Pages

Saturday, July 25, 2009

Tuesday, June 23, 2009

ಮಗನಿಗೊಂದು ಬುದ್ದಿಮಾತು

ಮನದ ಮಾತುಗಳು ಇರಲಿ ಮೌನದಲಿ.
ಗುರಿಯಿರದೆ ಚಿಂತನೆಗಳು ಕೃತಿಯಾಗದಿರಲಿ.
ಒಂದಾಗು ಎಲ್ಲರಲಿ, ಅತಿರೇಕವಿರದಿರಲಿ.
ಒರೆ ಹಚ್ಚಿ ನೋಡಲುಬೇಕು ,
ಗೆಳೆತನವ ಬೆಳೆಸುವ ಮುನ್ನ
ಹೃದಯ ಬಂಧಿಸಿರಬೇಕು ,
ಸ್ನೇಹ ಸಂಕೋಲೆಗಳಲಿ,ಬೇಕಿಲ್ಲ ಚಿನ್ನ.
ಸಿಕ್ಕಸಿಕ್ಕವರೆಲ್ಲ ಸ್ನೇಹಕಱರೇನಲ್ಲ ,
ಎಲ್ಲರನು ನೀನನಸುರಿಸಬೇಕಿಲ್ಲ.
ಬೇಡ ಕಾದಾಟ ಯಾರೊಡನೆಯೂ,
ಕಾದಿದರೆ ಅರಿಗಿರಲಿ ನಿನ್ನರಿವು ಕಾಳಗದಮುನ್ನ.
ಸಹನೆಯಲಿ ನೀ ಕೇಳು ಸರ್ವರ ನುಡಿಯ.
ನುಡಿದಾರೆ ನುಡಿ ಯೋಗ್ಯರಲಿ ಮುತ್ತಿನ ಹಾರ
ನಡತೆಯಲಿ ಸಿರಿತನವಿರಲಿ,
ಉಡುಗೆ ತೊಡುಗೆಗಳಿಗೂ ಉಂಟು ಬೆಲೆಯು,
ಲೆಕ್ಕದಾ ಅರಿವಿರಲಿ , ಅಳತೆ ಮೀರದೆ ಇರಲಿ.
ತರದು ಘನತೆಯ ಬರಿಯಬ್ಬರವು,
ಸಾಲದ ಹಂಗಿಲ್ಲದಿರಲಿ ,
ತರುವುದೇ ಬೇಡ,ಇನ್ನು ಕೊಡುವುದೇಕೆ?
ನೀನು ಸಾಲಿಗನಾದರೆ ಕಳೆಯಬಹುದು
ಕೆಳೆಯನನೂ ಸಾಲದ ಜೊತೆಗೆ
ಸಾಲದ ಹೊರೆ ನಿನಗಾದರೆ ,
ನಿನಗಿರದು ಆತ್ಮಗೌರವದ ರಕ್ಷೆ
ಎಲ್ಲಕ್ಕೂ ಮಿಗಿಲಾಗಿ ,
ಜೀವನವಿರಲಿ ಆತ್ಮಸಾಕ್ಷಿಗನುಗುಣವಾಗಿ
ಭಯವಿರದು ದೇವನಿಗೆ ಉತ್ತರಿಸಲು,
ಮನುಜರ ಲೆಕ್ಕವಿನ್ನೇನು..?
ಹೋಗಿ ಬಾ ಮಗು.. ಕಾಯಲಿ ನಿನ್ನನೀ ಹರಕೆಯು.

(Polonius advice to Laertes -- From Hamlet by William Shakespeare)

Rakesh Sharma -- The First Indian Austronaut

I remember the day in 1984, the headlines in newspapers read "Sare Jahan Se Achcha". This was the message given by Rakesh Sharma, flying astronaut, to Smt.Indiragandhi, then Prime Minister of India on satellite to earth communication systems, with the whole world listening when asked "how India looks from space?". He inspired dreams in me, and crores of children like me.

