

ಅವಧಾನದಲ್ಲಿ ಅಷ್ಟಾವಧಾನ, ಶತಾವಧಾನ ಮತ್ತು ಸಹಸ್ರಾವಧಾನವೆಂಬ ಮೂರು ಬಗೆಗಳುಂಟು.

೮೦೦ ವರುಷಗಳ ಹಿಂದೆಯೇ ಉದಯಿಸಿದ ಈ ಕಲೆಯೂ ಆಧುನಿಕ ಯುಗದಲ್ಲಿ ಕಣ್ಮರೆಯಾಗುವಂತಾಗಿತ್ತಾದರೂ, ಬೆಳ್ಳಾವೆ ನರಹರಿ ಶಾಸ್ತ್ರಿಗಳು, ರಾ.ಗಣೇಶ್ ರಂತಹ ವ್ಯಕ್ತಿಗಳಿಂದ ಮರುಹುಟ್ಟು ಪಡೆದಿದೆ.

ಈ ಹಿಂದೆಯೇ ಸಂಪದದಲ್ಲಿ ನಾನು ನೋಡಿದ ಅಷ್ಟಾವಧಾನದ ಬಗ್ಗೆ ಒಂದು ಲೇಖನ ಬರೆದಿದ್ದೆ.  ಈಗ ಕನ್ನಡದ ಮನಸುಗಳಿಗೆ ಶತಾವಧಾನವನ್ನು ನೋಡುವ ಸುಂದರ ಗಳಿಗೆ ಕೂಡಿ ಬಂದಿದೆ,

ನವೆಂಬರ್ ೩೦, ಡಿಸೆಂಬರ್೧ ಹಾಗೂ ೨ರಂದು, ತುಂಬುಗನ್ನಡದ ಮೊದಲ ಶತಾವಧಾನ ಕಾರ್ಯಕ್ರಮ ಬೆಂಗಳೂರಿನ ಜಯನಗರ ಮೂರನೇ ಬ್ಲಾಕಿನ ಎನ್.ಎಮ್.ಕೆ.ಆರ್.ವಿ. ಕಾಲೇಜಿನ ಮಂಗಳ ಮಂಟಪದಲ್ಲಿ ನಡೆಯಲಿದೆ.

ಆಸಕ್ತ ಮನಸ್ಸುಗಳಿಗೆ ಆತ್ಮೀಯ ಸ್ವಾಗತ.  ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ ಈ ಕೊಂಡಿ ನೋಡಿ.
ಹಾಗೂ ಕಾರ್ಯಕ್ರಮದಲ್ಲಿ ಕೈಜೋಡಿಸುವ ಮನಸ್ಸಿರುವವರು ಅದೇ ಕೊಂಡಿಯ ಈ ಪುಟವನ್ನು ನೋಡಿ ಎಂದು ಕೋರಿಕೊಳ್ಳುತ್ತೇನೆ.

Sunday, November 04, 2012

ನಾ ನಿನ್ನವಳಲ್ಲ

ನಾ ನಿನ್ನವಳಲ್ಲ... ನಿನ್ನ
ನೆನಪಲೆ ಕಳೆದುಹೋದವಳಲ್ಲ.
ಹಂಬಲಿಸಿ ಕಾದಿರುವೆ  ಕಳೆದುಹೋಗಲು
ನಡುಮಧ್ಯಾಹ್ನದಲಿ ಬೆಳಗಿರುವ ಹಣತೆಯಂತೆ
ಇಡಿಸಾಗರದ ಮಧ್ಯೆ  ಹಿಮಚಕ್ಕೆಯಂತೆ.

ನೀ ನನ್ನ ಪ್ರೀತಿಸುವುದ ನಾ ಬಲ್ಲೆ.
ಪ್ರಖರ ಅಂತಃಶಕ್ತಿಯ ಬೆಳಕಿನಲ್ಲೆ 
ಆದರೂ  ಕಳೆದುಹೋಗಲು ನನ್ನ ಹಂಬಲಿಕೆ
ಇರುಳಲ್ಲಿ ಇಣುಕಿಯೂ ನೋಡದ ಬೆಳಕಿನಂತೆ

ಪ್ರೀತಿ ಸಾಗರದಲಿ ನನ್ನ ಮುಳುಗಿಸು
ಮತಿಯ ಮತ್ತಿನಲೆ  ಮಲಗಿಸು
ಮೂಕವಾದರು, ಕೇಳದಾದರು
ಹಂಬಲಿಸಿ ಕಾದಿರುವೆ ಕಳೆದುಹೋಗಲು
ನಿನ್ನ ಪ್ರೀತಿಯ ಬಿರುಗಾಳಿಯಲೆ ತರಗೆಲೆಯಾಗಲು.

ಸಾರಾ ಟೀಸ್ ಡೇಲ್ ಅವರ " I am not yours " ಪದ್ಯದ ಭಾವಾನುವಾದ .. ಮೂಲ ಕೆಳಗಿನಂತಿದೆ.

I am not yours, not lost in you,
   Not lost, altho' I long to be
Lost as a candle lit at noon,
   Lost as a snow-flake in the sea.

You love me, and I find you still
   A spirit beautiful and bright,
Yet I am I, who long to be
   Lost as a light is lost in light.

Oh plunge me deep in love—put out
   My senses, leave me deaf and blind,
Swept by the tempest of your love,
   A taper in a rushing wind.

"I Am Not Yours "
by Sara Teasedale

Saturday, November 03, 2012

ಯುದ್ದಕಲೆ ೧. ರಣನೀತಿ ರೂಪಣೆ




. ಸುನ್ ತ್ಸು ಹೇಳಿದ್ದು. : ಯುದ್ದಕಲೆ ರಾಷ್ತ್ರವೊಂದಕ್ಕೆ ಅತ್ಯಂತ ಮಹತ್ವದ್ದು.

. ಅದು ಜೀವನ್ಮರಣಗಳ ಪ್ರಶ್ನೆಯೂ, ಸುಸ್ಥಿತಿ ಅಥವಾ ಅಧೋಗತಿಗಳಿಗೆ ಹೆದ್ದಾರಿಯೂ ಆಗಿದೆ. ಆದ್ದರಿಂದ ಈ ವಿಷಯವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲಾಗದು.

. ಯುದ್ದಕಲೆಯನ್ನು ನಿರ್ಣಾಯಿಕಗೊಳಿಸುವ ಐದು ಪ್ರಮುಖ ಅಂಶಗಳೆಂದರೆ
() ನೈತಿಕತೆ
() ಅಲೌಕಿಕತೆ
()ಲೌಕಿಕತೆ
()ದಳ ಪತಿ
() ನಿಯಮ ಮತ್ತು ಶಿಸ್ತು.

. ಇವುಗಳನ್ನು ಚೆನ್ನಾಗಿ ಮತ್ತು ಸಮಗ್ರವಾಗಿ ಪರಿಶೀಲಿಸಿಯೇ ರಣರಂಗದಲ್ಲಿನ ಸ್ಥಿತಿಗತಿಗಳನ್ನು ವಿಮರ್ಶಿಸಬೇಕು.

., ., ನೈತಿಕತೆಯು ಪ್ರಜಾಸಮೂಹವು ತನ್ನ ನಾಯಕನಿಗೆ ಜೊತೆಯಾಗಿರುವಂತೆ ಮಾಡುತ್ತದೆ.. ತನ್ನ ಪ್ರಾಣವನ್ನೂ ಲೆಕ್ಕಿಸದೆ, ಅಪಾಯಗಳನ್ನು ಎದುರಿಸುವಂತಹ ಹಿಂಬಾಲಕರಿರಬೇಕೆಂದರೆ, ಇದು ಅತಿ ಮುಖ್ಯ.

. ಅಲೌಕಿಕವೆಂದರೆ ಹಗಲು ರಾತ್ರಿಗಳು, ಕಾಲ ದೇಶಗಳು , ತಂಪು ಉಷ್ಣ ಮೊದಲಾದ ಹವಾಮಾನ ವೈಪರೀತ್ಯಗಳು.

. ಲೌಕಿಕವೆಂದರೆ ದೂರ ಹತ್ತಿರಗಳು, ಸುರಕ್ಶೆ ಅಪಾಯಗಳು, ಬಯಲು ಕಣಿವೆಗಳು, ಸಾವು ಬದುಕಿನ ಸಾಧ್ಯತೆಗಳು.

. ದಳಪತಿಯು ತನ್ನ ಬುದ್ದಿಮತ್ತೆ, ಪ್ರಾಮಾಣಿಕತೆ, ಕರುಣೆ, ಸಾಹಸ, ಶಿಸ್ತು ಮತ್ತು ಕಾರ್ಯಕ್ಷಮತೆಯ ಕಾರಣದಿಂದಿರುತ್ತಾನೆ.

೧೦. ನಿಯಮ ಮತ್ತು ಶಿಸ್ತು, ಸೈನ್ಯದ ವರ್ಗೀಕರಣ , ಅಧಿಕಾರಿಗಳ ಪದೋನ್ನತಿ, ಸೈನ್ಯದ ಪೂರೈಕೆಯ ಹಾದಿಯ ಸುಗಮಗೊಳಿಸುವಿಕೆ ಮತ್ತು ಮೇಲ್ವಿಚಾರಣೆ ಹಾಗೂ ಸೈನ್ಯದ ಖರ್ಚಿನ ಮೇಲೆ ನಿಗಾ ವಹಿಸುವಿಕೆಗೆ ಸಂಬಂಧಪಟ್ಟಿದೆ.

೧೧. ಈ ಐದು ಅಂಶಗಳೂ ಪ್ರತಿ ಸೇನಾಧಿಪತಿಗೆ ಅರಿವಿರಬೇಕು, ಇದನ್ನು ಅರಿತವನೇ ಜಯಶೀಲನಾಗುತ್ತಾನೆ, ಸೋಲು ಅವನ ಬಳಿ ಸುಳಿಯದು.

೧೨. ಆದ್ದರಿಂದ ಸೇನಾ ಸ್ಥಿತಿಗತಿಗಳನ್ನು ನಿರ್ಧರಿಸುವ ಮುಂಚೆ ಕೇಳಿಕೊಳ್ಳಬೇಕಾದ ಪ್ರಶ್ನೆಗಳು


೧೩.

. ನೈತಿಕತೆಗೆ ಯಾವ ರಾಷ್ಟ್ರ ಹೆಚ್ಚಿನ ಒತ್ತು ಕೊಡುತ್ತದೆ. ?
. ಇಬ್ಬರೂ ಸೇನಾಧಿಪತಿಗಳಲ್ಲಿ ಯಾರು ಹೆಚ್ಚು ಕಾರ್ಯಸಾಧನ ಶೂರರು?
. ಲೌಕಿಕ ಮತ್ತು ಅಲೌಕಿಕಗಳ ಸಹಾಯಕ ಅಂಶಗಳು ಯಾರ ಕಡೆಗಿವೆ ?
. ಶಿಸ್ತು ಯಾವ ಕಡೆ ಕಟ್ಟುನಿಟ್ಟಾಗಿ ಪಾಲಿಸಲ್ಪಟ್ಟಿದೆ?
. ಯಾವ ಸೈನ್ಯ ಬಲಶಾಲಿಯಾಗಿದೆ?
. ಯಾವ ಕಡೆಯ ಸೈನಿಕರು ಮತ್ತು ಅಧಿಕಾರಿಗಳು ಚೆನ್ನಾಗಿ ತರಬೇತಾಗಿದ್ದಾರೆ?
. ಯಾವ ಸೈನ್ಯದಲ್ಲಿ (ಸಾಧನೆಗೆ) ಬಹುಮಾನವೂ (ತಪ್ಪಿಗೆ) ಶಿಕ್ಷೆಯೂ ನಿಯಮಿತವಾಗಿ ಜಾರಿಗೆ ಬಂದಿದೆ?


೧೪. ಈ ಏಳು ಪ್ರಶೆಗಳನ್ನು ಕೂಲಂಕಷವಾಗಿ ಪರಿಶೀಲಿಸುವುದರಿಂದ ಜಯವೇ ಅಥವಾ ಅಪಜಯವೇ ಎಂದು ಹೇಳಬಹುದು.

೧೫. ನನ್ನೀ ಸಲಹೆಗಳನ್ನು ಪಾಲಿಸುವ ಸೇನಾಧಿಪತಿಗೆ ಗೆಲವು ಶತಸಿದ್ಧ. ಅವನ ಪದವಿ ಮುಂದುವರೆಯಲಿ. ನನ್ನ ಮಾತನ್ನು ಕೇಳದ ಸೇನಾಧಿಪತಿಗೆ ಸೋಲಿಲ್ಲದೆ ಬೇರೆ ದಾರಿಯಿಲ್ಲ. ಅಂತಹವರು ಇರುವುದಕ್ಕಿಂತಲೂ ಹೋಗುವುದು ಮೇಲು.

೧೬. ಈ ಸಲಹೆಗಳ ಲಾಭವಲ್ಲದೆ, ಸಾಮಾನ್ಯ ನಿಯಮಗಳಿಗೆ ಹೊರತುಪಡಿಸಿದ ಅನುಕೂಲಕರ ಸನ್ನಿವೇಶಗಳುಂಟಾದರೆ ಎಚ್ಚರಿಕೆಯಿಂದ ಗಮನಿಸುತ್ತಿರಬೇಕು.

೧೭. ನನ್ನೀ ಸಲಹೆಗಳಲ್ಲದೆ, ಸನ್ನಿವೇಶಗಳು ಅನುಕೂಲಕರವಾಗಿದ್ದರೆ ರಣನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.

೧೮. ಎಲ್ಲಾ ಯುದ್ದಗಳೂ ತಂತ್ರಗಾರಿಕೆಯನ್ನೇ ಅವಲಂಬಿಸಿವೆ.

೧೯. ಆದ್ದರಿಂದ ದಾಳಿ ನಡೆಸುವ ಶಕ್ತಿಯಿದ್ದರೂ ಇಲ್ಲದವರಂತೆ, ನಮ್ಮ ಬಲ ಪ್ರಯೋಗಿಸುತ್ತಿದ್ದಾಗಲೂ ಏನೂ ಮಾಡದವರಂತೆ, ಹತ್ತಿರವಿದ್ದಾಗಲೂ ಶತ್ರು ನಾವು ದೂರವಿರುವಂತೆ ನಂಬುವಂತೆ ಮಾಡಬೇಕು. ನಾವು ದೂರವಿದ್ದಾಗ ಹತ್ತಿರದಲ್ಲೇ ಇರುವಂತೆ ಶತ್ರುವಿಗೆ ಕಾಣಿಸಿಕೊಳ್ಳಬೇಕು.

