Pages

Tuesday, June 23, 2009

ಮಗನಿಗೊಂದು ಬುದ್ದಿಮಾತು

ಮನದ ಮಾತುಗಳು ಇರಲಿ ಮೌನದಲಿ.
ಗುರಿಯಿರದೆ ಚಿಂತನೆಗಳು ಕೃತಿಯಾಗದಿರಲಿ.
ಒಂದಾಗು ಎಲ್ಲರಲಿ, ಅತಿರೇಕವಿರದಿರಲಿ.
ಒರೆ ಹಚ್ಚಿ ನೋಡಲುಬೇಕು ,
ಗೆಳೆತನವ ಬೆಳೆಸುವ ಮುನ್ನ
ಹೃದಯ ಬಂಧಿಸಿರಬೇಕು ,
ಸ್ನೇಹ ಸಂಕೋಲೆಗಳಲಿ,ಬೇಕಿಲ್ಲ ಚಿನ್ನ.
ಸಿಕ್ಕಸಿಕ್ಕವರೆಲ್ಲ ಸ್ನೇಹಕಱರೇನಲ್ಲ ,
ಎಲ್ಲರನು ನೀನನಸುರಿಸಬೇಕಿಲ್ಲ.
ಬೇಡ ಕಾದಾಟ ಯಾರೊಡನೆಯೂ,
ಕಾದಿದರೆ ಅರಿಗಿರಲಿ ನಿನ್ನರಿವು ಕಾಳಗದಮುನ್ನ.
ಸಹನೆಯಲಿ ನೀ ಕೇಳು ಸರ್ವರ ನುಡಿಯ.
ನುಡಿದಾರೆ ನುಡಿ ಯೋಗ್ಯರಲಿ ಮುತ್ತಿನ ಹಾರ
ನಡತೆಯಲಿ ಸಿರಿತನವಿರಲಿ,
ಉಡುಗೆ ತೊಡುಗೆಗಳಿಗೂ ಉಂಟು ಬೆಲೆಯು,
ಲೆಕ್ಕದಾ ಅರಿವಿರಲಿ , ಅಳತೆ ಮೀರದೆ ಇರಲಿ.
ತರದು ಘನತೆಯ ಬರಿಯಬ್ಬರವು,
ಸಾಲದ ಹಂಗಿಲ್ಲದಿರಲಿ ,
ತರುವುದೇ ಬೇಡ,ಇನ್ನು ಕೊಡುವುದೇಕೆ?
ನೀನು ಸಾಲಿಗನಾದರೆ ಕಳೆಯಬಹುದು
ಕೆಳೆಯನನೂ ಸಾಲದ ಜೊತೆಗೆ
ಸಾಲದ ಹೊರೆ ನಿನಗಾದರೆ ,
ನಿನಗಿರದು ಆತ್ಮಗೌರವದ ರಕ್ಷೆ
ಎಲ್ಲಕ್ಕೂ ಮಿಗಿಲಾಗಿ ,
ಜೀವನವಿರಲಿ ಆತ್ಮಸಾಕ್ಷಿಗನುಗುಣವಾಗಿ
ಭಯವಿರದು ದೇವನಿಗೆ ಉತ್ತರಿಸಲು,
ಮನುಜರ ಲೆಕ್ಕವಿನ್ನೇನು..?
ಹೋಗಿ ಬಾ ಮಗು.. ಕಾಯಲಿ ನಿನ್ನನೀ ಹರಕೆಯು.

(Polonius advice to Laertes -- From Hamlet by William Shakespeare)

Rakesh Sharma -- The First Indian Austronaut

I remember the day in 1984, the headlines in newspapers read "Sare Jahan Se Achcha". This was the message given by Rakesh Sharma, flying astronaut, to Smt.Indiragandhi, then Prime Minister of India on satellite to earth communication systems, with the whole world listening when asked "how India looks from space?". He inspired dreams in me, and crores of children like me.

Thank you sir..

Here is his blog

Wednesday, June 10, 2009

SSL sigining

### Generate a server key and request for signing (csr).
openssl genrsa -des3 -out server.key 4096
openssl req -new -key server.key -out server.csr

####Sign the certificate signing request (csr) with the self-created Certificate Authority (CA)

openssl x509 -req -days 365 -in server.csr -CA ca.crt -CAkey ca.key -set_serial01 -out server.crt


####Make a server.key which doesn't cause Apache to prompt for a password.

openssl rsa -in server.key -out server.key.insecure
mv server.key server.key.secure
mv server.key.insecure server.key

####copy them into position.
cp server.key /etc/apache2/ssl.key
cp server.crt /etc/apache2/ssl.crt
cp server.csr /etc/apache2/ssl.csr

### Restart apache
/etc/init.d/apache2 restart

Tuesday, June 09, 2009

ಆಯಸ್ಸು .

