Pages

Tuesday, August 24, 2010

ಅಲ್ಲಿಲ್ಲಿಂದ

//೩.ಹದಿಮೂರು ಪಕ್ಷಗಳ ಹೊಂದಾಣಿಕೆಯ ಸರಕಾರಕ್ಕಿಂತ ಎರಡೇ ಪಕ್ಷದ ಬಹುಮತದ ಸರಕಾರ ನಿಭಾಯಿಸಲು ಕಡಿಮೆ ಕಷ್ಟ.
ಒಂದೇ ಪಕ್ಷದ ಸರಕಾರ ನಿಭಾಯಿಸಲು ಯಡ್ಯೂರಪ್ಪನವರ ಕಷ್ಟ ನೋಡಿಲ್ಲವೇ..!

//೫.ಇದರಿಂದ ರಾಜ್ಯ ಮಟ್ಟದ ಪಕ್ಷಗಳು ಕೇಂದ್ರ ಸರ್ಕಾರವನ್ನು ತಮ್ಮ ಬೇಡಿಕೆಗಳಿಗಾಗಿ ಬ್ಲಾಕ್ ಮೇಲ್ ಮಾಡುವುದು ತಪ್ಪುತ್ತದೆ
ಇಲ್ಲದಿದ್ದರೆ ರಾಜ್ಯಗಳ ಅದರಲ್ಲೂ ಹಿಂದಿ ಮಾತನಾಡದ ರಾಜ್ಯಗಳ ಮಾತುಗಳನ್ನು ಕೇಂದ್ರ ಸರ್ಕಾರ ಕೇಳುವುದೇ..?

//೬.ಸಣ್ಣ ಪುಟ್ಟ ಪಕ್ಷಗಳು ಚುನಾವಣೆಯಲ್ಲಿ kingmaker ಪಾತ್ರ ವಹಿಸಿ ಸರಕಾರವನ್ನು ಬುಗುರಿಯಾಡಿಸುವುದು ತಪ್ಪುತ್ತದೆ
ಹೀಗೆ ಮಾಡಬೇಕಾಗಿರುವುದು ಪ್ರಜಾಪ್ರಭುತ್ವದ ಅಂಗ ಅಲ್ಲವೇ..? ನಾಯಕನಾದವನು ದಕ್ಷನಾಗಿ ಎಲ್ಲರನ್ನೂ ಜೊತೆಯಲ್ಲಿ ಕೊಂಡೊಯ್ಯಬೇಕು.

//೭.ಕಮ್ಯೂನಿಸ್ಟರ ಹೊರಗಿನಿಂದ ಬೆಂಬಲ ಕೊಡುವ "ಅಧಿಕಾರ ಬೇಕು ಜವಾಬ್ದಾರಿ ಬೇಡ" ಧೋರಣೆಯಿಂದ ಕಾಂಗ್ರೆಸ್ ಪಾರಾಗುತ್ತದೆ.
ಅಧಿಕಾರ ಬೇಕು ಜವಾಬ್ದಾರಿ ಬೇಡ ಎನ್ನುವ ಧೋರಣೆಗಿಂತ, ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಕಮ್ಯುನಿಸಂ ಮುಂದೇನೆಂದು ಅರಿಯದೆ ಕುಳಿತಿದೆ. ಅಲ್ಲಿಯೂ ಬೇರು ಮಟ್ಟದ ಚಿಂತಕರ ಕೊರತೆ ಎದ್ದು ಕಾಣುತ್ತಿದೆ.

//೮.ಬೀಜೇಪಿ ಸರಕಾರಕ್ಕೆ ಬಂದರೆ ಭಜರಂಗ ದಳ ಮೊದಲಾದ fringe elements ಗಳ ಹಾವಳಿ ಬಹುಷಃ ಕಮ್ಮಿಯಾಗಬಹುದು
ನನ್ನ ಲೆಕ್ಕದಲ್ಲಿ ಇದು ಜಾಸ್ತಿಯಾಗಬಹುದೆನ್ನೆಸಿತ್ತದೆ....:) ಅಲ್ಲದೆ ಇವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳದ ಮಾತೃ ಪಕ್ಷ ತನ್ನ ರಾಜಕೀಯ ನಡತೆಯನ್ನು ಹೇಗೆ ರೂಢಿಸಿಕೊಳ್ಳುತ್ತದೆ.