Thank you sir..

Here is his blog

Wednesday, June 10, 2009

SSL sigining

### Generate a server key and request for signing (csr).
openssl genrsa -des3 -out server.key 4096
openssl req -new -key server.key -out server.csr

####Sign the certificate signing request (csr) with the self-created Certificate Authority (CA)

openssl x509 -req -days 365 -in server.csr -CA ca.crt -CAkey ca.key -set_serial01 -out server.crt


####Make a server.key which doesn't cause Apache to prompt for a password.

openssl rsa -in server.key -out server.key.insecure
mv server.key server.key.secure
mv server.key.insecure server.key

####copy them into position.
cp server.key /etc/apache2/ssl.key
cp server.crt /etc/apache2/ssl.crt
cp server.csr /etc/apache2/ssl.csr

### Restart apache
/etc/init.d/apache2 restart

Tuesday, June 09, 2009

ಆಯಸ್ಸು .

ಭುವಿಗೆನ್ನ ಕಳುಹಿಸುವ ಮುಂಚೆ
ದೇವನ ಜೊತೆ ಮಾತಿಗೆ ಕುಳಿತೆ.
ಒಂದಷ್ಟು ವಿಷಯ ಫೈನಲೈಸ್
ಆಗಬೇಕಿತ್ತು ಬೇಗ.

ಪೂರ್ತಿ ನೂರು ವರುಷ
ಬದುಕಬೇಕು ನಾನು .
ಏಕೆ ಎಂದೂ ಕೇಳದೆ
ನೀಡಿದ ವರವನು ದೇವನು .

ಮತ್ತೆ ಕೇಳಿದ ,
ಭೂಮಿಯಲ್ಲಿ ಬದುಕಲು ಬಯಸುವೆ ಎಲ್ಲಿ ?
ನಾನು ಹೇಳಿದೆ,
ಕುರಿತೋದದೆಯುಂ ಕಾವ್ಯಪ್ರಯೋಗ
ಪರಿಣಿತಮತಿಗಳಿರುವ ಬೆಂಗಳೂರಲ್ಲಿ
ಹಾಗಿದ್ದರೆ ಮುರಿಯುವೆ ಹತ್ತು .
ಬೆಂಗಳೂರಲ್ಲಿ ಬದುಕುವ ಗತ್ತು .

ಹೋದರೆ ಹೋಯಿತು ಹತ್ತು .
ಬೆಂಗಳೂರಿನ ಗಮ್ಮತ್ತು ..
ಹತ್ತಕ್ಕೂ ಮಹತ್ತು .

ಮತ್ತೊಂದಿದೆ ಪ್ರಶ್ನೆ ಬೇಕೆ ನಿನಗೆ ಸಿಗರೇಟು ?
ಸಾಕೆ ಬೆಂಗಳೂರಿನ ಹೊಗೆ ಘಾಟು..?
ಹುಟ್ಟಿದ ಮೇಲೆ ಸೇದದೆ ಹೋದರೆ ಸಿಗರೇಟು
ಬದುಕಿಗೆ ಏನಿದೆ ರೇಟು.
ಸರಿ ಹಾಗಾದರೆ ತೆಗೆಯುವ ಇನ್ನೈದೇ ವರ್ಷ .
ನನಗೋ ಬಲು ಹರುಷ .

ಬಸ್ಸಲಿ ಓಡಾಡುವೆಯೋ, ಇಲ್ಲ
ನಿನ್ನದೇ ವಾಹನ ಬೇಕೊ?
ಏನೇ ಆದರು , ಟ್ರಾಫಿಕ್ ಜಾಮಿಗೆ
ಐದೇ ವರ್ಷದ ರೆಂಟು
ಹೋದರೆ ಐದು , ಕಳೆಯುವುದೇನು ಗಂಟು.