ಭುವಿಗೆನ್ನ ಕಳುಹಿಸುವ ಮುಂಚೆ
ದೇವನ ಜೊತೆ ಮಾತಿಗೆ ಕುಳಿತೆ.
ಒಂದಷ್ಟು ವಿಷಯ ಫೈನಲೈಸ್
ಆಗಬೇಕಿತ್ತು ಬೇಗ.

ಪೂರ್ತಿ ನೂರು ವರುಷ
ಬದುಕಬೇಕು ನಾನು .
ಏಕೆ ಎಂದೂ ಕೇಳದೆ
ನೀಡಿದ ವರವನು ದೇವನು .

ಮತ್ತೆ ಕೇಳಿದ ,
ಭೂಮಿಯಲ್ಲಿ ಬದುಕಲು ಬಯಸುವೆ ಎಲ್ಲಿ ?
ನಾನು ಹೇಳಿದೆ,
ಕುರಿತೋದದೆಯುಂ ಕಾವ್ಯಪ್ರಯೋಗ
ಪರಿಣಿತಮತಿಗಳಿರುವ ಬೆಂಗಳೂರಲ್ಲಿ
ಹಾಗಿದ್ದರೆ ಮುರಿಯುವೆ ಹತ್ತು .
ಬೆಂಗಳೂರಲ್ಲಿ ಬದುಕುವ ಗತ್ತು .

ಹೋದರೆ ಹೋಯಿತು ಹತ್ತು .
ಬೆಂಗಳೂರಿನ ಗಮ್ಮತ್ತು ..
ಹತ್ತಕ್ಕೂ ಮಹತ್ತು .

ಮತ್ತೊಂದಿದೆ ಪ್ರಶ್ನೆ ಬೇಕೆ ನಿನಗೆ ಸಿಗರೇಟು ?
ಸಾಕೆ ಬೆಂಗಳೂರಿನ ಹೊಗೆ ಘಾಟು..?
ಹುಟ್ಟಿದ ಮೇಲೆ ಸೇದದೆ ಹೋದರೆ ಸಿಗರೇಟು
ಬದುಕಿಗೆ ಏನಿದೆ ರೇಟು.
ಸರಿ ಹಾಗಾದರೆ ತೆಗೆಯುವ ಇನ್ನೈದೇ ವರ್ಷ .
ನನಗೋ ಬಲು ಹರುಷ .

ಬಸ್ಸಲಿ ಓಡಾಡುವೆಯೋ, ಇಲ್ಲ
ನಿನ್ನದೇ ವಾಹನ ಬೇಕೊ?
ಏನೇ ಆದರು , ಟ್ರಾಫಿಕ್ ಜಾಮಿಗೆ
ಐದೇ ವರ್ಷದ ರೆಂಟು
ಹೋದರೆ ಐದು , ಕಳೆಯುವುದೇನು ಗಂಟು.

ಪಬ್ಬಿದೆ,ಬಾರಿದೆ, ಥರ ಥರ ಡ್ರಿಂಕ್ಸ್ ಇದೆ ..
ಬೇಕೆ ನಿನಗೆ ಗುಂಡು
ಕುಡಿಯದೆ ಉಳಿದರೆ ನಾನಾಗುವೆನೆ
ಬೆಂಗಳೂರಿನ ಗಂಡು ?
ಕುಡಿತ ಕೆಟ್ಟದು ಎನ್ನುವರು
ಕುಡಿದು ಬದುಕಿದರೆ ಲಾಂಗ್ ಲೈಫ್
ಬೇರೆಯವರಿಗದು ರಾಂಗ್ ಟೈಪ್
ಅದಕೇ ತೆಗೆಯುವೆ ಇನ್ನೂ ಹತ್ತು
ಉಳಿದಿದೆ ಇನ್ನೂ ಎಪ್ಪತ್ತು .

ಎಲ್ಲಾ ಓಕೆ. ಇನ್ನೊಂದೇ ಪ್ರಶ್ನೆ .
ಮದುವೆಯು ನಿನಗೆ ಬೇಕೆ.. ?
ಮದುವೆಯು ಇಲ್ಲದೆ ಬದುಕುವುದಾದರೆ
ಆ ಥರ ಬದುಕೇಕೆ ..?

ಸರಿ ಹಾಗಾದರೆ ಮದುವೆಯ ಲೆಕ್ಕಕೆ ಮೂವತ್ತು.
ಉಳಿದಿದೆ ನಿನಗೆ ನಲವತ್ತು.
ಜ್ಞಾನೋದಯವಾಗುವ ತನಕ ಮರೆತಿರು ಈ ಲೆಕ್ಕ
ಎಂದೇನೋ ಹೇಳಿ ಭೂಮಿಗೆ ಕಳಿಸಿದ ಠಕ್ಕ.

