Pages

Saturday, November 03, 2012

ಯುದ್ದಕಲೆ ೧. ರಣನೀತಿ ರೂಪಣೆ




. ಸುನ್ ತ್ಸು ಹೇಳಿದ್ದು. : ಯುದ್ದಕಲೆ ರಾಷ್ತ್ರವೊಂದಕ್ಕೆ ಅತ್ಯಂತ ಮಹತ್ವದ್ದು.

. ಅದು ಜೀವನ್ಮರಣಗಳ ಪ್ರಶ್ನೆಯೂ, ಸುಸ್ಥಿತಿ ಅಥವಾ ಅಧೋಗತಿಗಳಿಗೆ ಹೆದ್ದಾರಿಯೂ ಆಗಿದೆ. ಆದ್ದರಿಂದ ಈ ವಿಷಯವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲಾಗದು.

. ಯುದ್ದಕಲೆಯನ್ನು ನಿರ್ಣಾಯಿಕಗೊಳಿಸುವ ಐದು ಪ್ರಮುಖ ಅಂಶಗಳೆಂದರೆ
() ನೈತಿಕತೆ
() ಅಲೌಕಿಕತೆ
()ಲೌಕಿಕತೆ
()ದಳ ಪತಿ
() ನಿಯಮ ಮತ್ತು ಶಿಸ್ತು.

. ಇವುಗಳನ್ನು ಚೆನ್ನಾಗಿ ಮತ್ತು ಸಮಗ್ರವಾಗಿ ಪರಿಶೀಲಿಸಿಯೇ ರಣರಂಗದಲ್ಲಿನ ಸ್ಥಿತಿಗತಿಗಳನ್ನು ವಿಮರ್ಶಿಸಬೇಕು.

., ., ನೈತಿಕತೆಯು ಪ್ರಜಾಸಮೂಹವು ತನ್ನ ನಾಯಕನಿಗೆ ಜೊತೆಯಾಗಿರುವಂತೆ ಮಾಡುತ್ತದೆ.. ತನ್ನ ಪ್ರಾಣವನ್ನೂ ಲೆಕ್ಕಿಸದೆ, ಅಪಾಯಗಳನ್ನು ಎದುರಿಸುವಂತಹ ಹಿಂಬಾಲಕರಿರಬೇಕೆಂದರೆ, ಇದು ಅತಿ ಮುಖ್ಯ.

. ಅಲೌಕಿಕವೆಂದರೆ ಹಗಲು ರಾತ್ರಿಗಳು, ಕಾಲ ದೇಶಗಳು , ತಂಪು ಉಷ್ಣ ಮೊದಲಾದ ಹವಾಮಾನ ವೈಪರೀತ್ಯಗಳು.

. ಲೌಕಿಕವೆಂದರೆ ದೂರ ಹತ್ತಿರಗಳು, ಸುರಕ್ಶೆ ಅಪಾಯಗಳು, ಬಯಲು ಕಣಿವೆಗಳು, ಸಾವು ಬದುಕಿನ ಸಾಧ್ಯತೆಗಳು.

. ದಳಪತಿಯು ತನ್ನ ಬುದ್ದಿಮತ್ತೆ, ಪ್ರಾಮಾಣಿಕತೆ, ಕರುಣೆ, ಸಾಹಸ, ಶಿಸ್ತು ಮತ್ತು ಕಾರ್ಯಕ್ಷಮತೆಯ ಕಾರಣದಿಂದಿರುತ್ತಾನೆ.

೧೦. ನಿಯಮ ಮತ್ತು ಶಿಸ್ತು, ಸೈನ್ಯದ ವರ್ಗೀಕರಣ , ಅಧಿಕಾರಿಗಳ ಪದೋನ್ನತಿ, ಸೈನ್ಯದ ಪೂರೈಕೆಯ ಹಾದಿಯ ಸುಗಮಗೊಳಿಸುವಿಕೆ ಮತ್ತು ಮೇಲ್ವಿಚಾರಣೆ ಹಾಗೂ ಸೈನ್ಯದ ಖರ್ಚಿನ ಮೇಲೆ ನಿಗಾ ವಹಿಸುವಿಕೆಗೆ ಸಂಬಂಧಪಟ್ಟಿದೆ.