೨೦. ಶತ್ರುವನ್ನು ಅಜಾಗರೂಕತೆಯ ಬಲೆಯಲ್ಲಿ ಬೀಳುವಂತೆ ಗಾಳ ಹಾಕಬೇಕು. ಅರಾಜಕತೆ ಸೃಷ್ಟಿಯಾದೊಡನೆ ಮೇಲೆಬಿದ್ದು ಅವನನ್ನು ಮಣಿಸಬೇಕು.

೨೧. ಶತ್ರುವು ಎಲ್ಲಾರೀತಿಯಲ್ಲೂ ಸುರಕ್ಷಿತನಾಗಿದ್ದರೆ, ಅವನ ದಾಳಿಗೆ ಸಿದ್ದರಾಗಿ ಕಾಯಬೇಕು. ನಮಗಿಂತಲೂ ಬಲಶಾಲಿಯಾಗಿದ್ದರೆ ಅವನಿಂದ ತಪ್ಪಿಸಿಕೊಳ್ಳಬೇಕು.

೨೨. ಶತ್ರುವಿನ ಕೋಪ ಮೂಗಿನ ತುದಿಯಲ್ಲಿದ್ದರೆ ಅವನನ್ನು ರೊಚ್ಚಿಗೇಳಿಸಬೇಕು, ನೀವು ಬಲಹೀನರಂತೆ ತೋರಿಸಿಕೊಂಡು ಅವನು ದಾಳಿ ಮಾಡುವಂತೆ ಪ್ರಚೋದಿಸಬೇಕು.

೨೩. ಶತ್ರು ವಿಶ್ರಾಂತಿ ಪಡೆಯುತ್ತಿದ್ದರೆ ಅದಕ್ಕೆ ಅವಕಾಶವನ್ನೇ ಕೊಡಬಾರದು.

೨೪. ಶತ್ರು ಸಿದ್ಧನಾಗಿಲ್ಲದಿರುವಾಗ ದಾಳಿ ಮಾಡಬೇಕು. ನಮ್ಮನ್ನು ನಿರೀಕ್ಷಿಸಿಯೇ ಇರದ ಜಾಗದಲ್ಲಿ ಕಾಣಿಸಿಕೊಳ್ಳಬೇಕು.

೨೫. ಜಯದೆಡೆಗೆ ನಮ್ಮನ್ನು ಕೊಂಡೊಯ್ಯಬಲ್ಲ ಅಸ್ತ್ರಗಳ ಸುಳಿವೂ ನಮ್ಮ ಶತ್ರುವಿಗೆ ಸಿಗದಂತಿರಬೇಕು.

೨೬. ಗೆಲ್ಲುವ ಸೇನಾಧಿಪತಿ ಯುದ್ಧಕ್ಕೆ ಮೊದಲೇ ಹಲವಾರು ಬಾರಿ ಲೆಕ್ಕಾಚಾರ ಹಾಕಬೇಕು.

ಕೆಲವೇ ಲೆಕ್ಕಾಚಾರಗಳ ಸೇನಾಧಿಪತಿ ಸೋಲುತ್ತಾನೆ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟೂ ಕರಾರುವಕ್ಕಾಗಿ ಮತ್ತು ಹೆಚ್ಚಾಗಿ ಲೆಕ್ಕಾಚಾರ ಮಾಡಬೇಕು. ಈ ಲೆಕ್ಕಾಚಾರಗಳ ಆಧಾರದ ಮೇಲೆಯೇ ಸೋಲು ಗೆಲವುಗಳನ್ನು ನಾವು ಮುಂಗಾಣಬಹುದು.

Thursday, November 01, 2012

ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ

ತೆಂಕಣಗಾಳಿ ಸೋಂಕಿದೊಡಂ ಒಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆ ನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೪-೩೦||

ತೆಂಕಣದ ಗಾಳಿ ಸೋಕಿದೊಡೆ
ಒಳ್ನುಡಿಗಳನು ಕೇಳಿದೊಡೆ
ಇಂಪಾದ ಸಂಗೀತ ಕಿವಿಯೊಕ್ಕೊಡೆ
ಬಿರಿದ ಮಲ್ಲಿಗೆ ಕಂಡರೆ
ಮಧುಮಹೋತ್ಸವವಾದರೆ
ಆರಂಕುಶವಿಟ್ಟರೂ
ನೆನೆವುದೆನ್ನ ಮನ ವನವಾಸಿ ದೇಶವನು..

ಕೆಂದ ಲಂಪಂ ಗೆಡೆಗೊಂಡೊಡಂ  -- ಇದರ ಅರ್ಥ ಯಾರಾದರೂ ತಿಳಿಸುವಿರಾ..?

Friday, October 26, 2012

ಕಣ್ಣಿಗೆ ಬಂದವಳು ಕನಸಿಗೆ ಬಾರದಿರುವೆಯಾ


ಜಯಂತ್ ಕಾಯ್ಕಿಣಿ ಬರೆದ ಮೊದಲ ಗೀತೆ ಇದು.  ರಾಗ ಸಂಯೋಜನೆ ಸಿ. ಅಶ್ವಥ್, ಗಾಯನ ರಾಜಕುಮಾರ್. "ಅನುರಾಗ" ಸಂಪುಟ. ಮನವನ್ನು ಆರ್ದ್ರಗೊಳಿಸುವ ಗೀತೆ.

ಕಣ್ಣಿಗೆ ಬಂದವಳು ಕನಸಿಗೆ ಬಾರದಿರುವೆಯಾ
ಮಾತಿಗೆ ಬಂದವಳು ಮನಸಿಗೆ ಬಾರದಿರುವೆಯಾ

ಗಾಯವೆಲ್ಲ ಮಾಯುವಂಥ ರಾತ್ರಿಯೊಂದು ಕನಸೇ
ದಳದಳಗಳ ನೋವಿನಲ್ಲಿ ಅರಳಿನಿಂತ ಮನಸೇ
ತಂಗಾಳಿಯ ಕರೆಯೇ, ಹೊಸಲೋಕವ ತೆರೆಯೇ
ಕೊನೆಗೂ ಬಂದವಳು ಬೆಳಗು ತಾರದಿರುವೆಯಾ

ಬಾಯಾರಿದ ಬಿಸಿಲಿನಲ್ಲಿ  ಹೊಸ ಹಗಲ ತೇರು
ಎಳೆಯದೇ ದಾರಿಯಲ್ಲಿ ಬಿಟ್ಟು ಹೋದವರಾರು?
ಹುಚ್ಚು ನೂರು ಸಂತೆ ನೆಚ್ಚಿ ಕಾದು ನಿಂತೆ
ಸಖ ಎಂದವಳು ಮುಖ ತೋರದಿರುವೆಯಾ?

Wednesday, October 24, 2012

ನನ್ನೆದೆಯಲ್ಲೀಗ ಮೊಗ್ಗು ಚಿಗುರಿಲ್ಲ

ನನ್ನೆದೆಯಲ್ಲಿ
ಮೊಗ್ಗೊಂದು ಅರಳಿದಾಗಲೇ
ಹಿಚುಕಿ ಹಾಕಿ
ಬಿಡಬೇಕೆಂದುಕೊಂಡೆ,

ನೀರಿಲ್ಲದೆ ಅದೇ
ಒಣಗಿಹೋಗುವುದೆಂದೇ
ಸುಮ್ಮನಾದೆ

ಮೊಗ್ಗರಳಿ  ಹೂವಾಗಿ
ನಗುತಿರಲು ಹಿತವಾಗಿ
ಮನ ಸೋತಿತು ..

ಅಂದದಲಿ ಚಂದದಲಿ
ಸೌಗಂಧ ಚೆಲ್ಲಿರಲು
ನನದೆಂದೇ ಬಗೆದೆ ನಾನು

ಆದರೆ

ಒಂದೇ ರಾತ್ರಿಯಲಿ
ಇದ್ದಕ್ಕಿದ್ದಂತೆ ಸುರಿದ
ಮಳೆಗಾಳಿಯಾರ್ಭಟದಿ
ಮುರುಟಿ ನೆಲಕಚ್ಚಿತ್ತು.

ನನ್ನೆದೆಯಲ್ಲೀಗ ಮೊಗ್ಗು ಚಿಗುರಿಲ್ಲ
ಹೂವು ಅರಳಿಲ್ಲ.

ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್

ಇದು ಪಂಪನ ಮಾತು.

ತ್ಯಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| ೪-೨೯||

Monday, October 22, 2012

ಸೇವಂತಿಯೆ ಸೇವಂತಿಯೇ

ಸೇವಂತಿಯೆ ಸೇವಂತಿಯೇ
ನನ್ನಾಸೆ ಅಲೆಯಲ್ಲಿ ಘಮ್ಮಂತೀಯೆ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕಿಂತ ಸೌಗಂಧ ನೀನು
ಜನ್ಮಜನ್ಮದ ಪ್ರೀತಿಗೆ
ನನ್ನ ಮೆಚ್ಚಿನ ಹಾಡಿದು

ಮಲ್ಲಿಗೆ ಮಂಟಪವ
ನನ್ನ ಮನಸಲ್ಲಿ ಕಟ್ಟಿಸುವೆ
ಅಂದದ ಸಿರಿದೇವಿಯ
ಅಲ್ಲಿ ಬಚ್ಚಿಟ್ಟು ಪೂಜಿಸುವೆ
ಭುವಿಯ ಹಸಿರಿನಂತೆ ಈ
ಪಾದದಡಿಗೆ ಇರುವೆ
ಮಳೆಯ ಮೋಡದಂತೆ ಆ
ಸುಡುವ ಬಿಸಿಲ ತಡೆವೆ


ಬಾಳ ತುಂಬ ನಾಬರುವೆ
ಹಸ್ತಕ್ಕೆ ರೇಖೆಯ ಹಾಗಿರುವೆ.
ಚಂದಚಂದದ ಸೇವಂತಿಯ
ಅಂದಕ್ಕೆ ಕಾವಲು ನಾನಿರುವೆ

ಕಾಲ್ಗೆಜ್ಜೆ ನಾದದಲಿ
ನನ್ನ ಗುಂಡಿಗೆ ಗೂಡು ಇದೆ
ಕೈಬಳೆ ಸದ್ದಿನಲಿ
ನನ್ನ ಆಸೆಯ ಬುತ್ತಿ ಇದೆ
ಸಿಂಧೂರಬಿಂದಿಗೆಯಲ್ಲಿ
ನಾ ಜೀವವ ತುಂಬಿದೆಯಲ್ಲಿ
ನೀನಿಟ್ಟ ಕಾಡಿಗೆಯಲ್ಲಿ ಓಓ
ನಾನೆಟ್ಟೆ ಪ್ರೀತಿಯ ಬಳ್ಳಿ

ನನ್ನ ಬಣ್ಣದ ಮನಸಿನಲಿ
ನಿನ್ನ ಚಿತ್ರವ ಕೆತ್ತಿಸುವೆ
ಯಾರೂ ಇಲ್ಲದ ಆ ಊರಲಿ
ನಾನೇ ನಿನ್ನವನಾಗಿರುವೆ.

Friday, October 05, 2012

ಸುನೀತ ೧೩೦

ನನ್ನವಳ ಕಂಗಳಲಿ
ಅರುಣಕಾಂತಿಯದಿಲ್ಲ
ಹವಳದ ಕೆಂಪು
ಅವಳ ತುಟಿಗಳಲಿಲ್ಲ

ಹಿಮವು ಬಿಳುಪೆಂದರೆ
ಅವಳೆದೆಯು ಬಿಳಿಯಲ್ಲ.
ಕರಿಮುಗಿಲ ಕೇಶವದು
ಸುವರ್ಣದೆಳೆಯಂತಿಲ್ಲ

ಅವಳ ಕೆನ್ನೆಗಳಲಿ ಕಂಡಿಲ್ಲ
ಕೆಂಗುಲಾಬಿಯ ಕೆಂಪು
ಅವಳುಸಿರ ಕಂಪಿನಲಿಲ್ಲ
ಸಿರಿಗಂಧದ ಪೆಂಪು

ಅವಳುಲಿವ ಸದ್ದಿನಲಿ
ರಾಗದಿಂಚರವಿಲ್ಲ
ಅವಳಿಡುವ ನಡೆಯಲ್ಲಿ
ಅಪ್ಸರೆಯ ಬಳುಕಿಲ್ಲ

ಅಪರೂಪದವಳಿವಳು,  ನನ್ನವಳು 
ನನ್ನಾಣೆ, ಉಪಮೆಗೆ ದಕ್ಕದವಳು.


ವಿಲಿಯಂ ಶೇಕ್ಸ್‍ಪಿಯರ್‌ನ ಸುನೀತ ಸಂಖ್ಯೆ ೧೩೦.  ನನ್ನಳತೆಯೊಳಗೆ ಸಿಕ್ಕಂತೆ.


ಮೂಲ ಕೆಳಗಿದೆ.




SONNET 130

My mistress' eyes are nothing like the sun;
Coral is far more red than her lips' red;
If snow be white, why then her breasts are dun;
If hairs be wires, black wires grow on her head.
I have seen roses damask'd, red and white,
But no such roses see I in her cheeks;
And in some perfumes is there more delight
Than in the breath that from my mistress reeks.
I love to hear her speak, yet well I know
That music hath a far more pleasing sound;
I grant I never saw a goddess go;
My mistress, when she walks, treads on the ground:
And yet, by heaven, I think my love as rare
As any she belied with false compare.



Friday, September 28, 2012

ಪ್ರೇಮಿಸುವುದೇಕೆ ನೀ ಅವಳ

ಪ್ರೇಮಿಸುವುದೇಕೆ ನೀ ಅವಳ
ಎಂದು ಕೇಳುವವರಿದ್ದಾರೆ ಬಹಳ.