ಮೊನ್ನೆ ತುಂಬಿತು ಮೂವತ್ತೇಳು.
ಲೆಕ್ಕವು ನೆನಪಿಗೆ ಬಂತು.
ಉಳಿದ ದಿನದಲ್ಲಿ ಏನಾದರು ಸಾಧಿಸಲು
ಮಡದಿ ಮಕ್ಕಳ ಗೋಳು.

ರಾಟೆ

ವರಗಳ ಪೆಟ್ಟಿಗೆಯ ಬಳಿ ಕುಳಿತು ನುಡಿದ ದೇವ
ಮೊದಲು ಮಾನವನ ಮಾಡಿದಾಗ
ಜಗದ ಸೊಬಗೆಲ್ಲ ಇವನ ಬಳಿ ಬಿದ್ದಿರಲಿ
ಕೊಡುವೆ ಎಲ್ಲ ವರಗಳನಿವಗೆ ನನಗಿರುವ ಶಕ್ತಿಯಲಿ

ಶಕ್ತಿಯಿತ್ತನು ಮೊದಲು, ಸೌಂದರ್ಯ ಹಿಂದೆ, ಬುದ್ದಿ ಮತ್ತೆ ಗೌರವ
ಜತೆಗಷ್ಟು ಸಂತಸ. ಹೀಗೆ ಕೊಟ್ಟನು ದೇವ ಎಲ್ಲವನ್ನೂ,
ಕೊನೆಯದೊಂದನು ಕೊಡುವ ಮುನ್ನ ಸ್ವಲ್ಪ ನಿಂತನು.
ಅವನೆಲ್ಲ ವರಗಳಲಿ ನೆಮ್ಮದಿಯದೊಂದೇ ಉಳಿದಿರುವುದ ಕಂಡನು.

ಈ ರತ್ನವನೂ ನಾನು ನನ್ನೀ ಕೂಸಿಗೆ ಕೊಟ್ಟರೆ, ನುಡಿದನವ
ಮೆಚ್ಚುವನು ನನ್ನ ವರಗಳನು, ಮರೆತು ನನ್ನ.
ಲೌಕಿಕದೆ ಮುಳುಗುವನು, ಮರೆತುಬಿಡುವನು ತನ್ನ ಗಮ್ಯ.
ಕೊಟ್ಟೆನಾದರೆ ಈ ವರವ , ಕಳೆದುಹೋದೀತು ಜೀವನ ರಮ್ಯ.

ಇರಲಿ ಮಿಕ್ಕೆಲ್ಲ ಅವನ ಬಳಿಯೇ
ನೆಮ್ಮದಿಯು ಅವನಿಗಿನ್ನು ಮರೀಚಿಕೆಯೇ
ಹಣವಿರಲಿ, ಕೀರ್ತಿ ಗೌರವಗಳಿರಲಿ, ಇರಲಿ ಸಾವಿರ ಸೌಖ್ಯ.
ನನ್ನೆಡೆಗೆ ಪ್ರೀತಿ ಗೌರವದಲಿ, ಬದುಕಿದರೆನ್ನೆದೆಯಲೇ ಅವನಿಗೆ ಮೋಕ್ಷ.

ಜಾರ್ಜ್ ಹರ್ಬಟ್ ಕವಿಯ "The Pulley" ಕವಿತೆಯ ಭಾವಾನುವಾದ.

Wednesday, June 03, 2009

ಮೋಹದ ಬಲೆ

ಚಿಮ್ಮಿತು ಚಿಮ್ಮಿತು
ಪ್ರೀತಿಯ ಒರತೆ
ಹೊಮ್ಮಿತು ಹೊಮ್ಮಿತು
ಚಿಗುರಿ ಪ್ರೇಮಲತೆ

ಸೇರಿತು ಹಾಡಿತು
ಭಾವಗಳ ಸಂತೆ
ಬೆರೆಯಿತು ಮರೆಯಿತು
ಜೀವ ಎಲ್ಲ ಚಿಂತೆ.

ಮಿಡುಕಿತು ನುಡಿಯಿತು
ಮೋಹನ ವೀಣೆ
ಆದಿಯೋ ಅಂತ್ಯವೋ
ಅರಿಯೆನು ಜಾಣೆ.

ಸರಿಯಿತು ತೆರೆಯಿತು
ಮೋಹದ ಬಲೆ
ಮೈಮರೆಸಿ ಮನತೆರೆಸಿತು
ನಿಸರ್ಗದ ಕಲೆ.