ಪಬ್ಬಿದೆ,ಬಾರಿದೆ, ಥರ ಥರ ಡ್ರಿಂಕ್ಸ್ ಇದೆ ..
ಬೇಕೆ ನಿನಗೆ ಗುಂಡು
ಕುಡಿಯದೆ ಉಳಿದರೆ ನಾನಾಗುವೆನೆ
ಬೆಂಗಳೂರಿನ ಗಂಡು ?
ಕುಡಿತ ಕೆಟ್ಟದು ಎನ್ನುವರು
ಕುಡಿದು ಬದುಕಿದರೆ ಲಾಂಗ್ ಲೈಫ್
ಬೇರೆಯವರಿಗದು ರಾಂಗ್ ಟೈಪ್
ಅದಕೇ ತೆಗೆಯುವೆ ಇನ್ನೂ ಹತ್ತು
ಉಳಿದಿದೆ ಇನ್ನೂ ಎಪ್ಪತ್ತು .

ಎಲ್ಲಾ ಓಕೆ. ಇನ್ನೊಂದೇ ಪ್ರಶ್ನೆ .
ಮದುವೆಯು ನಿನಗೆ ಬೇಕೆ.. ?
ಮದುವೆಯು ಇಲ್ಲದೆ ಬದುಕುವುದಾದರೆ
ಆ ಥರ ಬದುಕೇಕೆ ..?

ಸರಿ ಹಾಗಾದರೆ ಮದುವೆಯ ಲೆಕ್ಕಕೆ ಮೂವತ್ತು.
ಉಳಿದಿದೆ ನಿನಗೆ ನಲವತ್ತು.
ಜ್ಞಾನೋದಯವಾಗುವ ತನಕ ಮರೆತಿರು ಈ ಲೆಕ್ಕ
ಎಂದೇನೋ ಹೇಳಿ ಭೂಮಿಗೆ ಕಳಿಸಿದ ಠಕ್ಕ.

ಮೊನ್ನೆ ತುಂಬಿತು ಮೂವತ್ತೇಳು.
ಲೆಕ್ಕವು ನೆನಪಿಗೆ ಬಂತು.
ಉಳಿದ ದಿನದಲ್ಲಿ ಏನಾದರು ಸಾಧಿಸಲು
ಮಡದಿ ಮಕ್ಕಳ ಗೋಳು.

ರಾಟೆ

ವರಗಳ ಪೆಟ್ಟಿಗೆಯ ಬಳಿ ಕುಳಿತು ನುಡಿದ ದೇವ
ಮೊದಲು ಮಾನವನ ಮಾಡಿದಾಗ
ಜಗದ ಸೊಬಗೆಲ್ಲ ಇವನ ಬಳಿ ಬಿದ್ದಿರಲಿ
ಕೊಡುವೆ ಎಲ್ಲ ವರಗಳನಿವಗೆ ನನಗಿರುವ ಶಕ್ತಿಯಲಿ

ಶಕ್ತಿಯಿತ್ತನು ಮೊದಲು, ಸೌಂದರ್ಯ ಹಿಂದೆ, ಬುದ್ದಿ ಮತ್ತೆ ಗೌರವ
ಜತೆಗಷ್ಟು ಸಂತಸ. ಹೀಗೆ ಕೊಟ್ಟನು ದೇವ ಎಲ್ಲವನ್ನೂ,
ಕೊನೆಯದೊಂದನು ಕೊಡುವ ಮುನ್ನ ಸ್ವಲ್ಪ ನಿಂತನು.
ಅವನೆಲ್ಲ ವರಗಳಲಿ ನೆಮ್ಮದಿಯದೊಂದೇ ಉಳಿದಿರುವುದ ಕಂಡನು.