ಅವಳ ಸೊಂಟದ ಕುಲುಕು
ತುಂಬು ತೊಡೆಗಳ ಬಿಗಿಪು
ಹವಳ ತುಟಿಗಳ ಥಳುಕು
ದುಂಬಿ ಕಂಗಳ ಬೆಳಕು
ಚರ್ಮದೊಗಲಿನ ನುಣುಪು
ಕೇಶರಾಶಿಯ ಹೊಳಪು
ನಡಿಗೆಯಲ್ಲಿನ ಬಳುಕು
ಮಾತಿನೊಳಗಿನ ಮಿದುಪು
ಪ್ರೇಮಧಾರೆಯ ಹುರುಪು

ನನ್ನೆದೆಯಲಿ ಅನುರಾಗ ಮಿಡಿಸುವುದು
ಅನುದಿನವು ಪ್ರೀತಿಯನು ಸುರಿಸುವುದು

ಎಂದಷ್ಟೇ ಹೇಳುವೆನು ನಾನು.


ಜಸ್ಟಿನ್ ಹಚಿನ್ಸ್ ರ ಕವನದ ಭಾವಾನುವಾದ.   ಮೂಲ ಕೆಳಗಿನಂತಿದೆ



If asked why I love her I would say,
It’s the sway in her hips,
the thickness in her thighs.
It’s the lust in her lips,
the love in her eyes.
It’s the softness of her skin,
the silk in her hair.
It’s the twist in her walk;
it’s the sweetness in her talk.
It’s the way she loves me,
that makes me love her each day.
That is what I would say.






Tuesday, September 25, 2012

ತಲ್ಲಣಿಸದಿರು ಕಂಡ್ಯ ತಾಳು ಮನವೇ

ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೇ ಸಂಶಯವಿಲ್ಲ  ||ಪ||

ಬೆಟ್ಟದ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರು
ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು
ಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ    ||೧||

ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರವಿತ್ತವರು ಯಾರೊ
ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ          ||೨||

ಕಲ್ಲೊಳಗೆ ಹುಟ್ಟಿರುವ ಕ್ರಿಮಿಕೀಟಗಳಿಗೆಲ್ಲ
ಅಲ್ಲಲ್ಲೆ ಆಹಾರವನು ಇತ್ತವರು ಯಾರೊ
ಪುಲ್ಲಲೋಚನ ಕಾಗಿನೆಲೆಯಾದಿ ಕೇಶವನು
ಎಲ್ಲರನು ಸಲಹುವನು ಇದಕೇ ಸಂಶಯಬೇಡ     ||೩||

Friday, September 14, 2012

ಚೆಂಗುಲಾಬಿ ಚೆಲುವು ನನ್ನೊಲವು

ವರುಷ ಋತುವಿನಲರಳಿ ನಿಂತ
ಹೊಸ ಚೆಂಗುಲಾಬಿ ಚೆಲುವು ನನ್ನೊಲವು.
ಹರುಷ ನೀಡುವ ಗೀತದೊಡಲಿನ
ಮಧುರ ಇನಿದನಿಯ ಇಂಚರವು ನನ್ನೊಲವು

ಶ್ವೇತ ಸುಂದರಿಯಿವಳು, ಸಣ್ಣಮೈಯವಳು,
ತನ್ನೊಲವಬಲೆಯಲ್ಲಿ ನನ್ನ ಹಿಡಿದಿಹಳು.
ಬತ್ತಿಹೋದರು ಸಪ್ತಸಾಗರ,
ಬತ್ತದಂತಿಹುದು ನನ್ನೆದೆಯ ಒಲವು

ಬತ್ತಿಹೋಗಲಿ ಸಪ್ತ ಸಾಗರ
ಕರಗಿಹೋಗಲಿ ಮೇರು ಗಿರಿಗಳೆಲ್ಲ
ಜೀವಕಣಗಳು ಹರಿಯುತಿರಲು
ನಿನ್ನೊಲವಿನದೆ ಬಲವು ಬದುಕಿಗೆಲ್ಲ.

ವಿದಾಯಗಳು ಚೆಲುವೆ,
ನೀನೊಬ್ಬಳೇ ಗೆಳತಿ ನನಗೆ
ಕಾಲದ ಪಯಣದಲಿ ಕ್ಷಣಿಕವೀ ವಿರಹ
ಬೇಗ ಬರುವೆ ನಾ ನಿನ್ನೆಡೆಗೆ

ಹತ್ತು ಸಾಸಿರ ಮೈಲು
ಮತ್ತೆ ಸಾವಿರ ತಡೆಯು
ದಾಟಿ ಬರುವೆನು ನಿನ್ನ ನೆನಪಿನೊಳಗೆ
ನಿನ್ನೊಲವ ತಂಪು ನೆರಳಿನಡಿಗೆ.

ರಾಬರ್ಟ್ ಬರ್ನ್ಸ್ ಕವಿಯ "  My love is like red, red rose"  ಕವನದ ಭಾವಾನುವಾದ

Thursday, September 13, 2012

ನೀನ್ ನನ್ ಹಟ್ಟೀಗ್ ಬೆಳಕಂಗಿದ್ದೆ ನಂಜು

ಜಿ.ಪಿ.  ರಾಜರತ್ನಂ ಅವರ  ರತ್ನನ ಪದಗಳ ಒಂದು ಸುಂದರ ಪದ್ಯ.

ನೀನ್ ನನ್ ಹಟ್ಟೀಗ್ ಬೆಳಕಂಗಿದ್ದೆ ನಂಜು
ಮಾಗೀಲ್ ಹುಲ್ಲ್ ಮೇಲ್ ಮಲಗಿದ್ದಂಗೆ ಮಂಜು

ಮಾಗೀ ಕುಗ್ತು, ಬೇಸಿಗೆ ನುಗ್ತು,
ಇದ್ಕಿದ್ದಂಗೆ ಮಾಯವಾಗೊಯ್ತು ಮಂಜು
ನಂಗೂ ನಿಂಗೂ ಎಂಗ್ ಅಗಲೋಯ್ತ್ ನಂಜು

ಶ್ರೀರಂಗಪಟ್ಟಣ್ ದ್ ತಾವ್ ಕಾವೇರಿ ಒಡ್ದಿ
ಎರಡ್ ಹೋಳಾಗಿ ಪಟ್ಣದ ಸುತ್ತಾ ನಡ್ದಿ

ಸಂಗಂದಲ್ಲಿ ಸೇರ್ಕೊಂದು ಮಳ್ಳಿ
ಮುಂದಕ್ಕೋದ್ದು ನಮ್ಗೆ ಙ್ನಾನದ್ ಪಂಜು
ಈಗಗಲಿದ್ರೇನ್ ಮುಂದ್ ನಾವ್ ಸೇರ್ತೀವ್ ನಂಜು.

ಹಗಲೋಡ್ಗ್ತೆ ರಾತ್ರೀ ಬಂತಂತಂಜಿ
ರಾತ್ರಿ ಮುಗ್ದೋದ್ರೆ ಹಗಲೇ ಅಲ್ವ ನಂಜಿ
ರಾತ್ರಿ ಬಿತ್ತು ಹಗಲೇ ಬತ್ತು
ಹೋಗೋದ್ ಮಳ್ಳಿ ಬರೋಕಲ್ವಾ ನಂಜಿ
ಆ ನೆಂಬ್ಕೆ ನನ್ ಜೀವ ಉಳ್ಸೋ ಗಂಜಿ




Wednesday, September 12, 2012

cert7 file generation

cert7 file generation

It is tricky sometime as the latest nss tools will generate cert8.db
If you need cert7 only because of some reason like ldap auth, or solaris lesser than 10 auth then you might be in need of generating cert7.db files only.

Here is a how you can do it with windows.

Download NSS with version  3.2.2 from ftp://ftp.mozilla.org/pub/mozilla.org/security/nss/releases
you can go to command prompt and set path as

set path=%PATH%;C:\path\to\nssfolder\lib
also you might need nspr 4.6 for missing dll and library files.

You can download it from http://ftp.mozilla.org/pub/mozilla.org/nspr/releases/

also from the same command prompt set the path to the lib directory of nspr

set path=%PATH%;c:\path\to\nsprfolder\lib

Now you can execute

certutil -A -n "certificateName" -t "C,C,C" -a -i certFile -d path




Where certificate Name is optional
certfile is the .pem certificate file and
path is the path where you want your cert7.db files to be stored.


Read more to understand what each of these functions do  here.



Tuesday, September 04, 2012

ಈ ಕಾಲದ ಸರ್ಕಾರಿ ಜನ

ಒಂದೂರಿನಲ್ಲೊಬ್ಬ ರಾಜ.
ಬಹುಜನ ಭೋಜ.
ಅವನಿಗೊಬ್ಬ ಮಂತ್ರಿ. 
ಬುದ್ದಿಯವಲನು ತಂತ್ರಿ.
ಅವರಿಗೊಂದು ಸಮಸ್ಯೆ. 
ರಾಣಿಯ ಪ್ರೀತಿಯ ತಮ್ಮ
ಆ ರಾಜ್ಯದ ಅಧಿಕಾರಿ.
ಅವನೋ ಬಲು ಭ್ರಷ್ಟ. 
ಜನಗಳ ದೂರು ಸಾವಿರಾರು.
ರಾಜನ ಕಷ್ಟ ಕೇಳುವರಾರು?

ಏಕೆಂದರೆ ಅವನು ರಾಣಿಯ ಪ್ರೀತಿಯ ತಮ್ಮ. ಅವನಿಗೆ ಏನೂ ಮಾಡಲಾಗದ ಸ್ಥಿತಿ ರಾಜನದು.
ಮಂತ್ರಿ ಹೇಳಿದ,

"ಪ್ರಯೋಜನವಿಲ್ಲ ಮಹಾರಾಜ,
ಬ್ರಷ್ಟತೆ ಅವನ ಹುಟ್ಟುಗುಣ.
ಲಂಚವೇ ಅವನ ಆಭರಣ.
ಎಲ್ಲಿ ಕಳಿಸಿದರು ಅವನನ್ನು,
ಹುಡುಕುತ್ತಾನೆ ಸಂಪಾದನೆಯ ದಾರಿಯನ್ನು."

ಮಹಾರಾಜನದೊಂದು ಪಟ್ಟು. 
ಹುಡುಕಿದನೊಂದು ಉಪಾಯ.
ನಾನವನಿಗೆ ಏನೂ ಮಾಡಲಾರೆ. 
ಆದರೆ ಅವನಿಂದ ನನ್ನ ಪ್ರಜೆಗಳಿಗಿರದಿರಲಿ ತೊಂದರೆ.
ಅವನಿಗಿರಲಿ ಸಮುದ್ರದ ಅಲೆಗಳ ಎಣಿಸುವ ಕೆಲಸ.
ಅದರಲ್ಲಿ ಅವನೇನು ಮಾಡುವ ಮೋಸ.

ಹುಸಿನಗೆ ನಕ್ಕ ಮಂತ್ರಿ. 
ಕಾದು ನೋಡೋಣ ತಿಳಿಯುವುದು ಬೇಗ ಎಂದ.
ಮೊದಲ ವಾರದಲಿ ಬರಲಿಲ್ಲ  ದೂರು.
ರಾಜನ ಮುಖದಲಿ ನಗೆ ಬಹು ಜೋರು.
ಕಳೆದಿಹವು ವಾರವಿನ್ನೆರಡು.
ಅದರೊಳಗೇ  ದೂರು ಹನ್ನೆರಡು.

ಸಾಗರದಲಿ ಸ್ನಾನ ಮಾಡುವ ಜನ ತಪ್ಪಿಸುತ್ತಾರೆ ಲೆಕ್ಕ,
ಅದಕೇ ಕೊಡಬೇಕು ಲಂಚ ಎನ್ನುವುದೊಂದು.
ಸಾಗರದಲಿ ಸಂಚರಿಸುವ ನಾವೆಗಳೆಲ್ಲಾ
ಅಲೆಗಳ ಹರಿವಿಗೆ ತಡೆಯಾಗುವುದಲ್ಲಾ 
ಹೋಗಬಾರದೆ ದೊರೆಗೆ ದೂರು?
ಹಾಗಿದ್ದರೆ ಬರಲಿ ನನ್ನಯ ಪಾಲು.

ತಲೆ ತಿರುಗಿತು ದೊರೆಗೆ,
ಕೆರಳಿಸಿ ನಕ್ಕಿತು ಮಂತ್ರಿಯ ನಗೆ.
ಉಕ್ಕಿದ ಸಿಟ್ಟಿಗೆ  ಅಬ್ಬರಿಸಿ,
 ಆದೇಶವ ನೀಡಿದ ಪರಿಜನಕೆ.
"ಅಧಿಕಾರಿಯ  ತಲೆ ಕತ್ತರಿಸಿ, 
ಮುಂಡವ ಚೂರು ಚೂರಾಗಿಸಿ.
ಸಮುದ್ರದ ಮೀನುಗಳೆಲ್ಲ
ತಿನ್ನಲಿ ಅವನ ದೇಹವನು."

ಆ ಮೀನನು ತಿಂದವರ ವಂಶಜರೆಲ್ಲಾ 
ಈ ಕಾಲದ ಸರ್ಕಾರಿ ಜನರಂತೆ,
ಏನೇ ನಿಯಮವ  ಮಾಡಿದರೂ
ಲಂಚವನಿವರು ಬಿಡರಂತೆ.

Wednesday, August 15, 2012

ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು

ನಿಮ್ಮ ಮನೆಗೊಂದು ಹೊಸ ನಲ್ಲಿ ಹಾಕಿಸಿಕೊಂಡಿರೆಂದುಕೊಳ್ಳಿ.

ನಿಮಗೆ ನಲ್ಲಿಯನ್ನು ಕೊಡುವ ಕಂಪನಿ, ಅದಕ್ಕೆ ಕೆಳಗಿನಂತೆ ಕೆಲವು ಕರಾರನ್ನು ಹಾಕುತ್ತದೆ ಎಂದುಕೊಳ್ಳೋಣ.

