Pages

Friday, April 01, 2011

ಇಂದು ಎನಗೆ ಗೋವಿಂದ

ಇಂದು ಎನಗೆ ಗೋವಿಂದ
ನಿನ್ನಯ ಪಾದಾರವಿಂದವ
ತೋರೋ ಮುಕುಂದನೇ ಮುಕುಂದನೇ..


ಸುಂದರ ವದನನೇ
ನಂದ ಗೋಪಿಯ ಕಂದ
ಮಂಥರೋದ್ದಾರ ಆನಂದ
ಇಂದಿರಾ ರಮಣಾ

ನೊಂದೆನಯ್ಯಾ
ಭವ ಬಂದನದೊಳು ಸಿಲುಕಿ
ಮುಂದೆ ದಾರಿ ಕಾಣದೇ
ಕುಂದಿದೆ ಜಗದೊಳು
ಕಂದನಂತೆಂದೆನ್ನಾ
ಕುಂದುಗಳಾ ಎಣಿಸದೇ
ತಂದೆ ಕಾಯೋ ಕೃಷ್ಣ
ಕಂದರ್ಪ ಜನಕನೇ

ಧಾರುಣಿಯೊಳು ಬಲು
ಭಾರ ಜೀವನನಾಗಿ
ದಾರಿ ತಪ್ಪಿ ನಡೆದೆ
ಸೇರಿದೆ ಕುಜನರ
ಆರೂ ಕಾಯುವರಿಲ್ಲ
ಸಾರಿದೇ ನಿನಗಯ್ಯ
ವೀರ ವೇಣುಗೋಪಾಲ
ಪಾರುಗಾಣಿಸೋ ಹರಿಯೇ

No comments:

Post a Comment