ಈ ರತ್ನವನೂ ನಾನು ನನ್ನೀ ಕೂಸಿಗೆ ಕೊಟ್ಟರೆ, ನುಡಿದನವ
ಮೆಚ್ಚುವನು ನನ್ನ ವರಗಳನು, ಮರೆತು ನನ್ನ.
ಲೌಕಿಕದೆ ಮುಳುಗುವನು, ಮರೆತುಬಿಡುವನು ತನ್ನ ಗಮ್ಯ.
ಕೊಟ್ಟೆನಾದರೆ ಈ ವರವ , ಕಳೆದುಹೋದೀತು ಜೀವನ ರಮ್ಯ.

ಇರಲಿ ಮಿಕ್ಕೆಲ್ಲ ಅವನ ಬಳಿಯೇ
ನೆಮ್ಮದಿಯು ಅವನಿಗಿನ್ನು ಮರೀಚಿಕೆಯೇ
ಹಣವಿರಲಿ, ಕೀರ್ತಿ ಗೌರವಗಳಿರಲಿ, ಇರಲಿ ಸಾವಿರ ಸೌಖ್ಯ.
ನನ್ನೆಡೆಗೆ ಪ್ರೀತಿ ಗೌರವದಲಿ, ಬದುಕಿದರೆನ್ನೆದೆಯಲೇ ಅವನಿಗೆ ಮೋಕ್ಷ.

ಜಾರ್ಜ್ ಹರ್ಬಟ್ ಕವಿಯ "The Pulley" ಕವಿತೆಯ ಭಾವಾನುವಾದ.

Wednesday, June 03, 2009

ಮೋಹದ ಬಲೆ

ಚಿಮ್ಮಿತು ಚಿಮ್ಮಿತು
ಪ್ರೀತಿಯ ಒರತೆ
ಹೊಮ್ಮಿತು ಹೊಮ್ಮಿತು
ಚಿಗುರಿ ಪ್ರೇಮಲತೆ

ಸೇರಿತು ಹಾಡಿತು
ಭಾವಗಳ ಸಂತೆ
ಬೆರೆಯಿತು ಮರೆಯಿತು
ಜೀವ ಎಲ್ಲ ಚಿಂತೆ.

ಮಿಡುಕಿತು ನುಡಿಯಿತು
ಮೋಹನ ವೀಣೆ
ಆದಿಯೋ ಅಂತ್ಯವೋ
ಅರಿಯೆನು ಜಾಣೆ.

ಸರಿಯಿತು ತೆರೆಯಿತು
ಮೋಹದ ಬಲೆ
ಮೈಮರೆಸಿ ಮನತೆರೆಸಿತು
ನಿಸರ್ಗದ ಕಲೆ.

Wednesday, May 27, 2009

opensuse11.1 and oracle installation

Installation of opensuse11.1 x86_64 was plain enough.
Download and install orarun.rpm this has prerequiste of the libc packages. install them if prompted.
Also this will create user oracle and groups oinstall and dba. and create /etc/profile.d/oracle.sh script.
Set the variables at this script tweaked to your settings.

Su as oracle user and extract the oracle files

#gunzip oracle_version.cpio.bz
#cpio -imdv < oracle_version.cpio

unset LD_PRELOAD ## this will releive you some pain if you donot want to see warning messages

run installer as oracle user (you need to export DISPLAY and xhost+

things will run smooth. But as the 64 bit systme dependencies are there.. you may run into problems later. the issues I faced
1. cannot find -lpthread
solution :
zypper install glibc-32bit
zypper install glibc-devel-32bit

2. Cannot find -lgcc
solution:
zypper install gcc-32bit

3./opt/oracle/product/10.2/db_1/lib32//libclntsh.so: file not recognized: File truncated
solution:
cd /opt/oracle/product/10.2/db_1/lib32
ln -s /opt/oracle/product/10.2/db_1/lib/libclntsh.so .