೧. ಈ ನಲ್ಲಿಯನ್ನು ನೀವು ಮಾತ್ರ ಬಳಸಬೇಕು, ಮನೆಗೆ ಬಂದ ಬೇರೆಯವರು  ಬಳಸುವಂತಿಲ್ಲ.
೨.  ಈ ನಲ್ಲಿ ಬಚ್ಚಲಮನೆಯಲ್ಲಿ ಹಾಕಿದ್ದರೆ ಅಲ್ಲಿ ಮಾತ್ರ ಉಪಯೋಗಿಸತಕ್ಕದ್ದು. ಪೈಪ್ ಹಾಕಿ ಬೇರೆ ಕಡೆಗೂ ಎಳೆಯುವಂತಿಲ್ಲ
೩. ಈ ನಲ್ಲಿಯನ್ನು ನೀವು ಬಾಯಿ ಮುಕ್ಕಳಿಸಲು ಮಾತ್ರ ಬಳಸಬೇಕು, ಬೇರೆ ಏನೂ ಮಾಡುವಂತಿಲ್ಲ.
೪. ಈ ನಲ್ಲಿಯನ್ನು ಸಾರ್ವಜನಿಕ ಬಳಕೆಗೆ ಬಿಡುವಂತಿಲ್ಲ.
೫. ಈ ನಲ್ಲಿಯನ್ನು ನೀವು ಬಿಚ್ಚಿ ರಿಪೇರಿ ಮಾಡುವಂತಿಲ್ಲ.
೬, ಈ ನಲ್ಲಿಗೆ ನೀವು ಬೇರೆ ಯಾವುದೇ ಸಲಕರಣೆ ಸೇರಿಸುವಂತಿಲ್ಲ.
೭. ಈ ನಲ್ಲಿಯನ್ನು ನೀವು ಬೇರೆಯವರಿಗೆ ಮಾರುವುದಕ್ಕಾಗಲೀ/ಕೊಡುವುದಕ್ಕಾಗಲೀ ಅನುಮತಿ ಇಲ್ಲ.
೮ .  ನಲ್ಲಿಗೆ ಹಾಕುವ ನಟ್ಟು ಬೋಲ್ಟು ಮತ್ತು ಮುಂತಾದವುಗಳನ್ನ ಈ ನಲ್ಲಿಯ ವರ್ತಕನಲ್ಲಿಯೇ ಕೊಳ್ಳಬೇಕು. ಬೇರೆಯಲ್ಲಿ ಕೊಂಡರೆ ಅದು ಈ ನಲ್ಲಿಗೆ ಸರಿ ಹೊಂದುವುದಿಲ. ಸರಿ ಹೊಂದುವ ಹಾಗೆ ಮಾಡಿದರೆ ಅದು ಅಪರಾಧವಾಗುತ್ತದೆ.
ಈಗ ನೀವು ಈ ನಲ್ಲಿಯನ್ನು ಕೇವಲ ನೀವೊಬ್ಬರು ಮಾತ್ರ ಬಳಸಬೇಕು. ಅದರಲ್ಲೂ ಕೇವಲ ಬಾಯಿ ಮುಕ್ಕಳಿಸಲು ಬಳಸಬೇಕು. ಅದು ಬಿಟ್ಟು ನಿಮಗೆ ಬೇರೆ ಸ್ವಾತಂತ್ರವಿಲ್ಲ.

ಬಹುಶಃ ಇಂತಹುದೇ ಒಂದು ಸ್ಥಿತಿ ೧೯೮೦ರ ಸುಮಾರಿಗೆ ರಿಚರ್ಡ್ ಸ್ಟಾಲ್‍ಮನ್ ( ಜನ ಅವರನ್ನು ಆರೆಮ್ಮೆಸ್ ಎಂದೂ ಕರೆಯುತ್ತಾರೆ) ಅನುಭವಿಸಿದ್ದು. ಅವರ ಕಚೇರಿಯ ಪ್ರಿಂಟರ್ ಉಪಯೋಗಕ್ಕೆಂದು ಅವರು ಬರೆದ ಕೋಡ್ ಒಂದು, ಇನ್ನೊಂದು ಪ್ರಿಂಟರ್ ನಲ್ಲಿ ಕೆಲಸ ಮಾಡದಂತಾಯಿತು. ಆಗ ಈ ತಂತ್ರಾಂಶಗಳ ಮೇಲಿರುವ ನಿರ್ಬಂಧಗಳು ಅದರಲ್ಲೂ ತಂತ್ರಾಂಶದ ಕೋಡ್ ಅನ್ನು ಓದಲು ಇರುವ ನಿರ್ಬಂಧಗಳನ್ನು ತೆಗೆಯಬೇಕೆನ್ನುವ ಯೋಚನೆ ಅವರಿಗೆ ಬಂದಿತು.

ಇದಾದ ನಂತರ ೧೯೮೩ರಲ್ಲಿ ಗ್ನು ಎನ್ನುವ ಪ್ರಾಜೆಕ್ಟ್ ಅನ್ನು ಪ್ರಾರಂಭಿಸಿದ್ದು ಸ್ಟಾಲ್‍ಮನ್. (gnu). ಆಗಲೇ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಯೋಜನೆಯ ನಾಂದಿಯಾಯಿತು.

ಇಂಗ್ಲಿಷ್ ಭಾಷೆಯ (free) ಎನ್ನುವ ಪದಕ್ಕೆ ಉಚಿತ ಮತ್ತು ಸ್ವತಂತ್ರ ಎನ್ನುವ ಎರಡು ಅರ್ಥವಿದೆ. ಇಂಗ್ಲಿಷ್ ಭಾಷೆಯ ಫ಼್ರೀ ಸಾಫ಼್ಟ್‍ವೇರ್ (free software) ಅನ್ನು ಕನ್ನಡದಲ್ಲಿ ಉಚಿತ ತಂತ್ರಾಂಶ ಎನ್ನುವುದಕ್ಕಿಂತ ಅನಿರ್ಬಂಧಿತ ಅಥವಾ ಸ್ವತಂತ್ರ ತಂತ್ರಾಂಶ ಎನ್ನಬಹುದು.

ಈ ಹಿನ್ನೆಲೆಯಲ್ಲಿ ಆರೆಮ್ಮೆಸ್ ”free ಎನ್ನುವ ಪದದ ಅರ್ಥ, free-speech (ವಾಕ್-ಸ್ವಾತಂತ್ರ್ಯ) ನಲ್ಲಿ ರುವಂತೆ, free beer (ಉಚಿತ ಬೀರ್) ನಂತಲ್ಲ ಎನ್ನುತ್ತಾರೆ. ಇದರ ಒಟ್ಟಾರೆ ಅರ್ಥ, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು, ಉಚಿತವಾಗಿ ದೊರೆಯಬೇಕೆಂದೇನಿಲ್ಲ. ಆದರೆ ಅವುಗಳ ಕೋಡ್ ಮುಕ್ತವಾಗಿ ಓದಲು, ಮತ್ತು ಅರ್ಥಮಾಡಿಕೊಳ್ಳಲು ಸಿಗಬೇಕೆಂದು.
ತಂತ್ರಾಂಶವೊಂದು ಮುಕ್ತ ಮತ್ತು ಸ್ವತಂತ್ರವಾಗಿರಲು ಬೇಕಾದ ಉಳಿದ ಸ್ವಾಂತಂತ್ರ್ಯಗಳೆಂದರೆ,

* ಸ್ವತಂತ್ರ ೦ : ತಂತ್ರಾಂಶವನ್ನು ಯಾವುದೇ ಉದ್ದೇಶಕ್ಕಾಗಿ ಬಳಸುವ ಸ್ವತಂತ್ರ.
* ಸ್ವತಂತ್ರ ೧ : ತಂತ್ರಾಂಶ ಹೇಗೆ ಕೆಲಸ ಮಾಡುತ್ತದೆಂದು ಅಭ್ಯಸಿಸುವ ಮತ್ತು ಅದನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುವ ಸ್ವತಂತ್ರ.
* ಸ್ವತಂತ್ರ ೨ : ಈ ತಂತ್ರಾಂಶದ ಪ್ರತಿಗಳನ್ನು ನೆರೆಹೊರೆಯವರೊಂದಿಗೆ ಹಂಚಿಕೊಳ್ಳುವ ಸ್ವತಂತ್ರ.
* ಸ್ವತಂತ್ರ ೩ : ತಂತ್ರಾಂಶಗಳನ್ನು ಉತ್ತಮ ಪಡಿಸುವ ಮತ್ತು ನಿಮ್ಮಿಂದ ಉತ್ತಮಗೊಂಡ ತಂತ್ರಾಂಶವನ್ನು ಪ್ರಕಟಿಸುವ (ಮತ್ತು ಸಮಾಜಕ್ಕೆ ಕೊಡುಗೆಯಾಗಿ ನೀಡುವ) ಸ್ವಾತಂತ್ರ್ಯ.

ಈ ಮೂಲ ಉದ್ದೇಶಗಳನ್ನೊಳಗೊಂಡ ತನ್ನದೇ ಒಂದು ಪರವಾನಗಿಯನ್ನು ಆರೆಮ್ಮೆಸ್ ರಚಿಸಿದರು. ಮತ್ತು ಇದನ್ನು ಗ್ನು ಜನರಲ್ ಪಬ್ಲಿಕ್ ಲೈಸೆನ್ಸ್(ಜಿಪಿಎಲ್) ಎಂದು ಹೆಸರಿಸಿದರು. ಇದರ ಉತ್ತಮಗೊಂಡ ಭಾಗಗಳಾಗಿ ಜಿಪಿಎಲ್-೨ ಮತ್ತು ಜಿಪಿಎಲ್-೩ ಅನ್ನೂ ಅವರೇ ಅಭಿವೃದ್ದಿ ಪಡಿಸಿದರು.

ಈ ಲೈಸೆನ್ಸ್‍ಗಳು, ಮೂಲ ತಂತ್ರಾಂಶ ಮುಕ್ತವಾಗಿರುವುದಷ್ಟೇ ಅಲ್ಲದೆ, ಅದರ ಉತ್ತಮಪಡಿಸುವಿಕೆಗಳೂ, ಅಳವಡಿಕೆಗಳೂ ಕೂಡಾ ಮುಕ್ತವಾಗಿರುವಂತೆ ನೋಡಿಕೊಳ್ಳುವ, ವಿಶೇಷ ಕಾಪಿಲೆಫ಼್ಟ್ ವ್ಯವಸ್ಥೆಯನ್ನು ಹೊಂದಿವೆ.
ಇಂದು ೬೬ಕ್ಕೂ ಹೆಚ್ಚಿನ ಬಗೆಯ ಮುಕ್ತ ಲೈಸೆನ್ಸ್ ಗಳು ಲಭ್ಯವಿದೆ. ಗ್ನು ಜನರಲ್ ಪಬ್ಲಿಕ್ ಲೈಸೆನ್ಸ್ ಅಲ್ಲದೆ, ಗ್ನು ಲೆಸ್ಸರ್ ಪಬ್ಲಿಕ್ ಲೈಸೆನ್ಸ್. ಅಪಾಚೆ ಲೈಸೆನ್ಸ್. ಬಿ ಎಸ್ ಡಿ ಲೈಸೆನ್ಸ್, ಕಾಮನ್ ಪಬ್ಲಿಕ್ ಲೈಸೆನ್ಸ್, ಮೊಜಿಲ್ಲಾ ಪಬ್ಲಿಕ್ ಲೈಸೆನ್ಸ್,ಯುರೋಪಿಯನ್ ಪಬ್ಲಿಕ್ ಲೈಸೆನ್ಸ್. ಇವುಗಳಲ್ಲಿ ಪ್ರಮುಖವಾದುವು. ಪ್ರೊಪ್ರೈಟರಿ ಲೈಸೆನ್ಸ್ ಕಾರಣಗಳಿಂದಾಗಿ ದೈತ್ಯ ಶಕ್ತಿಯಾಗಿ ಬೆಳೆದಿರುವ ಮೈಕ್ರೋಸಾಫ್ಟ್ ಕಂಪನಿ ಕೂಡಾ, ಎಮ್.ಎಸ್ – ಪಿ ಎಲ್ ಎನ್ನುವ ಮುಕ್ತ ತಂತ್ರಾಂಶ ಲೈಸೆನ್ಸ್ ಅನ್ನು ಹೊಂದಿದೆ.
ಈ ಮುಕ್ತ ತಂತ್ರಾಂಶಗಳ ಒಂದು ಪ್ರಮುಖ ಲಕ್ಷಣ ಕಾಪಿ ಲೆಫ್ಟ್. ಕಾಪಿರೈಟ್ ಪದದೊಂದಿಗೆ ಆಟವಾಡಿ ಸೃಷ್ಟಿಯಾದ ಪದ. ಇದರ ಮೊದಲ ಬಳಕೆ ೧೯೭೬ರ ಟೈನಿ ಬೇಸಿಕ್ ಎನ್ನುವ ತಂತ್ರಾಂಶದಲ್ಲಿ ಬಳಕೆಯಾಗಿದ್ದನ್ನು ಕಾಣಬಹುದು. ಕಾಪಿರೈಟ್ ನ ಜೊತೆ ಬಳಕೆಯಾಗುವ ಸಾಮಾನ್ಯ ವಾಕ್ಯವಾದ all rights are reserved ಅನ್ನು all wrongs are reserved ಎಂದು ಅಲ್ಲಿ ಬಳಸಲಾಗಿದೆ. ಆದರೆ ಕಾಪಿಲೆಫ್ಟ್, ಕಾಪಿರೈಟ್ ಕಾಯಿದೆಯ ಅಂಶಗಳನ್ನೇ ಬಳಸಿಕೊಂಡು ತಂತ್ರಾಂಶವೊಂದು ತನ್ನೆಲ್ಲಾ ಮುಕ್ತತೆಯನ್ನು ಉಳಿಸಿಕೊಳ್ಳುವಂತಹ ವ್ಯವಸ್ಥೆಯನ್ನು ಹೊಂದಿದೆ. ಅಂದರೆ, ತಂತ್ರಾಂಶವೊಂದು ಬೇರೆಯವರಿಂದ ಉತ್ತಮಗೊಂಡಾಗ, ಅವರು ಅದನ್ನು ಮುಕ್ತತಂತ್ರಾಂಶವಾಗಿಯೇ ಉಳಿಸುವಂತಹ ರಕ್ಷಣೆ ಕಾಪಿರೈಟ್ ಕಾಯಿದೆಯಿಂದ ಇಲ್ಲಿ ದೊರೆಯುತ್ತದೆ. ಆದುದರಿಂದ ಮುಕ್ತ ಲೈಸೆನ್ಸ್ ಗಳನ್ನು, ಬಲಶಾಲಿ ಲೈಸೆನ್ಸ್ ಗಳು ಮತ್ತು ದುರ್ಬಲ ಲೈಸೆನ್ಸ್ ಗಳು ಎಂದು ಎರಡು ಬಗೆಯಾಗಿ ವಿಂಗಡಿಸಲಾಗಿದೆ. ಜಿಪಿಎಲ್-೩ ಬಲಶಾಲಿ ಲೈಸೆನ್ಸ್ ಆದರೆ, ಜಿಪಿಎಲ್-೨ ಮತ್ತು ಜಿಪಿಎಲ್ ದುರ್ಬಲ ಲೈಸೆನ್ಸ್ ಗಳು. ಜಿಪಿಎಲ್-೩ ತಂತ್ರಾಂಶ ತನ್ನೆಲ್ಲಾ ಬೆಳವಣಿಗೆಯೊಂದಿಗೆ ಕೂಡಾ ಮುಕ್ತವಾಗಿ ಉಳಿಯುವಂತೆ ರೂಪಿಸಲಾಗಿರುವ ವಿಶೇಷ ಪರವಾನಗಿ. ಇದನ್ನು ಜಿಪಿಎಲ್ ಮತ್ತು ಜಿಪಿಎಲ್-೨ ರಲ್ಲಿರುವ ನ್ಯೂನತೆಗಳಿಂದ ಹೊರಬರಲಿಕ್ಕಾಗಿಯೇ ರೂಪಿಸಲಾಯಿತು.