೧೧. ಈ ಐದು ಅಂಶಗಳೂ ಪ್ರತಿ ಸೇನಾಧಿಪತಿಗೆ ಅರಿವಿರಬೇಕು, ಇದನ್ನು ಅರಿತವನೇ ಜಯಶೀಲನಾಗುತ್ತಾನೆ, ಸೋಲು ಅವನ ಬಳಿ ಸುಳಿಯದು.

೧೨. ಆದ್ದರಿಂದ ಸೇನಾ ಸ್ಥಿತಿಗತಿಗಳನ್ನು ನಿರ್ಧರಿಸುವ ಮುಂಚೆ ಕೇಳಿಕೊಳ್ಳಬೇಕಾದ ಪ್ರಶ್ನೆಗಳು


೧೩.

. ನೈತಿಕತೆಗೆ ಯಾವ ರಾಷ್ಟ್ರ ಹೆಚ್ಚಿನ ಒತ್ತು ಕೊಡುತ್ತದೆ. ?
. ಇಬ್ಬರೂ ಸೇನಾಧಿಪತಿಗಳಲ್ಲಿ ಯಾರು ಹೆಚ್ಚು ಕಾರ್ಯಸಾಧನ ಶೂರರು?
. ಲೌಕಿಕ ಮತ್ತು ಅಲೌಕಿಕಗಳ ಸಹಾಯಕ ಅಂಶಗಳು ಯಾರ ಕಡೆಗಿವೆ ?
. ಶಿಸ್ತು ಯಾವ ಕಡೆ ಕಟ್ಟುನಿಟ್ಟಾಗಿ ಪಾಲಿಸಲ್ಪಟ್ಟಿದೆ?
. ಯಾವ ಸೈನ್ಯ ಬಲಶಾಲಿಯಾಗಿದೆ?
. ಯಾವ ಕಡೆಯ ಸೈನಿಕರು ಮತ್ತು ಅಧಿಕಾರಿಗಳು ಚೆನ್ನಾಗಿ ತರಬೇತಾಗಿದ್ದಾರೆ?
. ಯಾವ ಸೈನ್ಯದಲ್ಲಿ (ಸಾಧನೆಗೆ) ಬಹುಮಾನವೂ (ತಪ್ಪಿಗೆ) ಶಿಕ್ಷೆಯೂ ನಿಯಮಿತವಾಗಿ ಜಾರಿಗೆ ಬಂದಿದೆ?


೧೪. ಈ ಏಳು ಪ್ರಶೆಗಳನ್ನು ಕೂಲಂಕಷವಾಗಿ ಪರಿಶೀಲಿಸುವುದರಿಂದ ಜಯವೇ ಅಥವಾ ಅಪಜಯವೇ ಎಂದು ಹೇಳಬಹುದು.

೧೫. ನನ್ನೀ ಸಲಹೆಗಳನ್ನು ಪಾಲಿಸುವ ಸೇನಾಧಿಪತಿಗೆ ಗೆಲವು ಶತಸಿದ್ಧ. ಅವನ ಪದವಿ ಮುಂದುವರೆಯಲಿ. ನನ್ನ ಮಾತನ್ನು ಕೇಳದ ಸೇನಾಧಿಪತಿಗೆ ಸೋಲಿಲ್ಲದೆ ಬೇರೆ ದಾರಿಯಿಲ್ಲ. ಅಂತಹವರು ಇರುವುದಕ್ಕಿಂತಲೂ ಹೋಗುವುದು ಮೇಲು.

೧೬. ಈ ಸಲಹೆಗಳ ಲಾಭವಲ್ಲದೆ, ಸಾಮಾನ್ಯ ನಿಯಮಗಳಿಗೆ ಹೊರತುಪಡಿಸಿದ ಅನುಕೂಲಕರ ಸನ್ನಿವೇಶಗಳುಂಟಾದರೆ ಎಚ್ಚರಿಕೆಯಿಂದ ಗಮನಿಸುತ್ತಿರಬೇಕು.

೧೭. ನನ್ನೀ ಸಲಹೆಗಳಲ್ಲದೆ, ಸನ್ನಿವೇಶಗಳು ಅನುಕೂಲಕರವಾಗಿದ್ದರೆ ರಣನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.

೧೮. ಎಲ್ಲಾ ಯುದ್ದಗಳೂ ತಂತ್ರಗಾರಿಕೆಯನ್ನೇ ಅವಲಂಬಿಸಿವೆ.