4. cannot find -lclntsh
solution
source /opt/oracle/product/10.2/db_1/bin/genclnts

and now.. undefined reference to "nnfyboot" i did not find solution for this. I post when I found solution

Thursday, May 21, 2009

ಒಂದು ಬುಡುಬುಡುಕೆ ಪ್ರಸಂಗ

ನಿನ್ನೆ ರಂಗಾಯಣದ ಭೂಮಿಗೀತದಲ್ಲಿ ನಾಟಕ ನೋಡಿ ಸುಖಿಸಿದ ಶಶಿಯವರ ಬ್ಲಾಗ್ ಓದಿ ನನಗೆ ಹೊಟ್ಟೆಕಿಚ್ಚಾಯಿತು. ಮೈಸೂರಿನ ಸಾಂಸ್ಕೃತಿಕ ವಾತಾವರಣದಲ್ಲಿ ಸುಖಿಸುವ ನನ್ನ ಹಳೆಯ ಗೆಳೆಯರನ್ನು ಕಂಡರೆ ನನಗೆ ಸ್ವಲ್ಪ ಹೊಟ್ಟೆಕಿಚ್ಚೇ..! ಆದರೆ ಈ ಬ್ಲಾಗ್ ನನ್ನ ಹಳೆಯ ನೆನಪುಗಳ ಕದ ತೆರೆದು ಮುಗುಳುನಗೆ ಮೆರೆಸಿದಾಗ, ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು.

ಮೈಸೂರಿನಲ್ಲೇ ನನ್ನ ಪೂರ್ತಿ ವಿದ್ಯಾಭ್ಯಾಸ ನಡೆದದ್ದು. ಶಾಲಾ ಕಾಲೇಜುಗಳಿಂದ ನಾಟಕ ಗಳಿಗೆ ಭಾಗವಹಿಸುತ್ತಿದ್ದ ನಾನು, ಆಗ ಮೈಸೂರಿನ ಪ್ರಸಿದ್ದ ರಂಗಸ್ಥಳಗಳೆಲ್ಲದರ ಮೇಲೂ ನಾಟಕ ಮಾಡಿದ್ದೇನೆಂದು ಹೇಳಿಕೊಳ್ಳಲು ಹೆಮ್ಮೆ. ಟೌನ್ ಹಾಲ್, ವಸ್ತುಪ್ರದರ್ಶನ, ಶಾರದಾವಿಲಾಸ ಕಾಲೇಜು , ಮರಿಮಲ್ಲಪ್ಪ, ಬನುಮಯ್ಯ, ಕಲಾಮಂದಿರ, ಜಗನ್ಮೋಹನ ಸಭಾಂಗಣ, ಜೆ.ಸಿ.ಇ. ಇನ್ನೂ ಹಲವು ನೆನಪಿಲ್ಲ. ಜೊತೆಗೆ ಗಣಪತಿ ಪೆಂಡಾಲ್ ಗಳ ಬಳಿಯೂ ನನ್ನ ಅಭಿನಯ ನಡೆದಿತ್ತು. ಇದರಲ್ಲಿ ಎರಡು ಘಟನೆಗಳು ಮರೆಯಲಾಗದಂತಹವುಗಳು.