ಜಿಪಿಎಲ್-೩ ಲೈಸೆನ್ಸ್ ನ ಕೆಲವು ಮುಖ್ಯ ಆಂಶಗಳು

೧. ಜನರಲ್ ಪಬ್ಲಿಕ್ ಲೈಸೆನ್ಸ್ ನ ಅಡಿಪಾಯದ ಮೇಲೆ ನಿಂತಿದೆ
೨. ಮುಕ್ತ ತಂತ್ರಾಂಶಗಳನ್ನು ಪ್ರತಿಬಂಧಿಸುವ ಕಾನೂನುಗಳಿಂದ ರಕ್ಷಣೆ.
೩. ತಂತ್ರಾಂಶವನ್ನು ನಿಮ್ಮನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುವ ಹಕ್ಕಿನ ರಕ್ಷಣೆ.
೪. ಪೇಟೆಂಟ್ ಗಳ ಮೂಲಕ ಎದುರಾಗುವ ಸಮಸ್ಯೆಗಳ ವಿರುದ್ದ ಸೂಕ್ತ ರಕ್ಷಣೆ.
೫. ವಿವಿಧ ಲೈಸೆನ್ಸ್ ಗಳು ಜಿಪಿಎಲ್-೩ ನ ಜೊತೆಗೆ ಹೊಂದಿರುವ ಸ್ವಾಮ್ಯತೆಯ ವಿವರಣೆ.
೬. ಹಲವಾರು ವಿಧಗಳ ಮುಕ್ತ ಸ್ವತಂತ್ರ ಲೈಸೆನ್ಸ್ ಗಳೊಂದಿಗೆ ಹೊಂದಾಣಿಕೆ.
೭. ತಂತ್ರಾಂಶದ ಕೋಡ್ ಹಂಚಲು ಹೆಚ್ಚಿನ ವಿಧಾನಗಳು
೮. ಕಡಿಮೆ ತಂತ್ರಾಂಶವನ್ನು ಹಂಚುವ ಅವಕಾಶ.
೯. ಜಾಗತಿಕವಾಗಿ ಅನ್ವಯವಾಗುವಂತಹ ಪರವಾನಗಿ.
೧೦. ತಪ್ಪುಗಳಾದಾಗ ತಿದ್ದಿಕೊಳ್ಳುವ ಅವಕಾಶ.

ಮುಕ್ತ ತಂತ್ರಾಂಶಗಳ ಬಗ್ಗೆ ಇರುವ ಇನ್ನೊಂದು ಬಹುದೊಡ್ಡ ತಪ್ಪು ಅಭಿಪ್ರಾಯವೆಂದರೆ ಅವು ಉಚಿತವಾಗಿ ಇರಬೇಕೆಂಬುದು. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಉಚಿತವಾಗಿ ಇರಬೇಕೆನ್ನುವ ನಿಯಮವಿಲ್ಲ. ಇವುಗಳಲ್ಲಿ ತಂತ್ರಾಂಶದ ಕೋಡ್ ಅನ್ನು ಮುಕ್ತವಾಗಿ ಹಂಚಬೇಕೆಂಬ ನಿಯಮವಿದೆ ಅಷ್ಟೇ. ಉಚಿತವಾಗಿ ತಂತ್ರಾಂಶ ನೀಡುವುದು ಅದನ್ನು ಅಭಿವೃದ್ದಿ ಪಡಿಸಿದವರಿಗೆ ಬಿಟ್ಟ ವಿಚಾರ. ೨೦೧೨ರ ಈ ಸ್ವಾತಂತ್ರ್ಯ ತಿಂಗಳಲ್ಲಿ, ಈ ಲೇಖನದ ಓದಿ, ಸ್ವತಂತ್ರ ತಂತ್ರಾಂಶಗಳನ್ನು ಪ್ರೋತ್ಸಾಹಿಸಿ.

Tuesday, August 14, 2012

Disable Oracle's password expiry

ALTER PROFILE DEFAULT LIMIT
  FAILED_LOGIN_ATTEMPTS UNLIMITED
  PASSWORD_LIFE_TIME UNLIMITED;

To turn off the auditing.
 

NOAUDIT ALL;
DELETE FROM SYS.AUD$;

Wednesday, August 08, 2012

Increasing the swap size of the machine

Increasing the swap size of the machine

dd if=/dev/zero of=/.swapfile bs=1M count=1024
mkswap -v1 /.swapfile
swapon /.swapfile

Monday, August 06, 2012

Kannadavendare love

ಅರಿವಿನ ಅಲೆಗಳಲ್ಲಿ ಪ್ರಕಟವಾದ ನನ್ನ ಲೇಖನದ ಜೊತೆಗಿರುವ ಕಿರುಪರಿಚಯವನ್ನು ಗೂಗಲ್ ಟ್ರಾನ್ಸ್‍ಲೇಟ್ ಇಂಗ್ಲಿಷಿಗೆ ಅನುವಾದಿಸಿದ್ದು ಹೀಗೆ

Maisurinavanu. Read Industrial and Production Engineering, chat with the curious and learned a computer can now give bengaluralli rice. Often Poetry, writing gicuttene. It does not mean kaviyalla. Tociddella ಮಾಡುತ್ತಿರುತ್ತೇನೆ mind. They havyasagalalla. Kannadavendare love. To stay on the computer in Kannada, English is all the work of various government projects, including information nirvahaneyu, I believe that the thing maduvantagabekemba.

ಮೂಲ ಕೆಳಕಂಡಂತಿದೆ
 

ಮೈಸೂರಿನವನು. ಓದಿದ್ದು ಇಂಡಸ್ಟ್ರಿಯಲ್ ಮತ್ತು ಪ್ರೊಡಕ್ಷನ್ ಇಂಜಿನಿಯರಿಂಗ್, ಚಾಟ್ ಮಾಡುವ ಕುತೂಹಲದಿಂದ ಕಲಿತ ಕಂಪ್ಯೂಟರ್ ಈಗ ಬೆಂಗಳೂರಲ್ಲಿ ಅನ್ನ ಕೊಡುತ್ತಿದೆ. ಆಗಾಗ ಕವನ, ಬರಹ ಗೀಚುತ್ತೇನೆ. ಹಾಗಂತ ಕವಿಯಲ್ಲ. ಮನಸ್ಸಿಗೆ ತೋಚಿದ್ದೆಲ್ಲಾ ಮಾಡುತ್ತಿರುತ್ತೇನೆ. ಅವೆಲ್ಲಾ ಹವ್ಯಾಸಗಳಲ್ಲ. ಕನ್ನಡವೆಂದರೆ ಪ್ರೀತಿ. ಕನ್ನಡ ಉಳಿಯಲು ಕಂಪ್ಯೂಟರಿನಲ್ಲಿ, ಇಂಗ್ಲಿಷಿನಲ್ಲಿ ಮಾಡುವ ಎಲ್ಲಾ ಕೆಲಸಗಳನ್ನೂ, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ನಿರ್ವಹಣೆಯೂ ಸೇರಿದಂತೆ, ಕನ್ನಡದಲ್ಲಿ ಮಾಡುವಂತಾಗಬೇಕೆಂಬ ನಂಬಿಕೆ ನನ್ನದು.

ಒಮ್ಮೆ ಚೆನ್ನಾಗಿ ನಕ್ಕು, ಇದನ್ನೆಲ್ಲಾ ಹೇಗೆ ಸರಿಪಡಿಸಬಹುದೆಂದು ಯೋಚಿಸಿ.!! :)

Monday, July 30, 2012

ನಲವತ್ತು - ಚಾಲೀಸ್

ನಲವತ್ತು ವಯಸ್ಸಿಗೆ ಕಣ್ಣಿಗೆ ಕನ್ನಡಕ ಬರುತ್ತಂತೆ. ಅದಕ್ಕೇ ಕನ್ನಡಕಕ್ಕೇ ಚಾಲೀಸು ಅಂತ್ಲೂ ಹೇಳ್ತಾರೆ. ನನಗೆ ಈ ತಿಂಗಳಲ್ಲಿ ನಲವತ್ತು ಅಫ಼ಿಷಿಯಲ್ ಆಗಿ ತುಂಬುತ್ತೆ.  ಅನ್-ಅಫ಼ಿಷಿಯಲ್ ಆಗಿ ತುಂಬಕ್ಕೆ ಇನ್ನಾರು ತಿಂಗಳಿದೆ.

ಕಾಗದ-ಪತ್ರ ದಾಖಲಾತಿಗಳಿಲ್ಲದೇ ಹೋದರೆ ಅದಕ್ಕೇನು ಬೆಲೆ ಇಲ್ಲ ತಾನೇ..? ಅದಕ್ಕೆ ನಾನೂ ಇವತ್ತಿಗೇ ನಲವತ್ತು ತುಂಬಿತು ಅಂದುಕೊಂಡುಬಿಡ್ತೀನಿ ಅಷ್ಟೆ.

ನನಗದರಿಂದೇನು ಬೇಜಾರಿಲ್ಲ.  ಲೈಫ಼್ ಬಿಗಿನ್ಸ್ ಅಟ್ ಫ಼ಾರ್ಟಿ ಅಂಥ ಇಂಗ್ಲಿಷ್ ಮಾತಿದೆಯಲ್ಲ.  ಹಾಗೇ ಇದು ನನಗೆ ಹೊಸ ಜೀವನ ಪ್ರಾರಂಭಿಸುವ ಸಂಭ್ರಮ.

ವಿಷ್ಣು-ರಜನಿ ಹೇಳಿದ ಹಾಗೇ ಐದು ಎಂಟುಗಳು ಕಳೆದಾಯಿತು, ಆಟ, ಪಾಠ, ಮದುವೆ, ಮಕ್ಕಳು, ಧನ ಅಂತೆ ನಲವತ್ತರವರೆಗೆ.   ಮುಂದೆ, ಲೋಕ ಸುತ್ತಿ, ಶಾಂತಿ ಗಳಿಸಿ ಎನ್ನುತ್ತಾರೆ.

ಇಷ್ಟು ದಿನಗಳಲ್ಲಿ ನಾನು ಮಾಡಿದ್ದು ಏನೆಂದು ಹಿಂತಿರುಗಿ ನೋಡಿದರೆ, ಕಣ್ಣಿಗೆ ಕಾಣುವಂತಹುದು ಏನೂ ಇಲ್ಲ. ಮಣ್ಣಿಗೆ ಸೇರುವಂತಹುದು ಸಾವಿರ. ಮುಂದಾದರೂ ಏನಾದರೂ ಮಾಡಬೇಕೆನ್ನುವ ತುಡಿತ ಕಜ್ಜಿಯ ಕಡಿತದಂತೆ ಹಾಗೇ ಇದೆ. ಈ ನಾಲ್ಕು ಸಾಲು ಬರೆಯಲು ಹತ್ತು ದಿನಗಳೇ ಆಗಿ ಹೋಗಿರುವಾಗ, ಇನ್ನು...  ಇರಲಿ ನಾನು ಸದಾ ಆಶಾವಾದಿ..

Monday, July 09, 2012

ಘಲ್ಲುಗಲ್ಲೆನುತಾ | ಗೆಜ್ಜೆ | ಘಲ್ಲು ಗಾರೆನುತಾ

ಘಲ್ಲುಗಲ್ಲೆನುತಾ | ಗೆಜ್ಜೆ | ಘಲ್ಲು ಗಾರೆನುತಾ |ಗೆಜ್ಜೆ | ಘಲ್ಲು ಗಾರೆನುತಾ
ಬಲ್ಲಿದ ರಂಗನ್ | ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯೋ..!
ನಮ್ಮ್ | ಬಲ್ಲಿದ ರಂಗನ್ |ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯೋ..!  ||೨||


ಅರೆದರು ಅರಿಸಿನವಾ | ಅದಕೆ ಬೆರೆಸರು ಸುಣ್ಣಾವಾ
ಅದಕೆ ಬೆರೆಸರು ಸುಣ್ಣಾವಾ
ಅಂದವುಳ್ಳ ರಂಗನ್ ಮ್ಯಾಲೆ | ಚೆಲ್ಲಿದರೋಕುಳಿಯೋ      
ನಮ್ಮ್ ಅಂದವುಳ್ಳ ರಂಗನ್ ಮ್ಯಾಲೆ | ಚೆಲ್ಲಿದರೋಕುಳಿಯೋ  ||೨||

ಹಾಲಿನೋಕುಳಿಯೋ |ಒಳ್ಳೆ ನೀಲದೋಕುಳಿಯೋ
ಒಳ್ಳೆ ನೀಲದೋಕುಳಿಯೋ
ಲೋಲನಾದ ರಂಗನ್ ಮ್ಯಾಲೆ | ಹಾಲಿನೋಕುಳಿಯೋ       
ನಮ್ಮ್ | ಲೋಲನಾದ ರಂಗನ್ ಮ್ಯಾಲೆ | ಹಾಲಿನೋಕುಳಿಯೋ        ||೨||

ತುಪ್ಪದೋಕುಳಿಯೋ | ಒಳ್ಳೆ ಒಪ್ಪದೋಕುಳಿಯೋ
ಒಳ್ಳೆ ಒಪ್ಪದೋಕುಳಿಯೋ
ಒಪ್ಪವುಳ್ಳ ರಂಗನ್ ಮ್ಯಾಲೆ ತುಪ್ಪದೋಕುಳಿಯೋ
ನಮ್ಮ್ |ಒಪ್ಪವುಳ್ಳ ರಂಗನ್ ಮ್ಯಾಲೆ ತುಪ್ಪದೋಕುಳಿಯೋ    ||೨||

ಗಂಧದೋಕುಳಿಯೋ |ಒಳ್ಳೆ ಚಂದದೋಕುಳಿಯೋ
ಒಳ್ಳೆ ಚಂದದೋಕುಳಿಯೋ
ಅಂದವುಳ್ಳ ರಂಗನ್ ಮ್ಯಾಲೆ ರಂಗಿನೋಕುಳಿಯೋ
ನಮ್ಮ್ |ಅಂದವುಳ್ಳ ರಂಗನ್ ಮ್ಯಾಲೆ ರಂಗಿನೋಕುಳಿಯೋ    ||೨||

ಘಲ್ಲುಗಲ್ಲೆನುತಾ | ಗೆಜ್ಜೆ | ಘಲ್ಲು ಗಾರೆನುತಾ |ಗೆಜ್ಜೆ | ಘಲ್ಲು ಗಾರೆನುತಾ
ಬಲ್ಲಿದ ರಂಗನ್ | ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯೋ..!
ನಮ್ಮ್ | ಬಲ್ಲಿದ ರಂಗನ್ |ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯೋ..!  ||೨||

Friday, June 29, 2012

Batch migration using imap sync


The following script reads the variables id and pass, which are in passtest.txt file in single line with a whitespace to separate,

and
sync the mailboxes from google app mail server to a zimbra mail server

while IFS=" " read id pass;
do
imapsync --syncinternaldates --useheader 'Message-Id' \
--host1 imap.googlemail.com --user1 $id@zimbraserver.in \
--password1 $pass --ssl1 \
--host2 mail.zimbraserver.in \
--port2 993 --user2 $id@zimbraserver.in \
--password2 $pass --ssl2 \
--authmech1 LOGIN --authmech2 LOGIN
done < passtest.txt


Friday, June 22, 2012

ಮಲ್ಲಿಗೆಯ ಬಳ್ಳಿಯೂ, ಮುಳ್ಳು ಬೇಲಿಯೂ.


