Pages

Friday, September 05, 2014

ಒಲವಿನ ತತ್ವ

ನದಿಯ ಸೇರಿ ಹರಿಯುವಲ್ಲಿ,
ಚಿಲುಮೆ ನೀರ ಮನಸು.
ಕಡಲ ಸೇರಿ ಬೆರೆಯುವಲ್ಲಿ,
ಹರಿವ ನದಿಯ ಕನಸು.

ಮೊಗ್ಗಿನ ಮಧುಗಂಧದಲೆಗೆ,
ಹಿಗ್ಗಿನ ತಂಗಾಳಿಯೊಸಗೆ.
ಒಗ್ಗಿ ನಾವು ಬಾಳುವುದೇ,
ಜಗದ ನಿಯಮವಲ್ಲವೇ?

ಶೃಂಗಗಿರಿಗಳೇರಿ ನಿಂತು,
ಸ್ವರ್ಗ ಸಂಗ ಪಡೆದಿವೆ.
ಶರಧಿಯಲೆಗಳೆಲ್ಲ  ನಲಿದು,
ಭರತ ನಾಟ್ಯವಾಡಿವೆ.

ಧರೆಯ ಮುದ್ದು ಮುಖದ ಮೇಲೆ
ಸೂರ್ಯ ರಶ್ಮಿ ಚುಂಬನ
ಸಾಗರದ ನೀರಿನಲೆಗೆ
ಚಂದ್ರನಾಲಿಂಗನ

ಪುರುಷನೊಡನೆ ಪೃಕೃತಿ,
ಬೆರೆಯುವುದೇ ನಿರ್ಮಿತಿ !!
ಒಲ್ಲೆಯೆನುವೆಯಾದರೆ 
ಜಗದ ನಿಯಮವೇತಕೆ..!!?

 -- ಪಿ ಬಿ ಶೆಲ್ಲಿ ಯ ಲವ್ಸ್ ಫಿಲಾಸಫಿ ಕವನದ ಭಾವಾನುವಾದ. ಮೂಲ ಪದ್ಯ ಇಲ್ಲಿದೆ