ಅದು ಅಂತರ ಕಾಲೇಜು ನಾಟಕ ಸ್ಪರ್ಧೆ. ನೆಳಲು ಬೆಳಕು ಎಂದೇನೋ ಹೆಸರು ಇರಬೇಕು. ಮಹಾಜನ ಕಾಲೇಜಿನ ವಿಧಾರ್ಥಿಯಾಗಿ ನಾವು ಒಂದು ತಂಡ ಕಟ್ಟಿ ಆ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆವು. ನಾಟಕದ ಹೆಸರು ನೆನಪಿಲ್ಲ. ಆದರೆ ಶಂಕರ್ ಮುಂದಾಳತ್ವ ವಹಿಸಿದ್ದ. ಪಡುವಾರಹಳ್ಳಿಯ ಗೆಳೆಯ ವಿಜಿ ನಿರ್ದೇಶಕನಾಗಿದ್ದ. ಭೌತಶಾಸ್ತ್ರ ಅಧ್ಯಾಪಕರಾದ ನಂದಕುಮಾರರವರ್ ಒತ್ತಾಸೆ. ಒಂದು ಹುಡುಗಿಯನ್ನು ಮದುವೆಯಾಗಲು ಬರುವ ಮೂವರು ತರುಣರ ಕಥೆ. ಗೆಳೆಯ ಕೃಷ್ಣಕುಮಾರ್ ಕಾಲೇಜು ವಿಧ್ಯಾರ್ಥಿ. ನಾಟಕದ ಹುಚ್ಚಿನ ಅಡಿಗೆಯವನ ಪಾತ್ರದಲ್ಲಿದ್ದ ಗೆಳೆಯನ ಹೆಸರು ನೆನಪಿಲ್ಲ. ಮುಂದೆ ಅವನನ್ನು ಹೆಸರಿಸಬೇಕಾದರೆ ಭೀಮ ಎನ್ನುತ್ತೇನೆ. ನನ್ನದು ಬುಡುಬುಡುಕೆಯವನ ಪಾತ್ರ.

ಈ ನಾಟಕಕ್ಕಾಗಿ ಪ್ರಾಕ್ಟೀಸ್ ಮಾಡುತ್ತಿದ್ದಾಗ, ಗೆಳೆಯನ ಬಳಿಯಿಂದ ಕೇಳಿ ತೆಗೆದುಕೊಂಡು ಬಂದ ಸೈಕಲ್ ಕಾಲೇಜಿನ ಬಳಿ ಕಳುವಾಯಿತು . ಅದಕ್ಕಿಂತಲೂ ರೋಚಕ ಸಂಗತಿ ಎಂದರೆ, ನಾಟಕ ದ ಎರಡನೇ ದೃಶ್ಯದಲ್ಲಿ ನನ್ನ ರಂಗ ಪ್ರವೇಶ. ಬುಡುಬುಡುಕಿಯವನಾಗಿ ಅವರದೇ ಶೈಲಿಯಲ್ಲಿ ಏನೋ ಡೈಲಾಗ್ ಹೇಳಿಕೊಂಡು ಸ್ಟೇಜ್ ಮೇಲೆ ಬರಬೇಕು. ಬುಡುಬುಡುಕೆಯವರಂತೆಯೇ ಬುಡುಬುಡುಕೆ ಬಾರಿಸಬೇಕು. ಸಾಕಷ್ಟು ಅಭ್ಯಾಸ ಮಾಡಿದ್ದೆನಾದರೂ, ಶೈಲಿ ಇನ್ನೂ ಸಿದ್ದಿಸಿರಲಿಲ್ಲ. ಅದರಲ್ಲೂ ಅಷ್ಟು ದೊಡ್ಡ ವೇದಿಕೆಯ ಮೇಲೆ ... ಸ್ವಲ್ಪ ಎನೋ ಎಡವಟ್ಟಾಯಿತು. ಜೋರಾಗಿ ಬಾರಿಸಿದ ನನ್ನ ಕೈಯಿಂದ ಬುಡುಬುಡುಕೆ ಹಾರಿ ಹೋಗಿ ಕೆಳಗೆ ಬಿದ್ದುಬಿಟ್ಟಿತು...! ನನಗೆ ರಸಾವೇಷ ಭಂಗ.