ಮಲ್ಲಿಗೆಯ ಬಳ್ಳಿಯೊಂದು ಮುಳ್ಳುಬೇಲಿಯ ಜೋಡಿ, ಬೇಕಾದಾಗ ಸೀಟು ಸಿಗದ ನಗರ ಸಾರಿಗೆಯ ಬಸ್ಸು ಹತ್ತಬೇಕಾಯಿತು.  ಎಳ್ಳು ಸಿಡಿಸಿದರೆ ನೆಲ ಕಾಣದಷ್ಟು ಜನ ತುಂಬಿದ ಬಸ್ಸಿನಲ್ಲಿ, ಹೇಗೋ ಈ ಜೋಡಿ ನಿಲ್ಲುವಷ್ಟು ಜಾಗ ಹೊಂದಿಸಿಕೊಂಡರು.

ಹೆಂಗಸರ ಸೀಟಿನ ಮಧ್ಯೆ ಮಲ್ಲಿಗೆಯ ಬಳ್ಳಿಯನ್ನು ಸೇರಿಸಿದ ಮುಳ್ಳುಬೇಲಿ, ತನ್ನೆರಡೂ ಕೈಗಳನ್ನೂ ಚಾಚಿ ಸೀಟುಗಳ ಹಿಡಿಕೆಯಿಡಿದು, ಮಲ್ಲಿಗೆಯ ಬಳ್ಳಿಯ ರಕ್ಷಣೆಗೆಂಬಂತೆ ನಿಂತ.

ಮಲ್ಲಿಗೆ ಬಳ್ಳಿ ಮಾತಾಡಿತು. "ನಾನೇನು ಓಡಿ ಹೋಗುತ್ತೀನಾ..?"

ಮುಳ್ಳುಬೇಲಿ ರಕ್ಷಣೆಯ ಕೈ ತೆಗೆದುಬಿಟ್ಟಿತು.

ಪಯಣ ಮುಗಿದು ಬಸ್ಸು ಇಳಿಯುವವರೆಗೂ ಮಲ್ಲಿಗೆಯ ಬಳ್ಳಿ ಮುಳ್ಳುಬೇಲಿ ಜೊತೆಯಾಗೇ ಇದ್ದುವು.

Tuesday, May 29, 2012

VMWare guest OS :- memory access violation error

Vmware guest gives an error while booting when the RAM allocated for guest is more and shared between guest and host.

Also while increasing the RAM VMware workstation gives a warning that the ram will be shared and performance may vary.

If you ignore this and still boot the guest machine,  once booted it will throw an error as access right violation and powersdown the virtual machine.

To avoid this, I added the following two lines into .VMX file.

MemTrimRate=0
sched.mem.pshare.enable = "FALSE"


Now the guest is booted and working fine.

Backdating VMWare guest system

with vmware workstation, the guest Machine always takes the time from host.

In cases where you want to backdate the guest, and host should have the correct time and date settings,

one can try the following settings in .VMX file.

tools.syncTime = 0
time.synchronize.continue = 0
time.synchronize.restore = 0
time.synchronize.resume.disk = 0
time.synchronize.shrink = 0
time.synchronize.tools.startup = 0

and if the guest is rebooted then also the backdated settings will remain.

Monday, April 23, 2012

Setting up a Relay host with debian6 and exim

The need of the day was to set up a kind of store and forward server, which receives mails from different applications and devices on the network, and sends out using a smart host. 
smart host is microsoft exchange, which requires authentication, and will send out if and only if the sender and authenticated users are same.

This task was achieved by setting up a exim4 SMTP server and rewriting the address.  as follows:

First install package exim4
apt-get install exim4

You have to configure it
dpkg-reconfigure exim4-config

Our need is to receive mail from many clients and sent it using smart host.
screen 1 : Mail sent by smarthost/received via SMTP or fetchmail

I did not understand this but still writing domain part has worked fr me.
screen 2 : Give a mail name (domain part)

This is to notify the server on which interfaces it should be listening for incoming mails.
screen 3 : Write down the interfaces on which the system has to listen separated by semicolons (;)

This is mail receiving destination domains,  and we donot need this
screen 4 : Leave blank

These are the networks on which the server accepts the incoming mails.  Provide all your networks,  also care has to be taken that outsiders should not be able to use these networks.
screen 5 : Add the networks to listen for separated by semicolons

Enter your smart host, which is used for sending out the mail
screen 6 : Put the outgoing mail server address with port ( ip.address.of.server:port )
This option is enabled as the smarthost sends out if and only if authenticated user and sender address are same.
screen 7 : Yes

So put your domain, from where the mail has to go out.
screen 8 : Put your domain name

If you are on a low bandwidth you can minimise DNS querries, otherwise
screen 9 : No

Remaining screens just choose default.  This will include configuration in single file as "yes"

This will complete the setup of the mail server.

Now we have to give the password to authenticate againist the smart host.  This taks is acheived by editing the file /etc/exim4/passwd.client to look as follows
target.mail.server.example:login:password

now edit /etc/exim4/exim4.conf.template
go to line

begin rewrite

and below you can add your configuration

example

*  "someone@someaddress.com Ffs

will change
envelop From, from, sender fields

The flages are important as they do specific functions  as below.

E       rewrite all envelope fields
F       rewrite the envelope From field
T       rewrite the envelope To field
b       rewrite the Bcc: header
c       rewrite the Cc: header
f       rewrite the From: header
h       rewrite all headers
r       rewrite the Reply-To: header
s       rewrite the Sender: header
t       rewrite the To: header

You should be particularly careful about rewriting Sender: headers, and restrict this to special known cases in your own domains.

Also it is possible to write scripts, which do more complex jobs, and use the list from a file.
you can find them from exim documentation at http://www.exim.org/exim-html-3.30/doc/html/spec_34.html

Now restart exim
/etc/init.d/exim4 restart

It is all set to go,

You can verify how redirecting is working by  issuing

/etc/exim4# exim -brw dingo
 sender: someone@someaddress.com
 from: someone@someaddress.com
 to: dingo@someaddress.com
 cc: dingo@someaddress.com
 bcc: dingo@someaddress.com
 reply-to: dingo@someaddress.com
 env-from: someone@someaddress.com
 env-to: dingo@someaddress.com
 
 Now you see which fields are actually rewritten.

Thats all,  Bingo,  your store and forward server is working now .

Wednesday, March 21, 2012

ಒಂದು ಹಳೆಯ ಕತೆಯನ್ನು ಹಿಡಿದು...

ಬಹಳ ಹಿಂದೆ ಹೊಯ್ಸಳರ ಕಾಲದ ಕತೆಯಂತೆ ಇದು. ಎಲ್ಲಿ ಓದಿದ್ದೋ, ಕೇಳಿದ್ದೋ ಸರಿಯಾಗಿ ನೆನಪಿಲ್ಲ. ಆದರೆ ಕತೆ ಮಾತ್ರ ಮರೆಯುವಂತಹುದಲ್ಲ. ನೀವು ಅದನ್ನು ಕೇಳುವಿರಾ..?

ಒಮ್ಮೆ ಸಾಮ್ರಾಜ್ಯದಲ್ಲಿ ಬರ ಬಂದು, ಅಗತ್ಯವಸ್ತುಗಳ ಅಭಾವ ಜನಸಾಮಾನ್ಯರಿಗೆ ಉಂಟಾಯಿತಂತೆ, ರಾಜನಿಗೆ ಆಶ್ಚರ್ಯ. ಹೋದವರ್ಷದ ಬೆಳೆ ಸಮೃದ್ದವಾಗಿದ್ದು, ದಾಸ್ತಾನೂ ಸಾಕಷ್ಟಿರುವಾಗ, ಅಭಾವ ಹೇಗೆ?. ಸರಿ ಮಂತ್ರಿಯನ್ನ್ನು ಕೇಳಿದ. ಮಂತ್ರಿ ನಗುತ್ತಾ ಹೇಳಿದ, "ಪ್ರಭು, ವ್ಯಾಪಾರಂ ದ್ರೋಹ ಚಿಂತನಂ ಎನ್ನುವ ಮಾತುಂಟು, ನಮ್ಮ ವ್ಯಾಪಾರಸ್ಥರು ಇಂತಹ ಅವಕಾಶ ಬಿಟ್ಟಾರೆಯೇ? ಕೃತಕ ಅಭಾವ ಸೃಷ್ಟಿಸಿದ್ದಾರೆ. ಅದನ್ನು ಈಚೆ ತಂದರರಾಯಿತು" ಎಂದ.

ರಾಜನಿಗೆ ಮತ್ತೂ ಆಶ್ಚರ್ಯ. "ಏನೆಂದೆ..? ನಮ್ಮ ವರ್ತಕರು ನಿಯತ್ತಿನವರು, ಅಲ್ಲದೆ ನನ್ನ ರಾಜ್ಯದಲ್ಲಿ ಅವರಿಗೆ ರಾಜಭಯವಿದೆ. ಕೃತಕ ಅಭಾವ ಸೃಷ್ಟಿಸುವ ಧೈರ್ಯ ಮಾಡುವರೇ?" ಎಂದ.

"ಪ್ರಭೂ, ರಾಜಭಯ, ನಿಯತ್ತು ಬೇರೆ, ವ್ಯಾಪರೀ ವೃತ್ತಿಯೇ ಬೇರೆ" ಎಂದ ಮಂತ್ರಿ.

"ನಾನು ನಂಬಲಾರೆ"

"ಹಾಗಿದ್ದರೆ ಸಣ್ಣದೊಂದು ಪರೀಕ್ಷೆ ಮಾಡೋಣ ಬಿಡಿ, ನಿಮಗೂ ನಿಜ ಗೊತ್ತಾಗುತ್ತದೆ."

"ಸರಿ ಹಾಗೇ ಆಗಲಿ" ಅಂದ ರಾಜ.

ಊರಿನ ಪೇಟೆ ಬೀದಿಯಲ್ಲಿ ಡಂಗೂರ ಸಾರುವಂತೆ ಹೇಳಿದ ಮಂತ್ರಿ. "ಅರಮನೆಗೆ ಹಾಲಿನ ಕೊರತೆ ಬಂದಿರುವುದರಿಂದ ಊರಿನಲ್ಲಿರುವ ಎಲ್ಲಾ ವರ್ತಕರೂ ಒಂದೊಂದು ತಂಬಿಗೆ ಹಾಲನ್ನು ಅರಮನೆಗೆ ನಾಳೆ ನೀಡತಕ್ಕದ್ದು" ಎನ್ನುವುದು ಡಂಗೂರದ ಸಾರಾಂಶ.

ಅರಮನೆಯ ಮುಂದೆ, ದೊಡ್ಡ ಕೊಳಗ ಇರುವಂತೆ ವ್ಯವಸ್ಥೆ ಮಾಡಿದ ಮಂತ್ರಿ, ಅದರ ಬಾಯಿಗೆ ಬಿಳಿಯ ಶುಭ್ರ ವಸ್ತ್ರವೊಂದನ್ನು ಕಟ್ಟಿಸಿದ. ಒಳಗಿರುವುದು ಏನೆಂದು ಹೊರಗಿನವರಿಗೆ ಕಾಣದು. ವರ್ತಕರು ಇದನ್ನು ನೋಡಿದರು. ಅವರ ವರ್ತಕ ಬುಧ್ಧಿ ಕೆಲಸ ಮಾಡಿತು. ಹೇಗೂ ಬಾಯಿಗೆ ಬಟ್ಟೆ ಇದೆ, ಒಳಗಿರುವುದು ಕಾಣದು, ಎಲ್ಲರೂ ಹಾಲು ತಂದರೆ, ನಾನೊಬ್ಬ ನೀರು ಹಾಕಿದರೆ ತಿಳಿಯುವುದಾದರೂ ಯಾರಿಗೆ..? ಆದರೆ ಇದು ಒಬ್ಬಿಬ್ಬರಿಗೆ ಹೊಳೆಯಲಿಲ್ಲ. ಊರಿನ ಎಲ್ಲರೂ ಹಾಗೆ ಯೋಚಿಸಿದರು.