೧೯. ಆದ್ದರಿಂದ ದಾಳಿ ನಡೆಸುವ ಶಕ್ತಿಯಿದ್ದರೂ ಇಲ್ಲದವರಂತೆ, ನಮ್ಮ ಬಲ ಪ್ರಯೋಗಿಸುತ್ತಿದ್ದಾಗಲೂ ಏನೂ ಮಾಡದವರಂತೆ, ಹತ್ತಿರವಿದ್ದಾಗಲೂ ಶತ್ರು ನಾವು ದೂರವಿರುವಂತೆ ನಂಬುವಂತೆ ಮಾಡಬೇಕು. ನಾವು ದೂರವಿದ್ದಾಗ ಹತ್ತಿರದಲ್ಲೇ ಇರುವಂತೆ ಶತ್ರುವಿಗೆ ಕಾಣಿಸಿಕೊಳ್ಳಬೇಕು.

೨೦. ಶತ್ರುವನ್ನು ಅಜಾಗರೂಕತೆಯ ಬಲೆಯಲ್ಲಿ ಬೀಳುವಂತೆ ಗಾಳ ಹಾಕಬೇಕು. ಅರಾಜಕತೆ ಸೃಷ್ಟಿಯಾದೊಡನೆ ಮೇಲೆಬಿದ್ದು ಅವನನ್ನು ಮಣಿಸಬೇಕು.

೨೧. ಶತ್ರುವು ಎಲ್ಲಾರೀತಿಯಲ್ಲೂ ಸುರಕ್ಷಿತನಾಗಿದ್ದರೆ, ಅವನ ದಾಳಿಗೆ ಸಿದ್ದರಾಗಿ ಕಾಯಬೇಕು. ನಮಗಿಂತಲೂ ಬಲಶಾಲಿಯಾಗಿದ್ದರೆ ಅವನಿಂದ ತಪ್ಪಿಸಿಕೊಳ್ಳಬೇಕು.

೨೨. ಶತ್ರುವಿನ ಕೋಪ ಮೂಗಿನ ತುದಿಯಲ್ಲಿದ್ದರೆ ಅವನನ್ನು ರೊಚ್ಚಿಗೇಳಿಸಬೇಕು, ನೀವು ಬಲಹೀನರಂತೆ ತೋರಿಸಿಕೊಂಡು ಅವನು ದಾಳಿ ಮಾಡುವಂತೆ ಪ್ರಚೋದಿಸಬೇಕು.

೨೩. ಶತ್ರು ವಿಶ್ರಾಂತಿ ಪಡೆಯುತ್ತಿದ್ದರೆ ಅದಕ್ಕೆ ಅವಕಾಶವನ್ನೇ ಕೊಡಬಾರದು.

೨೪. ಶತ್ರು ಸಿದ್ಧನಾಗಿಲ್ಲದಿರುವಾಗ ದಾಳಿ ಮಾಡಬೇಕು. ನಮ್ಮನ್ನು ನಿರೀಕ್ಷಿಸಿಯೇ ಇರದ ಜಾಗದಲ್ಲಿ ಕಾಣಿಸಿಕೊಳ್ಳಬೇಕು.

೨೫. ಜಯದೆಡೆಗೆ ನಮ್ಮನ್ನು ಕೊಂಡೊಯ್ಯಬಲ್ಲ ಅಸ್ತ್ರಗಳ ಸುಳಿವೂ ನಮ್ಮ ಶತ್ರುವಿಗೆ ಸಿಗದಂತಿರಬೇಕು.

೨೬. ಗೆಲ್ಲುವ ಸೇನಾಧಿಪತಿ ಯುದ್ಧಕ್ಕೆ ಮೊದಲೇ ಹಲವಾರು ಬಾರಿ ಲೆಕ್ಕಾಚಾರ ಹಾಕಬೇಕು.

ಕೆಲವೇ ಲೆಕ್ಕಾಚಾರಗಳ ಸೇನಾಧಿಪತಿ ಸೋಲುತ್ತಾನೆ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟೂ ಕರಾರುವಕ್ಕಾಗಿ ಮತ್ತು ಹೆಚ್ಚಾಗಿ ಲೆಕ್ಕಾಚಾರ ಮಾಡಬೇಕು. ಈ ಲೆಕ್ಕಾಚಾರಗಳ ಆಧಾರದ ಮೇಲೆಯೇ ಸೋಲು ಗೆಲವುಗಳನ್ನು ನಾವು ಮುಂಗಾಣಬಹುದು.

No comments:

Post a Comment