ನನಗೆ ನಾಟಕ ಆಡಲು ಕಲಿಸಿದ್ದವರೆಲ್ಲಾ ಸಾಮಾನ್ಯವಾಗಿ ಒಂದೆರಡು ನಿಯಮಗಳನ್ನು ಹೇಳಿರುತ್ತಾರೆ. ಅದರಲ್ಲಿ ಒಂದು ತೀವ್ರವಾದ ಅವಶ್ಯಕತೆ ನಾಟಕದ ಸನ್ನಿವೇಶಗಳಲ್ಲಿ ಒಂದಾಗಿ ಬರದಿದ್ದರೆ ಪ್ರೇಕ್ಷಕರಿಗೆ ಎಂದೂ ಬೆನ್ನು ತೋರಿಸಬಾರದು ಎಂದು ನೆನಪು. ಬುಡುಬುಡುಕೆ ಹಾರಿ ನನ್ನ ಬೆನ್ನ ಹಿಂದೆ ಬಿದ್ದಿದೆ. ನನಗೆ ಒಂದು ಕ್ಷಣ ಏನೂ ತೋಚಲಿಲ್ಲ. ತಕ್ಷಣವೇ ಸಾವರಿಸಿಕೊಂಡೆ. ಮುಂದಿನ ಡೈಲಾಗುಗಳು ಸ್ವಲ್ಪ ಹೆಚ್ಚು ಕಮ್ಮಿ ಕೆಳಗಿನಂತೆ.


"ಜೈ.. ಮಹಾಕಾಳ . ಏನೋ ಬುಡುಬುಡಿಕೆ ನಿನಗೂ ಸ್ವಾತಂತ್ರ ಬೇಕೆಂದು ನನ್ನಿಂದ ದೂರ ಹೋದೆಯಾ..? ನನ್ನ ಶಕ್ತಿ ನಿನಗಿನ್ನೂ ಗೊತ್ತಿಲ್ಲ. ನೋಡೀಗ, ಎಲ್ಲಾ ನೋಡಿ .. ನನ್ನಿಂದ ತಪ್ಪಿಸಿಕೊಳ್ಳುವ ಈ ಬುಡುಬುಡಿಕೆ ತಾನಾಗಿ ನನ್ನ ಕೈ ಸೇರಬೇಕು ಹಾಗೆ ಮಾಡುತ್ತೇನೆ."
(ಏನೋ ಮಂತ್ರ ಹೇಳಿದಂತೆ ನಟಿಸಿ...) ಬಾ ಬಾ .
ಹಾ.. ಬರೋದಿಲ್ಲವಾ ತಾಳು.. ಮಾಡ್ತೀನಿ..
(ಇನ್ನೂ ಜೋರಾಗಿ ಮಂತ್ರ ಹೇಳುತ್ತಾ .. ತಾರಕ ಸ್ವರದಲ್ಲಿ... ) ಬಾ..ಬಾ..ಬಾ...

ಅಯ್ಯೊ .. ಇವತ್ತು ನನ್ನ ಮಂತ್ರ ಯಾಕೆ ಕೆಲಸ ಮಾಡುತ್ತಾ ಇಲ್ಲ. ಹೋ ... ಗೊತ್ತಾಯ್ತು. ಇವತ್ತು ಭಾನುವಾರ.. ನನ್ನ ಮಂತ್ರಶಕ್ತಿಗೆ ಇವತ್ತು ರಜೆ. ನಾನೇ ಹೋಗಿ ಎತ್ಕೋಬೇಕು."

ಹೀಗೆ ಹೇಳುತ್ತಾ ನಾನು ಬುಡುಬುಡುಕೆಯನ್ನೆತ್ತುಕೊಂಡರೆ ಪ್ರೇಕ್ಷಕರಲ್ಲಿ ನಗೆ ಬುಗ್ಗೆ. ಹಾಸ್ಯ ನಾಟಕದಲ್ಲಿ ನನ್ನ ಅಭಾಸ ತನ್ನಂತೆಯೇ ಮರೆಯಾಯ್ತೆಂದೂ ನನಗೂ ಖುಷಿ. ಮುಂದೆ ಭೀಮ ದೊಡ್ಡ ವೇದಿಕೆಯ ಮೇಲೆ ಮರೆತ ಡೈಲಾಗುಗಳನ್ನು ನಾಟಕದಲ್ಲಿ ಸಹಜವೆಂಬಂತೆ ನೆನಪಿಸಿಕೊಡುತ್ತಾ.. ನಾಟಕವನ್ನು ತೇಲಿಸಿದ್ದು. ಮರೆಯದ ಅನುಭವ. ಅದಕ್ಕಿಂತಲೂ ದೊಡ್ಡದೆಂದರೆ ಡೈಲಾಗು ಮರೆತ ಭೀಮನಿಗೆ ಉತ್ತಮನಟ ಪ್ರಶಸ್ತಿ ಬಂದದ್ದು. ಮರುದಿನದ ವಿಮರ್ಶೆಗಳಲ್ಲಿ ನನ್ನ ಪಾತ್ರವನ್ನೂ ಮೆಚ್ಚಿಕೊಂಡು ಬರೆದಿದ್ದರೆನ್ನಿ,

