Pages

Tuesday, April 13, 2010

ನಾ ನಿನ್ನ ಮರೆಯಲಾರೆ

ಕಳೆಯಿತೇನು ನಾಲ್ಕು ವರುಷ
ನಿನ್ನನೊಯ್ದು ಕಾಲನು
ನಾ ನಿನ್ನ ಮರೆಯಲಾರೆನು.

ಗುಟ್ಟೊಂದ ಹೇಳಿದ ಪರೋಪಕಾರಿ ನೀನು
ಚಂದದ ನುಡಿಯನಾಡುವ
ಗಂಧದ ಗುಡಿಯ ರಾಜಕುಮಾರನು

ದೇಶ ಕಾಲ ಗಡಿಯ ಮೀರಿ ,
ಸಾಕ್ಷಾತ್ಕಾರದೊಲವ ತೋರಿ ,
ಸಂಧ್ಯಾರಾಗದಿಂಪು ತಂದ ಸಿಪಾಯಿ ರಾಮನು.

ತಾಯಿಗೆ ತಕ್ಕ ಮಗ ,ಜಗಮೆಚ್ಚಿದ ಮಗ
ಮನಮೆಚ್ಚಿದ ಮಡದಿಗೊಡೆಯ
ಹೃದಯಗೆದ್ದ ನೀನೊಬ್ಬ ಕಳ್ಳ , ಒಳಗಣ್ಣ ತೆರೆದ ಬೇಡರ ಕಣ್ಣಪ್ಪನು

ನಟಸಾರ್ವಭೌಮ -ಗಾನಗಂಧರ್ವ
ಅಪೂರ್ವಸಂಗಮದ ಒಂದು ಮುತ್ತಿನ ಕತೆ ನೀನು
ನಿನ್ನ ಕಂಡ ಭಾಗ್ಯವಂತರು ನಾವು . ಅಮರ ನಿನ್ನ ನೆನಪು.

ಪದ್ಮಭೂಷಣ, ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರ
ಕಳೆಯಲೇಳು ಸಾವಿರವರುಷ ನಾ ನಿನ್ನ ಮರೆಯಲಾರೆನು.

No comments:

Post a Comment