ಮಧ್ಯಾಹ್ನಕ್ಕೆ ಕೊಳಗ ತೆಗೆಸಿ ನೋಡಿದರೆ, ಒಳಗೆ ಬರೀ ನೀರು. ರಾಜನಿಗೆ ಕೆಂಡದಂತ ಕೋಪ. "ಎಲ್ಲಾ ವರ್ತಕರನ್ನೂ ಹಿಡಿದು ನೇಣಿಗೇರಿಸಿ" ಎಂದುಬಿಟ್ಟ. ಮಂತ್ರಿ ಬುದ್ದಿವಂತ. " ಹಾಗೆ ಮಾಡಿದರೆ, ಅರಾಜಕತೆ ನಾವೇ ಸೃಷ್ಟಿಸಿದಂತಾಗುತ್ತದೆ" ಎಂದ. "ಅಂದರೆ ಇವರನ್ನು ಸುಮ್ಮನೆ ಬಿಡಬೇಕೆ?" ರಾಜನದು ರುದ್ರಾವತಾರ. "ಇಲ್ಲ ಇಲ್ಲ " ಮಂತ್ರಿ ಹೇಳಿದ ಇವರಿಗೆ ತಕ್ಕ ಪಾಠ ಕಲಿಸದೆ ಬಿಟ್ಟರೆ, ನಮ್ಮ ಮೇಲೇ ಏರಿ ಬರುತ್ತಾರೆ. ಅವರಿಗೆ ಪಾಠದ ವ್ಯವಸ್ಥೆಯೂ ಮಾಡಿದ್ದೇನೆ".

ಮರುದಿನ ವರ್ತಕರಿಗೊಂದು ಅಹ್ವಾನ ಹೋಯಿತು, ವರ್ತಕರ ಔದಾರ್ಯದಿಂದ ಸಂತಸಗೊಡ ಪ್ರಭುಗಳು, ಅವರಿಗೊಂದು ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ, ಸರ್ವರೂ ನಿಗದಿತ ಸಮಯಕ್ಕೆ ಅರಮನೆಯ ಹಜಾರದಲ್ಲಿ ಸೇರತಕ್ಕದ್ದು. ಎನ್ನುವುದು ಅಹ್ವಾನದ ಸಾರಾಂಶ. ಸರಿ ಎಲ್ಲರೂ ಸಂತಸಗೊಂಡರು, ನೀರು ಹಾಕಿದವರು ತಮ್ಮ ತಪ್ಪನ್ನು ಯಾರೂ ಕಾಣಲಿಲ್ಲವೆಂಬ ಸಂತಸದ ಜೊತೆಗೆ, ರಾಜನಿಂದ ಸನ್ಮಾನ. ಭಲೇ! ಭಲೇ!!

ಒಟ್ಟಾಗಿ ಎಲ್ಲರೂ ನಿಗದಿತ ಸಮಯದಲ್ಲಿ ನಿಗದಿತ ಜಾಗದಲ್ಲಿ ಸೇರಿದರು. ಸಾರ್ವಜನಿಕ ಸನ್ಮಾನ ನಿರೀಕ್ಷಿಸಿದವರಿರೊಂದು ಅಚ್ಚರಿ. ಒಬ್ಬೊಬ್ಬರನ್ನಾಗಿ ಒಳಗೆ ಕರೆದು ಸನ್ಮಾನ ಮಾಡುತ್ತಿದ್ದಾರೆ. ಒಳಗೇನು ನಡೆಯುತ್ತಿದೆ, ಹೊರಗಿನವರಿಗೆ ತಿಳಿಯುವಂತಿಲ್ಲ. ಒಳಗಿಂದ ಹೊರಹೋಗುವುದೇ ಬೇರೆ ಬಾಗಿಲಿನಿಂದ.

ಒಳಗೆ ನಡೆಯುವುದಾದರೂ ಏನು?

ರಾಜ ಒಬ್ಬೊಬ್ಬರಿಗೂ ಕೇಳುತ್ತಾನೆ, "ಏನಯ್ಯಾ, ರಾಜಾಜ್ಣೆ ಮೀರುವಷ್ಟು ಸೊಕ್ಕೆ ನಿನಗೆ? ಹಾಲು ಬೇಕೆಂದು ಕೇಳಿದರೆ ನೀರು ಕೊಡುತ್ತೀಯೋ?"
ಇವನಿಗೋ ಅಚ್ಚರಿ ತಾನು ನೀರು ಹಾಕಿದ್ದನ್ನು ಇವರು ಕಂಡುಕೊಂಡದ್ದಾದರೂ ಹೇಗೆ? ಇವರ ಗೂಢಚಾರರು ಎಷ್ಟು ಗಟ್ಟಿ.. ತಪ್ಪೊಪ್ಪಿಕೊಂಡರೆ ಬದುಕೇನು, ಎನ್ನುವ ಭಾವ. "ತಪ್ಪಾಯಿತು ಬುದ್ಧಿ, ಮಣ್ಣು ತಿನ್ನುವ ಕೆಲಸ ಮಾಡಿದೆ, ನನ್ನನು ಈ ಬಾರಿ ಕ್ಷಮಿಸಿ"
"ನಿನ್ನ ತಪ್ಪಿಗೆ ತಲೆ ತೆಗೆಯದೆ ಬಿಡುವುದು ದೊಡ್ಡದು, ಹತ್ತು ಛಡಿ ಏಟು ತಿಂದು ಸೀದಾ ಮನೆಗೆ ನಡೆ. ಯಾರ ಬಳಿಯಾದರೂ ಕೆಮ್ಮಿದರೆ, ಗಂಟಲು ಸೀಳಿ ಹೋದೀತು"
ಛಡಿ ತಿಂದು ತಲೆ ತಗ್ಗಿಸಿ, ಬೇರೆ ಬಾಗಿಲಿಂದ ಮನೆ ಸೇರಿಕೊಳ್ಳುವುದಷ್ಟೇ ವರ್ತಕರಿಗೆ ಉಳಿದದ್ದು.

ಈ ಕತೆ ನೆನಪಿಗೆ ಬರಲು ನನಗೆ ಎರಡು ಕಾರಣಗಳು, ಸಿಗರೇಟು ಸೇದುವವರಿಗೆ, ಇದು ಈಗಾಗಲೇ ಯಾಕೆಂದು ತಿಳಿದಿರಬಹುದು. ಮುಕ್ತ ಮಾರುಕಟ್ಟೆಯ ಈ ವ್ಯವಸ್ಥೆಯಲ್ಲಿ, ಏಕಸ್ವಾಮ್ಯದ ಸಿಗರೇಟು ಕಂಪನಿಯ ಸಿಗರೇಟುಗಳು ಕಾಳ ಮಾರುಕಟ್ಟೆಯಲ್ಲಷ್ಟೇ ಬಿಕರಿಯಾಗುತ್ತಿವೆ. ಬಜೆಟ್ ನ ಪರಿಣಾಮ ಇದು. ದಿನಬಳಕೆಯ ವಸ್ತುಗಳಿಗೆ ಈ ಸ್ಥಿತಿ ಬರುವುದಿಲ್ಲವೋ, ನನಗಂತೂ ಅನುಮಾನ. ಬಂದೇ ಬರುತ್ತದೆ ಎನ್ನುವುದು ನನ್ನ ನಂಬಿಕೆ. ಕಾಲವೇ ಉತ್ತರಿಸಬೇಕು. ಆದರೆ ಆ ರಾಜನ ಮಂತ್ರಿಯಂತ ಮಂತ್ರಿಗಳು ಈಗಿಲ್ಲ ಎನ್ನುವುದು ಸತ್ಯ.

ಆಷ್ಟೇ ಅಲ್ಲ. ಇನ್ನೊಂದು ಕಾರಣದಿಂದ ಈ ಕತೆ ನೆನಪಿಗೆ ಬಂತು. ಅದಕ್ಕೆ ಕಾರಣ ನಾನು ಇತ್ತೀಚಿಗೆ ಓದಿದ ಪುಸ್ತಕ. "ಭಾರತೀಯರಾಡುವ ಆಟಗಳು (Games Indian Play)" ಎನ್ನುವ ರಘುನಾಥನ್ ಎನ್ನುವವರು ಬರೆದದ್ದು. ಇದಕ್ಕೆ ಮುನ್ನುಡಿ ನಮ್ಮ ಇನ್ಫೋಸಿಸ್ ಅಧ್ಯಕ್ಶ ನಾರಾಯಣ ಮೂರ್ತಿಯವರದು. ಅದರಲ್ಲಿ ಲೇಖಕರು ಈ ಕತೆಯನ್ನೂ ಬೇರೆ ರೀತಿಯಲ್ಲಿ ಬರೆದಿದ್ದಾರೆ. ಗೇಮ್ ಥಿಯರಿಯ ಹಿನ್ನೆಲೆಯಲ್ಲಿ, ಭಾರತೀಯರ ಮನಸ್ಸತ್ವವನ್ನು ತೆರೆದಿಡುವ ಪುಸ್ತಕ ಅದು. ತಕ್ಷಣದ ಲಾಭಕ್ಕಾಗಿ ಲೋಭಿಗಳಾಗಿ, ಸಮಷ್ಟಿ ಲಾಭವನ್ನು ಕಡೆಗಣಿಸುವ ಭಾರತೀಯತೆಯನ್ನು ಉದಾಹರಣೆ ಸಮೇತ ಅವರು ವಿವರಿಸುತ್ತಾರೆ. ವೀರಪ್ಪನ್ ಡೈಲಮಾ ಎನ್ನುವ ಕಲ್ಪನೆಯೊಂದಿಗೆ ವಸ್ತುಸ್ಥಿತಿಯನ್ನು ವಿವರಿಸುವ ಪರಿ ಚಿಂತನೆಗೆ ಹಚ್ಚುವಂತಿದೆ. ಗೀತೆಯಲ್ಲಿ ಗೇಮ್ ಥಿಯರಿ ಅಳಕವಾಗಿದೆ ಎಂದು ವಾದಿಸುವ ಲೇಖಕರ ಮಾತು ಸತ್ಯವಿರಲೂ ಬಹುದು. ಆದರೆ, ಭಾರತೀಯ ಸಮುದಾಯದ ಈ ಲೋಭಿ ಬುದ್ದಿಗೆ ಛಡಿ ನೀಡಿ ತಿದ್ದಬಲ್ಲ ಮಂತ್ರಿ ಯಾವಾಗ ಬರಬಹುದು? ಅಥವಾ ನಮ್ಮ-ನಿಮ್ಮಂತವರು ಸ್ವ ಪ್ರೇರಣೆಯಿಂದ ಬದಲಾಗುತ್ತಾ ಹೋದರೆ ಸಾಕೆ ಎನ್ನುವ ಪ್ರಶ್ನೆ ನನ್ನದು.

Tuesday, March 20, 2012

ನಾನು ನೋಡಿದ ಅಷ್ಟಾವಧಾನ ಕಾರ್ಯಕ್ರಮ

ಕ್ರಿಕೆಟ್ ಗೂ ಅವಧಾನಕ್ಕೂ ಏನು ಸಂಬಂಧ ?
ಕ್ರಿಕೆಟ್ ನಲ್ಲಿ ಒಬ್ಬ ಬ್ಯಾಟ್ಸ್ ಮನ್, ಒಬ್ಬ ಬೌಲರ್, ಹಲವಾರು ಜನ ಫೀಲ್ಡರ್ಸ್.  ಆದರೆ ಅವಧಾನದಲ್ಲಿ ಒಬ್ಬ ಬ್ಯಾಟ್ಸ್ ಮನ್,  ಉಳಿದವರೆಲ್ಲಾ, ಫೀಲ್ಡಿಂಗ್, ಬೌಲಿಂಗ್ ಒಟ್ಟಿಗೇ ಮಾಡ್ತಾರೆ.

ಹನುಮಾನ್ ಬೆಳೆದಂತೆ ಆತನ ಬಟ್ಟೆ, ಜುಟ್ಟು ಜನಿವಾರ ಬೆಳೆಯುತ್ತಿತ್ತೆ..?
ಅಯಸ್ಕಾಂತದ ಸಂಪರ್ಕಕ್ಕೆ ಬಂದ ಪಿನ್ನು, ಅಯಸ್ಕಾಂತವಾಗುವಂತೆ, ಹನುಮಾನ್ ಸಂಪರ್ಕದಿಂದ ಅವಕ್ಕೂ ಸಿಧ್ಧಿ ಬರುತ್ತದೆ.

ನೀರು ಜೀವನವಾದರೆ ನೀರೆ?
ಜೀವನವೆ?

ಬೆಂಗಳೂರಿನ ಬಳಿ ಇರುವ ಅಗ್ರಹಾರಕ್ಕೆ ಹೋಗಿದ್ದೀರಾ..?
ಅಲ್ಲಿಗೆ ಹೋಗಿ ಬರಲು ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ.

ಗಣೇಶನಿಗೆ ಬೆನ್ನು ತುರಿಕೆಯಾದರೆ ಏನು ಮಾಡುತ್ತಾನೆ?
ಸೊಂಡಿಲು ಬೆನ್ನು ಮುಟ್ಟುವುದರಿಂದ ಸಮಸ್ಯೆ  ಇಲ್ಲ.  ನೆಗಡಿಯಾದರೆ ಮಾತ್ರ ಸಮಸ್ಯೆ.

ಇವು ಶುಕ್ರವಾರದ ಅಷ್ಟಾವಧಾನ ಕಾರ್ಯಕ್ರಮದಲ್ಲಿ ಕೇಳಿ ಬಂದ ಅಪ್ರಸ್ತುತ ಪ್ರಸಂಗದ ಪ್ರಶ್ನೋತ್ತರ.  ತೀಕ್ಷ್ಣ ಮತಿಯ ಉತ್ತರಗಳಿಂದ ರಂಜಿಸಿದವರು ಶತಾವಧಾನಿ ಅರ್. ಗಣೇಶ್. ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘದಲ್ಲಿ ಅಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅದೃಷ್ಟ  ನನ್ನದು.