ಈ ನಾಟಕದ ಕತೆ ಇಲ್ಲಿಗೇ ಮುಗಿಯಲಿಲ್ಲ. ಕಾಲೇಜ್ ಡೇ ಗೆ ಇದೇ ನಾಟಕ ಆಡಿಸಲು ನಂದಕುಮಾರ್ ಸರ್ ನಿರ್ಧರಿಸಿ, ಕಾಲೇಜು ರಜೆ ಇದ್ದರಿಂದ ನನ್ನ ಮನೆಗೆ ಶಂಕರ್ ಕೈಯಲ್ಲಿ ಹೇಳಿಕಳಿಸಿದರು. ಅವನು ಮನೆಯ ಪಕ್ಕದ (ಪಡುವಾರಹಳ್ಳಿಯ) ಗೆಳೆಯನೊಬ್ಬನ ಜೊತೆ ನಮ್ಮ ಮನೆಗೆ ಬಂದ. ಅವನೊಂದಿಗೆ ಮಾತಾಡುತ್ತಾ.. "ಅಯ್ಯೋ ಈ ನಾಟಕ ಮಾಡಕ್ಕೆ ಹೋಗಿ ಸೈಕಲ್ ಕಳೆದೋಯ್ತು, ಇನ್ನೇನು ನಾಟಕ ಮಾಡುವುದು " ಅಂದೆ. ಜೊತೆಯಲ್ಲಿದ್ದ ಗೆಳೆಯ " ಯಾವ ಥರಾ ಸೈಕಲ್ಲು.. ಎಲ್ಲಿ ಕಳೆದದ್ದು ?" ಅಂದ. ಅದೇ ಕೆಂಪು ಬೆಂಡ್ ಹ್ಯಾಂಡಲ್ ಸೈಕಲ್. ನಮ್ಮ ರಮೇಶನದು . ಕಾಲೇಜಿನ ಹತ್ತಿರ " ಅಂದೆ . " ಆದೇ ಹೋದ ಭಾನುವಾರ ಕಾಲೇಜಿನ ಫೀಲ್ಡಲ್ಲೇ ನಿಂತಿತ್ತಲ್ಲಾ ಅದಾ ?" ಅಂದ."ಹೂಂ" ಅಂದೆ. "ನಾವೇ ಯಾರೋ ಮರೆತುಹೋಗಿದ್ದಾರೆ ಅಂತ ಎತ್ತಿಟ್ಟಿದ್ದೀವಿ. ನಾಳೆ ಬನ್ನಿ ಕೊಡ್ತೀವಿ" ಅಂದ.

ಈ ಸಂತಸದಲ್ಲಿ ಕಾಲೇಜಿನ ವೇದಿಕೆಯಲ್ಲಿ ನಾಟಕ ಮಾಡಿದೆ. ಅದೇ ಕೊನೆ ಬಾರಿ ನಾನು ನಾಟಕ ಮಾಡಲು ವೇದಿಕೆ ಹತ್ತಿದ್ದು.

(ಇನ್ನೊಂದು ಘಟನೆಯನ್ನ ಮತ್ತೊಮ್ಮೆ ಹೇಳುತ್ತೇನೆ.)