//೯.ಸದ್ಯ ಪಾಕಿಸ್ತಾನದಲ್ಲಿ ತಾಲಿಬಾನ್ ಹಾವಳಿಯಿಂದ ಭಾರತಕ್ಕೂ ತೀವ್ರ ಗಂಡಾಂತರದ ಸಂಭವ ಇರುವಾಗಿ ನಮ್ಮ ಎರಡೂ ಪ್ರಧಾನ ಪಕ್ಷಗಳು ಒಟ್ಟುಗೂಡಿ ಭಾರತದ ಭದ್ರತೆಗೆ ಗಮನ ಕೊಡಬೇಕಾದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ
ರಕ್ಷಣೆಯ ವಿಷಯದಲ್ಲಿ ಭಾರತದ ರಾಜಕೀಯ ಪಕ್ಷಗಳು ಸುಮಾರಾಗಿ ಒಗ್ಗಟ್ಟಾಗಿಯೇ ಇವೆ.

ಪ್ರಜಾಪ್ರಭುತ್ವದಲ್ಲಿ ಸರ್ಕಾರ ನಡೆಸುವ ಪಕ್ಷದಷ್ಟೇ ಪ್ರಮುಖ ಅಂಗ ವಿರೋಧ ಪಕ್ಷ. ಏಕೆಂದರೆ ಸರ್ಕಾರದ ಮುಖ್ಯ ಕೆಲಸ ಯೋಜನೆಗಳನ್ನು ರೂಪಿಸುವುದಷ್ಟೇ. ಇದು ಶಾಸಕಾಂಗದ ಕೆಲಸ. ಕಾರ್ಯಾಂಗ ಅದನ್ನು ನಿರ್ವಹಿಸಬೇಕು. ಈಗೀಗ ಕಾರ್ಯಾಂಗ ಕೇವಲ ಶಾಸಕಾಂಗ ಹೇಳುದಂತೆ ನಡೆಯುವ ಕೀಲುಗೊಂಬೆಯಾಗಿರುವುದು, ಮತ್ತು ಎರಡೂ ಕಡೆಯೂ ಭ್ರಷ್ಟರಿರುವುದು ಸಮಸ್ಯೆಗಳ ಮೂಲ. ನ್ಯಾಯಾಂಗ ಈ ಎರಡರ ಬೆಂಬಲವಿಲ್ಲದೆ ಕೆಲಸ ಮಾಡಲಾಗದು. ಅದಕ್ಕೇ ಅದು ಇವನ್ನೇ ಅನುಸರಿಸುತ್ತಿದೆ.

ಈ ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳಲಿ ಬಿಡಲಿ, ಶಾಸಕಾಂಗದ ಕಾರ್ಯ ನಿರ್ವಹಣೆಗೆ ಚ್ಯುತಿ ಬರುವುದಿಲ್ಲ. ಎಲ್ಲಿಯವರೆಗೆ ಚಿಂತನೆಯ ಬಲವಿಲ್ಲದ, ನಿಯತ್ತಿಲ್ಲದ ಮತ್ತು ಹಣಬಲದ ನಾಯಕತ್ವವಿರುತ್ತದೋ, ಅಲ್ಲಿಯವರೆಗೆ ಈ ಹಣೆ ಬರಹ ತಪ್ಪಿದ್ದಲ್ಲ.


ಆದರೆ ಇನ್ನೂರು ಜನ ಒಪ್ಪಿದ್ದಾರಲ್ಲ.. ಅದೇ ನ್ಯಾಯ. ಪ್ರಜಾಪ್ರಭುತ್ವದಲ್ಲಿ ಬೇರೆ ಏನು ಮಾಡಲು ಸಾದ್ಯ. ನಿಜವಾಗಿಯೂ ಮಾಡಬಹುದಾದ ಸಂಗತಿಯೆಂದರೆ, ಉಳಿದವರು ಚುನಾವಣೆಯಿಂದ ಹೊರಗುಳಿದು, ಸೂಕ್ತ ಅಭ್ಯರ್ಥಿಯನ್ನು ಗೆಲ್ಲಿಸಲು ಸಹಕಾರಿಯಾಗುವುದು. ಆದರೆ, ಎಲ್ಲರೂ ಮುಂದುವರೆಯಲು ಹೊರಟಾಗ ಯಾರಿಗೆ ಬಹುಮತವಿರುತ್ತದೆಯೋ ಅವರ ನಾಯಕತ್ವ ಒಳಿತು. ಅಲ್ಲದೇ ಇದೇನೂ ಶಾಶ್ವತವಲ್ಲವಲ್ಲಾ..? ಐದು ವರುಷಗಳಲ್ಲಿ ಮತ್ತೆ ಚುನಾವಣೆ ಬರುತ್ತದೆ.!

No comments:

Post a Comment