ಶನಿವಾರ ಬೆಳಿಗ್ಗೆ ವಿನಯ ಫೋನ್ ಮಾಡಿ, ಸಾಯಂಕಾಲ ಅಷ್ಟಾವಧಾನ ಕಾರ್ಯಕ್ರಮಕ್ಕೆ ಬರುವಂತೆ ತಿಳಿಸಿ, ಅವನೂ ಬರುತ್ತೇನೆಂದು ಹೇಳಿದ. ಅದಕ್ಕೆ ನಾನು ವೈಟ್ ಫೀಲ್ಡ್ ನಿಂದ, ಇಂದಿರಾನಗರದವರೆಗೆ ಬಸ್ಸಿನಲ್ಲಿ ಬಂದು, ಅಲ್ಲಿಂದ ಬೈಕಿನಲ್ಲಿ ಮಲ್ಲೇಶ್ವರ ತಲುಪಿ, ಗಾಂಧಿ ಸಾಹಿತ್ಯ ಸಂಘವನ್ನು ಹುಡುಕಿ, ಕಾರ್ಯಕ್ರಮಕ್ಕೆ ಹೋದಾಗಾಗಲೇ ಅರ್ಧ ಗಂಟೆ ತಡವಾಗಿತ್ತು.  ಆದರೇನು, ಆ ರಸಾನುಭವದಲ್ಲಿ, ಪ್ರಯಾಣದ ಆಯಾಸವೆಲ್ಲ ಮಾಯವಾಗಿ ಹೋಯಿತು. ಕರೆ ಮಾಡಿ  ನಾನು ಮನೆ ಬಿಟ್ಟು ಹೊರಡುವಂತೆ ಮಾಡಿದ ವಿನಯನಿಗೆ ನನ್ನ ಅನಂತ ಧನ್ಯವಾದಗಳು.

ಇನ್ನು ಆಷ್ಟಾವಧಾನ ಕಾರ್ಯಕ್ರಮದ ಕಾವ್ಯ ತತ್ವ ರಸಾನುಭೂತಿಯಂತೂ ಸ್ವಾರಸ್ಯಕರ, ಅದನ್ನಿಲ್ಲಿ ಅಕ್ಷರಗಳಲ್ಲಿ ಬಂಧಿಸಿಡಲಾಗುವುದಸಾಧ್ಯ.  ಕೇವಲ ವರದಿಯಾಗಿ ಬರೆಯುವುದಷ್ಟೇ ಸಾಧ್ಯ.
ನಿಷೇಧಾಕ್ಷರ  ವಿಭಾಗದಲ್ಲಿ  ಕೇಳಿದ ಪ್ರಶ್ನೆ,   ಶಾರ್ದೂಲವಿಕ್ರೀಡಿತ ವೃತ್ತದಲ್ಲಿ  ಗಾಂಧೀಜಿ ಸಂಸ್ಕೃತ ಸಂಘದ ಉದ್ಘಾಟನೆಗೆ ಮಾಡಬಹುದಾದ ಭಾಷಣವನ್ನು ಸಂಸ್ಕೃತದಲ್ಲಿ ಹೇಳುವಂತೆ ಕೇಳಲಾಗಿತ್ತು.
ಚಿತ್ರ ಪದ್ಯ ವಿಭಾಗಕ್ಕೆ, ಅತಿ ವಿರಳವಾದ ಛತ್ರ ಪದ್ಯ  ಛಂದಸ್ಸಿನಲ್ಲಿ  ಪದ್ಯ ರಚನೆ.
ದತ್ತ ಪದಿಯಲ್ಲಿ ಸನ್, ಮೂನ್, ಮತ್ತಿನ್ನೆರಡು ಪದಗಳನ್ನು ಬಳಸಿ ಡಿ.ವಿ,ಜಿ ಯವರ ಸ್ತುತಿ ಪಂದ್ಯ ರಚನೆ ಮಾಡುವ ಸವಾಲು.
ಸಮಸ್ಯಾಪೂರಣದಲ್ಲಿ,  ಮೂಗಿಲಿಯಂ  ತಿವಿದರೂ ಸುಮ್ಮನಿರುವ ಗಣೇಶನನ್ನು ಬಿಡಿಸಬೇಕಿತ್ತು , ಕಾವ್ಯವಾಚನದಲ್ಲಿ, ಸೊಗಸಾದ ಗಾಯನ, ಲಕ್ಷೀಶ, ಕುಮಾರವ್ಯಾಸ, ರನ್ನ, ಪಂಪರ ಕಾವ್ಯಗಳಿಂದ.  ಅಶುಕವಿತೆ ವಿಭಾಗದಲ್ಲಿ ಸುಂದರ ಸನ್ನಿವೇಶಗಳು,  ಹರಿವ ನೀರಿನಲ್ಲಿ ಕಾಣುವ ಚಂದ್ರಬಿಂಬದ ಕುರಿತು ರಚಿಸಿದ ಕವಿತೆ, ಅತ್ಯಂತ ಸುಂದರ, ಕಾಲದ ಹರಿವಿನಲ್ಳೂ ಮಹಾತ್ಮರ ಚಂದ್ರಬಿಂಬ ಸ್ಥಿರವಾಗಿರುತ್ತದೆಯೆನ್ನುವ ಅಸಮಾನ್ಯ ಉಪಮೆ. ದೂರದ ಬೆಟ್ಟಕ್ಕೆ ಬಿದ್ದ ಬೆಂಕಿಯನ್ನು, ಗ್ರೀಕ್ ಕಾವ್ಯದ ಬೆಂಕಿಯ ಚರ್ಮದ ಟಗರು ಹೊತ್ತು ತರುವ ವೀರನಿಗೆ ಹೋಲಿಸಿದ ಕವಿತೆ.

ಒಟ್ಟಿನಲ್ಲಿ ಮೂರೂವರೆ ಗಂಟೆಗಳ ಸಮಯ ಸರಿದದ್ದೇ ತಿಳಿಯಲಿಲ್ಲ.  ಹಿಂತಿರುಗಿ ಮನೆಗೆ ಬರುವಾಗ ಮನಸ್ಸಿನ ತುಂಬಾ ರಸಾನುಭೂತಿ.

Tuesday, March 06, 2012

ಸುಳಿಯದ ಹಾದಿ


ಹಳದಿ ಕಾಡಿನಲೊಂದು ಕವಲೊಡೆದ ಹಾದಿ,
ಹೋಗಲಾಗದು ಎರಡರಲೂ ಒಂದೇ ಬಾರಿ
ಏನು ಮಾಡಲಿ ಒಂಟಿ ಪಯಣಿಗ
ನಿಂತು ನೋಡಿದೆ ಕಣ್ಣು ಹೋಗುವರೆಗೆ
ದಾರಿಯೊಂದು ಸುತ್ತಿಸುಳಿದು ಮರೆಯಾಗುವರೆಗೆ

ಮತ್ತೊಂದರೆಡೆ ಕಣ್ಣು ಹಾಯಿಸಿದರೆ ಅದೂ ಹಾಗೆ
ಹುಲ್ಲು ಬೆಳೆದ ಹಾದಿ; ಹೊಸತಂತೆ ಕಾಣುತಿದೆ.
ಮತ್ತೊಂದರದಕಿಂತ ಸ್ವಲ್ಪ ಒಳಿತಿರಬಹುದು
ಬಳಸಿದಾ ಜನಸಂಖ್ಯೆ ಕಡಿಮೆಯಿರಬಹುದು
ಕಣ್ಣೋಟಕೆರಡೂ ಕಾಣುವುದೂ ಒಂದೇ ಬಗೆ

ಆ ಬೆಳಗಿನಲ್ಲಿಂದು ಕವಲುಹಾದಿಗಳೆರಡು
ಒಂದರಂತೇ ಇನ್ನೊಂದು ಗುರಿ ಕಾಣದಿಹುದು.
ಮೊದಲಿನದು ಮತ್ತೊಂದು ದಿನಕಿರಲಿ ಎಂದೇ ಬಗೆದೆ
ಮತ್ತೊಂದು ದಾರಿಯಲಿ ನಡೆದೆ ಮುಂದೆ.
ಮತ್ತಲ್ಲಿಗೆ ಬಂದು ತಲುಪುವೆನೇ...? ಮುಂದೆ...?

ಕಾಲನುರುಳಿನಲಿ ಪಯಣ, ಮುಂದೇನೋ ಎಂತೋ..?
ನಿಟ್ಟುಸಿರನೊರೆದು ಮುಂದೊಮ್ಮೆ ನುಡಿವೆನೇ ಇಂತು..?
ಹಳದಿ ಕಾಡಿನ ಕವಲು ಹಾದಿಯಲಿ ನಾ ಹಿಡಿದ ಹಾದಿ
ಜೊತೆಗಾರರಿಲ್ಲದೆಯೇ ನಾ ತುಳಿದ ಹಾದಿ.
ಜನ ಬಳಸಿರದ ಹಾದಿ, ಎಲ್ಲ ಬದಲಾವಣೆಯ ಆದಿ.

ರಾಬರ್ಟ್ ಫ್ರಾಸ್ಟ್ ಕವಿಯ "The road not taken" ಕವಿತೆಯ ಭಾವಾನುವಾದ.

Wednesday, February 29, 2012

ಇಂದು ಕೆಲಸ ಮಾಡದ ಟ್ಯಾಲಿ.

ಇಂದು ಅಧಿಕ ವರ್ಷದ ದಿನ.  ೨೯ ಫ಼ೆಬ್ರವರಿ, ೨೦೧೨.  ಟ್ಯಾಲಿ ಇಂದು ಕೆಲಸ ಮಾಡುವುದಿಲ್ಲವಂತೆ. ನಿಮ್ಮ ಕಂಪ್ಯೂಟರಿನ ದಿನಾಂಕವನ್ನು ಮುಂದಕ್ಕೆ ಹಾಕಿ, ಲೈಸೆನ್ಸ್ ನವೀಕರಿಸಿ ಎನ್ನುತ್ತದೆ ಟ್ಯಾಲಿ ಜಾಲತಾಣ.

ಆದರೆ ಇದರಿಂದಾಗುವ ತೊಂದರೆಗಳ ಬಗ್ಗೆ ಅವರು ಯೋಚಿಸಿದಂತಿಲ್ಲ.  ಏನೇ ಆದರೂ, ಅಧಿಕ ವರ್ಷದ ಅಧಿಕ ದಿನವನ್ನು ರಜೆಯನ್ನಾಗಿ ಮಾಡಿಕೊಂಡ ಈ ಸಾಫ಼್ಟ್-ವೇರ್ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ.

Thursday, February 23, 2012

ಕಂತಿ ಹಂಪರ ಸಮಸ್ಯೆಗಳು


ಕಂತಿ ಹಂಪರ ಸಮಸ್ಯೆಗಳ ಬಗ್ಗೆ ಚಿಕ್ಕಂದಿನಲ್ಲಿ ಕೇಳಿದ್ದೆ.  ನನ್ನ ಮನಸ್ಸಿನಲ್ಲಿ ಈ ಸಾಹಿತ್ಯ ಪ್ರಾಕಾರದ ಅರಿವು ಮೂಡಿಸಿದ ಬೆರಗು ಅಪಾರ.
ಸಮಸ್ಯಾಪೂರಣದ ವಿಧಾನದ ಸಮಸ್ಯೆಗಳೂ, ಅವುಗಳ ಸಮಾಧಾನಗಳೂ, ಮತ್ತು ಅದರ ಹಿಂದಿರುವ ಕವಿತಾ ಪ್ರತಿಭೆಯೂ ಅತ್ಯಮೋಘವಾದುದು. ಈ ಬಗ್ಗೆ ಹಂಸಾನಂದಿಯವರಬ್ಲಾಗಿನ ಈ ಬರಹ ತುಂಬ ಸೊಗಸಾಗಿದೆ. ಆ ಬ್ಲಾಗಿನಿಂದ ಸಮಸ್ಯೆ-ಸಮಾಧಾನಗಳನ್ನು ಕೆಳಗೆ ಪಟ್ಟಿಸಿದ್ದೇನೆ.
ಓದಿದ ಸಹೃದಯರಿಗೆ ರಸಾನುಭೂತಿಯಾದರೆ ನಾನು ಧನ್ಯ.

ಪದಗಳಿರುವಂತೆ ಪದ್ಯ ರಚನೆ.

ಮಸೆಕಲ್ಲು , ಕುದುರೆ, ಬಾಚಿ, ಕೊಡಲಿ, ಉಳಿ, ಪೊಸ 
ಮಸೆಗಲ್ಗಳಿ ಮಾಂಬಳಮಂ
ವಸುಧಾತಳಕುದುರೆ ಬಾಚಿಯೆತ್ತಿದಳೊರ್ವಳ್
ಶಶಿಮುಖಿಗೆ ಕೊಡಲಿಕೆ ಆಕೆ
ಪೊಸವಣ್ಣಂ ಸವಿದು ನೋಡಿ ನಸುವುಳಿಯೆಂದಳ್


ಕೊಟ್ಟ ಪದ್ಯವನ್ನು ಅರ್ಥವತ್ತಾಗಿ ಪೂರೈಸುವುದು.

ಸತ್ತವಳೆದ್ದು ತವರಿಗೆ ಪೋದಳೇನಿದು ವಿಚಿತ್ರಂ
ಅತ್ತೆಯ ಕಾಟವು ಅಧಿಕಂ ಮತ್ತಿನ ಸವತಿಯರ ಕಾಟ ನಾದಿನಿ ಬೈವಳು
ಪೆತ್ತಮಕ್ಕಳಳಲ್ಕೆ ಸಲೆಗಂಡ ದೂಸರಿಗಾರದೆ ಬೇಸತ್ತವಳೆದ್ದು ತವರಿಗೆ ಪೋದಳೇನಿದು ವಿಚಿತ್ರಂ?


 ಇಲಿಯಂ ತಿಂಬುದ ಕಂಡೆ ಜೈನರ ಮನೆಯೊಳ್
ಸರಸಿಜಾಕ್ಷಿಯರ ಹಸ್ತದೊಳ್ ತಿಲತೈಲದಿ ಮಾಳ್ಪ ಚೆಕ್ಕಿಲಿಯಂ ತಿಂಬುದ ಕಂಡೆ ಜೈನರ ಮನೆಯೊಳ್

ದನಮಂ ಕಡಿಕಡಿದು ಬಸದಿಗೆಳೆಯುತಿರ್ದರ್
ಸಚ್ಚಂದನಮಂ ಕಡಿಕಡಿದು ಬಸದಿಗೆಳೆಯುತಿರ್ದರ್ 

ಇಸಮಂ ಸೇವಿಸಿ ಬಾಳ್ದರೇನಚ್ಚರಿಯೋ 
ಪಾಯಿಸಮಂ ಸೇವಿಸಿ ಬಾಳ್ದರೇನಚ್ಚರಿಯೋ!

 ಗಜಮಂ ಕಟ್ಟಿ ಪೊತ್ತರು ಪೆಗಲೊಳ್
 ಕಾಗಜಮಂ ಕಟ್ಟಿ ಪೊತ್ತರು ಪೆಗಲೊಳ್”.

ಸಿರಿಗನ್ನಡಂ ಗೆಲ್ಗೆ